Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಹಣ...

ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಹಣ ಎಣಿಸುವವರಿಂದ ದುಡಿಮೆಯ ಮಾತು...

ಕೆ.ಎಸ್. ನಾಗರಾಜ್ಕೆ.ಎಸ್. ನಾಗರಾಜ್25 Jan 2025 10:48 AM IST
share
ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಹಣ ಎಣಿಸುವವರಿಂದ ದುಡಿಮೆಯ ಮಾತು...

ಇತ್ತೀಚೆಗೆ ಕೆಲವು ಉದ್ಯಮಿಗಳಿಗೆ ಬಿಟ್ಟಿ ಉಪದೇಶ ಮಾಡುವ ಚಟ ಆರಂಭವಾಗಿದೆ. ಒಬ್ಬರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂದರೆ ಮತ್ತೊಬ್ಬರು 90 ಗಂಟೆ ಕೆಲಸ ಮಾಡಿ ಎನ್ನುತ್ತಾರೆ. ಹೀಗೆ ಹೇಳುತ್ತಿರುವವರೆಲ್ಲರೂ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಉದ್ಯಮಿಗಳಾಗಿರುವವರಷ್ಟೇ. ಇದರ ಜೊತೆಗೆ ಇವರ ಇನ್ನೂ ಅಂಬೆಗಾಲಿಡಲು ಸಾಧ್ಯವಾಗದ ಮಕ್ಕಳು, ಮರಿ ಮೊಮ್ಮಕ್ಕಳಿಗೆ ನೂರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಮೀಸಲಿಟ್ಟವರು.

ಬೆವರು ಸುರಿಸಿ ದುಡಿಯುವ ಜನರಿಗೆ ಮಾತ್ರವೇ ಗೊತ್ತಿರುತ್ತದೆ ದುಡಿಮೆಯ ಬೆಲೆ. ರಸ್ತೆಗಳನ್ನು ನಿರ್ಮಾಣ ಮಾಡುವ, ಕಟ್ಟಡಗಳನ್ನು ಕಟ್ಟುವ, ಮೂಟೆ ಹೊತ್ತು ಕೂಲಿ ಮಾಡುವ, ಕಾರ್ಖಾನೆಗಳಲ್ಲಿ ದುಡಿಯುವ, ಹತ್ತಾರು ಮನೆಗಳಲ್ಲಿ ಮನೆ ಕೆಲಸ ಮಾಡುವ ಮಹಿಳೆಯರ, ಲಾರಿ ಚಾಲಕರ, ಆಟೊ ಚಾಲಕರ, ಬಾಡಿಗೆ ಕಾರು ಓಡಿಸುವವರ ದುಡಿಮೆಯ ಅವಧಿ ಎಷ್ಟು ಎನ್ನುವುದು ಬಹುಶಃ ಇವರೆಲ್ಲ ತಿಳಿದೇ ಇರುವುದಿಲ್ಲ.

ಬೆವರು ಸುರಿಸಿ ಬಯಲಿನಲ್ಲಿ ದುಡಿಯುವ ಜನರಿಗೆ ವಾರಕ್ಕೆ 70 ಗಂಟೆ ಇಲ್ಲವೇ 90 ಗಂಟೆ ಇವುಗಳೆಲ್ಲವೂ ಲೆಕ್ಕವೇ ಅಲ್ಲ. ದಿನದ 24 ಗಂಟೆಯಲ್ಲಿ ಇವರಿಗೆ ವಿಶ್ರಾಂತಿ ಎನ್ನುವುದು ಕೆಲವೇ ಕೆಲವು ಗಂಟೆಗಳಲ್ಲಿ ಮಾತ್ರ ದೊರೆಯುತ್ತದೆ. ಉಳಿದಂತೆ ಇವರು ಬದುಕು ಕಟ್ಟಿಕೊಳ್ಳಲು ದುಡಿಯಲೇ ಬೇಕು. ಕಾಯಿಲೆ ಬಂದರೂ ವಿಶ್ರಾಂತಿ ಪಡೆಯುವ ಹಾಗಿಲ್ಲ. ಕೈಯಲ್ಲಿ ಆಗದಿದ್ದರೂ ಮನೆಯಲ್ಲಿ ಕುಳಿತು ಬದುಕುವ ಹಾಗಿರುವುದಿಲ್ಲ. ದುಡಿಮೆ ಎನ್ನುವುದು ಇವರಿಗೆ ಅನಿವಾರ್ಯ ಮತ್ತು ಅತ್ಯಂತ ಅವಶ್ಯ ಸಂಗತಿ ಆಗಿರುತ್ತದೆ.

ಎಲ್ಲರೂ 70 ಗಂಟೆ ಇಲ್ಲವೇ 90 ಗಂಟೆ ದುಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ‘ದೊಡ್ಡವರ’ ಮಾತು ಪೂರ್ಣ ಸತ್ಯವಲ್ಲ. ಕಾರ್ಮಿಕರು, ನೌಕರರು ಹೆಚ್ಚು ಹೆಚ್ಚು ಗಂಟೆಯ ಕಾಲ ದುಡಿದರೆ ಇದರಿಂದ ಉದ್ಯಮಿಗಳ ಮತ್ತು ಮಾಲಕರ ಖಜಾನೆ ಹೆಚ್ಚು ತುಂಬುತ್ತದೆ. ಹೆಚ್ಚು ಹೆಚ್ಚು ಲಾಭ ಬಂದಿತೆಂದು ಕಾರ್ಮಿಕರಿಗೆ ಅತಿಹೆಚ್ಚು ಸಂಬಳವನ್ನು ಯಾರೂ ಕೊಡುವುದಿಲ್ಲ.

ಪದೇ ಪದೇ ದುಡಿಮೆಯ ಉಪದೇಶವನ್ನು ಮಾಡುವ, ಪ್ರಚಾರ ಪಡೆಯುವವರು ತಮ್ಮ ತಮ್ಮ ಕಂಪೆನಿ ಮತ್ತು ಕಾರ್ಖಾನೆಗಳಲ್ಲಿ ಬೆವರು ಸುರಿಸಿ ದುಡಿವ ಕಾರ್ಮಿಕರಿಗೆ ಎಷ್ಟರಮಟ್ಟಿಗೆ ಸೌಕರ್ಯ, ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದಾರೆ ಹಾಗೂ ಅವರ ದುಡಿಮೆಗೆ ತಕ್ಕ ಹಾಗೆ ಸಂಬಳವನ್ನು ನೀಡುತ್ತಿದ್ದಾರೆಯೇ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ದುಡಿಯುವ ಜನ ದುಡಿಯುತ್ತಲೇ ಇದ್ದಾರೆ. ದುಡಿದೇ ಬದುಕುತ್ತಿದ್ದಾರೆ. ಆದರೆ ಅವರ ಸತತ ದುಡಿಮೆಯ ನಡುವೆಯೂ ಆನಂದದ ಬದುಕನ್ನು ಸಾಗಿಸಲು ಸಾಧ್ಯವಾಗಿಲ್ಲ. ಆದರೆ ದೇಶದ ಒಂದಷ್ಟು ಮಂದಿ ದುಡಿಯದೆಯೇ ಬದುಕುತ್ತಿದ್ದಾರೆ. ಬದುಕುವುದರ ಜೊತೆಗೆ ಸಂಭ್ರಮದಿಂದಲೂ ಇದ್ದಾರೆ. ಯಾರದೋ ಬೆವರಿನ ಫಲವನ್ನು ಅವರು ಅನುಭವಿಸುತ್ತಿದ್ದಾರೆ. ಇಂತಹವರ ಮನೆಯ ಶ್ವಾನಕ್ಕೂ ಪ್ರತ್ಯೇಕವಾದ ಕೊಠಡಿಯಿದೆ. ಓಡಾಡಲು ದುಬಾರಿ ವಾಹನ, ಆರೈಕೆ ಮಾಡಲು ಸಹಾಯಕರಿದ್ದಾರೆ. ಆದರೆ ಬಹಳಷ್ಟು ಮಾಲಕರು ಇಂತಹ ಸೌಜನ್ಯವನ್ನು ತಮ್ಮ ಕಾರ್ಮಿಕರಿಗೆ ತೋರಿಸಿ ಅವರಿಗೆ ಕನಿಷ್ಠ ಸೌಕರ್ಯ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ದೊಡ್ಡತನವನ್ನೂ ತೋರಿದ್ದಾರೆಯೇ?

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಯುವ ಜನಾಂಗ ಯಾವ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ವರದಿಗಳು ಹೇಳುತ್ತಿವೆ. ಇದನ್ನು ಗಮನಿಸಿದಾಗ ಆತಂಕವಾಗುತ್ತದೆ. ಇವರಲ್ಲಿ ಹೆಚ್ಚಿನವರು ವಾರದಲ್ಲಿ 70 ಗಂಟೆಯಲ್ಲ, ಅದಕ್ಕಿಂತಲೂ ಹೆಚ್ಚು ಕಾಲ ದುಡಿಯುತ್ತಿದ್ದಾರೆ. ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡುವುದರಿಂದ ಇವರ ಕಣ್ಣಿನ ಮೇಲೆ ಪರಿಣಾಮ ಬೀರಿದೆ. ಮಾನಸಿಕ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಈ ವರ್ಗದ ಯುವಜನರು ಆರೋಗ್ಯದ ವಿಚಾರದಲ್ಲಿ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಿದಾಗ ಯಾವ ರೀತಿಯಲ್ಲಿ ಇವರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಪೊರೇಟ್ ಉದ್ಯಮಿಗಳು ಎಂದಾದರೂ ಕಲ್ಪಿಸಿಕೊಂಡಿದ್ದಾರೆಯೇ? ಯಾವುದೇ ರೀತಿಯ ಉದ್ಯೋಗದ ಭದ್ರತೆಯೂ ಇವರಿಗೆ ಇರುವುದಿಲ್ಲ. ಯಾವ ಮುನ್ಸೂಚನೆಯನ್ನೂ ನೀಡದೆ ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಇದರಿಂದಾಗಿ ಇವರ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮಗಳೇನು ಎನ್ನುವ ಕಲ್ಪನೆಯಾದರೂ ಇವರಿಗಿದೆಯೇ?

‘ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ತಮ್ಮ ತಿಜೋರಿ ತುಂಬಿಸಿಕೊಳ್ಳುವವರಿಗೆ ದುಡಿಯುವವರ ಕಷ್ಟ ಅರಿವಿಗೆ ಬರುವ ಸಾಧ್ಯತೆ ಇರುತ್ತದೆಯೇ?

share
ಕೆ.ಎಸ್. ನಾಗರಾಜ್
ಕೆ.ಎಸ್. ನಾಗರಾಜ್
Next Story
X