Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. Fact Check| ಪ್ರಧಾನಿ ಮೋದಿ ಕುರಿತ...

Fact Check| ಪ್ರಧಾನಿ ಮೋದಿ ಕುರಿತ ರೈತನಾಯಕನ ಹೇಳಿಕೆಯ ತಿರುಚಿದ ವೀಡಿಯೊ ಬಳಸಿ ರೈತ ಆಂದೋಲನದ ಅಜೆಂಡಾ ಪ್ರಶ್ನಿಸಿದ ಮಾಧ್ಯಮಗಳು

ವಾರ್ತಾಭಾರತಿವಾರ್ತಾಭಾರತಿ22 Feb 2024 8:27 PM IST
share
Fact Check| ಪ್ರಧಾನಿ ಮೋದಿ ಕುರಿತ ರೈತನಾಯಕನ ಹೇಳಿಕೆಯ ತಿರುಚಿದ ವೀಡಿಯೊ ಬಳಸಿ ರೈತ ಆಂದೋಲನದ ಅಜೆಂಡಾ ಪ್ರಶ್ನಿಸಿದ ಮಾಧ್ಯಮಗಳು

ಹೊಸದಿಲ್ಲಿ: ರೈತರ ಆಂದೋಲನಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಮಮಂದಿರ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಗ್ರಾಫ್ ಗಗನಕ್ಕೇರಿದೆ ಮತ್ತು ಸಾರ್ವಕಾಲಿಕ ಎತ್ತರವನ್ನು ತಲುಪಿದೆ ಎಂದು ವೀಡಿಯೊದಲ್ಲಿ ಹೇಳಿರುವ ರೈತ ನಾಯಕ ಜಗಜಿತ ಸಿಂಗ್ ದಲ್ಲೆವಾಲ್, ಕೆಲವೇ ದಿನಗಳಲ್ಲಿ ಅದನ್ನು ಹೇಗೆ ಕೆಳಕ್ಕಿಳಿಸಬಹುದು ಎನ್ನುವುದನ್ನು ಯೋಚಿಸುವಂತೆ ಕೇಳುಗರಿಗೆ ಕರೆ ನೀಡಿರುವಂತೆ ಕಂಡು ಬರುತ್ತಿದೆ.

ಹಲವಾರು ಸುದ್ದಿವಾಹಿನಿಗಳು, ಬಿಜೆಪಿ ನಾಯಕರು, ಬಲಪಂಥೀಯರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಮೋದಿ ಸರಕಾರದ ವರ್ಚಸ್ಸಿಗೆ ಮಸಿ ಬಳಿಯುವುದು ರೈತರ ಆಂದೋಲನದ ಏಕೈಕ ಉದ್ದೇಶವಾಗಿದೆ ಎಂಬ ಫರ್ಮಾನು ಹೊರಡಿಸಿದ್ದಾರೆ. ಸರಕಾರದ ಸಲಹೆಗಾರರೂ ಈ ಗುಂಪಿನಲ್ಲಿ ಸೇರಿದ್ದಾರೆ. ಈ ಎಲ್ಲರೂ ರೈತರ ಆಂದೋಲನದ ಹಿಂದಿನ ಉದ್ದೇಶ ರಾಜಕೀಯವಾಗಿದೆ, ಮೋದಿಯವರ ಜನಪ್ರಿಯತೆಯನ್ನು ಕೆಳಕ್ಕಿಳಿಸುವುದಾಗಿದೆ ಮತ್ತು ಪ್ರತಿಪಕ್ಷಗಳಿಗೆ ನೆರವಾಗುವುದಾಗಿದೆ ಎಂದೇ ಹೇಳಿದ್ದಾರೆ.

ಸತ್ಯಶೋಧಕ ಜಾಲತಾಣ Alt News ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿದಾಗ ಇದು ತಿರುಚಲ್ಪಟ್ಟ ವೀಡಿಯೊ ಎನ್ನುವುದು ಬಹಿರಂಗಗೊಂಡಿದೆ. ‘ದಿ ಅನ್ಮ್ಯೂಟ್’ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿಯ 26 ನಿಮಿಷಗಳ ಪೂರ್ಣ ವೀಡಿಯೊವನ್ನು Alt News ಜಾಲಾಡಿದೆ.

ದಲ್ಲೆವಾಲ್ ಅವರು ಪ್ರಧಾನಿಯವರ ಜನಪ್ರಿಯತೆಯನ್ನು ತಗ್ಗಿಸುವುದು ಮತ್ತು ಅವರ ಗ್ರಾಫ್ ಅನ್ನು ಕೆಳಕ್ಕಿಳಿಸುವುದು ರೈತ ಚಳವಳಿಯ ಉದ್ದೇಶ ಎಂದು ಹೇಳುತ್ತಿರುವಂತೆ ತೋರಿಸಲು ಮೂಲ ವೀಡಿಯೊದ ಭಾಗಗಳನ್ನು ಎಡಿಟ್ ಮಾಡಲಾಗಿತ್ತು. ಆದಾಗ್ಯೂ ವಾಸ್ತವದಲ್ಲಿ ದಲ್ಲೆವಾಲ್ ಅವರು, “ರಾಮ ಮಂದಿರದ ಕಡೆಗೆ ಮೋದಿಯವರ ಗಮನ ಸಾರ್ವಕಾಲಿಕ ಎತ್ತರದಲ್ಲಿದೆ. ಯಾವುದೇ ಬೇಡಿಕೆಗೆ ಮಣಿಯದಿದ್ದರೆ ಅದು ತಮಗೆ ರಾಜಕೀಯವಾಗಿ ಹಾನಿಯನ್ನುಂಟು ಮಾಡುತ್ತದೆ ಎಂದು ಯಾವುದೇ ರಾಜಕಾರಣಿ ಭಾವಿಸಿದಾಗ ಮಾತ್ರ ಅದನ್ನು ಒಪ್ಪಿಕೊಳ್ಳುತ್ತಾನೆ. ಇಂತಹ ಪರಿಣಾಮಗಳನ್ನು ಬೀರದ ಬೇಡಿಕೆಗಳಿಗೆ ರಾಜಕಾರಣಿಗಳು ಆದ್ಯತೆ ನೀಡುವುದಿಲ್ಲ. ನಾವು ಹೇಳುತ್ತಿರುವುದು ಏನೆಂದರೆ,ಈ ಗ್ರಾಫ್ ಅನ್ನು ಹೇಗೆ ಕೆಳಕ್ಕೆ ತರಬಹುದು? ಗ್ರಾಫ್ ತುಂಬ ಹೆಚ್ಚಾಗಿದೆ ಮತ್ತು ನಮ್ಮ ಬಳಿ ಕೆಲವೇ ದಿನಗಳಿವೆ. ಗ್ರಾಫ್ ಕೆಳಕ್ಕಿಳಿಯದಿದ್ದರೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ” ಎಂದು ಹೇಳಿದ್ದರು.

ಮೂಲ ವೀಡಿಯೊದ ಸಂದರ್ಭವನ್ನು ತಿರುಚಲಾಗಿದೆ ಮತ್ತು ಅದರ ಕೆಲವು ಭಾಗಗಳನ್ನು ಕತ್ತರಿಸುವ ಮೂಲಕ ಎಡಿಟೆಡ್ ಕ್ಲಿಪ್ ಅನ್ನು ಸೃಷ್ಟಿಸಲಾಗಿತ್ತು. ನಂತರ ಅದನ್ನು ಯಾವುದೇ ಸಂದರ್ಭವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಮೂಲ ವೀಡಿಯೊದ ಕೆಲವು ಭಾಗಗಳನ್ನು ಎಡಿಟ್ ಮಾಡುವ ಮೂಲಕ ದಲ್ಲೆವಾಲ್ ಹೇಳಿಕೆಗೆ ಬೇರೆಯೇ ಬಣ್ಣವನ್ನು ನೀಡುವ ಪ್ರಯತ್ನವು ನಡೆದಿತ್ತು ಎನ್ನುವುದು ಸ್ಪಷ್ಟವಾಗಿದೆ ಎಂದು Alt Newsನ ವಿಶ್ಲೇಷಣೆಯು ತೋರಿಸಿದೆ.

ವೈರಲ್ ಕ್ಲಿಪ್ ಬಗ್ಗೆ ಸ್ವತಃ ದಲ್ಲೆವಾಲ್ ಅವರು ಸ್ಪಷ್ಟನೆಯನ್ನು ಹೊರಡಿಸಿ, ತನ್ನ ಹೇಳಿಕೆಯನ್ನು ತಿರುಚಲಾಗಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X