Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಾವಣಗೆರೆ: ಶಿಥಿಲಗೊಂಡ ವಿವಿಧ ಸರಕಾರಿ...

ದಾವಣಗೆರೆ: ಶಿಥಿಲಗೊಂಡ ವಿವಿಧ ಸರಕಾರಿ ಶಾಲೆಗಳ ಕೊಠಡಿಗಳು

ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಯ ಆತಂಕದಲ್ಲಿ ಪೋಷಕರು

ಪ್ರಕಾಶ್ ಎಚ್. ಎನ್.ಪ್ರಕಾಶ್ ಎಚ್. ಎನ್.29 May 2024 12:14 PM IST
share

ದಾವಣಗೆರೆ : ಪ್ರಸಕ್ತ ಮುಂಗಾರು ಆರಂಭವಾಗಲಿದ್ದು, ಈ ಸಾಲಿನಲ್ಲಿ ಶಾಲೆ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಮಳೆ ಮತ್ತು ಗಾಳಿಯಿಂದಾಗಿ ಶಾಲೆಗಳ ಛಾವಣಿ ಹಾರಿ ಹೋಗುವುದು ಹಾಗೂ ಗೋಡೆಗಳು ಕುಸಿಯುವುದು ಸಾಮಾನ್ಯವಾಗಿದೆ.

ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಈ ವರ್ಷವೂ ಆತಂಕದಲ್ಲೇ ವಿದ್ಯಾಭ್ಯಾಸ ಮಾಡುವ ಅನಿವಾರ್ಯತೆ ಎದುರಾಗಿದೆ.

ಗಾಳಿ, ಮಳೆಯಿಂದ ವಿವಿಧ ಶಾಲೆಗಳಲ್ಲಿ ಅವಾಂತರ ನಡೆಯುತ್ತಲೇ ಇವೆ. ಆದರೆ, ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಇನ್ನೂ ಹೆಜ್ಜೆ ಇಟ್ಟಿಲ್ಲ. ಒಂದು ವೇಳೆ ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಪೋಷಕರದ್ದಾಗಿದೆ.

ಜಿಲ್ಲೆಯಲ್ಲಿ 5,205 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 1,291 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 6,496 ಶಾಲೆಗಳಿವೆ. 1,785 ಕೊಠಡಿಗಳು ಶಿಥಿಲಗೊಂಡಿವೆ. ಅದರಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 558 ಕೊಠಡಿಗಳು ಸಣ್ಣಪುಟ್ಟ ಶಿಥಿಲಗೊಂಡರೆ, 959 ಪ್ರೌಢಶಾಲೆಗಳ ಕೊಠಡಿಗಳು ಗಂಭೀರವಾಗಿ, 123 ಕೊಠಡಿಗಳು ಸಣ್ಣಪುಟ್ಟ ಶಿಥಿಲಗೊಂಡಿವೆ.

ತಾಲೂಕುವಾರು ವಿವರ

ಚನ್ನಗಿರಿ: 910 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 130 ಸಣ್ಣಪುಟ್ಟ, 208 ಕೊಠಡಿಗಳು ಗಂಭೀರ, 256 ಪ್ರೌಢಶಾಲೆಗಳು ಸುಸ್ಥಿತಿಯಲ್ಲಿದ್ದರೆ, 36 ಸಣ್ಣಪುಟ್ಟ, 41 ಗಂಭೀರ ಸ್ಥಿತಿಯಲ್ಲಿವೆ.

ದಾವಣಗೆರೆ ಉತ್ತರ: 539 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 95 ಸಣ್ಣಪುಟ್ಟ, 147 ಗಂಭೀರ ಸ್ಥಿತಿಯಲ್ಲಿವೆ. 94 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 7 ಸಣ್ಣಪುಟ್ಟ, 3 ಗಂಭೀರ ಸ್ಥಿತಿಯಲ್ಲಿವೆ.

ದಾವಣಗೆರೆ ದಕ್ಷಿಣ: 436 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 69 ಸಣ್ಣಪುಟ್ಟ, 180 ಗಂಭೀರ ಸ್ಥಿತಿಯಲ್ಲಿವೆ. 224 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿ, 22 ಸಣ್ಣಪುಟ್ಟ, 37 ಗಂಭೀರ ಸ್ಥಿತಿಯಲ್ಲಿವೆ.

ಹರಿಹರ: 611 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 84 ಸಣ್ಣಪುಟ್ಟ, 109 ಗಂಭೀರ ಸ್ಥಿತಿಯಲ್ಲಿವೆ. 150 ಪ್ರೌಢ ಶಾಲೆಗಳ ಕೊಠಡಿಗಳು ಸುಸ್ಥಿತಿ, 5 ಸಣ್ಣಪುಟ್ಟ, 18 ಗಂಭೀರ ಸ್ಥಿತಿಯಲ್ಲಿವೆ.

ಹೊನ್ನಾಳಿ: 690 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 94 ಸಣ್ಣಪುಟ್ಟ, 125 ಗಂಭೀರ ಸ್ಥಿತಿಯಲ್ಲಿವೆ. 196 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿ, 31 ಸಣ್ಣಪುಟ್ಟ, 43 ಗಂಭೀರ ಸ್ಥಿತಿಯಲ್ಲಿವೆ.

ಜಗಳೂರು: 502 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 86 ಸಣ್ಣಪುಟ್ಟ, 190 ಗಂಭೀರ ಸ್ಥಿತಿಯಲ್ಲಿವೆ. 101 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿ, 22 ಸಣ್ಣಪುಟ್ಟ, 5 ಕೊಠಡಿಗಳು ಗಂಭೀರ ಸ್ಥಿತಿಯಲ್ಲಿವೆ.

22 ಶಾಲೆಗಳು ರದ್ದು

ಜಿಲ್ಲೆಯಲ್ಲಿ ‘0’ ಸಂಖ್ಯೆ ಮಕ್ಕಳು ಹೊಂದಿರುವ 22 ಶಾಲೆಗಳನ್ನು ರದ್ದು ಮಾಡಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ 3, ದಾವಣಗೆರೆ ಉತ್ತರದಲ್ಲಿ 2, ದಾವಣಗೆರೆ ದಕ್ಷಿಣದಲ್ಲಿ 10, ಹರಿಹರ ತಾಲೂಕಿನಲ್ಲಿ 1, ಹೊನ್ನಾಳಿ ತಾಲೂಕಿನಲ್ಲಿ 3 ಹಾಗೂ ಜಗಳೂರು ತಾಲೂಕಿನಲ್ಲಿ 3 ಶಾಲೆಗಳನ್ನು ರದ್ದು ಮಾಡಲಾಗಿದೆ.

share
ಪ್ರಕಾಶ್ ಎಚ್. ಎನ್.
ಪ್ರಕಾಶ್ ಎಚ್. ಎನ್.
Next Story
X