Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪತ್ರಿಕೆಗಳು, ಹಣ ಮತ್ತು ಚುನಾವಣೆಗಳು:...

ಪತ್ರಿಕೆಗಳು, ಹಣ ಮತ್ತು ಚುನಾವಣೆಗಳು: ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದ ಮಾಧ್ಯಮಗಳ ಮಾಲಿಕರು

ತನಿಷ್ಕಾ ಸೋಧಿತನಿಷ್ಕಾ ಸೋಧಿ18 March 2024 5:53 PM IST
share
ಪತ್ರಿಕೆಗಳು, ಹಣ ಮತ್ತು ಚುನಾವಣೆಗಳು: ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದ ಮಾಧ್ಯಮಗಳ ಮಾಲಿಕರು

ಹೊಸದಿಲ್ಲಿ: ಹಿಂದಿ ಸುದ್ದಿವಾಹಿನಿ ‌ʼಟಿವಿ9 ಭಾರತವರ್ಷ್ʼ (TV9 Bharatvarsh) ಆರಂಭಗೊಂಡ ಕೇವಲ ಮೂರೇ ವರ್ಷಗಳ ಬಳಿಕ 2022ರ ಅರ್ಧಕ್ಕೂ ಹೆಚ್ಚಿನ ಅವಧಿಗೆ ಟಿಆರ್‌ಪಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಈಗ ಅದು ವಿಭಿನ್ನ ಕಾರಣಗಳಿಗಾಗಿ ಇನ್ನೊಂದು ಟಾಪ್ ಟೆನ್ ಚಾರ್ಟ್‌ನಲ್ಲಿ ಅಗ್ರಣಿಯಾಗಿದೆ.

ಟಿವಿ9 ಭಾರತವರ್ಷದ ಮಾತೃಸಂಸ್ಥೆ ಅಸೋಸಿಯೇಟೆಡ್ ಬ್ರಾಡಕಾಸ್ಟ್‌ನಲ್ಲಿ ಮೇಘಾ ಇಂಜನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಶೇ.80ರಷ್ಟು ಪಾಲು ಬಂಡವಾಳವನ್ನು ಹೊಂದಿದೆ. ಮೇಘಾ ಇಂಜನಿಯರಿಂಗ್ ಚುನಾವಣಾ ಬಾಂಡ್‌ಗಳ ಎರಡನೇ ಅತ್ಯಂತ ದೊಡ್ಡ ಖರೀದಿದಾರನೂ ಆಗಿದೆ. ಅದು ಟಿವಿ9 ನೆಟ್‌ವರ್ಕ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ.

ದಿನದ 24 ಗಂಟೆಯೂ ಯುದ್ಧಗಳ ವರದಿಗಾರಿಕೆ ತನ್ನ ಹೆಚ್ಚಿನ ಟಿಆರ್‌ಪಿಗೆ ಕಾರಣವೆಂದು ಟಿವಿ9 ನೆಟ್‌ವರ್ಕ್ ಪ್ರತಿಪಾದಿಸಿದೆಯಾದರೂ ಅದು ರೇಟಿಂಗ್‌ಗಳಲ್ಲಿ ಅಕ್ರಮಗಳನ್ನು ನಡೆಸಿದೆ ಎನ್ನುವುದು ಎದುರಾಳಿ ಸುದ್ದಿವಾಹಿನಿಗಳ ಆರೋಪವಾಗಿದೆ.

ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ಕಂಪನಿಗಳೊಂದಿಗೆ ನಂಟು ಹೊಂದಿರುವುದು ಟಿವಿ9 ನೆಟ್‌ವರ್ಕ್ ಒಂದೇ ಅಲ್ಲ. ರೇಡಿಯೊ ಕೇಂದ್ರಗಳು ಮತ್ತು ಟಿವಿ ನೆಟ್‌ವರ್ಕ್‌ಗಳಿಂದ ಹಿಡಿದು ವೆಬ್ ಪೋರ್ಟಲ್‌ಗಳು ಮತ್ತು ಒಂದು ನಿಯತಕಾಲಿಕದವರೆಗೆ, ಹೀಗೆ ವಿವಿಧ ಮಾಧ್ಯಮ ಸಂಸ್ಥೆಗಳು ಒಟ್ಟು 1086.5 ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ಕಂಪನಿಗಳೊಂದಿಗೆ ಗುರುತಿಸಿಕೊಂಡಿವೆ.

ಕಳೆದ ವರ್ಷದ ಜುಲೈನಲ್ಲಿ ಮೂರು ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದ ಆರ್‌ಪಿಎಸ್‌ಜಿ ವೆಂಚರ್ಸ್ ಇಂಗ್ಲೀಷ್ ಸಾಪ್ತಾಹಿಕ ‘ಓಪನ್’ನ (Open magazine) ಒಡೆತನವನ್ನು ಹೊಂದಿದೆ. ಆರ್‌ಪಿಜಿಎಸ್ ವೆಂಚರ್ಸ್ ಆರ್‌ಪಿ-ಸಂಜೀವ ಗೋಯೆಂಕಾ ಗ್ರೂಪ್‌ಗೆ ಸೇರಿದೆ.

2019ರಲ್ಲಿ ಕೇವಲ ಆರು ತಿಂಗಳುಗಳಲ್ಲಿ ಓಪನ್‌ನ 29 ಕವರ್‌ಪೇಜ್‌ಗಳ ಪೈಕಿ 10ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಕಾಣಿಸಿಕೊಂಡಿದ್ದರು.

ಆರ್‌ಪಿ-ಸಂಜೀವ ಗೋಯೆಂಕಾ ಗ್ರೂಪ್ 2020 ಜುಲೈನಲ್ಲಿ ವೀಡಿಯೊ ನ್ಯೂಸ್ ಆ್ಯಪ್ ಎಡಿಟರ್ಜಿ (Editorji) ಯಲ್ಲಿ ಹೆಚ್ಚಿನ ಪಾಲು ಬಂಡವಾಳವನ್ನು ಖರೀದಿಸಿತ್ತು. ಈ ಗ್ರೂಪ್ ಫಾರ್ಚ್ಯೂನ್ ಇಂಡಿಯಾವನ್ನೂ ಪ್ರಕಟಿಸುತ್ತದೆ. ಇದು ಗ್ಲೋಬಲ್ ಮ್ಯಾಗಝಿನ್ ಆಗಿದ್ದು ನಾಯಕರ ವಾರ್ಷಿಕ ಶ್ರೇಣಿಗಳನ್ನು ಪ್ರಕಟಿಸುತ್ತದೆ.

ಗ್ರೂಪ್ ಮ್ಯೂಸಿಕ್ ಲೇಬಲ್ ʼಸಾರೆಗಮಾʼ (Saregama)ದ ಒಡೆತನವನ್ನೂ ಹೊಂದಿದೆ. ಆರ್‌ಪಿಎಸ್‌ಜಿ ಲೈಫ್‌ಸ್ಟೈಲ್ ಮೀಡಿಯಾ ಈ ವರ್ಷದ ಉತ್ತರಾರ್ಧದಲ್ಲಿ ಎಸ್ಕೈರ್ ಮತ್ತು ಹಾಲಿವುಡ್ ರಿಪೋರ್ಟರ್ ಮ್ಯಾಗಝಿನ್‌ಗಳನ್ನು ಆರಂಭಿಸುವ ನಿರೀಕ್ಷೆಯಿದೆ.

ಎಂಎನ್ ಮೀಡಿಯಾ ವೆಂಚರ್ಸ್ 5 ಕೋಟಿ ರೂ. ಮತ್ತು ನೆಕ್ಸ್‌ಜಿ ಡಿವೈಸಸ್ 35 ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಈ ಸಂಸ್ಥೆಗಳ ಒಡೆತನವನ್ನು ಹೊಂದಿರುವ ಮೀಡಿಯಾ ಮ್ಯಾಟ್ರಿಕ್ಸ್ ವರ್ಲ್ಡ್‌ವೈಡ್‌ನಲ್ಲಿ ರಿಲಾಯನ್ಸ್‌ನ ಅಂಗಸಂಸ್ಥೆ ತೀಸ್ತಾ ರಿಟೇಲ್‌ನ ಘಟಕವಾಗಿರುವ ಓಜಸಿ ಟ್ರೇಡಿಂಗ್ ಕನಿಷ್ಠ ಶೇ.5ರಷ್ಟು ಪಾಲು ಬಂಡವಾಳವನ್ನು ಹೊಂದಿದೆ.

48 ಎಫ್‌ಎಂ ರೇಡಿಯೊ ಕೇಂದ್ರಗಳು, ಐದು ಮ್ಯಾಗಝಿನ್‌ಗಳು,ಎರಡು ವೃತ್ತಪತ್ರಿಕೆಗಳು, ಐದು ಡಿಸ್ಟ್ರಿಬ್ಯೂಷನ್ ಕಂಪನಿಗಳು, ಒಟಿಟಿ ವೇದಿಕೆಗಳು, ಡಿಟಿಚ್ ಸೇವಾ ಪೂರೈಕೆದಾರರು, ಟಿವಿ ವಾಹಿನಿಗಳು ಮತ್ತು ಐಪಿಎಲ್ ತಂಡದ ಒಡೆತನ ಹೊಂದಿರುವ ಚೆನ್ನೈನ ಸನ್ ಟಿವಿ (Sun TV)ಗೆ ಸೇರಿದ ಎರಡು ರೇಡಿಯೊ ಕೇಂದ್ರಗಳು ಒಟ್ಟು ಏಳು ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ.

ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಗೋವಾದ ಡೆಂಪೋ ಇಂಡಸ್ಟ್ರೀಸ್ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ 1.5 ಕೋಟಿ ರೂ.ಗಳ ದೇಣಿಗೆಗಳನ್ನು ನೀಡಿದೆ. ಕಂಪನಿಯು ಗೋವಾದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ ನವಹಿಂದ್ ಟೈಮ್ಸ್ (Navhind Times) ಮತ್ತು ಮರಾಠಿ ದೈನಿಕ ನವಪ್ರಭಾದ (Navprabha) ಒಡೆತನವನ್ನು ಹೊಂದಿದೆ.

ಕೃಪೆ: The News Minute, Scroll.in, Newslaundry

share
ತನಿಷ್ಕಾ ಸೋಧಿ
ತನಿಷ್ಕಾ ಸೋಧಿ
Next Story
X