Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 15 ವರ್ಷಗಳಲ್ಲಿ 41.5 ಕೋ.ಜನರು ಬಡತನದಿಂದ...

15 ವರ್ಷಗಳಲ್ಲಿ 41.5 ಕೋ.ಜನರು ಬಡತನದಿಂದ ಹೊರಕ್ಕೆ, ಭಾರತದ ಗಮನಾರ್ಹ ಸಾಧನೆ: ವಿಶ್ವಸಂಸ್ಥೆ

ವಾರ್ತಾಭಾರತಿವಾರ್ತಾಭಾರತಿ11 July 2023 9:36 PM IST
share
15 ವರ್ಷಗಳಲ್ಲಿ 41.5 ಕೋ.ಜನರು ಬಡತನದಿಂದ ಹೊರಕ್ಕೆ, ಭಾರತದ ಗಮನಾರ್ಹ ಸಾಧನೆ: ವಿಶ್ವಸಂಸ್ಥೆ

ಹೊಸದಿಲ್ಲಿ: 2005-06ರಿಂದ 2019-21ರವರೆಗಿನ ಕೇವಲ 15 ವರ್ಷಗಳಲ್ಲಿ 41.5 ಕೋಟಿ ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ ಎಂದು ಮಂಗಳವಾರ ಹೇಳುವ ಮೂಲಕ ವಿಶ್ವಸಂಸ್ಥೆಯು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿರುವ ಭಾರತದ ಗಮನಾರ್ಹ ಸಾಧನೆಯನ್ನು ಎತ್ತಿ ತೋರಿಸಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಮತ್ತು ಆಕ್ಸಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (OPHI) ಜಂಟಿಯಾಗಿ ಬಹುಆಯಾಮದ ಬಡತನ ಸೂಚ್ಯಂಕ (MPI)ದ ಪರಿಷ್ಕೃತ ಆವೃತ್ತಿಯನ್ನು ಆಕ್ಸಫರ್ಡ್ ವಿವಿಯಲ್ಲಿ ಬಿಡುಗಡೆಗೊಳಿಸಿವೆ. ಭಾರತ ಸೇರಿದಂತೆ 25 ದೇಶಗಳು 15 ವರ್ಷಗಳಲ್ಲಿ ತಮ್ಮ ಜಾಗತಿಕ ಎಂಪಿಐ ಮೌಲ್ಯಗಳನ್ನು ಅರ್ಧಕ್ಕಿಳಿಸುವಲ್ಲಿ ಯಶಸ್ವಿಯಾಗುವ ಮೂಲಕ ತ್ವರಿತ ಪ್ರಗತಿಯನ್ನು ಸಾಧಿಸಬಹುದು ಎನ್ನುವುದನ್ನು ತೋರಿಸಿವೆ ಎಂದು ವರದಿಯು ಹೇಳಿದೆ. ಭಾರತ, ಕಾಂಬೋಡಿಯಾ, ಚೀನಾ, ಕಾಂಗೋ, ಹೊಂಡುರಾಸ್, ಇಂಡೋನೇಶ್ಯಾ, ಮೊರೊಕ್ಕೋ, ಸೆರ್ಬಿಯಾ ಮತ್ತು ವಿಯೆಟ್ನಾಂ ಈ ದೇಶಗಳಲ್ಲಿ ಸೇರಿವೆ.

ಯುಎನ್ಡಿಪಿ ಪ್ರಕಾರ, ಕೇವಲ 15 ವರ್ಷಗಳಲ್ಲಿ (2005-06 ರಿಂದ 2019-21) 41.5 ಕೋ.ಜನರು ಬಡತನದಿಂದ ಹೊರಬರುವ ಮೂಲಕ ಭಾರತವು ಬಡತನದಲ್ಲಿ ಗಮನಾರ್ಹ ಇಳಿಕೆಯನ್ನು ಸಾಧಿಸಿದೆ. ಚೀನಾದಲ್ಲಿ 2010-14ರ ನಡುವೆ 6.90 ಕೋ.ಮತ್ತು ಇಂಡೋನೇಶ್ಯಾದಲ್ಲಿ 2012-17ರ ನಡುವೆ 80 ಲ.ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ.

ವಿಶ್ವಸಂಸ್ಥೆಯ ದತ್ತಾಂಶಗಳಂತೆ ಕಳೆದ ಎಪ್ರಿಲ್ ನಲ್ಲಿ ಭಾರತವು 142.86 ಕೋ.ಜನರೊಂದಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿದೆ.

ಬಡತನವನ್ನು ತಗ್ಗಿಸಬಹುದು ಎಂದು ತೋರಿಸಿರುವ ವರದಿಯು, ಆದರೆ ಕೋವಿಡ್ ಸಂದರ್ಭದಲ್ಲಿ ಸಮಗ್ರ ಮಾಹಿತಿಯ ಕೊರತೆಯು ತಕ್ಷಣದ ಭವಿಷ್ಯವನ್ನು ನಿರ್ಧರಿಸುವಲ್ಲಿ ಸವಾಲುಗಳನ್ನು ಒಡ್ಡಿದೆ ಎಂದು ಹೇಳಿದೆ.

2005/2006ರಲ್ಲಿ ಭಾರತದಲ್ಲಿ ಸುಮಾರು 64.5 ಕೋ.ಜನರು ಕಡುಬಡತನದಲ್ಲಿದ್ದು,ಈ ಸಂಖ್ಯೆ 2015/16ರಲ್ಲಿ ಸುಮಾರು 37 ಕೋ.ಗೆ ಮತ್ತು 2019/21ರಲ್ಲಿ 23 ಕೋ.ಗೆ ಇಳಿದಿತ್ತು.

ಅಲ್ಲದೆ,ಭಾರತದಲ್ಲಿ ಎಲ್ಲ ಸೂಚಕಗಳಲ್ಲಿ ಕೊರತೆಯು ಇಳಿಕೆಯಾಗಿದ್ದು ಹಿಂದುಳಿದ ಜಾತಿ ಗುಂಪುಗಳಲ್ಲಿನ ಮಕ್ಕಳು ಮತ್ತು ಜನರು ಸೇರಿದಂತೆ ಅತ್ಯಂತ ಬಡ ರಾಜ್ಯಗಳು ಮತ್ತು ಗುಂಪುಗಳು ತ್ವರಿತವಾಗಿ ಅಭಿವೃದ್ಧಿಗೊಂಡಿವೆ ಎಂದು ವರದಿಯು ಬೆಟ್ಟು ಮಾಡಿದೆ.

ವರದಿಯ ಪ್ರಕಾರ 2005/06ರಲ್ಲಿ ಶೇ.44.3ರಷ್ಟಿದ್ದ ಕಡು ಬಡತನವನ್ನು ಹೊಂದಿದ್ದ ಮತ್ತು ಪೌಷ್ಟಿಕಾಂಶ ಸೂಚಕದಡಿ ವಂಚಿತ ಜನರ ಸಂಖ್ಯೆ 2019/21ರಲ್ಲಿ ಶೇ.11.8ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಮಕ್ಕಳ ಮರಣ ಪ್ರಮಾಣವು ಶೇ.4.5ರಿಂದ ಶೇ.1.5ಕ್ಕೆ ಕುಸಿದಿದೆ. ಕುಡಿಯುವ ನೀರಿನ ಸೂಚಕದಡಿ ವಂಚಿತ ಜನರ ಸಂಖ್ಯೆಈ ಅವಧಿಯಲ್ಲಿ ಶೇ.16.4ರಿಂದ ಶೇ.2.7ಕ್ಕೆ ಇಳಿದಿದೆ. ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದವರ ಸಂಖ್ಯೆ ಶೇ.29ರಿಂದ ಶೇ.2.1ಕ್ಕೆ ಮತ್ತು ವಸತಿ ಸೌಲಭ್ಯದಿಂದ ವಂಚಿತ ಜನರ ಸಂಖ್ಯೆ ಶೇ.44.9ರಿಂದ ಶೇ.13.6ಕ್ಕೆ ಇಳಿಕೆಯಾಗಿದೆ.

ಒಂದು ಅವಧಿಯಲ್ಲಿ ತಮ್ಮ ಜಾಗತಿಕ ಎಂಪಿಐ ಅನ್ನು ಅರ್ಧಕ್ಕೆ ತಗ್ಗಿಸಿದ 19 ದೇಶಗಳಲ್ಲಿ ಭಾರತವೂ (2005/06ರಿಂದ 2015/16) ಸೇರಿದೆ.

ವರದಿಯು ತಿಳಿಸಿರುವಂತೆ 110 ದೇಶಗಳಲ್ಲಿ 6.1 ಶತಕೋಟಿ ಜನರ ಪೈಕಿ 1.1 ಶತಕೋಟಿ ಜನರು (ಶೇ.18) ಕಡುಬಡತನದಲ್ಲಿ ಬದುಕುತ್ತಿದ್ದಾರೆ. ಪ್ರತಿ ಆರು ಬಡವರ ಪೈಕಿ ಐವರು ಸಬ್-ಸಹಾರನ್ ಆಫ್ರಿಕಾ (53.4 ಕೋ.) ಮತ್ತು ದಕ್ಷಿಣ ಏಶ್ಯಾ (38.9 ಕೋ.) ದಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X