Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್...

ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್ ದಿಲ್ ಕುಶ್ ನಾಟಕ

ಮಂಜುನಾಥ ದಾಸನಪುರಮಂಜುನಾಥ ದಾಸನಪುರ24 Jun 2024 10:06 AM IST
share
ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್ ದಿಲ್ ಕುಶ್ ನಾಟಕ

ಯಾವುದು ಸ್ಥಿರವಲ್ಲ. ಗಳಿಗೆ ಗಳಿಗೆಯೂ ಬದಲಾಗುತ್ತಿರುತ್ತದೆ. ಸ್ಥಿರವೆಂದು ಭಾವಿಸಿದವನಿಗೆ ಅವನ ತಲೆಯೇ ಭಾರವಾಗುವುದರ ಜೊತೆಗೆ ಅಧಿಕಾರ, ಅಂತಸ್ತುಗಳು ಪೆಡಂಬೂತವಾಗುತ್ತವೆ ಎಂಬ ಬುದ್ದನ ಸಂದೇಶ ಮನಸಿನಲ್ಲಿ ಮೊಳಕೆ ಹೊಡೆದು ಗಾಳಿಯಂತೆ ಹಗುರವಾಗುವ ಕ್ಷಣವನ್ನು ಸಾಹಿತಿ, ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಅವರ ಕುಸ್ ಕುಸ್ ದಿಲ್ ಕುಶ್ ನಾಟಕವನ್ನು ನೋಡುತ್ತಾ ಅನುಭವಿಸಲು ಒಂದು ಅವಕಾಶ ಸಿಕ್ಕಿತು.

ಕೋಲಾರದ ಸಾಂಸ್ಕೃತಿಕ ಕೇಂದ್ರವಾಗಿರುವ ಆದಿಮದಲ್ಲಿ ಜೂನ್ 22ರಂದು 206 ನೆ ಹುಣ್ಣಿಮೆ ಹಬ್ಬದ ಪ್ರಯುಕ್ತ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕೋಲಾರದ ಕೆಇಬಿ ನೌಕರರ ಸಂಘದ ಮಕ್ಕಳು, ಚಂದಿರನ ಹಾಲಿನಂತಹ ಬೆಳಕಿನಲ್ಲಿ ಕುಸ್ ಕುಸ್ ದಿಲ್ ಕುಶ್ ನಾಟಕವನ್ನು ತಮ್ಮ ಅಮೋಘ ಅಭಿನಯದ ಮೂಲಕ ತಮ್ಮ ಎದುರಿಗಿದ್ದ ಪ್ರೇಕ್ಷಕರ ಮನಸಿನಲ್ಲಿ ಬದುಕಿನ ನೆಮ್ಮದಿಗೆ ಬೇಕಾದ ಸಂದೇಶವನ್ನು ನಾಟಿ ಬಿಟ್ಟರು.

ಬದಲಾವಣೆ ಬಯಸದ ಆಲೋಚನೆ, ನಡತೆ, ಅಧಿಕಾರ, ಸಂಪತ್ತು ಜಡ್ಡುಕಟ್ಟುತ್ತದೆ. ಉಪಯೋಗಕ್ಕೂ ಬಾರದಾಗುತ್ತದೆ. ಆಗ ಅದು ರೋಗವಾಗಿಯೂ ಪರಿಣಮಿಸುತ್ತದೆ. ಅದರಲ್ಲೂ ಇಂತಹ ಜಡತ್ವ ಸ್ಥಿತಿ ಅಧಿಕಾರ ಸ್ಥಾನದಲ್ಲಿರುವವರಿಗೆ ಹೊಕ್ಕಿಬಿಟ್ಟರೆ ಅದರ ರೋಗುವ ಇಡೀ ಸಮಾಜಕ್ಕೆ ಅಂಟುವ ಭೀತಿ ಇರುತ್ತದೆ ಎಂಬ ಸಂದೇಶವನ್ನು ನಾಟಕವು ಜನಸಾಮಾನ್ಯರ ತಿಳುವಳಿಕೆಯ ಮೂಲಕ ಕಟ್ಟಿಕೊಟ್ಟಿತು.

ಸಾಮಾನ್ಯ ಎಂಬ ಪದವೇ ಹಗುರವಾದದ್ದು. ಸ್ವಚಂದವಾಗಿರುವಂತಹದ್ದು ಹಾಗೂ ಮುಕ್ತವಾಗಿರುವಂತಹದ್ದು. ಪರಿಸರದ ಸಹಜವಾದ ಬದಲಾವಣೆಯ ಜೊತೆಗೆ ಹೊಂದಿಕೊಳ್ಳುತ್ತಾ ಸಾಗುವವರು. ಇವರ ಹೊರತಾಗಿಯೂ ಜನಸಾಮಾನ್ಯರಿಂದಲೇ ಎದ್ದು ಹೋದವರು, ಸೇವೆಯ ನೆಪದಲ್ಲಿ ಅಧಿಕಾರ, ಅಂತಸ್ತನ್ನು ಸೃಷ್ಟಿಸಿಕೊಂಡು ವ್ಯವಸ್ಥೆಯನ್ನು ಜಡ್ಡುಗೊಳಿಸಲು ಪ್ರಾರಂಭಿಸುತ್ತಾರೆ. ಒಂದು ಹಂತದಲ್ಲಿ ಶ್ರಮದ ರುಚಿಯನ್ನು ಮರೆತು ಅಧಿಕಾರದ ವ್ಯಾಮೋಹಕ್ಕೆ ಬೀಳುವ ಅಧಿಕಾರಸ್ತರು, ಮೊದಲು ತಮ್ಮ ಮೆದುಳನ್ನು ಜಡಗೊಳಿಸಿಕೊಳ್ಳುತ್ತಾರೆ. ನಂತರ ಇಡೀ ವ್ಯವಸ್ಥೆಯನ್ನು ಜಡಗೊಳಿಸುತ್ತಾ ಹೋಗುತ್ತಾರೆ. ಆದರೆ, ಜನಸಾಮಾನ್ಯರಿಗೆ ಜಡತ್ವದ ಪರಿಚಯವೇ ಇರುವುದಿಲ್ಲ. ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಸದಾ ಜಂಗಮರಾಗೆಯೇ ಇರುತ್ತದೆ. ಅದು ಶ್ರಮದ ಫಲವೇ ಅಂತಹದ್ದು. ಜನಸಾಮಾನ್ಯರ ಶ್ರಮದ ಫಲದಿಂದ ಕೂತು ತಿನ್ನುವ ಅಧಿಕಾರಸ್ಥ ಸ್ಥಾನದಲ್ಲಿವವರ ಜಡತ್ವವು, ಸಾರ್ವಾಧಿಕಾರಿಯಾಗಿಯೂ, ಹಿಂಸಾತ್ಮಕವಾಗಿಯೂ, ಧ್ವೇಷಕಾರಿಯೂಗಿಯೂ ಪರಿಣಮಿಸಬಹುದೆಂಬುದನ್ನು ಕುಸ್‌ಕುಸ್ ದಿಲ್ ಕುಶ್ ನಾಟಕವು ಸೂಚ್ಯವಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಅದು ಯಾವುದೇ ಪ್ರಭುತ್ವವು ಅದೆಷ್ಟೆ ದಮನಕಾರಿಯಾಗಿದ್ದರೂ, ಸರ್ವಾಧಿಕಾರಿ ಧೋರಣೆಯಿಂದ ಜನಸಾಮಾನ್ಯರ ಬದುಕನ್ನು ಹಿಡತದಲ್ಲಿ ಇಟ್ಟುಕೊಳ್ಳಲು ಮುಂದಾದರೂ ಜನಸಾಮಾನ್ಯರ ವಿವೇಕವು ಕೆಲವೊಮ್ಮೆ ಅಗೋಚರವಾಗಿ, ಮಗದೊಮ್ಮೆ ಝರಿಯಂತೆ ಸದಾ ಚಲನಶೀಲತೆಯನ್ನು ಸದಾ ಕಾಪಿಟ್ಟುಕೊಂಡಿರುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಆ ವಿವೇಕವೇ ಸಮಾಜವನ್ನು ಮುನ್ನಡೆಸುತ್ತಿರುತ್ತಾರೆ. ಪ್ರಭುತ್ವದ ಮೇಲ್ನೋಟಕ್ಕೆ ಬಲಿಷ್ಟವಾಗಿಯೂ, ಸುಂದರವಾಗಿ ಕಂಡರೂ ಆಂತರಿಕವಾಗಿ ಅದಕ್ಕೆ ಯಾವುದೇ ಸ್ವತಂತ್ರವಾದ ಅಸ್ಥಿತ್ವ ಇರುವುದಿಲ್ಲ. ಅದೇ ಹೊತ್ತಿನಲ್ಲಿ ಜನಸಾಮಾನ್ಯರು ನೋಡುವುದಕ್ಕೆ ಪ್ರಭುತ್ವದ ಅಡಿಯಲ್ಲಿದ್ದರೂ ಬದುಕಿನ ಬಗೆಗಿನ ಅವರ ವಿವೇಕವೂ ಪರಂಪರಾಗತವಾಗಿ ಅದಕ್ಕೊಂದು ಅಸ್ಮಿತೆಯನ್ನು ಇಟ್ಟುಕೊಂಡೆ ನಿರಂತರವಾಗಿ ಸಾಗುತ್ತಿರುತ್ತಾರೆ. ಹಾಗೂ ಒಂದು ಹಂತದಲ್ಲಿ ಜನಸಾಮಾನ್ಯರೇ ಪ್ರಭುತ್ವವನ್ನು ಧಿಕ್ಕುದೆಸೆಯನ್ನು ನೀಡತ್ತಾರೆ ಎಂಬುದನ್ನು ನಾಟಕದಲ್ಲಿ ರಾಜನ ತಲೆಯಲ್ಲಿದ್ದ ಕಿರೀಟವನ್ನು ಜನಸಾಮಾನ್ಯರೇ ತೆಗೆಯುವ ಮೂಲಕ ಹೊಸ ಚಿಂತನೆಯ ಚಲನೆಗೆ ಅನುವು ಮಾಡಿಕೊಡುತ್ತಾರೆ. ನಾಟಕದಲ್ಲಿ ಬಿಂಬಿತವಾಗಿರುವ ಈ ದೃಶ್ಯವು ಜನಸಾಮಾನ್ಯರಿಗೆ ಒಪ್ಪದ ಯಾವ ಅಧಿಕಾರ ಬಹುದಿನ ಬಾಳುವುದಿಲ್ಲ ಎಂಬ ಸಂದೇಶವನ್ನು ಗಟ್ಟಿಯಾಗಿ ಹೇಳುವಲ್ಲಿ ಯಶಸ್ವಿಯಾಗಿದೆ.

ನಾಟಕದ ಮತ್ತೊಂದು ವಿಶೇಷ ಏನೆಂದರೆ, ನಾಟಕದ ಸಂಭಾಷಣೆ ಸಹಜತೆಯಿಂದ ಕೂಡಿರುವುದು, ಇವತ್ತಿನ ಗಲ್ಲಿಗಳಲ್ಲಿ, ಓಣಿಗಳಲ್ಲಿ, ಆಡುವಾಗ, ನಲಿಯುವಾಗ ಬಳಸುವ ಗಾದೆಗಳು, ಕಿಚಾಯಿಸುವ ತಮಾಷೆಗಳ ಪದಗಳನ್ನೆ ಬಳಸಿಕೊಂಡಿರುವುದು. ಹೀಗಾಗಿ ಕೋಲಾರ ಪ್ರದೇಶದಲ್ಲಿ ಸಹಜವಾಗಿ ಬಳಸುವ ಕನ್ನಡ ಹಾಗೂ ತೆಲಗು ಭಾಷೆಯಲ್ಲೇ ನಾಟಕ ಪ್ರಸ್ತುತಗೊಂಡು ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಿಸುತ್ತಾ ವಿವೇಕವೊಂದನ್ನು ತಲುಪಿಸಿದ್ದು ಗಮನಾರ್ಹವಾದ ಅಂಶವಾಗಿದೆ.

ಇನ್ನು ನಾಟಕದ ಪಾತ್ರದಾರಿಗಳಾದ ಮಕ್ಕಳ ಅಭಿನಯಕ್ಕೆ ನೋಡುಗರು ಮನಸೋತರು. ಅಲ್ಲಿ ಯಾರು ಹೆಚ್ಚು ಅಲ್ಲ, ಕಡಿಮೆಯೂ ಅಲ್ಲದ ರೀತಿಯಲ್ಲಿ ತಮಗೆ ಕಟ್ಟ ಪಾತ್ರಗಳಲ್ಲಿ ತಲ್ಲೀನರಾಗಿದ್ದರು. ಪ್ರತಿ ಪಾತ್ರದಾರಿಗಳ ಪ್ರತಿ ಡೈಲಾಗ್‌ಗಳು ಮನ ಸೆಳೆಯುವಂತಿತ್ತು. ಒಟ್ಟಾರೆ ಈ ನಾಟಕದ ಯಶಸ್ಸಿನಲ್ಲಿ ನಾಟಕ ರಚನೆಕಾರ ಕೋಟಗಾನಹಳ್ಳಿ ರಾಮಯ್ಯ ಹಾಗೂ ನಿರ್ದೇಶಕ ಶೃಂಗಾರ್ ಅವರ ಶ್ರಮ, ಶ್ರದ್ಧೆಯು ಪಾತ್ರದಾರಿಗಳ ಪ್ರತಿ ಡೈಲಾಗ್‌ನಲ್ಲಿ ಗೋಚರವಾಗುತ್ತಿತ್ತು.

share
ಮಂಜುನಾಥ ದಾಸನಪುರ
ಮಂಜುನಾಥ ದಾಸನಪುರ
Next Story
X