ಮಣಿಪುರದ ಕುರಿತು ಪಿಎಂ ಮೋದಿಯವರ ‘ಮೌನ’ ‘ಲಜ್ಜೆಗೆಟ್ಟ ಉದಾಸೀನತೆ’ಗೆ ಸಾಕ್ಷಿ: ವಿರೋಧ ಪಕ್ಷದ ಸಂಸದರ ನಿಯೋಗ
ಹೊಸದಿಲ್ಲಿ: ಮಣಿಪುರ ಗವರ್ನರ್ ಗೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ಸಂಸದರ ನಿಯೋಗ, ರಾಜ್ಯದಲ್ಲಿ ನಿರಂತರ ಹಿಂಸಾಚಾರದ ಬಗ್ಗೆ ಪ್ರಧಾನಿ ಅವರ “ಮೌನ” “ಲಜ್ಜೆಗೆಟ್ಟ ಉದಾಸೀನತೆ” ಯನ್ನು ತೋರಿಸುತ್ತಿದೆ ಎಂದು ಹೇಳಿದೆ.
ಪ್ರತಿಪಕ್ಷ ಭಾರತ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟಕ್ಕೆ (INDIA) ಸೇರಿದ 21 ಸಂಸದರ ನಿಯೋಗವು ಮಣಿಪುರದ ರಾಜ್ಯಪಾಲೆ ಅನುಸುಯಾ ಯುಕೆ ರವಿವಾರ ಭೇಟಿಯಾಯಿತು, ಮೇ ತಿಂಗಳ ಆರಂಭದಿಂದ ರಾಜ್ಯದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಜನರನ್ನು 2 ದಿನಗಳ ರಾಜ್ಯ ಭೇಟಿಯಲ್ಲಿರುವ ನಿಯೋಗವು ಪರಿಹಾರ ಶಿಬಿರದಲ್ಲಿ ಭೇಟಿ ಮಾಡಿತು. ಶಿಬಿರದಲ್ಲಿ ತಮಗಾದ ಅನುಭವವನ್ನುರಾಜ್ಯಪಾಲರ ಬಳಿ ಹಂಚಿಕೊಂಡಿತು.
ಎಲ್ಲಾ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಶಾಂತಿ ಹಾಗೂ ಸಾಮರಸ್ಯವನ್ನು ಪುನಃಸ್ಥಾಪಿಸಬೇಕು. "ನ್ಯಾಯವು ಮೂಲಾಧಾರವಾಗಿರಬೇಕು" ಎಂದು ನಿಯೋಗವು ರಾಜ್ಯಪಾಲರಿಗೆ ನೀಡಿದ ಜ್ಞಾಪಕ ಪತ್ರದಲ್ಲಿ ವಿನಂತಿಸಿದೆ.
"ಕಳೆದ 89 ದಿನಗಳಿಂದ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ನಿಯೋಗ ಹೇಳಿದೆ.
ಎರಡು ಸಮುದಾಯಗಳ ಜನರ ಜೀವ ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯವು 140 ಕ್ಕೂ ಹೆಚ್ಚು ಸಾವುಗಳು, 500 ಕ್ಕೂ ಹೆಚ್ಚು ಗಾಯಗಳು, 5,000 ಕ್ಕೂ ಹೆಚ್ಚು ಮನೆಗಳ ನಾಶಕ್ಕೆ ಹಾಗೂ 60,000 ಜನರ ಸ್ಥಳಾಂತರಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ