ಮೈಸೂರು ದಸರಾ 2026 | ಗಜಪಯಣಕ್ಕೆ ಕ್ಷಣಗಣನೆ ಆರಂಭ

ಮೈಸೂರು: ವಿಶ್ವವಿಖ್ಯಾತರ ದಸರಾ ಮಹೋತ್ಸವ-2026 ರ ಪ್ರಮುಖ ಆಕರ್ಷಣೆ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವೀರನಹೊಸಹಳ್ಳಿಯಲ್ಲಿ ಎಲ್ಲಾ ಸಿದ್ಧತೆಗಳು ಜರುಗಿವೆ.
ದಸರಾ ಮಹೋತ್ಸವದ ಮುನ್ನುಡಿ ಇದಾಗಿದ್ದು, ಕಾಡಿನಿಂದ ನಾಡಿನತ್ತ ಗಜಪಡೆಗಳು ಇಂದು ಪ್ರಯಾಣ ಬೆಳಸಲಿವೆ. ಜಿಲ್ಲಾಡಳಿತ ಗಜಪಡೆಗಳನ್ನು ನಾಡಿಗೆ ಕರೆದೊಯ್ಯಲು ಅಗತ್ಯ ಸಿದ್ಧತೆಗಳನ್ನು ಮಾಡಿದೆ.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಸ್ಥಳದಲ್ಲಿದ್ದು ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ದಸರಾದಲ್ಲಿ ಪಾಲ್ಗೊಳ್ಳಲು ತೆರಳುವ ಆನೆಗಳಿಗೆ ಸಿಂಗಾರ ಮಾಡಲಾಗುತ್ತಿದೆ. ಮಾವುತರು ಮತ್ತು ಕಾವಾಡಿಗಳ ಕುಟುಂಬದವರು ಅರಮನೆ ನಗರಿಗೆ ತೆರಳಲು ಸಿದ್ಧರಾಗಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
Next Story






