Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ತಡೆ...

ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ತಡೆ ಕಾಯ್ದೆ ಸ್ವಾಗತಾರ್ಹ ಆದರೆ...!

ಖಾಸಿಂ ಸಾಬ್ ಎ. ಬೆಂಗಳೂರುಖಾಸಿಂ ಸಾಬ್ ಎ. ಬೆಂಗಳೂರು18 Dec 2025 12:02 PM IST
share
ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ತಡೆ ಕಾಯ್ದೆ ಸ್ವಾಗತಾರ್ಹ ಆದರೆ...!

ಭಾರತ ವಿಶ್ವದ ಶ್ರೇಷ್ಠ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನ ಹೊಂದಿರುವ ರಾಷ್ಟ್ರ. ಸಂವಿಧಾನದ ಸಮಸಮಾಜದ ಕನಸುಗಳು ಇದರ ಪೂರ್ವ ಪೀಠಿಕೆ ಮತ್ತು ನಿರ್ದೇಶನಾ ತತ್ವಗಳಲ್ಲಿ ಅಡಗಿದೆ. ಇವು ಆಳುವ ಸರಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳಾಗಿ ರೂಪುಗೋಳ್ಳುವುದರ ಮೇಲೆ ಅಡಕಗೊಂಡಿರುತ್ತವೆ.

ಭಾರತದ ಧಾರ್ಮಿಕ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮ್ ಸಮುದಾಯಗಳು ಧಾರ್ಮಿಕತೆಯ ನೆಪದಲ್ಲಿ ದೇಶಾದ್ಯಂತ ಪ್ರಮುಖವಾಗಿ ಕರ್ನಾಟಕದಲ್ಲಿ ಸಾಮಾಜಿಕ ಶೋಷಣೆ, ಬಹಿಷ್ಕಾರ, ಹಿಂಸೆ, ಸಾವು, ದೌರ್ಜನ್ಯ, ಅಂಚಿಗೆ ತಳ್ಳುವಿಕೆ, ಹಕ್ಕು ಮತ್ತು ಅವಕಾಶಗಳ ವಂಚನೆಗೆ ನಿರಂತರವಾಗಿ ಒಳಪಟ್ಟಿದ್ದಾರೆ. ಅಲ್ಲದೆ ದ್ವೇಷ ಭಾಷಣಗಳ ರಾಜಕಾರಣದಿಂದ ನಾಗರಿಕ ಹಕ್ಕುಗಳಿಂದ ವಂಚಿಸಲ್ಪಟ್ಟಿದ್ದಾರೆ.

ಧರ್ಮ, ಭಾಷೆ, ಪ್ರದೇಶ, ಮದುವೆ, ಆಹಾರ, ಪ್ರಾರ್ಥನಾ ಪದ್ಧತಿ, ಸಂಸ್ಕೃತಿ ವಿಧಾನ, ಧಾರ್ಮಿಕ ಆಚರಣೆ, ಉಡುಗೆ ತೊಡುಗೆ, ರಾಜಕೀಯ ಭಿನ್ನ ಅಭಿಪ್ರಾಯಗಳು ಇಂತಹ ಹಲವಾರು ಕಾರಣಗಳನ್ನು ಬಳಸಿಯೇ ಧಾರ್ಮಿಕ ದೌರ್ಜನ್ಯಗಳ ಹುಟ್ಟಿಗೆ ಧಾರ್ಮಿಕ ದ್ವೇಷ ಭಾಷಣಗಳು ನಿರಂತರವಾಗಿ ಎಗ್ಗಿಲ್ಲದೆ ಸಕ್ರಿಯವಾಗಿದ್ದು ಫಲವನ್ನು ಉಣ್ಣುತ್ತಿವೆ.

ಧರ್ಮದ್ವೇಷವೇ ಮತ ಬ್ಯಾಂಕಾಗಿ ಪರಿವರ್ತನೆಯಾಗುತ್ತಿರುವ, ಏಕಧರ್ಮದ ಸಾಂಸ್ಕೃತಿಕ ರಾಜಕಾರಣವೇ ಪ್ರಭುತ್ವದ ಪಾಲಕ ಸ್ಥಾನದಲ್ಲಿರುವ ಈ ಸಂದಿಗ್ಧ ಕಾಲಘಟ್ಟದ ನಮ್ಮ ರಾಜ್ಯದಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ - ೨೦೨೫’ನ್ನು ಜಾರಿಗೊಳಿಸುವ ಕಾಂಗ್ರೆಸ್ ಸರಕಾರದ ಪ್ರಯತ್ನ ಮಹತ್ವ ಹಾಗೂ ಸ್ವಾಗತಾರ್ಹದ ಹೆಜ್ಜೆಯಾಗಿದೆ.

ದ್ವೇಷ ಭಾಷಣಗಳು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಈ ಮಸೂದೆ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆ. ಇಡೀ ದೇಶಕ್ಕೆ ಆದರ್ಶಪ್ರಾಯ. ಧಾರ್ಮಿಕ ನೆಪದ ಸಂವಿಧಾನ ವಿರೋಧಿ ಕೃತ್ಯಗಳ ತಡೆಗೆ ಈ ಮಸೂದೆ ಜಾರಿಗೊಳಿಸುವುದರ ಮೂಲಕ ಕರ್ನಾಟಕ ಸರಕಾರ ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದೇ ಡಿಸೆಂಬರ್ ೪ ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಬೆಳಗಾವಿ ಅಧಿವೇಶನದ ವಿಧಾನ ಮಂಡಲದಲ್ಲಿ ಮಂಡಿಸಲಾದ ಈ ಕಾಯ್ದೆಯ ಜಾರಿಗಿರುವ ಅಡೆ ತಡೆಗಳನ್ನು ಮೀರಿ ಇದರ ಸದುದ್ದೇಶ ಸಂಪೂರ್ಣ ಈಡೇರಬಹುದೇ? ಕಾದು ನೋಡಬೇಕಿದೆ.

ಸಾಮಾಜಿಕ ದ್ವೇಷ ಹರಡುವ ಮಾತುಗಳು, ದ್ವೇಷ ಭಾಷಣಗಳು, ಇತರ ಧರ್ಮ, ಸಮುದಾಯಗಳನ್ನು ಅವಮಾನಿಸುವ, ಉದ್ರೇಕಿಸುವ ಹೇಳಿಕೆಗಳನ್ನು ಯಾವುದೇ ಧರ್ಮ, ಸಮುದಾಯ, ಪಕ್ಷ, ಗುಂಪುಗಳ ಮುಖಂಡರು ನೀಡಿದರೂ ಅವರ ಮೇಲೆ ಈ ಕಾಯ್ದೆಯನ್ನು ನಿರ್ಭೀತಿಯಾಗಿ ಜಾರಿಗೊಳಿಸುವ ಬದ್ಧತೆ, ಧೈರ್ಯ ಸರಕಾರದ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಇರಬೇಕು. ವಿಶೇಷವಾಗಿ, ರಾಜ್ಯದಲ್ಲಿ ಈಗಾಗಲೇ ದ್ವೇಷ ಭಾಷಣಗಳ ಸರಣಿ ಪ್ರಕರಣಗಳು ದಾಖಲಾಗಿರುವ ವ್ಯಕ್ತಿಗಳ ವಿರುದ್ಧ ಈ ನೂತನ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎದೆಗಾರಿಕೆಯನ್ನು ಸರಕಾರ ತೋರಬೇಕು. ಆಗ ಮಾತ್ರ ಈ ಕಾಯ್ದೆಯ ನೈಜ ಜನಪರ ಕಾಳಜಿ ಸಾಬೀತಾಗಬಹುದು.

ಈ ಕಾನೂನು ದುರ್ಬಲರ ಮೇಲೆ ಮಾತ್ರ ಜಾರಿಯಾಗಿ, ಪ್ರಬಲ ಶಕ್ತಿಶಾಲಿಗಳು ತಪ್ಪಿಸಿಕೊಳ್ಳುವಂತಾಗಬಾರದು. ನಿಜಾರ್ಥದಲ್ಲಿ ಈ ಕಾಯ್ದೆ ಪರಿಣಾಮಕಾರಿಯಾಗಬೇಕಾದರೆ, ದ್ವೇಷ ಭಾಷಣ ಮಾಡುವವರ ರಾಜಕೀಯ ಹುದ್ದೆ ನೋಡದೆ ಇವರ ವಿರುದ್ಧ ಕಠಿಣಕ್ರಮ ಜರುಗಿಸಬೇಕು. ಜೊತೆಗೆ ಬಾಧಿತರ ಪುನರ್ವಸತಿ ಮತ್ತು ಪರಿಹಾರಕ್ಕೆ ಸ್ಪಷ್ಟ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ.

ಈ ಮಸೂದೆಯ ಕೆಲ ಅಂಶಗಳು ಸಂವಿಧಾನಬಾಹಿರವಾಗಿ ದುರ್ಬಳಕೆಗೆ ಅವಕಾಶವಾಗುವ ಸಾಧ್ಯತೆಗಳಿವೆ. ಧರ್ಮ, ಸಮುದಾಯಗಳ ಮೇಲೆ ನಡೆಯುವ ವಿಮರ್ಶೆ-ಟೀಕೆಗಳು ಮತ್ತು ದ್ವೇಷದ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಈ ಮಸೂದೆಗೆ ಸಾಧ್ಯವಾಗದಿರಬಹುದು. ಈ ವ್ಯತ್ಯಾಸಗಳನ್ನು ಬಲಾಢ್ಯರು ತಮ್ಮ ಪರವಾದ ಅನುಕೂಲಾಸ್ತ್ರವಾಗಿ ಬಳಸುವ ಸಾಧ್ಯತೆಗಳು ಸಹ ಇವೆ.

ಈ ಮಸೂದೆಯ ಜಾರಿಯನ್ನು ಬಿಜೆಪಿ ಮತ್ತು ಹಿಂದುತ್ವವಾದಿ ಗುಂಪುಗಳ ಜೊತೆ ಜೆಡಿಎಸ್ ಕೂಡ ಖಂಡಿಸಿದೆ. ವಿಶೇಷವೆಂದರೆ ಕ.ರ.ವೇ. ನಾರಾಯಣ ಗೌಡರು ಸಹ ಈ ಮಸೂದೆ ವಿರುದ್ಧದ ನಿಲುವು ತಾಳಿದ್ದಾರೆ. ಇವರ ಗುಮಾನಿಗಳಿಗೆ ಸರಕಾರ ಸ್ಪಷ್ಟನೆ ನೀಡಬೇಕಿದೆ. ಬಿಜೆಪಿ ಮತ್ತು ಸಂಘಪರಿವಾರಕ್ಕೆ ದ್ವೇಷಭಾಷಣಗಳೇ ಅಧಿಕಾರ ರಾಜಕೀಯದ ಕೇಂದ್ರಬಿಂದು. ಇಲ್ಲಿ ಉತ್ಪಾದನೆಯಾದ ಕೋಮುಗಲಭೆಗಳ ಮೂಲಕವೇ ಅಧಿಕಾರ ಹಿಡಿದಿದ್ದು ಕೂಡ. ಇದನ್ನು ಕಾನೂನಾತ್ಮಕವಾಗಿ ತಡೆಯುವುದೆಂದರೆ ಇವರ ಕೋಮುವಾದಿ ಬತ್ತಳಿಕೆಗಳು ಬರಿದಾಗಿ ದ್ವೇಷರಾಜಕಾರಣದ ಬುಡಕ್ಕೆ ಬೆಂಕಿ ಬಿದ್ದಂತೆಯೇ ಸರಿ.

ರಾಜ್ಯದಲ್ಲಿ ಈಗಾಗಲೇ ಇಂತಹ ದ್ವೇಷ ಭಾಷಣ ಮಾಂತ್ರಿಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಈ ಸಮಾಜ ಘಾತಕ ವ್ಯಕ್ತಿಗಳಿಗೆ ‘ಹಿಂದುತ್ವದ (ಹಿಂದೂ ಧರ್ಮ ಅಲ್ಲ) ಪಾಲಕರು’ ಎಂಬ ನೆಪದಲ್ಲಿ ಅಧಿಕಾರಸ್ಥರಿಂದ ಪಕ್ಷಾತೀತವಾಗಿ ಸಹಕಾರ, ರಕ್ಷಣೆ ಸಿಗುತ್ತಿದೆ. ಇದುವರೆಗಿನ ದ್ವೇಷ ಭಾಷಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರಲು ಈಗ ಜಾರಿಯಿರುವ ಕಾನೂನುಗಳ ಪೇಲವ ಪ್ರದರ್ಶನವೇ ಕಾರಣ. ಹೀಗಾಗಿ ಅದಕ್ಕೊಂದು ಪ್ರತ್ಯೇಕ ಕಾನೂನು ತರುವ ರಾಜ್ಯ ಸರಕಾರದ ಉದ್ದೇಶ ಸಮರ್ಥನೀಯ.

ಇದುವರೆಗಿನ ಲಾಗಳಲ್ಲಿದ್ದ ನ್ಯೂನತೆಗಳನ್ನು ಕಿತ್ತು ಇವುಗಳನ್ನು ಮತ್ತಷ್ಟು ಸದೃಢಗೊಳಿಸಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ (ಬರೀ ಮುಸ್ಲಿಮರಲ್ಲದೆ ಕರ್ನಾಟಕದ ನಿವಾಸಿ ಎಲ್ಲಾ ಧರ್ಮ ಸಮುದಾಯ) ಆಧಾರದ ಮೇಲೆ ದ್ವೇಷದ ಮಾತುಗಳನ್ನು ಆಡುವುದು ಅಥವಾ ದ್ವೇಷ ಕೃತ್ಯಕ್ಕೆ ಪ್ರಚೋದನೆ ನೀಡುವುದು, ಕೋಮುಗಲಭೆಗಳನ್ನು ಸೃಷ್ಟಿಸುವುದು ಗಂಭೀರ ಶಿಕ್ಷೆಯಡಿ ತರಲಾಗಿದೆ. ಅಂತಹ ವ್ಯಕ್ತಿಗೆ ಮೊದಲನೇ ಬಾರಿಯ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ. ಈ ಕೃತ್ಯ ಮರುಕಳಿಸಿದರೆ ಹತ್ತು ವರ್ಷಗಳವರೆಗೆ ಶಿಕ್ಷೆ ಇದೆ. ದ್ವೇಷ ಭಾಷಣ ಮೈಕಾಸುರರಿಗೆ ಇದು ನಡುಕದ ಕಾನೂನು. ಈ ದ್ವೇಷಕಾರರು ಯಾವುದೇ ಧರ್ಮದವರಾದರೂ ಸರಿ, ಎಲ್ಲರಿಗೂ ಅನ್ವಯ.

ಹೊಸ ಮಸೂದೆಯ ಪ್ರಕಾರ ದ್ವೇಷ ಭಾಷಣದ ಪ್ರಕರಣಗಳು ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯಲಿವೆ. ಎಸ್‌ಪಿ ಯವರಿಗೆ ತನಿಖೆಯ ಜವಾಬ್ದಾರಿ ಇರಲಿದೆ.

ಯಾವುದೇ ಸಮುದಾಯ ಅಥವಾ ಧರ್ಮವನ್ನು ಗುರಿಯಾಗಿಸಿದ ದ್ವೇಷಭಾಷಣ ಸಾರ್ವಜನಿಕ ಹೇಳಿಕೆ, ಬರೆಹ, ದೃಶ್ಯ-ಶ್ರವಣ ಹಾಗೂ ಇಲೆಕ್ಟ್ರಾನಿಕ್ಸ್ ಮಾಧ್ಯಮ ಮುಖಾಂತರ ಧರ್ಮ, ಜಾತಿ, ಜನಾಂಗ, ವರ್ಣ, ಭಾಷೆ, ಲಿಂಗ, ಜನ್ಮಸ್ಥಳ ಹಾಗೂ ವಸತಿಯ ಸ್ಥಳಗಳ ಕುರಿತು ವ್ಯಕ್ತಿಗಳ ನಡುವೆ ಅಥವಾ ಗುಂಪುಗಳ ನಡುವೆ ಹಾನಿ, ವಿರಸ, ಹಿಂಸೆಗಳನ್ನು ಪ್ರಚೋದಿಸುವ, ದ್ವೇಷವನ್ನು ಹುಟ್ಟಿ ಹಾಕುವ ಕೃತ್ಯಗಳಿಗೆ ಈ ಕಾಯ್ದೆ ತಡೆನೀಡಲಿದೆ ಎಂಬುದು ಇದರ ವಿಶೇಷ.

ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಸರ್ವ ಜನಾಂಗದ ಶಾಂತಿಯ ತೋಟವನ್ನು ಮುರಿಯುವ, ಕರುನಾಡನ್ನು ಧರ್ಮದ ನೆಪದಲ್ಲಿ ವಿಚ್ಛಿದ್ರಗೊಳಿಸುವ ಉದ್ದೇಶವುಳ್ಳರಿಗೆ ಈ ಕಾಯ್ದೆಯನ್ನು ಜೀರ್ಣಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪ್ರಯತ್ನ ಕರ್ನಾಟಕದಲ್ಲೇ ಹೀಗಿದ್ದರೆ, ಇನ್ನು ಇಂತಹ ಪ್ರಯೋಗಗಳು ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಬಿಹಾರದಂತಹ ರಾಜ್ಯಗಳಲ್ಲಿ ನಡೆದರೆ.!

ಧರ್ಮ, ಸಮುದಾಯ, ವರ್ಣ, ವರ್ಗ, ವೃತ್ತಿ, ಭಾಷೆಗಳ ನಡುವೆ ಬಿರುಕುಗಳ ಸೃಷ್ಟಿಕರ್ತರ ರಾಜಕೀಯ ಯೋಜನೆಗಳಿಗೆ ಈ ಮೂಲಕವಾದರೂ ಕಡಿವಾಣವಾಗಲಿ. ಜಾತ್ಯತೀತ, ಸರ್ವಜನ ಕಲ್ಯಾಣ, ಸೌಹಾರ್ದ ಈ ನಾಡಿನಲ್ಲಿ ಶಾಶ್ವತಗೊಳ್ಳಲಿ. ಈ ಕಾಯ್ದೆಯ ಸಮಗ್ರ ಜಾರಿಗೆ ಕಾಂಗ್ರೆಸ್ ಸರಕಾರ ಬದ್ಧತೆ ಪ್ರದರ್ಶಿಸಲಿ.

share
ಖಾಸಿಂ ಸಾಬ್ ಎ. ಬೆಂಗಳೂರು
ಖಾಸಿಂ ಸಾಬ್ ಎ. ಬೆಂಗಳೂರು
Next Story
X