ಕೇರಳ | ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಢಿಕ್ಕಿ: ಮೂವರು ಮಹಿಳೆಯರಿಗೆ ಗಾಯ

Photo credit: onmanorama.com
ತ್ರಿಶೂರ್: ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಒಂದು ಢಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ಶನಿವಾರ ಚೊವ್ವೂರ್ ನ ಅಂಚಮ್ಕಲ್ಲು ಬಳಿ ನಡೆದಿದೆ. ತ್ರಿಶೂರ್ ನಿಂದ ಕೊಡುಂಗಲ್ಲೂರ್ ಗೆ ತೆರಳುತ್ತಿದ್ದ ಅಲ್-ಅಸಾ ಸಾರಿಗೆ ಸಂಸ್ಥೆಯ ಬಸ್ ಒಂದು ನಿಯಂತ್ರಣ ಕಳೆದುಕೊಂಡು, ರಸ್ತೆಯಿಂದ ಮಗುಚಿ ಬಿದ್ದಿದೆ. ಈ ಘಟನೆಯ ವೇಳೆ, ಬಸ್ ವೇಗವಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ಈ ಅಪಘಾತದ ನಂತರ, ಬಸ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಆತನನ್ನು ಬೆನ್ನಟ್ಟಿದರೂ, ಗೋಡೆಯೊಂದನ್ನು ಹಾರಿ, ಸಮೀಪದ ಮೈದಾನವೊಂದರಲ್ಲಿ ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಈ ಅಪಘಾತದಲ್ಲಿ ಗಾಯಗೊಂಡಿರುವ ಮಹಿಳೆಯರ ಪೈಕಿ, ಪ್ರೇಮ ಎಂಬ ಹೆಸರಿನ ಮಹಿಳೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಈ ಮೂವರೂ ಗಾಯಾಳುಗಳನ್ನು ಕೂರ್ಕೆಂಚರಿಯಲ್ಲಿನ ಖಾಸಗಿ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
"ஆக்சிடென்ட் பண்ணிட்டு ஓடுறான் பாருங்க.. அவனை விடாதீங்க.. புடிங்க புடிங்க..." பேருந்து நிறுத்தத்தில் நின்று கொண்டிருந்த 3 பெண்கள் மீது மோதிய தனியார் பேருந்து.. விபத்தை ஏற்படுத்திவிட்டு தலைதெறிக்க தப்பியோடிய ஓட்டுநரை விரட்டி சென்ற மக்கள்.. வெளியான பரபரப்பு சிசிடிவி காட்சி#Kerala… pic.twitter.com/GZVVCqxFH2
— Polimer News (@polimernews) June 21, 2025







