Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಂಜಿನರೇಗಾ: ಪುತ್ತೂರು ತಾಲೂಕು ಶೇ.99...

ಎಂಜಿನರೇಗಾ: ಪುತ್ತೂರು ತಾಲೂಕು ಶೇ.99 ಗುರಿ ಸಾಧನೆ

1,69,239 ಮಾನವ ದಿನಗಳ ಕೆಲಸದ ಗುರಿಯಲ್ಲಿ 1,67,999 ಪೂರ್ಣ

ಸಂಶುದ್ದೀನ್ ಸಂಪ್ಯಸಂಶುದ್ದೀನ್ ಸಂಪ್ಯ29 July 2024 10:04 AM IST
share
ಎಂಜಿನರೇಗಾ: ಪುತ್ತೂರು ತಾಲೂಕು ಶೇ.99 ಗುರಿ ಸಾಧನೆ

ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂಜಿನರೇಗಾ)ಯಲ್ಲಿ ಪುತ್ತೂರು ತಾಲೂಕು 2023-24ರಲ್ಲಿ ಶೇ.99 ಗುರಿ ಸಾಧನೆಯ ಮೂಲಕ ಗಮನಸೆಳೆದಿದೆ.

ಎಂಜಿನರೇಗಾ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕನಿಷ್ಠ 100ದಿನಗಳ ಕೆಲಸ ನೀಡಿ ಅದಕ್ಕೆ ಕೂಲಿ ಪಾವತಿಸಿ ಅವರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ರೂಪುಗೊಂಡಿರುವ ಯೋಜನೆಯಾಗಿದೆ. ಈ ಯೋಜನೆ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಕುಶಲ ಕಾರ್ಮಿಕರಿಗೆ ನೂರು ದಿನಗಳ ಕೂಲಿ ನೀಡುವುದನ್ನು ಖಾತ್ರಿಪಡಿಸುವುದರ ಜೊತೆಗೆ ಸಮುದಾಯಕ್ಕೆ ಹಾಗೂ ವೈಯಕ್ತಿಕ ಅರ್ಹ ಫಲಾನುಭವಿಗಳಿಗೆ ದೀರ್ಘಕಾಲಿಕ ಆಸ್ತಿಗಳನ್ನು ಸೃಜಿಸುವ ಆಶಯ ಹೊಂದಿದೆ. ಈ ಯೋಜನೆಯಡಿ ಸದ್ಯ ಪ್ರತೀ ಕುಟುಂಬಕ್ಕೆ ಪ್ರತೀ ದಿನಕ್ಕೆ ರೂ.349 ದಿನಗೂಲಿ ಲಭಿಸುತ್ತದೆ.

ಪ್ರತೀ ವರ್ಷ ಸರಕಾರವು ಹಿಂದಿನ ವರ್ಷದ ಪ್ರಗತಿಗೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸುತ್ತದೆ. ಅದರಂತೆ 2023-24ರಲ್ಲಿ ಪುತ್ತೂರು ತಾಲೂಕಿಗೆ 1,69,239 ಮಾನವ ದಿನಗಳ ಕೆಲಸದ ಗುರಿ ನೀಡಲಾಗಿತ್ತು. 2024ರ ಮಾರ್ಚ್ ಅಂತ್ಯಕ್ಕೆ 1,67,999 ಮಾನವ ದಿನಗಳನ್ನು ಪೂರೈಸುವ ಮೂಲಕ ಶೇ.99 ಗುರಿಯನ್ನು ಸಾಧಿಸಿದೆ. ಈ ಬಾರಿ ಶೇ.57.75 ಮಹಿಳೆಯರು ಭಾಗವಹಿಸಿದ್ದು, ಕಳೆದ ವರ್ಷಕ್ಕಿಂತ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಯೋಜನೆಯಡಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ವೇತನ ದೊರೆಯುತ್ತದೆ.

ಪುತ್ತೂರು ತಾಲೂಕಿನ 22 ಗ್ರಾಪಂಗಳ ಪೈಕಿ ಹಿರೇಬಂಡಾಡಿ 16,230, ನರಿಮೊಗ್ರು 13,777, ಆರ್ಯಾಪು 12,044, ಬಜತ್ತೂರು 11,013, ನೆಟ್ಟಣಿಗೆ ಮುಡ್ನೂರು 9,547, ಅರಿಯಡ್ಕ 9,128, ಕೋಡಿಂಬಾಡಿ 8,824, ಮುಂಡೂರು 8,064, ಬಲ್ನಾಡು 7,844, ಬೆಟ್ಟಂಪಾಡಿ 7,658, ಉಪ್ಪಿನಂಗಡಿ 6,499, ಬಡಗನ್ನೂರು 6,302, ಕೆಯ್ಯೂರು 6,116, ಒಳಮೊಗ್ರು 5,964, ಕೆದಂಬಾಡಿ 5,624, ಬನ್ನೂರು5,427, ಕೊಳ್ತಿಗೆ 5,316, ನಿಡ್ಪಳ್ಳಿ 5,304, ಕಬಕ 5,111, ಪಾಣಾಜೆ 4,321, ಕೊಡಿಪ್ಪಾಡಿ 4,216, 34 ನೆಕ್ಕಿಲಾಡಿ ಗ್ರಾಪಂ 3,670 ಮಾನವ ದಿನಗಳನ್ನು ಪೂರೈಸಿದೆ.

ಒಟ್ಟು ವೈಯಕ್ತಿಕ ಕಾಮಗಾರಿಗಳು

ಪುತ್ತೂರಿನಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಹೈನುಗಾರರಿಗೆ ಜೈವಿಕ ಅನಿಲ ಘಟಕ (ಬಯೋಗ್ಯಾಸ್) ರಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ 15 ಬಯೋ ಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದೆ. 159 ದನದ ಹಟ್ಟಿ ನಿರ್ಮಾಣ, 18 ಗೊಬ್ಬರದ ಗುಂಡಿ, 4 ಕೃಷಿ ಹೊಂಡ, 10 ಆಡು ಶೆಡ್, 5 ಹಂದಿ ಶೆಡ್, 27 ಕೋಳಿ ಶೆಡ್, 242 ಬಚ್ಚಲು ಗುಂಡಿ ನಿರ್ಮಾಣ, 233 ವಸತಿ ಯೋಜನೆಯ ಮನೆಗಳಿಗೆ ಕೂಲಿ, 73 ಮನೆಗಳಿಗೆ ಶೌಚಾಲಯ ನಿರ್ಮಾಣ, 85 ಬಾವಿ ನಿರ್ಮಾಣ, 829 ತೋಟಗಾರಿಕೆ ಕಾಮಗಾರಿಗಳು, 47 ತೋಟಕ್ಕೆ ಬಸಿಕಾಲುವೆ ನಿರ್ಮಾಣಗಳಿಗೆ ಆರ್ಥಿಕವಾಗಿ ಸಹಕಾರ ನೀಡಿದೆ. ಈ ಮೂಲಕ ಗ್ರಾಮೀಣ ಜನರಿಗೆ ಯೋಜನೆ ತಲುಪಲು ಸಾಧ್ಯವಾಗಿದೆ.

ಸಮುದಾಯ ಕಾಮಗಾರಿಗಳ ಅನುಷ್ಠಾನ

ಎಂಜಿನರೇಗಾ ಯೋಜನೆಯಡಿ 5 ಲಕ್ಷ ರೂ. ಹಾಗೂ ತಾಪಂ ಅನಿರ್ಬಂಧಿತ ಅನುದಾನದಡಿ ೫ ಲಕ್ಷ ರೂ. ಒಗ್ಗೂಡಿಸುವಿಕೆಯಲ್ಲಿ ಹಿರೇಬಂಡಾಡಿ, ಆರ್ಯಾಪು, ಪಾಣಾಜೆ, 34 ನೆಕ್ಕಿಲಾಡಿ, ಒಳಮೊಗ್ರು ಗ್ರಾಪಂಗಳಲ್ಲಿನ ಶಿಥಿಲಗೊಂಡ ಅಂಗನವಾಡಿಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸಮಗ್ರ ಶಾಲಾಭಿವೃದ್ಧಿ ಕಾರ್ಯಕ್ರಮದಡಿ 4 ಶಾಲೆಗಳಿಗೆ ಆವರಣ ಗೋಡೆ ನಿರ್ಮಾಣ, 18 ಶಾಲೆಗಳಿಗೆ ಶೌಚಾಲಯ, 2 ಶಾಲಾ ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗಿದೆ. 4 ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಒಗ್ಗೂಡಿಸುವಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗೋಮಾಳ, ಗ್ರಾಪಂ ಮೀಸಲಿಟ್ಟ ಜಮೀನಿನಲ್ಲಿ ಗಿಡ ನೆಡುವುದು, ಇಂಗುಗುಂಡಿ ನಿರ್ಮಾಣ, ಸಾರ್ವಜನಿಕ ಬಾವಿ ರಚನೆ, ಕಾಂಕ್ರಿಟ್ ರಸ್ತೆ ನಿರ್ಮಾಣ, ಸಂಜೀವಿನಿ ಒಕ್ಕೂಟದವರಿಗಾಗಿ ಎನ್‌ಆರ್‌ಎಲ್‌ಎಂ ವರ್ಕ್ ಶೆಡ್ ನಿರ್ಮಾಣ, ಸಮುದಾಯ ಬಚ್ಚಲು ಗುಂಡಿ, ಜಲ ಮರುಪೂರಣ ಘಟಕ, ಮಳೆ ನೀರು ಕೊಯ್ಲು, ಸ್ಮಶಾನ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ರಸ್ತೆ ಬದಿ ನೆಡುತೋಪು ರಚಿಸಲಾಗಿದೆ.

ಪುತ್ತೂರು ತಾಲೂಕಿನಲ್ಲಿ ನರೇಗಾ ಯೋಜನೆಯ ಪ್ರಯೋಜನವನ್ನು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ತೆರೆದ ಬಾವಿ, ಜಲ ಸಂರಕ್ಷಣಾ ಇಂಗುಗುಂಡಿ, ಬಚ್ಚಲು ಗುಂಡಿ, ಕೊಳವೆಬಾವಿಗಳಿಗೆ ಮರುಪೂರಣಾ ಘಟಕ ಮುಂತಾದ ಕಾಮಗಾರಿಗಳನ್ನು ಅಭಿಯಾನ ರೂಪದಲ್ಲಿ ಹಮ್ಮಿಕೊಂಡು ಈ ವರ್ಷವೂ ಗುರಿ ಮೀರಿದ ಸಾಧನೆ ಮಾಡಲಿದ್ದೇವೆ. ಪ್ರಸಕ್ತ ಕೊಳವೆಬಾವಿ ಮರುಪೂರಣಾ ಘಟಕಗಳಿಗೆ 45,000 ರೂ. ಘಟಕ ವೆಚ್ಚವಿದ್ದು, ಎಲ್ಲ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

-ಶೈಲಜಾ ಎ., ಸಹಾಯಕ ನಿರ್ದೇಶಕರು (ಗ್ರಾ.ಉ.) ತಾಪಂ ಪುತ್ತೂರು

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುತ್ತೂರು ತಾಲೂಕು ಪ್ರತೀ ವರ್ಷ ಗುರಿ ಮೀರಿದ ಸಾಧನೆಯನ್ನು ಮಾಡುತ್ತಿದೆ. ಈ ವರ್ಷ ಅರ್ಹ ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ.ವರೆಗಿನ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಪಶು ಸಂಗೋಪನೆ, ತೋಟಗಾರಿಕೆ ಹೀಗೆ ದುರ್ಬಲ ವರ್ಗದವರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವೈಯಕ್ತಿಕವಾಗಿ ಹೊಸದಾಗಿ ಬಾವಿ ನಿರ್ಮಾಣಕ್ಕೆ ಸುಮಾರು 1.5 ಲಕ್ಷ ರೂ. ವರೆಗೆ ಅನುದಾನ ನೀಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ತಮ್ಮ ಜಮೀನಿನಲ್ಲಿ ಪ್ರತಿಯೊಬ್ಬರೂ ಕೆಲಸ ನಿರ್ವಹಿಸಿದರೆ ಯೋಜನೆ ಮೂಲಕ ಆರ್ಥಿಕ ಪ್ರಯೋಜನ ಪಡೆಯಬಹುದು.

-ನವೀನ್ ಕುಮಾರ್ ಭಂಡಾರಿ, ಇಒ, ತಾಪಂ, ಪುತ್ತೂರು

share
ಸಂಶುದ್ದೀನ್ ಸಂಪ್ಯ
ಸಂಶುದ್ದೀನ್ ಸಂಪ್ಯ
Next Story
X