Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂಬಂಧವೆಂಬ ತೋಟದಲ್ಲಿ ಸ್ನೇಹದ ಹೂಗಳು

ಸಂಬಂಧವೆಂಬ ತೋಟದಲ್ಲಿ ಸ್ನೇಹದ ಹೂಗಳು

ಮಹಿಮ ಸಾಮಂತ್‌ಮಹಿಮ ಸಾಮಂತ್‌16 Nov 2025 11:05 AM IST
share
ಸಂಬಂಧವೆಂಬ ತೋಟದಲ್ಲಿ ಸ್ನೇಹದ ಹೂಗಳು

ಸಂಬಂಧಗಳು ಮಾತಿನ ಕತ್ತಿಯಿಂದ ಮುರಿಯಬಹುದು, ಪ್ರೀತಿಯ ಸ್ಪರ್ಷದಿಂದ ಹೂವುಗಳಾಗಬಹುದು. ಮನೆ ಎಂದರೆ ಕೇವಲ ಗೋಡೆಗಳ ಸೇರ್ಪಡೆ ಅಲ್ಲ; ಅದು ಮನಸ್ಸುಗಳ ಸಂಯೋಜನೆ. ಒಂದೇ ಗೂಡಿನಲ್ಲಿ ವಾಸಿಸುವ ಜನರ ನಡುವೆ ನಂಟುಗಳ ಹಸಿರು ಹರಡಬೇಕಾದರೆ, ಸ್ನೇಹದ ನೀರಾವರಿ ಅಗತ್ಯ. ಸಂಬಂಧಗಳು ರಕ್ತದ ಬಾಂಧವ್ಯದಿಂದ ಹುಟ್ಟಬಹುದು, ಆದರೆ ಅವು ಜೀವಂತವಾಗುವುದಾದರೆ ಹೃದಯದ ಸ್ಪಂದನದಿಂದ, ಪರಸ್ಪರ ಮನಸ್ಸಿನ ಸ್ಪರ್ಷದಿಂದ. ವಿಶೇಷವಾಗಿ ಅತ್ತೆ-ಸೊಸೆ ನಂಟು ಎಂಬುದು ಕೇವಲ ಬಾಧ್ಯತೆ ಅಥವಾ ಕಟ್ಟುಪಾಡಲ್ಲ, ಅದು ಸ್ನೇಹ, ಗೌರವ ಮತ್ತು ಸಹಾನುಭೂತಿಯ ಹೂಗಳಿಂದ ಅರಳಬೇಕಾದ ಒಂದು ತೋಟವಾಗಿದೆ.

ಪರಂಪರೆ ಮತ್ತು ಬದಲಾವಣೆಯ ಸೇತುವೆ

ಕಾಲಾಂತರದಿಂದ ಅತ್ತೆ-ಸೊಸೆ ಸಂಬಂಧವು ಕಥೆಗಳಲ್ಲಿ, ನಾಟಕಗಳಲ್ಲಿ, ಧಾರಾವಾಹಿಗಳಲ್ಲಿ ತೀವ್ರ ಸಂಘರ್ಷಗಳ ಸಂಕೇತವಾಗಿ ಮೂಡಿಬಂದಿದೆ. ಆದರೆ ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ವತಂತ್ರತೆಯ ಮೂಲಕ ಹೊಸ ಆತ್ಮವಿಶ್ವಾಸವನ್ನು ಪಡೆದಿದ್ದಾರೆ. ಈ ಬದಲಾವಣೆಯ ಹೊಣೆಯಲ್ಲಿ, ಅತ್ತೆ-ಸೊಸೆ ಬಾಂಧವ್ಯವೂ ಹೊಸ ರೂಪ ಪಡೆಯಬೇಕಾಗಿದೆ - ಹಳೆಯ ಬಂಧನಗಳಿಂದ ಮುಕ್ತವಾದ, ಪರಸ್ಪರ ಗೌರವದ ಆಧುನಿಕ ಸ್ನೇಹದ ನಂಟು.

ಪರಂಪರೆ ಎನ್ನುವುದು ಉಳಿಯಬೇಕು, ಆದರೆ ಅದು ಪರಿವರ್ತನೆಯೊಡನೆ ಹೆಜ್ಜೆ ಹಾಕಬೇಕು. ಅತ್ತೆ ಹಳೆಯ ಅನುಭವದ ಕಣಜವಾದರೆ, ಸೊಸೆ ಹೊಸ ಯುಗದ ಸ್ಪಂದನ. ಈ ಎರಡು ಜೀವಿಗಳು ಮುಖಾಮುಖಿಯಾದಾಗ ಸಂಘರ್ಷವಾಗಬಾರದು; ಸಹಯಾತ್ರೆಯು ಹುಟ್ಟಬೇಕು. ಒಂದು ಕೈ ಅನುಭವದ, ಮತ್ತೊಂದು ಕನಸಿನ - ಇವೆರಡೂ ಸೇರಿ ಬಾಳಿನ ಹೊಸ ಕಥೆಯನ್ನು ಬರೆಯಬೇಕು.

ಮಾರ್ಗದರ್ಶನ ಮತ್ತು ಸಹಬಾಳ್ವೆಯ ಸೌಂದರ್ಯ

ಸಹಬಾಳ್ವೆ ಎಂದರೆ ಕೇವಲ ಒಟ್ಟಿಗೆ ವಾಸಿಸುವುದು ಅಲ್ಲ; ಅದು ಪರಸ್ಪರ ಅರಿತು ಬದುಕುವ ಕಲೆ. ಈ ಕಲೆಯ ಸೌಂದರ್ಯವು ಪ್ರೀತಿಯ ಮಾರ್ಗದರ್ಶನದಲ್ಲಿ ಇದೆ. ಒಬ್ಬ ಸೊಸೆ ತಪ್ಪು ಮಾಡಿದಾಗ ಅತ್ತೆಯು ಕೋಪದಿಂದ ನುಡಿಯುವುದಕ್ಕಿಂತ, ಆಕೆಯ ಕೈ ಹಿಡಿದು ಸೌಮ್ಯವಾಗಿ ಹೇಳಿದರೆ - ಇದನ್ನು ಹೀಗೆ ಮಾಡಿದರೆ ಒಳ್ಳೆಯದು ಮಗಳೆ - ಆ ಮಾತಿನಲ್ಲಿ ತಾಯಿ ಮಮತೆಯ ತೇವ ಇರುತ್ತದೆ. ಇಂಥ ನುಡಿ ಬೇರೊಂದು ಸಂಬಂಧ ನಿರ್ಮಿಸುತ್ತದೆ. ಅತ್ತೆಯು ಕೇವಲ ಮನೆಯ ಹಿರಿಯರಾಗಬಾರದು; ಆಕೆ ಮಾರ್ಗದರ್ಶಕಿಯಾಗಬೇಕು. ಯಾವಾಗ ಸೊಸೆಯು ಅಡುಗೆ ತಪ್ಪಾಗಿದೆಯೆಂದು ಚಿಂತೆಪಟ್ಟುಕೊಳ್ಳುತ್ತಾಳೋ, ಅತ್ತೆಯು ‘‘ಪರವಾಗಿಲ್ಲ ಮಗಳೆ, ನನ್ನ ಮೊದಲ ದಿನಗಳೂ ಹೀಗೆಯೇ ಕಳೆದುಹೋಗಿದೆ’’ ಎಂದು ನಗುತ್ತಾಳೆ. ಆ ನಗುವಿನ ಹಿಂದುಗಡೆ ಇರುವ ಅರ್ಥ - ನಾನಿದ್ದೇನೆ ನಿನಗೆ ಬೆಂಬಲವಾಗಿ. ಆ ಕ್ಷಣದಲ್ಲಿ ಸೊಸೆಯ ಮನಸ್ಸು ಮುಕ್ತವಾಗುತ್ತದೆ, ಭಯ ಕರಗುತ್ತದೆ, ಆತ್ಮವಿಶ್ವಾಸ ಮೂಡುತ್ತದೆ. ಅತ್ತೆಯು ಪ್ರೀತಿಯಿಂದ ಮಾಡಿದ ಮಾರ್ಗದರ್ಶನವು ಕೇವಲ ಒಂದು ತಪ್ಪನ್ನು ಸರಿಪಡಿಸುವುದಲ್ಲ - ಅದು ಒಬ್ಬ ಮಹಿಳೆಯ ವ್ಯಕ್ತಿತ್ವವನ್ನು ಬೆಳೆಸುವ ಬೀಜವಾಗುತ್ತದೆ.

ಅತ್ತೆ ಸೊಸೆಯನ್ನು ಕೇವಲ ಮಗನ ಹೆಂಡತಿ ಎಂದು ಅಲ್ಲ, ನನ್ನ ಮನೆಗೆ ಬಂದ ಹೊಸ ಮಗಳು ಎಂದು ನೋಡಿದರೆ, ಆ ಕ್ಷಣದಲ್ಲಿ ಮನೆಯ ವಾತಾವರಣವೇ ಬದಲಾಗುತ್ತದೆ. ಮನಸ್ಸಿನ ಬಾಗಿಲು ತೆರೆದಾಗ ಅಸ್ಪಷ್ಟತೆಗಳೆಲ್ಲ ಕರಗಿ ಹೋಗುತ್ತವೆ. ಸೊಸೆಯು ಆ ಮನೆಯಲ್ಲಿ ಭದ್ರತೆಯ, ಗೌರವದ ಮತ್ತು ಆತ್ಮೀಯತೆಯ ಹಾದಿಯಲ್ಲಿ ನಡೆಯಲು ಪ್ರೇರಣೆ ಪಡೆಯುತ್ತಾಳೆ. ಅತ್ತೆಯು ಜೀವನದ ಮೌಲ್ಯಗಳನ್ನು, ಸಂಸ್ಕಾರವನ್ನು ಹಂಚಿದಾಗ ಸೊಸೆಯು ಅವನ್ನು ಹೊಸ ಪೀಳಿಗೆಗೆ ಸೇತುವೆಯಂತೆ ಕೊಂಡೊಯ್ಯುತ್ತಾಳೆ.

ಹೊಸ ಮನೆಯಲ್ಲಿ ಹಳೆಯ ನೆನಪು

ಮದುವೆಯಾದ ದಿನ ಸೊಸೆಯು ಹೊಸ ಮನೆಯಲ್ಲಿ ಕಾಲಿಡುವಾಗ ಅವಳ ಮನಸ್ಸು ಅಂಜಿಕೆಯ ಸಮುದ್ರ. ಅತ್ತೆಯು ಒಮ್ಮೆ ಅದೇ ದಾರಿಯಲ್ಲಿ ನಡೆದಿದ್ದಳು ಎಂಬ ಅರಿವು ಅವಳಿಗೆ ಸಹಾನುಭೂತಿಯ ನೋಟ ನೀಡುತ್ತದೆ. ನಾನೂ ನಿನ್ನಂತೆಯೇ ನಡುಗಿದವಳು, ನಾನೂ ಅಂಜಿದವಳು ಎಂಬ ಅತ್ತೆಯ ಮೃದುವಾದ ಮಾತು ಹೊಸ ಬಾಳಿನ ಅಂಜಿಕೆಯನ್ನು ಕರಗಿಸುತ್ತದೆ. ಹೀಗಾಗಿಯೇ ಅತ್ತೆ-ಸೊಸೆ ನಂಟು ಪೀಳಿಗೆಗಳ ನಡುವಿನ ಸೇತುವೆಯಾಗುತ್ತದೆ.

ಒಂದು ನುಡಿ-ಒಂದು ನಂಟು

ಮಾತುಗಳು ಶಸ್ತ್ರಗಳಂತೆ ಕಹಿಯಾಗಬಹುದು, ಆದರೆ ಅವೇ ಔಷಧಿಯೂ ಆಗಬಹುದು. ಒಂದು ಪ್ರೀತಿಯ ನುಡಿ ಮನಸ್ಸಿನ ಭಯವನ್ನು ಕರಗಿಸಬಲ್ಲದು. ಒಂದು ಮಹಿಳೆಯ ಕಥೆ ನನಗೆ ನೆನಪಿದೆ - ಮದುವೆಯ ದಿನದ ರಾತ್ರಿ ಅತ್ತೆಯು ಸೊಸೆಯ ಕಿವಿಯಲ್ಲಿ ಪಿಸು ಗುಟ್ಟಿದಳು: ‘‘ನೀನು ನನ್ನ ಮಗಳು. ನನ್ನ ಹೃದಯದಿಂದ ಬಂದೆ.’’ ಆ ನುಡಿಯ ಭರವಸೆಯಲ್ಲಿ ಸೊಸೆಯ ಅಂಜಿಕೆ ಕರಗಿತು. ಆಕೆ ಮನೆಯ ಹೊಸ ಮಗಳಾಗಿ ಅರಳಿದಳು. ಆ ಒಂದು ನುಡಿಯೇ ಅವರ ಜೀವನದ ಬುನಾದಿಯಾದದ್ದು. ನಿಜವಾಗಿ ನೋಡಿದರೆ, ಸಂಬಂಧ ಕಟ್ಟುವುದು ಕಷ್ಟವಲ್ಲ; ಮನಸ್ಸು ಮುಕ್ತಗೊಳಿಸುವ ಒಂದು ಕ್ಷಣ ಸಾಕು.

ಸ್ನೇಹದ ಮಣ್ಣಿನಲ್ಲಿ ಬೆಳೆದ ಬಾಂಧವ್ಯ

ಸಂಬಂಧಗಳು ನಿತ್ಯ ನೀರಾವರಿ ಬೇಡಿಕೊಳ್ಳುತ್ತವೆ. ಗೌರವದ ನೀರು, ಸಹಾನುಭೂತಿಯ ಬೆಳಕು, ಪ್ರೀತಿಯ ಗಾಳಿ - ಇವುಗಳಿಲ್ಲದೆ ನಂಟುಗಳು ಒಣಗುತ್ತವೆ. ಅತ್ತೆ-ಸೊಸೆ ಬಾಂಧವ್ಯವೂ ಹೀಗೆಯೇ: ಒಂದು ದಿನದ ಬದ್ಧತೆ ಅಲ್ಲ, ಪ್ರತಿದಿನದ ಸಂವಾದ, ಪ್ರತಿನಿತ್ಯದ ಕಾಳಜಿ. ಸ್ನೇಹದ ಮಣ್ಣಿನಲ್ಲಿ ಬೆಳೆದ ಸಂಬಂಧಗಳು ಸಮಯದ ಬಿರುಗಾಳಿಗೂ ಅಲುಗಾಡುವುದಿಲ್ಲ. ಅತ್ತೆಯು ಸೊಸೆಯ ಅಭಿಪ್ರಾಯ ಕೇಳಿದರೆ, ಸೊಸೆಯು ಅತ್ತೆಯ ಅನುಭವ ಕೇಳಿದರೆ - ಎರಡೂ ಮನಸ್ಸುಗಳು ಹೂವುಗಳಂತೆ ಅರಳುತ್ತವೆ.

ಮನಸ್ಸುಗಳ ನಂಟು

ಮನೆ ದೊಡ್ಡದಾಗಬಹುದು, ಆದರೆ ಮನಸ್ಸುಗಳು ಬೇರೆ ಬೇರೆ ಹಾದಿಯಲ್ಲಿದ್ದರೆ ಅದು ಖಾಲಿ ಇಟ್ಟಿಗೆಗಳ ಗುಡಿಸಲು. ಆದರೆ ಮನಸ್ಸುಗಳು ಒಂದಾದಾಗ, ಮನೆ ಮಂದಿರವಾಗುತ್ತದೆ. ಅತ್ತೆಯ ಪ್ರೀತಿ ತಾಯಿಯಂತಾದಾಗ, ಸೊಸೆಯು ಮಗಳಂತಾದಾಗ, ಮನೆಯೊಳಗೆ ಬೆಳಕು ಹರಿಯುತ್ತದೆ. ಮಕ್ಕಳು ಇಂಥ ವಾತಾವರಣದಲ್ಲಿ ಬೆಳೆದರೆ, ಅವರ ಹೃದಯದಲ್ಲಿ ಸಹಾನುಭೂತಿ ಮತ್ತು ಗೌರವದ ಬೀಜ ಬಿತ್ತುತ್ತದೆ.

ನಿಜವಾದ ಸಂಬಂಧ ಎಂದರೆ ಒಬ್ಬರ ನಗುವಿನಲ್ಲಿ ಮತ್ತೊಬ್ಬರ ಶಾಂತಿ ಕಂಡುಕೊಳ್ಳುವುದು. ಅತ್ತೆಯ ಹೃದಯದಲ್ಲಿ ಸೊಸೆಯ ನಗು ಅರಳಿದರೆ, ಮನೆಯೊಳಗೆ ಕಣ್ಮಣಿಯ ಬೆಳಕು ಬೀಳುತ್ತದೆ. ಪ್ರೀತಿ, ಕ್ಷಮೆ ಮತ್ತು ಪರಸ್ಪರ ಅರಿವುಗಳು ಮನೆಯ ಆಕಾಶದಲ್ಲಿ ಹೂಗಳ ಪರಿಮಳವಾಗಿ ಹರಡುತ್ತವೆ. ಸಂಬಂಧವು ದೇಹದ ಬಂಧನವಲ್ಲ, ಅದು ಮನಸ್ಸಿನ ಸನ್ನಿವೇಶ. ನಿತ್ಯದ ಕಾಳಜಿ, ಚಿಕ್ಕ ಸಹಾಯ, ಪ್ರೀತಿಯ ನೋಟ - ಇವೆಲ್ಲ ಸೇರಿ ಬಾಳಿನ ಬಣ್ಣವನ್ನು ಚಿತ್ತಾರಮಾಡುತ್ತವೆ.

ಅತ್ತೆ-ಸೊಸೆ ನಂಟು ಹಳೆಯ ಕಲ್ಪನೆಯ ಸಂಘರ್ಷದ ಸಂಕೇತದಿಂದ ಹೊರಬಂದು ಸ್ನೇಹದ ಮಾದರಿಯಾಗಲಿ. ಒಬ್ಬಳು ತಾಯಿಯಾಗಿ ನಿಂತಾಗ ಮತ್ತೊಬ್ಬಳು ಮಗಳಾಗಿ ಅರಳಲಿ. ಈ ನಂಟು ಬಾಳಿನ ಬಂಡೆಯಂತೆ ಬಲವಾಗಲಿ, ಪರಂಪರೆಯ ಪೀಳಿಗೆಗಳಿಗೆ ಮಾದರಿಯಾಗಲಿ. ಮನೆಯ ನಿಜವಾದ ಬಲ ಗೋಡೆಗಳಲ್ಲ - ಅದು ಮನಸ್ಸುಗಳ ಒಗ್ಗಟ್ಟಿನಲ್ಲಿ ಇದೆ. ಸ್ನೇಹದ ಮಣ್ಣಿನಲ್ಲಿ ಬಿತ್ತಿದ ಸಂಬಂಧಗಳು ಹಸಿರಾಗಿಯೇ ಇರುತ್ತವೆ. ಅತ್ತೆಯ ಪ್ರೀತಿಯ ಎದೆಗೆ ಸೊಸೆಯ ನಗು ಸೇರಿದರೆ, ಮನೆ ಮಾತ್ರವಲ್ಲ - ಬದುಕೇ ಮಂದಿರವಾಗುತ್ತದೆ.

share
ಮಹಿಮ ಸಾಮಂತ್‌
ಮಹಿಮ ಸಾಮಂತ್‌
Next Story
X