ಪಶ್ಚಿಮಬಂಗಾಳದಲ್ಲಿ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ: 9 ಮಂದಿ ಮೃತ್ಯು
ಕೋಲ್ಕತಾ: ರಾಜ್ಯದ ರಾಜಕೀಯ ಚಿತ್ರಣವನ್ನು ಮರುರೂಪಿಸಬಹುದಾದ ನಿರ್ಣಾಯಕ ಪಂಚಾಯತ್ ಚುನಾವಣೆ ಇಂದು ಗ್ರಾಮೀಣ ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿದ್ದು, ಚುನಾವಣೆಯ ವೇಳೆ ನಡೆದಿರುವ ಹಿಂಸಾತ್ಮಕ ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ಹತ್ಯೆಯಾದವರಲ್ಲಿ ಐವರು ತೃಣಮೂಲ ಸದಸ್ಯರು , ಬಿಜೆಪಿ, ಎಡ ಮತ್ತು ಕಾಂಗ್ರೆಸ್ಸಿನ ತಲಾ ಒಬ್ಬ ಕಾರ್ಯಕರ್ತ ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತೆಗೆ ನಿಯೋಜಿಸಲಾದ ಕೇಂದ್ರ ಪಡೆಗಳ ಕಡೆಯಿಂದ "ದೊಡ್ಡ ವೈಫಲ್ಯ" ಆಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಆರೋಪಿಸಿದೆ. ಹಿಂಸಾತ್ಮಕ ಘರ್ಷಣೆಗಳ ಜೊತೆಗೆ ಹಲವಾರು ಜನರು ಗಾಯಗೊಂಡಿದ್ದಾರೆ, ಕನಿಷ್ಠ ಎರಡು ಮತಗಟ್ಟೆಗಳಲ್ಲಿ ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
22 ಜಿಲ್ಲಾ ಪರಿಷತ್ ಗಳು, 9,730 ಪಂಚಾಯತ್ ಸಮಿತಿ ಗಳು ಮತ್ತು 63,229 ಗ್ರಾಮ ಪಂಚಾಯತ್ ಗಳ ಸ್ಥಾನಗಳಲ್ಲಿ ಸುಮಾರು 928 ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 5.67 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಜೂನ್ 8 ರಂದು ಚುನಾವಣೆ ಘೋಷಣೆಯಾದ ದಿನದಿಂದ, ಬಂಗಾಳದಾದ್ಯಂತ ವ್ಯಾಪಕ ಹಿಂಸಾಚಾರ ವರದಿಯಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ಹದಿಹರೆಯದವರು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ.