Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. 2029ರ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳಾ...

2029ರ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳಾ ಮೀಸಲಾತಿ ಜಾರಿಯಾಗದಿರಬಹುದು!

ಕೃಪೆ:thewire.inಕೃಪೆ:thewire.in24 Sept 2023 10:13 AM IST
share
2029ರ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳಾ ಮೀಸಲಾತಿ ಜಾರಿಯಾಗದಿರಬಹುದು!
ಕೇತ್ರ ಮರುವಿಂಗಡಣೆ ಪ್ರಕ್ರಿಯೆ ವರದಿ 2037ರ ವೇಳೆಗಷ್ಟೇ ಕೈಸೇರಬಹುದು. ಅಲ್ಲದೆ ಜನಸಂಖ್ಯಾ ಅನುಪಾತ ಬದಲಾವಣೆಗಳಿಂದಾಗಿ ಈ ಪ್ರಕ್ರಿಯೆ ಅತ್ಯಂತ ವಿವಾದಾತ್ಮಕವೂ ಆಗಬಹುದು. ಹೀಗಾಗಿ 2039ರಲ್ಲೂ ಮೀಸಲಾತಿ ಜಾರಿಗೊಳ್ಳುವುದು ಅನುಮಾನ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು X ಪೋಸ್ಟ್ ನಲ್ಲಿ ಬರೆದಿದ್ದಾರೆ. ಹಲವು ರಾಜಕೀಯ ವಿಶ್ಲೇಷಕರೂ ಇಂತಹುದೇ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಧವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ವಕ್ತಾರ ಗುರ್ದೀಪ್ಸಿಂಗ್ ಸಪ್ಪಾಲ್ ಅವರು, 2039ರ ಸಂಸದೀಯ ಚುನಾವಣೆಗಳವರೆಗೂ ಮೀಸಲಾತಿ ಜಾರಿಯಾಗದಿರಬಹುದಾದ ಸಾಧ್ಯತೆಯತ್ತ ಗಮನವನ್ನು ಸೆಳೆದಿದ್ದರು. ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ ದುಬೆಯವರು ಮಾಡಿದ್ದ ಭಾಷಣವನ್ನು ಅವರು ಉಲ್ಲೇಖಿಸಿದ್ದರು. ದುಬೆ ತನ್ನ ಭಾಷಣದಲ್ಲಿ ಮಸೂದೆಯ ಜಾರಿಗೂ ಸಂವಿಧಾನದ 81(3) ಮತ್ತು 82ನೇ ವಿಧಿಗಳಿಗೂ ಸಂಬಂಧವನ್ನು ಕಲ್ಪಿಸಿದ್ದರು.

ಈ ವಿಧಿಗಳ ಅರ್ಥವೇನು? ಪ್ರಸಕ್ತ ಮಹಿಳಾ ಮೀಸಲಾತಿ ಮಸೂದೆಯು ಸದ್ಯೋಭವಿಷ್ಯದಲ್ಲಿ ಜನಗಣತಿ ಸಾಧ್ಯತೆ ಮತ್ತು ನಂತರದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಳಿಗೆ ಸಂಬಂಧಿಸಿರುವುದರಿಂದ ಇವೆರಡೂ ವಿಧಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಕೇಂದ್ರ ಸರಕಾರವು 81ನೇ ವಿಧಿಯನ್ನು ತಿದ್ದುಪಡಿಗೊಳಿಸಲು ನಿರ್ಧರಿಸಿದರೆ ಅದು ಸ್ಥಾನಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು.

81ನೇ ವಿಧಿಯು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾವಣೆ ಅಥವಾ ನಾಮ ನಿರ್ದೇಶನದ ಮೂಲಕ ಆಯ್ಕೆಯಾದ 20 ಸದಸ್ಯರಿಗೆ ಹೆಚ್ಚುವರಿಯಾಗಿ ನೇರ ಚುನಾವಣೆಯ ಮೂಲಕ ಲೋಕಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆಯನ್ನು 530ಕ್ಕೆ ನಿರ್ಬಂಧಿಸುತ್ತದೆ. 1971ರ ಜನಗಣತಿಯ ಆಧಾರದಲ್ಲಿ ಈ ಸ್ಥಾನಗಳನ್ನು ನಿರ್ಧರಿಸಲಾಗುವುದು ಎಂದು ವಿಧಿ 81 (3) ಹೇಳುತ್ತದೆ.

ಪ್ರಸಕ್ತ ಮಹಿಳಾ ಮೀಸಲಾತಿ ಮಸೂದೆಯ ಹಿನ್ನೆಲೆಯಲ್ಲಿ 82ನೇ ವಿಧಿಯು ಹೆಚ್ಚು ಮುಖ್ಯವಾಗುತ್ತದೆ. ಎಲ್ಲ ಪ್ರದೇಶಗಳಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಲು ಪ್ರತೀ ದಶಮಾನದ ಜನಗಣತಿಯ ಬಳಿಕವೇ ಸ್ಥಾನಗಳ ಮರುಹಂಚಿಕೆ (ಕ್ಷೇತ್ರ ಪುನರ್ವಿಂಗಡಣೆ)ಯನ್ನು ಮಾಡಬಹುದು ಎಂಬ ನಿಬಂಧನೆಯನ್ನು 82ನೇ ವಿಧಿಯು ಒಳಗೊಂಡಿದೆ.

ಭಾರತವು ಸ್ವತಂತ್ರಗೊಂಡ ಬಳಿಕ ಜನಗಣತಿಯ ಮೊದಲ ಕೆಲವು ಸುತ್ತುಗಳಿಗೆ ಅನುಸಾರವಾಗಿ ಲೋಕಸಭಾ ಸ್ಥಾನಗಳ ಮರುಹಂಚಿಕೆಗಾಗಿ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಲಾಗಿತ್ತು. ಆದರೆ 1976ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂಗೀಕರಿಸಲಾಗಿದ್ದ 42ನೇ ತಿದ್ದುಪಡಿಯು ಕ್ಷೇತ್ರ ಮರುವಿಂಗಡಣೆಯನ್ನು 2001 ಜನಗಣತಿಯವರೆಗೆ ಸ್ಥಗಿತಗೊಳಿಸಿತ್ತು. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರವು ಜನಗಣತಿಯ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದ್ದರೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 2026ರವರೆಗೆ ಸ್ತಂಭನಗೊಳಿಸಿತ್ತು. ಹೀಗಾಗಿ ವಾಸ್ತವದಲ್ಲಿ 82ನೇ ವಿಧಿಯು 2026ರ ಜನಗಣತಿಗೆ ಮುನ್ನ ಕ್ಷೇತ್ರಗಳ ಯಾವುದೇ ಮರುವಿಂಗಡಣೆಯನ್ನು ನಿರ್ಬಂಧಿಸುತ್ತದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಜನಗಣತಿಯ ನಂತರ ಮಾತ್ರ ನಡೆಯಲಿದೆ. ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಕೆಲವು ರಾಜ್ಯಗಳು ಲೋಕಸಭಾ ಪ್ರಾತಿನಿಧ್ಯದಲ್ಲಿ ಹಿಂದುಳಿಯುವುದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಈ ಸ್ತಂಭನವನ್ನು ತರಲಾಗಿತ್ತು.

2001ರ ಜನಗಣತಿಯ ಬಳಿಕ ಕ್ಷೇತ್ರ ಮರುವಿಂಗಡಣೆ ಆಯೋಗವು 2009ರ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ಲೋಕಸಭಾ ಕ್ಷೇತ್ರಗಳನ್ನು ಮರುಪರಿಶೀಲಿಸಿತ್ತಾದರೂ ಸ್ತಂಭನದಿಂದಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಿರಲಿಲ್ಲ.

ಕೇಂದ್ರ ಸರಕಾರವು 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವುದನ್ನು ಸಂವಿಧಾನದ 81 ಮತ್ತು 82ನೇ ವಿಧಿಗಳು ತಡೆಯುತ್ತವೆ ಎಂದು ಬುಧವಾರ ತನ್ನ ಭಾಷಣದಲ್ಲಿ ದುಬೆ ಹೇಳಿದ್ದಾರೆ. ಅಂದರೆ ಮಹಿಳಾ ಮೀಸಲಾತಿಯು ಜಾರಿಗೊಳ್ಳುವ ಮುನ್ನ ಜನಗಣತಿ ಮತ್ತು ನಂತರ ಇನ್ನೊಂದು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಯುವುದು ಅಗತ್ಯವಾಗಿದೆ.

ಆದರೆ 2029ರ ಲೋಕಸಭಾ ಚುನಾವಣೆಯಲ್ಲಾದರೂ ಮೀಸಲಾತಿ ಜಾರಿಗೊಳ್ಳುವ ಸಾಧ್ಯತೆ ಏನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. 2029ರಲ್ಲಿ ಮೀಸಲಾತಿ ಜಾರಿಗೊಳ್ಳುವ ಸಾಧ್ಯತೆಯಿಲ್ಲ ಎನ್ನುವುದು ಹೆಚ್ಚಿನ ತಜ್ಞರ ಅಭಿಪ್ರಾಯವಾಗಿದೆ.

2011ರ ಜನಗಣತಿಯ ಅಂತಿಮ ವರದಿಯನ್ನು ಎರಡು ವರ್ಷಗಳ ಕಾಯುವಿಕೆಯ ಬಳಿಕ 2013ರಲ್ಲಷ್ಟೇ ಪ್ರಕಟಿಸಲಾಗಿತ್ತು. ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಮುಂದೂಡಲ್ಪಟ್ಟ 2021ರ ಜನಗಣತಿಯನ್ನು ಕೈಗೊಳ್ಳಲು ಕೇಂದ್ರ ಸರಕಾರವು ಈವರೆಗೆ ಯಾವುದೇ ನಿರ್ದಿಷ್ಟ ಗಡುವನ್ನು ನೀಡಿಲ್ಲ.

ಕೇಂದ್ರ ಸರಕಾರವು 2024ರ ಮಧ್ಯಭಾಗದಲ್ಲಿ ಜನಗಣತಿಯನ್ನು ಆರಂಭಿಸಲಿದೆ ಎಂದು ಲೋಕಸಭೆಯಲ್ಲಿ ಚರ್ಚೆಯ ಸಂದರ್ಭ ಕೇಂದ್ರ ಗೃಹಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡರೆ ಅಂತಿಮ ವರದಿಯನ್ನು 2026ರ ವೇಳೆಗೆ ಮಾತ್ರ ನಿರೀಕ್ಷಿಸಬಹುದು. ನಂತರವಷ್ಟೇ ಕ್ಷೇತ್ರ ಮರುವಿಂಗಡಣೆ ಆಯೋಗವು ಲೋಕಸಭಾ ಸ್ಥಾನಗಳ ಮರುಹಂಚಿಕೆಗಾಗಿ ತನ್ನ ಕಾರ್ಯವನ್ನು ಆರಂಭಿಸುತ್ತದೆ ಮತ್ತು ಕನಿಷ್ಠ ಇನ್ನೊಂದು ನಾಲ್ಕೈದು ವರ್ಷಗಳನ್ನು ತೆಗೆದುಕೊಳ್ಳಬಹುದು. ಅಂದರೆ 2029ರ ಲೋಕಸಭಾ ಚುನಾವಣೆಗಳಲ್ಲಿಯೂ ಮಹಿಳಾ ಮೀಸಲಾತಿ ಜಾರಿಗೊಳ್ಳುವ ಸಾಧ್ಯತೆಯಿಲ್ಲ.

ಇದು ಚುನಾವಣೆಯಲ್ಲಿ ಆಯ್ಕೆಗೊಂಡ ತಕ್ಷಣ ಜನಗಣತಿಯನ್ನು ಆರಂಭಿಸುವ ತನ್ನ ಭರವಸೆಗೆ ಕೇಂದ್ರ ಸರಕಾರವು ಅಂಟಿಕೊಂಡರೆ ಮಾತ್ರ ಮೂಡಿಬರಬಹುದಾದ ಸನ್ನಿವೇಶವಾಗಿದೆ. ಆದರೆ ಪ್ರತಿಪಕ್ಷ ನಾಯಕರು ಮತ್ತು ರಾಜಕೀಯ ವಿಶ್ಲೇಷಕರು ಹೆಚ್ಚು ನಿರಾಶಾವಾದಿಗಳಾಗಿದ್ದಾರೆ.

ಪ್ರತಿಪಕ್ಷ ಸಂಸದರು ಮೀಸಲಾತಿ ಜಾರಿಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

‘‘ವಾಸ್ತವದಲ್ಲಿ ಲೋಕಸಭೆಯಲ್ಲಿ ಶೇ.33ರಷ್ಟು ಮಹಿಳೆಯರು ಯಾವಾಗ ಆಸೀನರಾಗುತ್ತಾರೆ ಎನ್ನುವುದು ನಮಗೆ ತಿಳಿದಿಲ್ಲ. ಮುಂದಿನ ಜನಗಣತಿಯ ದಿನಾಂಕವು ಸಂಪೂರ್ಣವಾಗಿ ಅನಿರ್ದಿಷ್ಟವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ದಿನಾಂಕವು ಎರಡು ಪಟ್ಟು ಅನಿರ್ದಿಷ್ಟವಾಗಿದೆ. ಅಂದರೆ ಮಹಿಳಾ ಮೀಸಲಾತಿಯು ಈ ಎರಡು ಸಂಪೂರ್ಣ ಅನಿರ್ದಿಷ್ಟ ದಿನಾಂಕಗಳನ್ನು ಅವಲಂಬಿಸಿದೆ. ಇದಕ್ಕಿಂತ ದೊಡ್ಡ ಪೊಳ್ಳು ಭರವಸೆ ಬೇರೊಂದಿರಲು ಸಾಧ್ಯವೇ? 2024ನ್ನು ಮರೆತುಬಿಡಿ, 2029ರಲ್ಲಿಯೂ ಮೀಸಲಾತಿ ಜಾರಿ ಸಾಧ್ಯವಾಗದಿರಬಹುದು’’ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.

ಕೇತ್ರ ಮರುವಿಂಗಡಣೆ ಪ್ರಕ್ರಿಯೆ ವರದಿ 2037ರ ವೇಳೆಗಷ್ಟೇ ಕೈಸೇರಬಹುದು. ಅಲ್ಲದೆ ಜನಸಂಖ್ಯಾ ಅನುಪಾತ ಬದಲಾವಣೆಗಳಿಂದಾಗಿ ಈ ಪ್ರಕ್ರಿಯೆ ಅತ್ಯಂತ ವಿವಾದಾತ್ಮಕವೂ ಆಗಬಹುದು. ಹೀಗಾಗಿ 2039ರಲ್ಲೂ ಮೀಸಲಾತಿ ಜಾರಿಗೊಳ್ಳುವುದು ಅನುಮಾನ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರುX ಪೋಸ್ಟ್ ನಲ್ಲಿ ಬರೆದಿದ್ದಾರೆ. ಹಲವು ರಾಜಕೀಯ ವಿಶ್ಲೇಷಕರೂ ಇಂತಹುದೇ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಕೃಪೆ:thewire.in

share
ಕೃಪೆ:thewire.in
ಕೃಪೆ:thewire.in
Next Story
X