Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇಂಟಾಕ್: ಮಂಗಳೂರು ಕೆಥೊಲಿಕ್ ಪಾರಂಪರಿಕ...

ಇಂಟಾಕ್: ಮಂಗಳೂರು ಕೆಥೊಲಿಕ್ ಪಾರಂಪರಿಕ ಮನೆಗಳ ಛಾಯಾಚಿತ್ರ ಪ್ರದರ್ಶನ

ವಾರ್ತಾಭಾರತಿವಾರ್ತಾಭಾರತಿ27 Oct 2025 2:33 PM IST
share
ಇಂಟಾಕ್: ಮಂಗಳೂರು ಕೆಥೊಲಿಕ್ ಪಾರಂಪರಿಕ ಮನೆಗಳ ಛಾಯಾಚಿತ್ರ ಪ್ರದರ್ಶನ

ಮಂಗಳೂರು: ಭಾರತೀಯ ಕಲೆ ಮತ್ತು ಪರಂಪರೆಯನ್ನು ಸಂರಕ್ಷಿಸುವ ಸಂಸ್ಥೆಗಳಲ್ಲಿ ಒಂದಾದ ‘ಇಂಟಾಕ್’ನ ಮಂಗಳೂರು ವಿಭಾಗವು ‘ಆಲ್ಬಮ್ ಆಫ್ ದಿ ಪೋರ್ಚಸ್’ ಎಂಬ ಶೀರ್ಷಿಕೆಯಡಿ ಸಾಂಪ್ರದಾಯಿಕ ಮಂಗಳೂರು ಕೆಥೊಲಿಕ್ ಮನೆಗಳ ಛಾಯಾಚಿತ್ರ ಪ್ರದರ್ಶನವನ್ನು ಇತ್ತೀಚೆಗೆ ನಗರದ ಕೊಡಿಯಾಲ್‌ಗುತ್ತು ಕಲಾ ಕೇಂದ್ರ ದಲ್ಲಿ ಏರ್ಪಡಿಸಿತ್ತು.

ಮಂಗಳೂರು ತನ್ನ ಸಾಂಪ್ರದಾಯಿಕ ಕೆಥೊಲಿಕ್ ಮನೆಗಳಿಗಾಗಿ ಪ್ರಸಿದ್ಧ. ಅವು ಐರೋಪ್ಯ ಮತ್ತು ಸ್ಥಳೀಯ ಶೈಲಿಗಳನ್ನು ಹೊಂದಿದ್ದು, ದಕ್ಷಿಣ ಭಾರತದ ಪರಿಸರಕ್ಕೆ ಹೊಂದಿಕೊಂಡಿವೆ. ಅವುಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಮುಂಬಾಗಿಲಿನ ಮಂಟಪ (ವರಾಂಡ), ದೈನಂದಿನ ಪ್ರಾರ್ಥನೆಗೆ ಪೂಜಾಸ್ಥಳ ಮತ್ತು ಸಾಂಪ್ರದಾಯಿಕ ಮಂಗಳೂರು ಹೆಂಚಿನ ಛಾವಣಿಯು ಹಲವು ತಲೆಮಾರುಗಳ ಕುಟುಂಬ ಸ್ಮರಣೆಯನ್ನು ಕಾಪಾಡುತ್ತಿತ್ತು. ಇಂಟಾಕ್‌ನ ಈ ಯೋಜನೆಯು ನಗರದಾದ್ಯಂತ 27 ಮನೆಗಳನ್ನು ದಾಖಲಿಸಿದೆ. ಅವುಗಳ ವಾಸ್ತುಶಿಲ್ಪ, ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಂಗ್ರಹಿಸಿದೆ.

ಇಂಟಾಕ್‌ನ ಮಂಗಳೂರು ವಿಭಾಗ ಸಂಚಾಲಕ ಮತ್ತು ವಾಸ್ತುಶಿಲ್ಪಿಸುಭಾಷ್ ಬಸು ನೇತೃತ್ವದಲ್ಲಿ ಛಾಯಾಗ್ರಾಹಕ ಮುರಳಿ ಅಬ್ಬೆಮನೆ ಮತ್ತು ಸಂಶೋಧಕಿ ಶರ್ವಾಣಿ ಭಟ್ ಸಹಕಾರದೊಂದಿಗೆ ದಾಖಲೀಕರಣ ನಡೆಯಿತು.

ಹ್ಯಾರಿಯಟ್ ದ್ಯಾಸಾಗರ್, ಡಾ.ಮೈಕೆಲ್ ಲೋಬೊ, ನಯನಾ ಫೆರ್ನಾಂಡಿಸ್, ವಿನ್ಸೆಂಟ್ ಡಿಸೋಜ ಅವರು ಮನೆಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಮಾಹಿತಿಗಳನ್ನು ಒದಗಿಸಿದ್ದರು.

ಫಾದರ್ ಮಲ್ಲರ್ ಆಸ್ಪತ್ರೆಗೆ ಪ್ರಮುಖ ಕೊಡುಗೆ ನೀಡಿದ ಡಾ.ಲಾರೆನ್ಸ್ ಫೆರ್ನಾಂಡಿಸ್‌ಗೆ ಸಂಬಂಧಿ ಸಿದ ಫರ್ನ್‌ಡೇಲ್ ಮನೆ, ಡಾ.ಡೆರೆಕ್ ಮತ್ತು ಪ್ಯಾಟ್ಸಿ ಲೋಬೊ ಹಾಗೂ ಅವರ ಕುಟುಂಬ ವಂಶಾವಳಿಗೆ ಸಂಬಂಧಿಸಿದ ನಂದಿಗುಡ್ಡ ಮನೆ, ಸಂಶೋಧಕ, ವಂಶಾವಳಿ ಶಾಸ್ತ್ರಜ್ಞ ಡಾ.ಮೈಕೆಲ್ ಲೋಬೊ ಅವರ ಕುಟುಂಬದ ಮನೆ ಕ್ಯಾಮೆಲಾಟ್ ದಾಖಲೀಕರಣದಲ್ಲಿ ಸೇರಿವೆ.

ಕೆಥೊಲಿಕ್ ಪರಂಪರೆಯ ಅಮೂಲ್ಯ ಅಂಗ ವಾಗಿರುವ ಈ ಕಟ್ಟಡಗಳಲ್ಲಿ ಹಲವಾರು ಮನೆಗಳು ಇನ್ನೂ ಬಳಕೆಯಲ್ಲಿವೆ. ಕೆಲವು ಖಾಲಿಯಾಗಿದ್ದು, ಮತ್ತು ಕೆಲವು ಮಾರಾಟವಾಗಿವೆ ಅಥವಾ ಕೆಡವಲ್ಪಟ್ಟಿವೆ ಎಂದು ಇಂಟಾಕ್ ತಿಳಿಸಿದೆ.

ಭವಿಷ್ಯದ ಪೀಳಿಗೆಗಳಿಗೆ ಈ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಇದನ್ನು ಆಲ್ಬಮ್-ಪುಸ್ತಕ ರೂಪದಲ್ಲಿ ಪ್ರಕಟಿಸಲು ಯೋಜಿಸಲಾಗಿದೆ. ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರ ಪರಿಸರದಲ್ಲಿ ಈ ಇತಿಹಾಸದ ಬಹುಭಾಗವನ್ನು ಅಳಿಸಿಹಾಕುವ ಆತಂಕದ ಮಧ್ಯೆ, ಈ ಯೋಜನೆಯು ದಾಖಲೀಕರಣ ಮತ್ತು ಸಂರಕ್ಷಣೆಯ ಮೂಲಕ ಪರಂಪರೆಯನ್ನು ಉಳಿಸುತ್ತದೆ ಎಂದು ಇಂಟಾಕ್ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X