Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಚನ್ನಗಿರಿಯ ‘ಯಾಂತ್ರಿಕ ಕ್ರಾಂತಿ’...

ಚನ್ನಗಿರಿಯ ‘ಯಾಂತ್ರಿಕ ಕ್ರಾಂತಿ’ ಭೀಮನೆರೆ ಗ್ರಾಮ!

ಪ್ರಕಾಶ್ ಎಚ್.ಎನ್.ಪ್ರಕಾಶ್ ಎಚ್.ಎನ್.17 Aug 2026 9:50 AM IST
share
ಚನ್ನಗಿರಿಯ ‘ಯಾಂತ್ರಿಕ ಕ್ರಾಂತಿ’ ಭೀಮನೆರೆ ಗ್ರಾಮ!
180 ಮನೆ, 140 ಟ್ರ್ಯಾಕ್ಟರ್‌

ದಾವಣಗೆರೆ: ಮುಂಜಾವಿನ ಮಂಜಿನಲ್ಲಿ ಜೋಡೆತ್ತುಗಳ ಗಂಟೆಯ ಸದ್ದು, ರೈತನ ಸೀಟಿ ಹಾಡಿನೊಂದಿಗೆ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿದ್ದ ಕಾಲವಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಜಾಗವನ್ನು ಯಂತ್ರಗಳು ಆಕ್ರಮಿಸಿಕೊಂಡಿವೆ. ಇದಕ್ಕೆ ಜ್ವಲಂತ ಉದಾಹರಣೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಭೀಮನೆರೆ ಗ್ರಾಮ. ಕೇವಲ 180 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಇಂದು 140ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಘರ್ಜಿಸುತ್ತಿವೆ! ಹೀಗಾಗಿಯೇ ಸುತ್ತಮುತ್ತಲಿನ ಜನ ಈ ಊರನ್ನು ಪ್ರೀತಿ ಯಿಂದ ‘ಟ್ರ್ಯಾಕ್ಟರ್ ಗ್ರಾಮ’ ಎಂದೇ ಕರೆಯುತ್ತಾರೆ.

ಇಲ್ಲಿನ ಜನರಿಗೆ ಟ್ರ್ಯಾಕ್ಟರ್ ಕೇವಲ ಕಬ್ಬಿಣದ ಯಂತ್ರವಲ್ಲ; ಅದು ಅವರ ಮನೆಯ ಮತ್ತೊಬ್ಬ ಸದಸ್ಯ, ಬದುಕಿನ ಆಧಾರಸ್ತಂಭ. ತಮಗೆ ಅನ್ನ ನೀಡುವ ಈ ಯಂತ್ರಗಳನ್ನು ರೈತರು ನಿತ್ಯವೂ ತೊಳೆದು, ಸಿಂಗರಿಸಿ ಜೀವದಂತೆ ಕಾಯ್ದುಕೊಳ್ಳುತ್ತಾರೆ.

ಗಡಿ ದಾಟಿದ ಕೃಷಿ ಸೇವೆ :

ಭೀಮನೆರೆ ಗ್ರಾಮಸ್ಥರ ಪ್ರಮುಖ ಆರ್ಥಿಕ ಮೂಲವೇ ಟ್ರ್ಯಾಕ್ಟರ್ ಉದ್ಯಮ. ಕೇವಲ ತಮ್ಮ ಸ್ವಂತ ಜಮೀನಿಗೆ ಸೀಮಿತವಾಗದ ಇಲ್ಲಿನ ಯುವಕರು, ಸುತ್ತಮುತ್ತಲಿನ ಹಳ್ಳಿಗಳ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುತ್ತಿದ್ದಾರೆ. ಮುಂಗಾರು ಮಳೆ ಆರಂಭವಾಯಿತೆಂದರೆ ಇಲ್ಲಿನ ಚಾಲಕರಿಗೆ ಹಗಲು-ರಾತ್ರಿ ಬಿಡುವಿರುವುದಿಲ್ಲ.

ದಾವಣಗೆರೆ ಮಾತ್ರವಲ್ಲದೆ, ನೆರೆಯ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವು ಭಾಗಗಳಿಂದ ರೈತರು ಮುಂಗಡವಾಗಿ ಹಣ ಪಾವತಿಸಿ ಇಲ್ಲಿನ ಟ್ರ್ಯಾಕ್ಟರ್‌ಗಳನ್ನು ಕಾಯ್ದಿರಿಸುತ್ತಾರೆ. ಚನ್ನಗಿರಿಯ ಬಾಡಾ, ಹಿರೇಕೊಗಲೂರು, ಚಿತ್ರದುರ್ಗದ ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿಕ್ಕಮಗಳೂರಿನ ಅಜ್ಜಂಪುರ, ಕಡೂರು ಭಾಗದ ಹತ್ತಾರು ಹಳ್ಳಿಗಳ ಹೊಲಗಳಲ್ಲಿ ಭೀಮನೆರೆಯ ಟ್ರ್ಯಾಕ್ಟರ್‌ಗಳೇ ಉಳುಮೆ ಮಾಡುತ್ತವೆ.

ಇಂಧನ ದರ ಏರಿಕೆಯ ಬಿಸಿ :

‘ಕೃಷಿ ಇಲಾಖೆಗೆ ಯಾವುದೇ ಹೊಸ ಯಂತ್ರ ಮಾರುಕಟ್ಟೆಗೆ ತಂದರೂ ಅದನ್ನು ಮೊದಲು ಖರೀದಿಸಿ ಪ್ರಯೋಗ ಮಾಡುವುದು ನಮ್ಮ ಹಳ್ಳಿಯ ವಾಡಿಕೆ. ಸದ್ಯ ಗ್ರಾಮದಲ್ಲಿ 60ಕ್ಕೂ ಹೆಚ್ಚು ಸುಧಾರಿತ ಕೂರಿಗೆ ಯಂತ್ರಗಳಿದ್ದು, ಮೆಕ್ಕೆಜೋಳ, ರಾಗಿ, ಈರುಳ್ಳಿ ಬಿತ್ತನೆಗೆ ಬಳಸಲಾಗುತ್ತಿದೆ’ ಎನ್ನುತ್ತಾರೆ ಟ್ರ್ಯಾಕ್ಟರ್ ಮಾಲಕ ಬಿ.ಸಿ. ರುದ್ರೇಶ್.

ಆದರೆ, ಈ ಯಾಂತ್ರೀಕೃತ ಯಶಸ್ಸಿನ ನಡುವೆಯೂ ಸವಾಲುಗಳು ಕಡಿಮೆಯಿಲ್ಲ. ನಿರಂತರವಾಗಿ ಏರುತ್ತಿರುವ ಡೀಸೆಲ್ ದರ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಒಂದು ಎಕರೆ ಉಳುಮೆಗೆ ಕನಿಷ್ಠ 5 ಲೀಟರ್ ಇಂಧನ ಬೇಕು. ಡೀಸೆಲ್ ಬೆಲೆ ಹೆಚ್ಚಿ ರುವುದರಿಂದ ಬಾಡಿಗೆ ದರ ಏರಿಸಬೇಕಾಗುತ್ತದೆ, ಆದರೆ ದರ ಏರಿಸಿದರೆ ರೈತರು ಬೇರೆ ಊರಿನ ಟ್ರ್ಯಾಕ್ಟರ್ ಹುಡುಕುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಚಾಲಕ ಭರತ್ ಕುಮಾರ್.

ಸಿರಿಧಾನ್ಯಕ್ಕೂ ಸೈ! :

ಭೀಮನೆರೆ ಕೇವಲ ಯಂತ್ರಗಳಿಗಷ್ಟೇ ಹೆಸರಾಗಿಲ್ಲ, ಆಧುನಿಕ ತಂತ್ರಜ್ಞಾನದ ಜೊತೆಜೊತೆಗೆ ಸಾಂಪ್ರದಾಯಿಕ ಕೃಷಿಯನ್ನೂ ಇಲ್ಲಿನ ರೈತರು ಜೀವಂತವಾಗಿಟ್ಟಿದ್ದಾರೆ. ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳನ್ನು (ಮಿಲೆಟ್ಸ್) ಇಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಪರಿಸರ ಸ್ನೇಹಿ ಕೃಷಿಗೂ ಗ್ರಾಮ ಮಾದರಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ ಕೈಕೊಡುತ್ತಿದ್ದರೂ ನಾವು ಧೃತಿಗೆಡಲಿಲ್ಲ. ಸಾಂಪ್ರದಾಯಿಕ ಬೇಸಾಯದ ಜೊತೆಗೆ ಪರ್ಯಾಯ ಮಾರ್ಗವಾಗಿ ಯಾಂತ್ರೀಕರಣ ನಂಬಿಕೊಂಡಿದ್ದೇವೆ. ಕಷ್ಟಪಟ್ಟು ದುಡಿದರೆ ಕೃಷಿಯಲ್ಲೂ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಮ್ಮ ಹಳ್ಳಿಯೇ ಸಾಕ್ಷಿ.

-ವಿಕ್ರಮ್ ಪಾಟೀಲ್, ಪ್ರಗತಿಪರ ರೈತ, ಭೀಮನೆರೆ.

Tags

Channagiri
share
ಪ್ರಕಾಶ್ ಎಚ್.ಎನ್.
ಪ್ರಕಾಶ್ ಎಚ್.ಎನ್.
Next Story
X