Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬತ್ತದ ಹೊಸಕೋಟೆಯ ಗಂಗಾಪುರ ಕಲ್ಯಾಣಿ

ಬತ್ತದ ಹೊಸಕೋಟೆಯ ಗಂಗಾಪುರ ಕಲ್ಯಾಣಿ

►ಬಿರು ಬೇಸಿಗೆಯಲ್ಲೂ ನೀರಿನ ಸಂಗ್ರಹ ►ಜನ -ಜಾನುವಾರುಗಳಿಗೆ ಅನುಕೂಲ

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.29 April 2025 10:00 AM IST
share
ಬತ್ತದ ಹೊಸಕೋಟೆಯ ಗಂಗಾಪುರ ಕಲ್ಯಾಣಿ

ಹೊಸಕೋಟೆ : ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆ ಆರಂಭವಾಯಿತೆಂದರೆ ಕೆರೆ-ಕಟ್ಟೆ ಸೇರಿದಂತೆ ಕೆಲ ನೀರಿನ ಮೂಲಗಳು ಬತ್ತಿಹೋಗುವುದು ಸಾಮಾನ್ಯ. ಆದರೆ ಹೊಸಕೋಟೆ ತಾಲೂಕಿನ ಗಂಗಾಪುರ ಕಲ್ಯಾಣಿಯಲ್ಲಿ ಬೇಸಿಗೆ ಬಿರು ಬಿಸಿಲಿದ್ದರೂ ನೀರು ಇರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಕೆರೆ-ಕುಂಟೆಗಳಲ್ಲಿ ನೀರು ಖಾಲಿಯಾಗಿದ್ದು, ಆದರೆ ವಿಶೇಷವಾಗಿ ನೀರು ಖಾಲಿಯಾಗದೆ ದನಕರುಗಳು, ಕಾಡು ಪ್ರಾಣಿಗಳಿಗೆ ನೀರಿನ ಆಧಾರ ಸ್ತಂಭವಾಗಿ ಕಂಗೊಳಿಸುತ್ತಿದೆ. ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಗಾಪುರ ಕಲ್ಯಾಣಿಯಲ್ಲಿ ನೀರು ಅರ್ಧಕ್ಕಿಂತ ಹೆಚ್ಚಾಗಿ ಉಳಿದಿದೆ. ಇದು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಇದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಕೆಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಪ್ರವಾಸಕ್ಕೆಂದು ಬಂದು ಈಜು ಹೊಡೆದು ಮೋಜು ಮಸ್ತಿ ಮಾಡುತ್ತಿರುತ್ತಾರೆ. ದನ ಕರುಗಳಿಗೆ ಒಳ್ಳೆಯ ನೀರು ದೊರೆಯುತೆಂದು ರೈತರು ಸಂತಸ ಪಡುತ್ತಿದ್ದಾರೆ.

ಇನ್ನೊಂದು ವಿಶೇಷವೆಂದರೆ ಈ ಕಲ್ಯಾಣಿಯಲ್ಲಿ ಇದುವರೆಗೂ ಎಷ್ಟೇ ಬೇಸಿಗೆ ಬಂದರೂ ನೀರು ಖಾಲಿಯಾಗಿರುವ ಸಂದರ್ಭವೆ ಕಂಡಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಮಾತಾಗಿದೆ. ಗಂಗಾಪುರ ಗ್ರಾಮದಲ್ಲಿರುವ ಕಲ್ಯಾಣಿಯು ರಾಜವಂಶರ ಅಳ್ವಿಕೆಯಿಂದ ಖ್ಯಾತಗೊಂಡಿದ್ದು ಸುತ್ತಲಿನ ಜನರಿಗೆ ನೀರಿನ ದಾಹ ತೀರಿಸಲು, ಜಲ ಸಂಗ್ರಹಣೆಗಾಗಿ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಾಲ ಬದಲಾದಂತೆ ತೆರೆದ ಬಾವಿಗಳ ನೀರಿಗಿಂತ ಕೊಳವೆ ಬಾವಿಗಳತ್ತ ಸರಕಾರಗಳು ಆಸಕ್ತಿ ತೋರಿದ ಕಾರಣ ಕಲ್ಯಾಣಿಗಳನ್ನು ಮರೆತರು.

ಕಲ್ಯಾಣಿಗಳನ್ನು ದನ ಕರುಗಳನ್ನು ತೊಳೆಯುವುದಕ್ಕೆ ಬಳಸಿಕೊಂಡರು, ಆದರೆ ಗಂಗಾಪುರ ಜನರು ಮಾತ್ರ ನಿರಂತರವಾಗಿ ಕಲ್ಯಾಣಿ ನೀರನ್ನೇ ಕುಡಿಯಲು ಬಳಸಿಕೊಂಡು ತಲಾ ತಲಾಂತರಗಳಿಂದ ಬೆಳೆದು ಬಂದ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಿದ್ದರು. ಒಂದು ಕಾಲದಲ್ಲಿ ಇಡೀ ಗಂಗಾಪುರ ಗ್ರಾಮದ ಜನರಿಗೆ ನೀರಿನ ದಾಹ ನೀಗಿಸುತ್ತಿದ್ದ ಕಲ್ಯಾಣಿಗಳಲ್ಲಿ ನೀರು ಜನರ ಕಣ್ಣುತುಂಬುತ್ತಿದೆ.

ಆಧುನಿಕ ಕಾಲದಲ್ಲಿ ಕಲ್ಯಾಣಿ ಪಕ್ಕದಲ್ಲಿಯೇ ಕೊರೆಸಿದ ಕೊಳವೆ ಬಾವಿಯಿಂದ ತನ್ನ ಒಡಲಲ್ಲಿ ಉಕ್ಕುತ್ತಿದ್ದ ನೀರಿನ ಬುತ್ತಿ ಬತ್ತಿ ತನ್ನ ಸೊಬಗನ್ನು ಕಳೆದುಕೊಂಡಿತ್ತು, ಗುಟುಕು ಜಲ ಮಾತ್ರ ಸದಾ ಇರುತ್ತಿತ್ತು. ಆದರೆ ಸುಮಾರು ವರ್ಷಗಳೇ ಕಳೆದರು ಕಲ್ಯಾಣಿಯಲ್ಲಿ ಮಾತ್ರ ನೀರು ಖಾಲಿಯಾಗದೇ ತನ್ನ ಸೊಬಗನ್ನು ಮತ್ತಷ್ಟು ಹೆಚ್ಚಿಸಿಕೊಂಡು ರೈತರಿಗೆ ವರದಾನವಾಗಿ ಪರಿಣಮಿಸಿದೆ. ಗ್ರಾಮಸ್ಥರ ದಾಹವನ್ನು ತೀರಿಸುವಂತ ಕಲ್ಯಾಣಿಯಲ್ಲಿ ಕಳೆದ8 ವರ್ಷಗಳ ಹಿಂದೆ ತಾಯಿ ಮಕ್ಕಳಿಬ್ಬರು ಹಾಗೂ ಒಬ್ಬ ವೃದ್ಧ ಬೆಂಗಳೂರಿನ ಇಬ್ಬರು ಯುವಕರು ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ನಂತರ ಈ ಕಲ್ಯಾಣಿಯಲ್ಲಿ ಜನರು ನೀರನ್ನು ಬಳಸುವುದು ಬಿಟ್ಟರು. ಎಂತಹ ಬರಗಾಲದಲ್ಲಿಯೂ ಇಲ್ಲಿ ನೀರಿನ ಸೆಲೆ ಬತ್ತುತಿರಲಿಲ್ಲ ಎಂಬುದು ಸ್ಥಳೀಯರ ಮಾತಾಗಿದೆ.

ಪ್ರವಾಸಿತಾಣವಾಗಿ ಮಾರ್ಪಾಡು :

ಬೇಸಿಗೆ ಕಾಲದಲ್ಲಿ ಜನತೆ ತಂಪು ಪಾನೀಯ ಸೇರಿದಂತೆ ವಿವಿಧ ರೀತಿಯ ತಿನಿಸುಗಳು ಹಾಗೂ ಪಾನೀಯಗಳಿಗೆ ಮಾರು ಹೋಗಿದ್ದಾರೆ. ಇದರ ಜೊತೆಗೆ ಯುವಕರು ಬಿಸಲಿನ ತಾಪ ಕಡಿಮೆ ಮಾಡಿಕೊಳ್ಳಲು ಈಜಾಡಲು ಕಲ್ಯಾಣಿಯ ಮೊರೆ ಹೋಗುತ್ತಿದ್ದಾರೆ. ಎಲ್ಲೆಡೆ ನೀರಿನ ಅಭಾವವಿರುವ ಕಾರಣ ಸುತ್ತಲಿನ ದೂರದ ಊರುಗಳಿಂದ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವುದರಿಂದ ಕಲ್ಯಾಣಿಯ ಸೊಬಗನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮವೆ ಬರುತ್ತದೆ. ಒಂದು ರೀತಿ ಪ್ರವಾಸಿ ತಾಣವಾಗಿ ಮಾರ್ಪಡಾಗಿದೆ.

ಹೊಸಕೋಟೆ ತಾಲೂಕಿನ ಅನೇಕ ಕೆರೆ-ಕುಂಟೆಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ. ಆದರೆ ಗಂಗಾಪುರ ಗ್ರಾಮದ ಕಲ್ಯಾಣಿಯಲ್ಲಿ ಮಾತ್ರ ಇಲ್ಲಿಯತನಕ ನೀರಿನ ಸೊಬಗು ಕಡಿಮೆಯಾಗಿಲ್ಲ ಮತ್ತು ನೀರು ಬತ್ತಿದ ಇತಿಹಾಸವಿಲ್ಲ. ಇದರಿಂದ ಸುತ್ತಲಿನ ರೈತರಿಗೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಿದೆ.

-ಮುನಿಯಪ್ಪ, ಗ್ರಾಮಸ್ಥ, ಗಂಗಾಪುರ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X