Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹರ್ಯಾಣ: ಬಜರಂಗ ದಳದ ಬೆದರಿಕೆಗಳ ನಡುವೆಯೇ...

ಹರ್ಯಾಣ: ಬಜರಂಗ ದಳದ ಬೆದರಿಕೆಗಳ ನಡುವೆಯೇ ಗುರುಗ್ರಾಮ ತೊರೆಯುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರು

ವಾರ್ತಾಭಾರತಿವಾರ್ತಾಭಾರತಿ5 Aug 2023 9:22 PM IST
share
ಹರ್ಯಾಣ: ಬಜರಂಗ ದಳದ ಬೆದರಿಕೆಗಳ ನಡುವೆಯೇ ಗುರುಗ್ರಾಮ ತೊರೆಯುತ್ತಿರುವ ಮುಸ್ಲಿಂ ವಲಸೆ ಕಾರ್ಮಿಕರು

ಗುರುಗ್ರಾಮ: ಬಜರಂಗ ದಳದ ಬೆದರಿಕೆಗಳಿಂದಾಗಿ ಮುಸ್ಲಿಮ್ ವಲಸೆ ಕಾರ್ಮಿಕರು ಗುರುಗ್ರಾಮವನ್ನು ತೊರೆಯುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಸುದ್ದಿಗಾರರ ತಂಡವೊಂದು ತಳಮಟ್ಟದ ಸ್ಥಿತಿಯನ್ನು ಅರಿಯಲು ಸೆಕ್ಟರ್ 70 ‘ಎ’ರಲ್ಲಿಯ ಮೂರು ಕೊಳಗೇರಿ ಸಮುಚ್ಚಯಗಳಿಗೆ ಭೇಟಿ ನೀಡಿತ್ತು.

ಹರ್ಯಾಣದ ನೂಹ್ ನಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರ ಗುರುಗ್ರಾಮದಂತಹ ಇತರ ಪ್ರದೇಶಗಳಿಗೂ ಹರಡಿದ ಬಳಿಕ ದುಡಿಯುವ ವರ್ಗದ ಮುಸ್ಲಿಮ್ ಕುಟುಂಬಗಳ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಕೊಳಗೇರಿಗಳು ಹಲವಾರು ಗಗನಚುಂಬಿ ಕಟ್ಟಡಗಳ ಪರಿಸರದಲ್ಲಿಯೇ ಇವೆ. ಆದರೆ ಕೊಳಗೇರಿಗಳನ್ನು ಈ ಭವ್ಯ ಕಟ್ಟಡಗಳೊಂದಿಗೆ ಸಂಪರ್ಕಿಸುವ ರಸ್ತೆಗಳು ಕೆಸರು ಮತ್ತು ಹೊಂಡಗಳಿಂದ ತುಂಬಿವೆ.

ಹಿಂಸಾಚಾರದ ಬಳಿಕ ತಾವು ಬೆದರಿಕೆಗಳಿಗೆ ಗುರಿಯಾಗಿದ್ದೇವೆ, ಪ್ರದೇಶವನ್ನು ತೆರವುಗೊಳಿಸುವಂತೆ ತಮಗೆ ಸೂಚಿಸಲಾಗುತ್ತಿದೆ ಎಂದು ಮುಸ್ಲಿಮ್ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಆರೋಪಿಸಿದವು. ಸುದ್ದಿಗಾರರ ತಂಡವು ಈ ಕೊಳಗೇರಿಗಳ ಕೆಲವು ನಿವಾಸಿಗಳನ್ನು ಭೇಟಿಯಾದಾಗ ಅವರಲ್ಲಿ ತಮ್ಮ ಭವಿಷ್ಯದ ಬಗ್ಗೆ ಭಯ, ಅನಿಶ್ಚಿತತೆ ಮತ್ತು ಗಾಢ ದುಃಖ ಸ್ವಷ್ಟವಾಗಿ ಕಂಡುಬಂದಿದ್ದವು.

ತನ್ನ ಪುಟ್ಟ ತಗಡಿನ ಶೆಡ್ ನಲ್ಲಿ ಧಗೆಯನ್ನು ತಾಳದೇ ಹೊರಗೆ ಕುಳಿತಿದ್ದ ಶಬಾನಾ (32),ಆ.31ರ ಘರ್ಷಣೆಗಳ ಬಳಿಕ ಹಲವಾರು ಕುಟುಂಬಗಳು ಈ ಪ್ರದೇಶವನ್ನು ತೊರೆದಿವೆ ಎಂದು ಹೇಳಿದರು.

‘ನಾನು ನನ್ನ ಮೂವರು ಪುತ್ರಿಯರನ್ನು ಉತ್ತರ ಪ್ರದೇಶದಲ್ಲಿಯ ನನ್ನ ಗ್ರಾಮಕ್ಕೆ ಕಳುಹಿಸಿದ್ದೇನೆ. ಪ್ರಸಕ್ತ ವಾತಾವರಣವನ್ನು ನಂಬಲು ಸಾಧ್ಯವಿಲ್ಲ. ನಮ್ಮ ಸುತ್ತ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಜನರು ಪರಸ್ಪರರ ಧರ್ಮಗಳನ್ನು ಕೇಳುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ನನ್ನ ಪುತ್ರಿಯರ ಸುರಕ್ಷತೆಯ ಬಗ್ಗೆ ಹೆದರಿ ನಾನು ಅವರನ್ನು ಗ್ರಾಮಕ್ಕೆ ವಾಪಸ್ ಕಳುಹಿಸಿದ್ದೇನೆ’ ಎಂದರು. ಇದು ಒಂದು ನಿದರ್ಶನ ಮಾತ್ರ. ಇಂತಹ ಹಲವಾರು ಶಬಾನಾರು ತಮ್ಮ ಗೋಳು ತೋಡಿಕೊಂಡರು. ಪಾಲ್ದಾ ಗ್ರಾಮವನ್ನು ಸುದ್ದಿಗಾರರ ತಂಡ ತಲುಪಿದಾಗ ಅಲ್ಲಿಯ ಗುಡಿಸಲುಗಳ ಹೊರಗೆ ಪೊಲೀಸರು ಉಪಸ್ಥಿತಿಯಿತ್ತು. ಅವರ ಎದುರಿನಲ್ಲೇ ಹಲವಾರು ಕುಟುಂಬಗಳು ತಮ್ಮ ಸೊತ್ತುಗಳೊಂದಿಗೆ ಟ್ಯಾಕ್ಸಿ ಮತ್ತು ಆಟೊರಿಕ್ಷಾಗಳಲ್ಲಿ ಅವಸರದಿಂದ ಜಾಗ ಖಾಲಿ ಮಾಡುತ್ತಿದ್ದರು. ಮುಸ್ಲಿಮ್ ವಲಸೆ ಕಾರ್ಮಿಕರು ಪ್ರದೇಶದಿಂದ ಪಲಾಯನ ಮಾಡಲು ಭಯ ಮುಖ್ಯ ಕಾರಣವಾಗಿದೆ ಎಂದು ಟ್ಯಾಕ್ಸಿಯನ್ನು ಹತ್ತುತ್ತಿದ್ದ ಹಸೀನಾ (24) ಹೇಳಿದ್ದಾರೆಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X