Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಗತ್ ಸಿಂಗ್‌ರ ಶೌರ್ಯಕ್ಕಾಗಿ ಬಾಗಿ...

ಭಗತ್ ಸಿಂಗ್‌ರ ಶೌರ್ಯಕ್ಕಾಗಿ ಬಾಗಿ ನಮಸ್ಕರಿಸೋಣ ಆದರೆ ಅವರ ಕೃತ್ಯವನ್ನು ನಾವು ಅನುಕರಿಸದಿರೋಣ

ಇಂದು ಭಗತ್ ಸಿಂಗ್ ಜನ್ಮದಿನ

ವಾರ್ತಾಭಾರತಿವಾರ್ತಾಭಾರತಿ28 Sept 2024 12:09 PM IST
share
ಭಗತ್ ಸಿಂಗ್‌ರ ಶೌರ್ಯಕ್ಕಾಗಿ ಬಾಗಿ ನಮಸ್ಕರಿಸೋಣ ಆದರೆ ಅವರ ಕೃತ್ಯವನ್ನು ನಾವು ಅನುಕರಿಸದಿರೋಣ
ಭಗತ್‌ಸಿಂಗ್ ಮತ್ತು ಅವರ ಸಹಚರರಾದ ರಾಜಗುರು ಮತ್ತು ಸುಖ್‌ದೇವ್‌ರನ್ನು ಬ್ರಿಟಿಷರು ಗಲ್ಲಿಗೇರಿಸಿದ ಸಂದರ್ಭ ಮಹಾತ್ಮಾ ಗಾಂಧೀಜಿಯವರು ಬರೆದ ಲೇಖನ

ಧೀರ ಭಗತ್‌ಸಿಂಗ್ ಮತ್ತು ಅವರ ಇಬ್ಬರು ಸಹಚರರನ್ನು ಗಲ್ಲಿಗೇರಿಸಿದ್ದಾರೆ. ಅವರ ಜೀವವನ್ನುಳಿಸಲು ಅನೇಕ ಪ್ರಯತ್ನಗಳು ನಡೆದವು; ಮೇಲ್ಮನವಿ ಸಲ್ಲಿಸಲಿಕ್ಕೆ ಕೂಡಾ ನಿರಾಕರಿಸಿದರು. ಅವರು ಬದುಕಲು ಒಪ್ಪುವುದಿದ್ದರೆ ಅದು ಇತರರ ಸಲುವಾಗಿ; ತನ್ನ ಸಾವು ಯಾರನ್ನಾದರೂ ಅವಿವೇಚನೆಯ ಕೊಲೆಗಳಿಗೆ ಪ್ರಚೋದಿಸುತ್ತದೆ ಎನ್ನಿಸಿದರೆ ಅವರು ಬದುಕಲು ಒಪ್ಪಬಹುದಿತ್ತು. ಭಗತ್‌ಸಿಂಗ್ ಅಹಿಂಸೆಯ ಭಕ್ತರಾಗಿರಲಿಲ್ಲ; ಆದರೆ ಅವರು ಹಿಂಸಾಧರ್ಮವನ್ನು ಸಮ್ಮತಿಸಿದವರಲ್ಲ. ನಿಸ್ಸಹಾಯಕತೆಯ ಭಾವನೆಯಿಂದ, ಅವರು ಕೊಲೆಮಾಡಲು ಸಿದ್ಧರಾದರು. ಅವರ ಕೊನೆಯ ಪತ್ರದಲ್ಲಿ ಹೀಗಿತ್ತು: ‘ನಾನು ಯುದ್ಧದಲ್ಲಿ ತೊಡಗಿದಾಗ ನನ್ನನ್ನು ಬಂಧಿಸಲಾಯಿತು. ನನಗೆ ನೇಣುಗಂಬವಲ್ಲ; ತುಪಾಕಿಯ ಬಾಯಲ್ಲಿಟ್ಟು ನನ್ನನ್ನು ಸುಟ್ಟು ಹಾರಿಸಿ.’ ಈ ಧೀರರು ಸಾವಿನ ಭಯವನ್ನು ಗೆದ್ದಿದ್ದರು. ಅವರ ಶೌರ್ಯಕ್ಕಾಗಿ ನಾವು ಸಾವಿರ ಸಲ ಬಾಗಿ ನಮಸ್ಕಾರ ಮಾಡೋಣ.

ಆದರೆ ನಾವು ಅವರ ಕೃತ್ಯವನ್ನು ಅನುಕರಿಸಬಾರದು. ಅವರ ಕೃತಿಯಿಂದ ದೇಶಕ್ಕೆ ಲಾಭವಾಯಿತು ಎಂದು ನಂಬಲು ನಾನು ಸಿದ್ಧನಿಲ್ಲ. ಅದರಿಂದುಂಟಾದ ಹಾನಿಯನ್ನು ಮಾತ್ರ ನಾನು ಕಾಣಬಲ್ಲೆ. ಆ ದಾರಿಯನ್ನು ಪ್ರತಿಪಾದಿಸದೇ ಹೋಗಿದ್ದರೆ ಮತ್ತು ಶುದ್ಧ ಅಹಿಂಸಾತ್ಮಕ ಹೋರಾಟದಲ್ಲೇ ತೊಡಗಿದ್ದರೆ ಎಷ್ಟೋ ಹಿಂದೆಯೇ ನಾವು ಸ್ವರಾಜ್ಯವನ್ನು ದೊರಕಿಸಿಕೊಂಡಿರ ಬಹುದಿತ್ತು. ಈ ನನ್ನ ಊಹೆಯ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು. ಹೇಗಿದ್ದರೂ ಕೊಲೆಯ ಮೂಲಕ ನ್ಯಾಯ ದೊರಕಿಸಿಕೊಳ್ಳುವ ರೂಢಿಯನ್ನು ನಾವು ಸ್ಥಾಪಿಸಿಕೊಂಡದ್ದಾದರೆ, ಯಾವುದನ್ನು ನ್ಯಾಯವೆಂದು ನಾವು ತಿಳಿಯುತ್ತೇವೋ ಅದಕ್ಕಾಗಿ, ಒಬ್ಬರನ್ನೊಬ್ಬರು ಕೊಲೆ ಮಾಡಲು ತೊಡಗಿಕೊಳ್ಳುತ್ತೇವೆ; ಈ ಮಾತನ್ನು ಯಾರೂ ನಿರಾಕರಿಸಲಾರರು. ಕೋಟಿಗಟ್ಟಲೆ ನಿರ್ಗತಿಕರು ಮತ್ತು ದುರ್ಬಲಾಂಗರಿರುವ ದೇಶದಲ್ಲಿ ಅದೊಂದು ಭಯಾನಕ ಸನ್ನಿವೇಶವುಂಟಾದೀತು. ಈ ಬಡವರೆಲ್ಲರೂ ನಮ್ಮ ಭೀಕರ ಕೃತ್ಯಕ್ಕೆ ಬಲಿಯಾಗಲೇ ಬೇಕಾಗುತ್ತದೆ. ಇದರ ಪರಿಣಾಮವೇನೆಂಬುದನ್ನು ಸಮಸ್ತರೂ ಪರಿಗಣಿಸಬೇಕಾದ್ದು ಅಪೇಕ್ಷಣೀಯ ಮತ್ತು ನಾವು ಬಯಸುವ ಸ್ವರಾಜ್ಯವು ಅವರದ್ದು ಮತ್ತು ಅವರಿಗಾಗಿ ಬಯಸುವಂಥದ್ದು. ಹಿಂಸೆಯ ಧರ್ಮವನ್ನು ಕೈಗೊಳ್ಳುವ ಮೂಲಕ ನಾವು ಆ ನಮ್ಮ ಕ್ರಿಯೆಯ ಹಿಂಸಾಫಲವನ್ನು ಕೊಯ್ದುಕೊಳ್ಳುವಂತಾಗುತ್ತದೆ.

ಆದ್ದರಿಂದ ಈ ವೀರರ ಧೈರ್ಯಗುಣವನ್ನು ಪ್ರಶಂಸಿಸಿದರೂ ಯಾವತ್ತೂ ನಾವು ಅವರ ಕ್ರಿಯೆಗಳಿಗೆ ಸಮ್ಮತಿಗೊಟ್ಟುಕೊಳ್ಳಬಾರದು.

ಈ ಮೂವರನ್ನು ಗಲ್ಲಿಗೇರಿಸುವ ಮೂಲಕ ಸರಕಾರವು ತನ್ನ ಮೃಗಸ್ವಭಾವವನ್ನೇ ಪ್ರದರ್ಶಿಸಿದೆ. ಸಾರ್ವಜನಿಕ ಅಭಿಪ್ರಾಯವನ್ನು ಅವಗಣಿಸುವ ತನ್ನ ಧಾರ್ಷ್ಟ್ಯಕ್ಕೆ ಸರಕಾರವು ಈ ಮೂಲಕ ಇನ್ನೊಂದು ಹೊಸ ನಿದರ್ಶನವನ್ನು ಕಾಣಿಸಿಕೊಟ್ಟಿದೆ. ಸರಕಾರವು ಜನರಿಗೆ ಯಾವುದೇ ನಿಜವಾದ ಅಧಿಕಾರವನ್ನೂ ಬಿಟ್ಟುಕೊಡಲಿಕ್ಕೆ ಬಯಸುವುದಿಲ್ಲ ಎಂಬುದನ್ನು ಈ ನೇಣಿನ ಪ್ರಸಂಗದಿಂದ ತೀರ್ಮಾನಿಸಿಕೊಳ್ಳಬಹುದು. ಈ ವ್ಯಕ್ತಿಗಳನ್ನು ನೇಣಿಗೇರಿಸಲು ಸರಕಾರಕ್ಕೆ ಅಧಿಕಾರವಿರುವುದು ನಿಶ್ಚಿತ. ಕೆಲವು ಬಗೆಯ ಅಧಿಕಾರಗಳಿವೆ, ಅವನ್ನು ಹೊಂದಿರುವವರು ಹೆಸರಿಗೆ ಮಾತ್ರ ಅವನ್ನಿಟ್ಟುಕೊಂಡಿದ್ದರೆ ಅದು ಅವರ ಠೇವಣಿಯಂತಿರುತ್ತದೆ. ಎಲ್ಲಾ ಸಂದರ್ಭಗಳಲ್ಲೂ ತನ್ನ ಎಲ್ಲಾ ಅಧಿಕಾರಗಳನ್ನೂ ಚಲಾಯಿಸುತ್ತ ಹೋದರೆ ಕೊನೆಯಲ್ಲಿ ಅವೆಲ್ಲವೂ ತಾವೇ ನಾಶವಾಗಿ ಹೋಗುತ್ತವೆ. ಈ ಸಂದರ್ಭದಲ್ಲಿ ಸರಕಾರವು ತನ್ನ ಅಧಿಕಾರವನ್ನು ಚಲಾಯಿಸದೆಯೇ ಉಳಿದಿದ್ದರೆ ಅದಕ್ಕೆ ಘನತೆ ಸಿಗುತ್ತಿತ್ತು; ಶಾಂತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಅದು ತುಂಬ ಉಪಯುಕ್ತವಾಗುತ್ತಿತ್ತು.

ಆದರೆ ಈ ದಿನದ ತನಕವೂ ಸರಕಾರವು ಅಂಥ ವಿವೇಚನೆಯನ್ನು ರೂಢಿಸಿಕೊಂಡಿಲ್ಲ; ಇದು ಸ್ಪಷ್ಟವೇ ಆಗಿದೆ. ಸಾರ್ವಜನಿಕರು ಕೋಪದಿಂದ ಉದ್ರಿಕ್ತರಾಗುವುದಕ್ಕೆ ಸರಕಾರವು ಈ ಮೂಲಕ ಬಹು ಸ್ಪಷ್ಟವಾದ ಕಾರಣವನ್ನೊದಗಿಸಿಕೊಟ್ಟಿದೆ. ಆದರೆ, ಈ ಸಂದರ್ಭದಲ್ಲಿ ಜನತೆಯು ಸಿಟ್ಟಿಗೆದ್ದಿತೆಂದರೆ ಗೆಲುವು ಬರಲಿರುವ ಹೊತ್ತಿನಲ್ಲಿ ಅದು ಸೋತು ಹೋಗಬೇಕಾಗುತ್ತದೆ. ಸಾರ್ವಜನಿಕರು ತಮ್ಮ ಕೋಪವನ್ನು ಹೊರಹಾಕಿಕೊಳ್ಳಲಿ ಅಂತಲೇ ಕೆಲವು ಅಧಿಕಾರಿಗಳು ಆಸೆಪಟ್ಟುಕೊಳ್ಳುತ್ತಿರಬಹುದು. ಜನ ಏನೇ ಮಾಡಲಿ ನಮ್ಮದು ನೇರವಾದ ದಾರಿ. ಭಗತ್‌ಸಿಂಗ್‌ರ ಜೀವವುಳಿಸಲು, ಸಂಧಾನ ನಡೆಸುತ್ತಿದ್ದಾಗ, ಅವರನ್ನು ಗಲ್ಲಿಗೇರಿಸಲಾರರು ಎನ್ನುವುದು ನಮ್ಮ ಮೇಲಿನ ಭಾರವಾಗಿತ್ತು. ಭಗತ್‌ಸಿಂಗ್ ಮತ್ತು ಅವರ ಸಹಚರರಿಗೆ ಮರಣಶಿಕ್ಷೆಯ ವಿನಾಯಿತಿಯಷ್ಟನ್ನಾದರೂ ಸರಕಾರವು ಕೊಟ್ಟೀತೆಂದು ನಾವು ನಂಬಿಕೊಂಡಿದ್ದೆವು; ಸರಕಾರವು ಅಷ್ಟು ವಿವೇಚನೆಯನ್ನಾದರೂ ತೋರೀತು ಎಂದುಕೊಂಡಿದ್ದೆವು. ನಮ್ಮ ನಿರೀಕ್ಷೆಯು ಫಲಿಸಲಿಲ್ಲವೆಂಬ ಕಾರಣಕ್ಕೆ ನಾವು ಕೈಗೊಂಡಿರುವ ಪ್ರತಿಜ್ಞೆಯನ್ನು ಮುರಿಯಬಾರದು. ನಮ್ಮ ಮೇಲೆ ಎರಗಿದ ಈ ಪ್ರಹಾರವನ್ನು ಸಹಿಸಿಕೊಂಡು ನಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಳ್ಳಬೇಕು. ಇಂಥ ಕಠಿಣ ಪರೀಕ್ಷೆಯ ಸಂದರ್ಭದಲ್ಲಿ ಕೂಡಾ ನೀವು ನಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರೆ, ಗುರಿಯ ಸಾಧನೆಯಲ್ಲಿ ನಮ್ಮ ಶಕ್ತಿಯು ಹೆಚ್ಚುತ್ತದೆಯಲ್ಲದೆ ಕಡಿಮೆಯಾಗುವುದಿಲ್ಲ. ಹಾಗಲ್ಲದೆ ನಾವು ನಮ್ಮ ಪ್ರತಿಜ್ಞೆಯನ್ನು ಮುರಿದರೆ, ಸತ್ಯಪಥವನ್ನು ಉಲ್ಲಂಘಿಸಿದರೆ ನಮ್ಮ ಸತ್ವವು ಕುಂದುತ್ತದೆ, ಶಕ್ತಿಯು ಕುಂದುತ್ತದೆ. ಅಲ್ಲದೆ, ಗುರಿ ತಲುಪಲಿಕ್ಕೆ ಈಗ ನಮಗಿರುವ ಆತಂಕಗಳ ಜೊತೆಗೆ ಅದೂ ಸೇರಿಕೊಳ್ಳುತ್ತದೆ. ಆದ್ದರಿಂದ ಈ ಕ್ರೋಧವನ್ನು ನುಂಗಿಕೊಂಡು ಇದ್ದುದಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ನೆರವೇರಿಸಿಕೊಂಡು ಹೋಗಬೇಕಾದ್ದೇ ನಮ್ಮ ಧರ್ಮ.

ಗಾಂಧಿ ಬರಹಗಳ ಸಂಕಲನ

ಅನುವಾದ: ಕೆ.ವಿ. ಸುಬ್ಬಣ್ಣ

(ಮೂಲ: ಗುಜರಾತಿ) ನವಜೀವನ ಪತ್ರಿಕೆ 29-3-1931

share
ವಾರ್ತಾಭಾರತಿ
ವಾರ್ತಾಭಾರತಿ
Next Story
X