Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. Kanakagiri | ಎಸೆಸೆಲ್ಸಿ ಪರೀಕ್ಷೆಯಲ್ಲಿ...

Kanakagiri | ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಮಾಲಿಯ ಮಗಳ ಸಾಧನೆ

ಹೊನ್ನೂರ ಹುಸೇನ ಬೇಲ್ದಾರ್ಹೊನ್ನೂರ ಹುಸೇನ ಬೇಲ್ದಾರ್26 April 2026 7:20 AM IST
share
Kanakagiri | ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಮಾಲಿಯ ಮಗಳ ಸಾಧನೆ

ಕನಕಗಿರಿ: ಟ್ಯೂಷನ್ ಹೋಗದೆ ಮನೆಯಲ್ಲಿ ಓದಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಮಾಲಿ ಕಾರ್ಮಿಕನ ಮಗಳು ಅಪ್ರತಿಮ ಸಾಧನೆ ಮಾಡಿ ತಂದೆಯ ಬೆವರಿಗೆ ತಕ್ಕ ಫಲಿತಾಂಶ ನೀಡಿದ್ದಾಳೆ.

ಗಂಗಾವತಿಯ ಎಪಿಎಂಸಿ ಗಂಜ್ ಹಾಗೂ ವಿದ್ಯಾನಗರದ ಅಕ್ಕಿ ಗಿರಣಿಯಲ್ಲಿ ಹಮಾಲಿಗಾಗಿ ದುಡಿಯುವ ವಲಿಸಾಬ ಎಂ. ಜೂಲಕೇರಿ ಪುತ್ರಿ ಮೌಲಾಬಿ ಮನೆಯಲ್ಲೇ ಓದಿ 625ಕ್ಕೆ 604 ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ.

ಕೂಲಿ ನಡುವೆ ಕನಸಿನ ಓದು :

ಕನಕಗಿರಿಯ ಜೂಲಕೇರಿ ಓಣಿಯ ಪುಟ್ಟ ಬಾಡಿಗೆ ಮನೆಯಲ್ಲಿರುವ ವಲಿಸಾಬ ಬೆಳಗ್ಗೆ ಸೈಕಲ್ ತುಳಿದುಕೊಂಡು ಗಂಗಾವತಿಗೆ ಹೋದರೆ ಬರುವುದು ರಾತ್ರಿ 8ಕ್ಕೆ. ದಿನದ ಕೂಲಿ 400-500 ರೂ. ತಾಯಿ ಗೃಹಿಣಿ. ಇಬ್ಬರು ತಮ್ಮಂದಿರು. ಅಪ್ಪ ಗಿರಣಿಯಲ್ಲಿ 50 ಕೆ.ಜಿ. ಅಕ್ಕಿ ಮೂಟೆ ಹೊತ್ತು ಹೊತ್ತು ಸುಸ್ತಾಗಿ ಬರುತ್ತಿದ್ದರು. ಆದರೂ ‘ನೀನು ಚೆನ್ನಾಗಿ ಓದು ಮಗಳೇ, ನಮ್ತರ ಆಗಬಾರದು’ ಅಂತಿದ್ರು. ಅದೇ ನನಗೆ ಸ್ಫೂರ್ತಿ ಎನ್ನುತ್ತಾಳೆ ಮಗಳು ಮೌಲಾಬಿ.

ಬೆಳಗ್ಗೆ 5 ಗಂಟೆಗೆ ಎದ್ದು ಮನೆ ಕೆಲಸ ಮುಗಿಸಿ, 2 ಗಂಟೆ ಓದಿ ಶಾಲೆಗೆ ಹೋಗುತ್ತಿದ್ದೆ. ರಾತ್ರಿ 10ರಿಂದ 12ರವರೆಗೆ ಮತ್ತೆ ಓದುತ್ತಿದ್ದೆ. ಟ್ಯೂಷನ್‌ಗೆ ದುಡ್ಡು ಇರಲಿಲ್ಲ. ಯೂಟ್ಯೂಬ್ ಮೂಲಕ ಸಂದೇಹ ನಿವಾರಿಸಿಕೊಂಡೆ. ಶಾಲೆಯ ಶಿಕ್ಷಕರು ಈ ವಿಷಯದಲ್ಲಿ ನೆರವಾದರು ಎನ್ನುತಾರೆೆ ಗಂಗಾವತಿಯ ಮೌಲಾನಾ ಆಜಾದ್ ಮಾದರಿ ಶಾಲೆಯ ವಿದ್ಯಾರ್ಥಿನಿ ಮೌಲಾಬಿ.

ಇಂಜಿನಿಯರ್ ಆಗುವ ಆಸೆ :

ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತೇನೆ. ಮುಂದೆ ಇಂಜಿನಿಯರ್ ಆಗಿ ಅಪ್ಪನಿಗೆ ಕೂಲಿ ಕೆಲಸ ಬಿಡಿಸಬೇಕು. ನಮ್ಮ ಓಣಿಯ ಮಕ್ಕಳಿಗೆಲ್ಲ ಉಚಿತ ಟ್ಯೂಷನ್ ಹೇಳಿಕೊಡಬೇಕು ಎಂದು ಮೌಲಾಬಿ ತಿಳಿಸಿದ್ದಾರೆ.

ನನ್ನ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ರಫೀಕ್, ಕ್ಲಾಸ್ ಟೀಚರ್ ಫಾತಿಮಾ ಮತ್ತು ಅಪ್ಪ-ಅಮ್ಮ ಕಾರಣ ಎಂದು ನೆನೆದಿದ್ದಾರೆ.

ತಂದೆಯ ಕಣ್ಣಲ್ಲಿ ನೀರು, ಊರಿಗೆ ಹೆಮ್ಮೆ :

ನಾನು 5ನೇ ಕ್ಲಾಸ್ ಫೇಲ್. ಆದ್ರೆ ಮಗಳು ಇಡೀ ಓಣಿಗೆ ಹೆಸರು ತಂದಳು. ಅವಳ ಸಾಧನೆ ನನಗೆ ಖುಷಿ ನೀಡಿದೆ ಎನ್ನುತ್ತಾರೆ ಮೌಲಾಬಿ ತಂದೆ ವಲಿಸಾಬ.

ವಿದ್ಯಾರ್ಥಿನಿ ಮೌಲಾಬಿ ತುಂಬಾ ಶ್ರದ್ಧೆಯಿಂದ ಓದುತ್ತಿದ್ದಳು. ಬಡತನದ ನಡುವೆಯೂ ಛಲ ಬಿಡಲಿಲ್ಲ. ಅವಳು ಸಾಧನೆ ಮೂಲಕ ಎಲ್ಲ ಹುಡುಗಿಯರಿಗೆ ಮಾದರಿಯಾಗಿದ್ದಾಳೆ.

-ರಫೀಕ್, ಶಾಲಾ ಮುಖ್ಯೋಪಾಧ್ಯಾಯ

Tags

SSLC examKanakagiri
share
ಹೊನ್ನೂರ ಹುಸೇನ ಬೇಲ್ದಾರ್
ಹೊನ್ನೂರ ಹುಸೇನ ಬೇಲ್ದಾರ್
Next Story
X