Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹೊಲೆ-ಮಾದಿಗರ ಹಾಡು ಬನಿ ತಪ್ಪದಿರಲಿ...

ಹೊಲೆ-ಮಾದಿಗರ ಹಾಡು ಬನಿ ತಪ್ಪದಿರಲಿ...

ಎನ್. ರವಿಕುಮಾರ್ ಟೆಲೆಕ್ಸ್ಎನ್. ರವಿಕುಮಾರ್ ಟೆಲೆಕ್ಸ್19 Aug 2025 10:07 AM IST
share
ಹೊಲೆ-ಮಾದಿಗರ ಹಾಡು ಬನಿ ತಪ್ಪದಿರಲಿ...

ಮೂರು ದಶಕಗಳ ಕಾಲದ ಹೋರಾಟಕ್ಕೆ ಎಲ್ಲಾ ರಾಜಕೀಯ ಆಯಾಮಗಳನ್ನು ದಾಟಿ ಸುಪ್ರೀಂ ಕೋರ್ಟ್ ಮೂಲಕ ಒಂದು ನಿರ್ಣಾಯಕ ಫಲವೊಂದು ಸಿಕ್ಕಿದೆ. ಆದರೆ ಇದನ್ನು ಹಂಚಿ ಉಣ್ಣುವ ಉದಾತ್ತ ಗುಣಕ್ಕೆ ಈಗ ಬರ ಬಂದಂತೆ ಕಾಣುತ್ತಿದೆ.

ಈ ಒಳಮೀಸಲಾತಿ ಹೋರಾಟದ ವಿದ್ಯಮಾನಗಳನ್ನು ಗಮನಿಸಿದಾಗ ಸಹೋದರ ಜಾತಿಗಳ ನಡುವೆಯೇ ಹಗೆ ಬಿತ್ತುವ ಕೆಲಸ ನಡೆಯುತ್ತಿದೆ. ನ್ಯಾಯ, ಹಂಚುಣ್ಣುವ ವಿವೇಕವನ್ನು ತಿಳಿಹೇಳಲು ಬಂದವರನ್ನೇ, ದಲಿತ ಸಮಗ್ರತೆಯನ್ನು ಭೌತಿಕವಾಗಿ, ಬೌದ್ಧಿಕವಾಗಿ ದಶಕಗಳ ಕಾಲ ಹೋರಾಟದಿಂದ ಪೊರೆದ ಹಿರಿಯರನ್ನೇ ಲೇವಡಿ ಮಾಡುವ ಕೃತಘ್ನತೆ ಕಾಣುತ್ತಿರುವುದು ದುರಂತ.

ದಲಿತರ ನಡುವೆಯೇ ಕೂದಲು ಸೀಳುತ್ತಾ ಕುಳಿತವರು ಬಳಸುತ್ತಿರುವ ಪದ, ಭಾಷೆ ಅಸಹ್ಯ ಹುಟ್ಟಿಸುತ್ತಿದೆ. ತರ್ಕಕ್ಕೂ ಒಂದು ಘನತೆ ಇರುತ್ತದೆ. ಅದನ್ನು ಮೀರಿ ಕುತರ್ಕ ನಡೆಸುವವರನ್ನು ಕಂಡಾಗ ಚಾಡಿಮಾತಿಗೋ, ದುಶ್ಚಟಕ್ಕೋ ಬಿದ್ದು ಮನೆ ಮುರಿಯುವ ಅಣ್ಣತಮ್ಮಂದಿರಂತೆ ಕಾಣುತ್ತಾರೆ.

ಆಶ್ಚರ್ಯವೆಂದರೆ ಅಂಬೇಡ್ಕರ್, ಮತ್ತವರ ವಿಚಾರಧಾರೆಗಳನ್ನು ಮಂಡಿಸುತ್ತಾ ಹೊಸ ತಲೆಮಾರಿಗೆ ಸಮಗ್ರ ದಲಿತ ತತ್ವದ ಸಂವೇದನೆ ಕಟ್ಟಿಕೊಡುತ್ತಿದ್ದ ಪ್ರಜ್ಞಾವಂತ ಮಂದಿಯೇ ಈಗ ದಲಿತರ ಸಮಗ್ರತೆಯನ್ನು ಒಡೆದು ಚೂರಾಗಿಸುವ ಮಾತುಗಳನ್ನಾಡುತ್ತಿದ್ದಾರೆ. ಹಾಗಾದರೆ ಅವರು ಇದುವರೆಗೂ ಹೇಳಿದ, ಪ್ರತಿಪಾದಿಸಿದ ಅಂಬೇಡ್ಕರ್ ತತ್ವಕ್ಕೆ ಬೆಲೆ ಇದೆಯೇ?

ಅಂಬೇಡ್ಕರ್ ಅವರು ಎಲ್ಲರ ಅಂಬೇಡ್ಕರ್ ಆಗಿ ಉಳಿಯದಂತೆ ಪಾಲು ಮಾಡುವ ಅಥವಾ ಅಂಬೇಡ್ಕರ್ ‘ತಮ್ಮವರು’ ಮಾತ್ರವೇ ಆಗಿದ್ದಾರೆ, ‘ನಿಮ್ಮವರಲ್ಲ’ ಎಂಬ ಹೊಸ ವ್ಯಾಖ್ಯಾನ ಆಘಾತಕಾರಿ.

ದಲಿತತ್ವ, ದಲಿತ ಚಳವಳಿ, ದಲಿತ ಸಂವೇದನೆ ಎಲ್ಲದಕ್ಕೂ ಮೂಲ ತಾತ್ವಿಕತೆ ಎಂದರೆ ಅದುವೇ ಪರಸ್ಪರ ಕೈ ಕೈ ಹಿಡಿದು ನಡೆಯುವುದು. ತನಗಿಂತ ಕೆಳಗಿನವರನ್ನು ಕೈ ಹಿಡಿದು ಎತ್ತುವುದು, ನ್ಯಾಯ, ಸಮಾನತೆ ಎನ್ನುವುದು ಕೇವಲ ಬಲಾಢ್ಯ ಜಾತಿಗಳನ್ನು ಬಗ್ಗಿಸಲು ಮಾತ್ರವೇ ಇರುವುದಲ್ಲ. ಶೋಷಿತ ಸಮುದಾಯಗಳ ಅಂಚಿನ ವ್ಯಕ್ತಿಗೂ ಹರಿಸುವ ಅಮೃತಬಿಂದು.

ಇದನ್ನು ಹಂಚಿಕೊಳ್ಳುವಾಗ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿದ್ದ ಅಪಾರ ಕಾರುಣ್ಯ, ನ್ಯಾಯಪ್ರಜ್ಞೆಯೇ ನಮಗೆ ಆದರ್ಶ ಮಾದರಿಯಾಗಬೇಕು.

ದಲಿತರನ್ನು ಇಬ್ಭಾಗವಾಗಿಸದೆ ಉಳಿಗಾಲವಿಲ್ಲ ಎಂಬ ಬಲಾಢ್ಯ ಜಾತಿಗಳ ಷಡ್ಯಂತ್ರ ಎಲ್ಲಾ ಕಾಲದಲ್ಲೂ ನಡೆಯುತ್ತಲೇ ಬಂದಿದೆ. ಒಳಮೀಸಲಾತಿ ವಿಚಾರ ಅದಕ್ಕೊಂದು ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಅಪಾಯಕಾರಿ.

ಎಲ್ಲವೂ ಖಾಸಗೀಕರಣಗೊಂಡು ಮೀಸಲಾತಿ ಕೊನೆ ಉಸಿರು ತೆಗೆಯುತ್ತಿದೆ. ನಾವೀಗ ಸಾಮಾಜಿಕ ನ್ಯಾಯವನ್ನು ನುಂಗಿನೊಣೆವ ಖಾಸಗೀಕರಣವನ್ನು ವಿರೋಧಿಸುವ ಅಥವಾ ಖಾಸಗೀಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಡಲೇಬೇಕಾದ ಕಾಲಘಟ್ಟದಲ್ಲಿದ್ದೇವೆ.

ಮೇಲ್ಜಾತಿಗಳು ಸಲೀಸಾಗಿ ಮೀಸಲಾತಿಯ ಆವರಣಕ್ಕೆ ಬಂದು ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುವ ದೊಡ್ಡ ಹುನ್ನಾರವನ್ನೇ ನಡೆಸುತ್ತಿರುವಾಗ ಎಚ್ಚರವೇ ಇಲ್ಲದ ನಾವೇ ನಮ್ಮ ಮನೆಗೆ ಬೆಂಕಿ ಹಚ್ಚಿಕೊಂಡು ಬೆಳಕು ಕಾಣುವುದು ಮೂರ್ಖತನ ಎನಿಸುವುದಿಲ್ಲವೇ?

ಆನೆಯೇ ಹೋಗಿದೆ, ಅದರ ಬಾಲ ಹಿಡಿದು ನಾವು ಈಗ ಕಚ್ಚಾಡುತ್ತಿದ್ದೇವೆ. ದಲಿತರ ಮನೆ ಉರಿಯುವುದನ್ನೇ ಕಾದು ಕುಳಿತವರು ‘ಗಳ’ ಹಿರಿಯುವ ಪಾತಕ ಸಡಗರದಲ್ಲಿದ್ದಾರೆ.

ಇಂತಹ ವಿಷಮ ಸ್ಥಿತಿಯಲ್ಲಿ ಸರಕಾರ ಕೂಡ ಸಂದರ್ಭದ ಲಾಭ ಪಡೆಯಲು ಅವಕಾಶವಾಗದಂತೆ ಮೊದಲು ಒಳಮೀಸಲಾತಿಯನ್ನು ಅಳವಡಿಸಿಕೊಳ್ಳುವಂತೆ ಎಲ್ಲರೂ ನೋಡಿಕೊಳ್ಳಬೇಕು. ನಂತರದ ದಿನಗಳಲ್ಲಿ ಆಗಿರಬಹುದಾದ ವ್ಯತ್ಯಾಸಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುವ ಅವಕಾಶವಂತೂ ಇದ್ದೇ ಇರುತ್ತದೆ. ನಾವು ನಾವೇ ಕುಳಿತು ಮಾತಾಡುವುದು ಇದ್ದೇ ಇರುತ್ತದೆ.

ನಮ್ಮ ಪರವಾಗಿ ಹೋರಾಡಲು, ನ್ಯಾಯ ಪಂಚಾಯಿತಿ ಮಾಡಲು ಜಾತಿವಾದಿ ಶಾನುಭೋಗ, ಊರ ಪಟೇಲ, ಗೌಡರು ಬರಬೇಕೆ? ವಿಮೋಚನೆಗೆ ಹೋರಾಡುವವರಿಗೆ ಶತ್ರು ಯಾರು? ಗುರಿ ಏನು? ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು.

ಇಲ್ಲದೆ ಹೋದರೆ ಹೊಲೆ-ಮಾದಿಗರ ಹಾಡು ಬನಿ ತಪ್ಪಿ ಕರ್ಕಶವಾಗಲಿದೆ.

share
ಎನ್. ರವಿಕುಮಾರ್ ಟೆಲೆಕ್ಸ್
ಎನ್. ರವಿಕುಮಾರ್ ಟೆಲೆಕ್ಸ್
Next Story
X