Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸ್ವಂತ ಸೂರಿಲ್ಲದೆ, ದಿಕ್ಕಿಲ್ಲದೆ ಬದುಕುವ...

ಸ್ವಂತ ಸೂರಿಲ್ಲದೆ, ದಿಕ್ಕಿಲ್ಲದೆ ಬದುಕುವ ತಾಯಿ-ಮಗಳು

ಎಂ.ಡಿ ಅಖೀಲ್ ಉಡೇವುಎಂ.ಡಿ ಅಖೀಲ್ ಉಡೇವು24 July 2026 7:34 AM IST
share
ಸ್ವಂತ ಸೂರಿಲ್ಲದೆ, ದಿಕ್ಕಿಲ್ಲದೆ ಬದುಕುವ ತಾಯಿ-ಮಗಳು
►ತಾಯಿಗೆ ಮಾಶಾಸನ, ಮಗಳಿಗೆ ಆಧಾರ್ ಇಲ್ಲ: ಮಳೆಗೆ ಸೋರುವ ಶೆಡ್ ►ಮುರಿದ ತಗಡಿನ ಆಸರೆಯಲ್ಲೇ ಸಾಗುತ್ತಿದೆ ಬದುಕು

ಕೊಪ್ಪಳ: ನಗರದಲ್ಲಿ ಸುರಿದ ಮಳೆ ರೈತರಿಗೆ ಸಂತಸ ಮೂಡಿಸಿದರೂ, ಸರಿಯಾದ ನೆಲೆಯಿಲ್ಲದ್ದಕ್ಕೆ ಆಶ್ರಯ ಲೇಔಟ್‌ನಲ್ಲಿರುವ ತಾಯಿ ಮತ್ತು ಮಗಳ ಜೀವನದಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡು ಪರಿಹಾರಕ್ಕಾಗಿ ಅಂಗಲಾಚಿ ಬೇಡಿಕೊಳ್ಳುವ ದೃಶ್ಯ ಮಾತ್ರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಾಣದಿರುವುದು ಸೋಜಿಗತನವೋ ಅಥವಾ ಆಡಳಿತದ ದುರವಸ್ಥೆಗೆ ಹಿಡಿದ ಕೈಗನ್ನಡಿವೋ ಎಂಬಂತೆ ಒಂದು ನಿದರ್ಶನವಾಗಿ ನಿಂತಿದೆ.

ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಗೂ ಸಂಜೆಯಾದ ನಂತರ ವಿಶ್ರಾಂತಿಯಿಂದ ಮಲಗಲು ಒಂದು ಪುಟ್ಟ ಗುಡಿಸಲು ಇರುತ್ತದೆ. ಆದರೆ ಘನತೆಯಿಂದ ಬದುಕುಬೇಕಾದ ಮಾನವ ಮಾತ್ರ ಸುಂದರ ನೆಲೆಯಿಲ್ಲದೆ ಪರಿತಪಿಸುತ್ತಾನೆ ಎಂಬುದಕ್ಕೆ ನಿರ್ಮಿತಿ ಕೇಂದ್ರದ ಸಮೀಪದ ಆಶ್ರಯ ಲೇಔಟ್‌ನಲ್ಲಿ ಭರಮವ್ವ ಹಾಗೂ ಅವರ ಮಗಳು ಉದಾಹರಣೆಯಾಗಿ ಕಾಣುತ್ತಾರೆ.

ಕಳೆದ 40 ವರ್ಷಗಳಿಂದ ಸ್ವಂತ ಸೂರಿಲ್ಲದೆ ಮುರಿದ ತಗಡಿನ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಮಲಗಲು ಸಾಕಾಗುವಷ್ಟು ಮಾತ್ರ ಜಾಗವಿದ್ದು, ಮಳೆ ಬಂದು ನೀರು ಸೋರುವಾಗ ಪುಸ್ತಕಗಳು ಹಾಗೂ ಅಗತ್ಯ ವಸ್ತುಗಳನ್ನು ರಕ್ಷಿಸಲು ನಿತ್ಯ ಹರಸಾಹಸ ಮಾಡುತ್ತಿದ್ದಾರೆ. ವಸ್ತುಗಳನ್ನು ನೆನೆಯದಂತೆ ಮುಚ್ಚಿಟ್ಟು, ಒಳಗೆ ನಿಲ್ಲಲು ಜಾಗವಿಲ್ಲದೆ ತಾಯಿ ಮತ್ತು ಮಗಳು ಮಳೆಯಲ್ಲೇ ನೆನೆಯುತ್ತ ನಿಂತಿರುವ ದೃಶ್ಯ ಮನಕಲುಕುವಂತೆ ಮಾಡುತ್ತದೆ.

ಭರಮ್ಮರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆ ಮಾಡಿಕೊಟ್ಟಿದ್ದು, ಇನ್ನೋರ್ವ ಮಗಳು ಹುಲಿಗೆಮ್ಮ ಕುಟುಂಬದ ಬಡತನದ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸವನ್ನು 8ನೇ ತರಗತಿಗೆ ಕೈಬಿಟ್ಟರು. ಈಗ ಕೆಲಸಕ್ಕೆ ಹೋಗಿ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಸರಕಾರದ ಆಧಾರ ಇಲ್ಲದ್ದಕ್ಕೆ ಸಿಗುತ್ತಿಲ್ಲ ಆಧಾರ: ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಹೋದರೆ ದಾಖಲಾತಿ ಸರಿಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇದಲ್ಲದೆ ಇದುವರೆಗೂ ಸರಕಾರದಿಂದ ನೀಡಲಾಗುವ ವೃದ್ಯಾಪ್ಯ, ವಿಧವಾ ವೇತನವಾಗಲಿ ಇವರಿಗೆ ದೊರೆತಿಲ್ಲ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕೂಡ ಇವರ ಕೈಹಿಡಿದಿಲ್ಲ. ಈ ಬಡ ವೃದ್ಧೆ ಭರಮಮ್ಮಳಿಗೆ ಮಾಶಾಸನ ಮತ್ತು ಗೃಹಲಕ್ಷ್ಮಿ ಹಣ ದೊರೆತರೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ತೀವ್ರ ಸಂಕಷ್ಟದಲ್ಲಿರುವ ಭರಮವ್ವ ಕುಟುಂಬಕ್ಕೆ ಶಾಶ್ವತ ವಸತಿ ಕಲ್ಪಿಸುವಂತೆ ಹಾಗೂ ಇಂತಹ ನಿರ್ಗತಿಕ ಕುಟುಂಬಗಳ ಸಮಸ್ಯೆಗಳತ್ತ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಂದು ವರ್ಷದಿಂದ ಕುಟುಂಬಕ್ಕಿಲ್ಲ ಪಡಿತರ

ತೀವ್ರ ಬಡತನದಿಂದ ಬಳಲುತ್ತಿರುವ ಈ ಕುಟುಂಬಕ್ಕೆ ಕಳೆದ ಒಂದು ವರ್ಷದಿಂದ ಯಾವುದೇ ಪಡಿತರ ಸಿಕ್ಕಿಲ್ಲ. ದುಡಿದು ಮನೆಗೆ ಬೇಕಾದ ಅಗತ್ಯಸಾಮಾನುಗಳನ್ನು ಖರೀದಿಸಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ವರ್ಷದಿಂದ ರೇಷನ್ ಇಲ್ಲ, ವಿಚಾರಿಸಿದರೆ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಭರಮಮ್ಮ ತಮ್ಮ ದುಃಖ ವ್ಯಕ್ತ ಪಡಿಸಿದ್ದಾರೆ. ಇದಲ್ಲದೆ ಮಾಹಿತಿ ಕೊರತೆಯಿಂದ ಗ್ಯಾಸ್ ಸಿಲಿಂಡರ್ ಸಹ ಬುಕ್ ಆಗುವುದಿಲ್ಲ. ಬೇರೆ ಕಡೆಯಿಂದ ಅಧಿಕ ಬೆಲೆಗೆ ಸಿಲಿಂಡರ್ ಖರೀದಿಸಿ ಅಡುಗೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ತಾಯಿ ಹಾಗೂ ಮಗಳು.

ನಮಗೆ ಯಾವುದೇ ಹೊಲ-ಮನಿ ಇಲ್ಲ. ನಿತ್ಯ ದುಡಿದು ತಿನ್ನಬೇಕು. ನನ್ನ ಮಗಳು ದುಡಿದರೆ ಮಾತ್ರ ಮನೆ ಸಾಗುತ್ತದೆ. ಒಂದು ವರ್ಷದಿಂದ ರೇಷನ್ ಸಹ ಬಂದಿಲ್ಲ. ಕೇಳಿದ್ರೆ ರದ್ದು ಮಾಡಿದ್ದಾರೆ ಅಂದ್ರು. ಬೇರೆಯವರ ಜಾಗದಲ್ಲಿ ಇದ್ದೇವೆ ಅವರು ಬಿಡಿ ಅಂದಾಗ ಬಿಡಬೇಕು. ನಮಗೆ ಇರಕ್ಕೆ ಆಸರೆ ಸಿಕ್ಕರೆ ಸಾಕು. ಮತ್ತೇನೂ ಬೇಡ.

-ಭರಮಮ್ಮ

share
ಎಂ.ಡಿ ಅಖೀಲ್ ಉಡೇವು
ಎಂ.ಡಿ ಅಖೀಲ್ ಉಡೇವು
Next Story
X