Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಿ

ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಿ

ವಾರ್ತಾಭಾರತಿವಾರ್ತಾಭಾರತಿ24 Jun 2023 12:29 AM IST
share
ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಿ

ಮಾನ್ಯರೇ,

ನೂತನ ಶಾಸಕರಿಗೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಆಹ್ವಾನಿಸಿದವರಲ್ಲಿ ಕೆಲವು ವಿವಾದಾತ್ಮಕ ಹಾಗೂ ಬಲಪಂಥೀಯ ನಿಲುವಿನ ವ್ಯಕ್ತಿಗಳೂ ಇರುವುದು ರಾಜ್ಯದ ಎಲ್ಲ ಪ್ರಜ್ಞಾವಂತರಿಗೆ ತೀವ್ರ ನಿರಾಶೆ ತಂದಿದೆ. ಈ ಹಿಂದಿನ ಬಿಜೆಪಿ ಸರಕಾರದ ಜನವಿರೋಧಿ, ಸಂವಿಧಾನ ವಿರೋಧಿ ನಡೆಗಳಿಂದ ಬೇಸತ್ತ ರಾಜ್ಯದ ಜನರು ಬಹಳಷ್ಟು ನಿರೀಕ್ಷೆ ಗಳೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಹೀಗಿರುವಾಗ ನೂತನ ವಿಧಾನ ಸಭಾ ಸದಸ್ಯರಿಗೆ ಕಟ್ಟಾ ಸಂಘ ಪರಿವಾರದ ಬೆಂಬಲಿಗರು ಹಾಗೂ ವಿವಾದಾತ್ಮಕ ಹಿನ್ನೆಲೆಯ ವ್ಯಕ್ತಿಗಳಿಂದ ಬೋಧನೆ ಮಾಡಿಸಲು ಹೊರಟಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಡೆ ಅತ್ಯಂತ ಖಂಡನೀಯ.

ರಾಜ್ಯಾದ್ಯಂತ ಜನರು ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದನ್ನು ಸ್ವತಃ ಮುಖ್ಯಮಂತ್ರಿಗಳೂ ಗಮನಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಯಾವ ಸಮರ್ಥನೆಯೂ ಇಲ್ಲದ ಈ ನಡೆಯನ್ನು ಶುಕ್ರವಾರ ಸ್ಪೀಕರ್ ಯು. ಟಿ. ಖಾದರ್ ಮತ್ತೆ ಸಮರ್ಥಿಸಿಕೊಂಡಿದ್ದು ನೋಡಿ ನನಗೆ ಆಘಾತವಾಯಿತು. ತರಬೇತಿ ಶಿಬಿರ ಆದ ಮೇಲೆ ಅಭಿಪ್ರಾಯ ಹೇಳಲಿ, ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ ಎಂದಿದ್ದಾರೆ ಮಾನ್ಯ ಸ್ಪೀಕರ್ ಸಾಹೇಬರು. ಗುರುರಾಜ ಕರಜಗಿ ಬಂದು ಏನು ಹೇಳುತ್ತಾರೆ ಎಂದು ಅವರೇ ವಾರದ ಹಿಂದಷ್ಟೇ ಬರೆದ ಲೇಖನದಲ್ಲಿ ಇಡೀ ನಾಡಿಗೆ ಗೊತ್ತಾಗಿದೆ. ರವಿಶಂಕರ್ ಸರಕಾರಿ ಶಾಲೆಗಳು ಮಕ್ಕಳನ್ನು ನಕ್ಸಲರಾಗಿಸುತ್ತವೆ ಎಂಬ ಸಮಾಜ ಘಾತುಕ ಹೇಳಿಕೆ ಕೊಟ್ಟ ವ್ಯಕ್ತಿ. ಇಂತಹವರು ನೂತನ ಶಾಸಕರಿಗೆ ಬಂದು ಏನು ಹೇಳಿಕೊಡುತ್ತಾರೆ ಎಂದು ಅಂದಾಜಾಗದಷ್ಟು ದಡ್ಡರೇ ಕನ್ನಡಿಗರು?

ಬಿಜೆಪಿ ಆಡಳಿತವಿರುವಾಗ ಇಂತಹ ಜನವಿರೋಧಿಗಳೇ ಎಲ್ಲ ಕಡೆ ಮೆರೆದರು. ಈಗ ನೋಡಿದರೆ ಕಾಂಗ್ರೆಸ್ ಸರಕಾರವೂ ಅವರನ್ನೇ ತಲೆ ಮೇಲೆ ಹೊತ್ತುಕೊಂಡಿದೆ. ಬಿಜೆಪಿ ಸರಕಾರವೂ ಶಾಸಕರಿಗೆ ಬೋಧನೆ ಮಾಡಲು ಆಧ್ಯಾತ್ಮಿಕ ಗುರುಗಳನ್ನು ಕರೆದಿರಲಿಲ್ಲ. ಈಗ ಸ್ಪೀಕರ್ ಖಾದರ್ ಒಂದು ಹೊಸ ಸಂವಿಧಾನ ವಿರೋಧಿ ಸಂಪ್ರದಾಯವನ್ನು ಶುರು ಮಾಡಿದ್ದಾರೆ. ಇದೆಂತಹ ನಾಚಿಕೆಗೇಡು?

ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಿಒತ್ತಡ ರಹಿತವಾಗಿ ಕೆಲಸ ಮಾಡಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಕರೆದಿದ್ದೇವೆ ಎಂದು ಸ್ಪೀಕರ್ ಖಾದರ್ ಅವರು ಹೇಳಿದ್ದಾರೆ. ಸ್ವತಃ ಖಾದರ್ ಅವರೂ ಸೇರಿದಂತೆ ಈ ನಾಡಿನ ಅಷ್ಟೂ ಶಾಸಕರು, ಸಂಸದರು, ಪೊಲೀಸರು ಪ್ರತಿದಿನ ಎದುರಿಸುವಷ್ಟು ಒತ್ತಡವನ್ನು ಈ ಆಧ್ಯಾತ್ಮಿಕ ಗುರುಗಳು ಎದುರಿಸುತ್ತಾರಾ? ಒತ್ತಡ ಎದುರಿಸಿ ಹೇಗೆ ಕೆಲಸ ಮಾಡಬೇಕು ಎಂದು ಶಾಸಕರಿಗೆ ಹೇಳಬೇಕಾದವರು ಖಾದರ್ ಸಹಿತ ಇತರ ಹಿರಿಯ ಶಾಸಕರು. ಆಧ್ಯಾತ್ಮಿಕ ಗುರುಗಳಲ್ಲ. ಕರ್ನಾಟಕ ಸರಕಾರ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಸಂವಿಧಾನದ ಪೀಠಿಕೆ ಓದಿಸುವುದನ್ನು ಕಡ್ಡಾಯ ಮಾಡಿದೆ. ಆದರೆ ರಾಜ್ಯದ ಸ್ಪೀಕರ್ ಅವರು ರವಿಶಂಕರ್ ಹಾಗೂ ಕರಜಗಿ ಅವರನ್ನು ಶಾಸಕರಿಗೆ ಪಾಠ ಮಾಡಲು ಕರೆದಿರುವುದು ವಿಪರ್ಯಾಸ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಿರುವ ಈ ಕಾಲದಲ್ಲಿ ಸ್ಪೀಕರ್ ಖಾದರ್ ಅವರಿಂದ ಇಂತಹ ನಡೆ ತೀರಾ ನಿರಾಶಾದಾಯಕ ಬೆಳವಣಿಗೆಯಾಗಿದೆ. ತನಗೆ, ತನ್ನ ಪಕ್ಷಕ್ಕೆ ಮತ ಹಾಕಿ ಚುನಾಯಿಸಿದ ಮತದಾರರ ಮನದಾಶಯವನ್ನು ಮಾನ್ಯ ಸ್ಪೀಕರ್ ಅವರು ಗೌರವಿಸಲಿ, ಕೂಡಲೇ ಈ ವಿವಾದಾತ್ಮಕ ವ್ಯಕ್ತಿಗಳಿಗೆ ನೀಡಿದ ಆಹ್ವಾನ ವಾಪಸ್ ಪಡೆಯಲಿ.

-ಅಶೋಕ್ ಜೀವನಹಳ್ಳಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X