Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಣ್ಮರೆಯಾಗುತ್ತಿರುವ ಪಕ್ಷಿಸಂಕುಲ

ಕಣ್ಮರೆಯಾಗುತ್ತಿರುವ ಪಕ್ಷಿಸಂಕುಲ

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.4 Nov 2024 12:02 PM IST
share
ಕಣ್ಮರೆಯಾಗುತ್ತಿರುವ ಪಕ್ಷಿಸಂಕುಲ

ಹೊಸಕೋಟೆ: ಸುಮಾರು ಮೂವತ್ತು ವರ್ಷಗಳ ಹಿಂದೆ ಎಲ್ಲಿ ಬೇಕೆಂದರಲ್ಲಿ ಮನೆ ಗೋಡೆಯ ಸಂದುಗಳಲ್ಲಿ, ಹಂಚಿನ ಕೆಳಗೆ, ತಗಡುಗಳಡಿಯಲ್ಲಿ, ಹೊಲಗದ್ದೆಗಳಲ್ಲಿ ಮನೆ ಮಾಡಿಕೊಂಡಿರುತ್ತಿದ್ದ ಚಿಂವ್ ಚಿಂವ್ ಗುಬ್ಬಿಗಳು, ಮರದ ಮೇಲೆ ಅಡ್ಡಡ್ಡ ಕಟ್ಟಿಗೆಯ ತುಂಡುಗಳನ್ನಿಟ್ಟು ಮೊಟ್ಟೆಗಳನ್ನಿಟ್ಟು ಮರಿಗಳೊಂದಿಗೆ ಕಾ ಕಾ ಎಂದು ಹಾರಾಡಿಕೊಂಡಿದ್ದ ಕಾಗೆಗಳು, ಕೆರೆ, ಹಳ್ಳ, ನದಿ ಪಾತ್ರದಲ್ಲಿ ನೀರತ್ತ ಬಾಗಿದ ಮರಗಳಿಗೆ ಗೂಡುಗಳನ್ನು ಜೋತು ಬಿಟ್ಟು, ಸಂಸಾರ ನಡೆಸುತ್ತಿದ್ದ ಗಿಜುಗಗಳು, ಪೊಟರೆಗಳಲ್ಲಿ, ಎತ್ತರದ ಕೊಂಬೆಗಳ ಮೇಲೆ ಜೀವಿಸುತ್ತಿದ್ದ ಗಿಳಿಗಳು, ಪಾರಿವಾಳಗಳು, ಬೆಳ್ಳಕ್ಕಿಗಳು, ಮರಕುಟಿಗ, ಸಾಂಬಾರ ಕಾಗೆ, ಕೋಗಿಲೆಗಳು, ಗೊರವಂಕ, ಬೆಳವ, ಸೂಜಿಬಾಲದ ಹಕ್ಕಿ, ಕಂದುಗತ್ತಿನ ಸೂಜಿಬಾಲದ ಹಕ್ಕಿ ನವಿಲು, ಗೂಬೆ ನಾನಾ ಬಗೆಯ ಪಕ್ಷಿಗಳು ಇಂದು ಹಳ್ಳಿಗಳಿಂದ ಪಟ್ಟಣ ಪ್ರದೇಶಗಳಿಂದ ಕಣ್ಮರೆಯಾಗುತ್ತಿರುವುದು ಅಷ್ಟೇ ಅಲ್ಲ, ಅವುಗಳ ಸಂತತಿ ಉಳಿಯುತ್ತದೆಯೋ ಇಲ್ಲವೋ? ಎಂಬ ಆತಂಕದಲ್ಲಿ ಪಕ್ಷಿ ಪ್ರಿಯರಿದ್ದಾರೆ.

ಹಳ್ಳಿಯ ಜನರಂತೂ ಹೊಲ, ಗದ್ದೆಗಳಲ್ಲಿ ಪೈರನ್ನು ರಕ್ಷಿಸಲು ಹೆಣಗಾಡುತ್ತಿದ್ದರು. ಇಂದು ಆ ತಾಪತ್ರಯವೇ ಕಾಣುತ್ತಿಲ್ಲ. ಪಕ್ಷಿಗಳು ಜಗತ್ತಿನಾದ್ಯಂತ ಕಾಲ ಕ್ರಮೇಣವಾಗಿ ಮರೆಯಾಗುತ್ತಿವೆ. ಒಟ್ಟಿನಲ್ಲಿ ಜನರ ಬದಲಾದ ಜೀವನಶೈಲಿಯೇ ಪಕ್ಷಿಗಳು ಮರೆಯಾಗಲು ಮುಖ್ಯ ಕಾರಣ.

ಅತಿಯಾದ ನಾಗರೀಕರಣ, ಮನೆ, ಕಟ್ಟಡಗಳ ವಾಸ್ತುಶಿಲ್ಪದಲ್ಲಾದ ಬದಲಾವಣೆ, ಕೀಟನಾಶಕಗಳ ಬಳಕೆ, ಹಾಗೂ ಗೂಡುಕಟ್ಟುವ ತಾಣಗಳು ನಾಶವಾಗಿರುವುದು. ಆಹಾರ ಮೂಲದಲ್ಲಾದ ಕೊರತೆ, ಸ್ಥಳೀಯ ಸಸ್ಯಗಳ ನಾಶ ಇವೆಲ್ಲವೂ ಪಕ್ಷಿಗಳು ಮರೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ ಪಕ್ಷಿ ಪ್ರೇಮಿ ಮಂಜುನಾಥ್.

ಹಿಂದೆ ಎಲ್ಲೆಲ್ಲೂ ಹೆಂಚಿನ ಮನೆಗಳಿದ್ದವು. ಅಂತಹ ಮನೆಯೊಳಗೆ ಗುಬ್ಬಚ್ಚಿ ಮತ್ತು ಗಿಣಿಗಳಿಗೆ ಬರಲು ಸಾಕಷ್ಟು ಅವಕಾಶ ಗಳಿದ್ದವು. ಹೆಂಚಿನ ಮನೆಯ ಸಂದುಗೊಂದುಗಳಲ್ಲಿ ಅವು ಗೂಡು ಕಟ್ಟುತ್ತಿದ್ದವು. ಜಗಲಿಯ ಗೋಡೆಗಳಿಗೆ ಬಾಗಿಸಿ ಕಟ್ಟಿದ ದೇವರ ಪೋಟೊಗಳಿಗೆ ಹಿಂದೆ ಗೂಡುಕಟ್ಟಿ ಸಂಸಾರ ನಡೆಸುತ್ತಿದ್ದವು. ಗೂಡು ಕಟ್ಟಲು ಬೇಕಾದ ಒಣಗಿದ ಹುಲ್ಲು, ಹತ್ತಿನಾರುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಮನೆಯ ಪರಿಸರದಲ್ಲಿಯೇ ಓಡಾಡುತ್ತಿದ್ದವು . ಆದರೆ ಈಗಿನ ಮನೆಗಳೆಲ್ಲ ಭದ್ರವಾದ ಸಿಮೆಂಟ್ ಕೋಟೆ. ಮನೆಯೊಳಗೆ ಗಿಣಿ ಹಾಗೂ ಗುಬ್ಬಚ್ಚಿಗಳು ಬರಲು ಅವಕಾಶಗಳೇ ಇಲ್ಲ .

ರೈತರು ಹೊಲಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಆಹಾರ ಧಾನ್ಯಗಳು ಕೆಡದಿರಲಿ ಅಂತ ರಾಸಾಯನಿಕಗಳನ್ನು ಸೇರಿಸುತ್ತಿದ್ದಾರೆ. ಇದರ ಪರಿಣಾಮ ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅವುಗಳ ಮೊಟ್ಟೆಯ ಕವಚ ತೆಳುವಾಗಿ ಬೇಗ ಒಡೆಯಬಹುದು. ಅಲ್ಲದೆ ಹಾರ್ಮೋನುಗಳ ವ್ಯತ್ಯಾಸದಿಂದ ಪಕ್ಷಿಗಳ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆ ಆಗಿರಬಹುದು ಎನ್ನುತ್ತಾರೆ ತಜ್ಞರು.

ಪಕ್ಷಿಗಳು ನಿಶ್ಯಬ್ಧ ವಾತಾವರಣದಲ್ಲಿರಲು ಇಚ್ಛಿಸುತ್ತದೆ. ಅವು ಅತಿಯಾದ ಕರ್ಕಶ ಶಬ್ದವನ್ನು ಸಹಿಸಲಾರವು. ಅವುಗಳ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಶಬ್ಧ ಗ್ರಹಣ ಸಾಮರ್ಥ್ಯ ಇರುತ್ತದೆ . ಅದನ್ನು ಮೀರಿದ ಶಬ್ಧ ಅವುಗಳನ್ನು ಕಾಲು ಕೀಳುವಂತೆ ಮಾಡುತ್ತವೆ ಇಂದಿನ ಪುಟಾಣಿಗಳು ಚಿತ್ರಗಳಲ್ಲಿ ಮಾತ್ರ ಪಕ್ಷಿಗಳನ್ನು ನೋಡಿ ಖುಷಿಪಡುವ ಸ್ಥಿತಿ ಬಂದಿದೆ ಎಂಬುದು ಪಕ್ಷಿಪ್ರೇಮಿಗಳ ಮಾತು.

ಗ್ಲಾಸ್ ಪ್ರತಿಬಿಂಬದಿಂದ ಪಕ್ಷಿಗಳಿಗೆ ಹಾನಿ: ಬಹುಮಹಡಿ ಕಟ್ಟಡಗಳ ಹೊರ ವಿನ್ಯಾಸ ಆಕರ್ಷಕಗೊಳಿಸಲು ಗ್ಲಾಸ್ ಅಳವಡಿಸಲಾಗುತ್ತಿದೆ. ಆ ಗ್ಲಾಸ್‌ನಲ್ಲಿ ಕಟ್ಟಡಗಳ ಎದುರಿನ ಮರ ಗಿಡಗಳು ಅಥವಾ ಖಾಲಿ ಸ್ಥಳಗಳು ಪ್ರತಿಫಲನವಾಗಿ ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ಪಕ್ಷಿಗಳಿಗೆ ಗೊಂದಲ ಮೂಡಿಸುತ್ತಿವೆ. ಬಿಸಿಲಿನ ಜಳಕ್ಕೆ ಮೊದಲೇ ನಿತ್ರಾಣವಾಗಿರುವ ಪಕ್ಷಿಗಳು ಅಲ್ಲಿ ಮರವಿದೆ ಅಥವಾ ಖಾಲಿ ಜಾಗವಿದೆ ಎಂದು ವೇಗವಾಗಿ ಬಂದು ಢಿಕ್ಕಿ ಹೊಡೆದು ಗಾಯಗೊಳ್ಳುತ್ತವೆ. ಹೀಗೆ ಗಾಯಗೊಂಡು ಪ್ರಾಣ ಬಿಡುವ ಪಕ್ಷಿಗಳಲ್ಲಿ ಹದ್ದುಗಳ ಸಂಖ್ಯೆ ಹೆಚ್ಚು ಎನ್ನುತ್ತಾರೆ ಪಕ್ಷಿಪ್ರೇಮಿ ಮಂಜುನಾಥ್.

ಅರಣ್ಯ ಇಲಾಖೆಯು ಪಕ್ಷಿಗಳಿಗೆ ಆಹಾರ ಒದಗಿಸುವ ಗಿಡಗಳನ್ನು ನೆಡುತ್ತಿಲ್ಲ. ಬದಲಾಗಿ ಆಹಾರ ನೀಡದ ಗಿಡಗಳನ್ನು ನೆಡಲಾಗುತ್ತಿದೆ. ಅದಕ್ಕಿಂತ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ಪಕ್ಷಿ ಸಂಕುಲಗಳಿಗೆ ಆಹಾರ ಸಿಗುತ್ತದೆೆ.

-ರಾಮಪ್ಪ, ಹಿರಿಯ ನಾಗರಿಕ ಹೊಸಕೋಟೆ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X