Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜೋಪಡಿ ಮನೆ, ಮಳೆ ಬಂದರೆ ನೀರು,...

ಜೋಪಡಿ ಮನೆ, ಮಳೆ ಬಂದರೆ ನೀರು, ವಿಷಜಂತುಗಳ ಕಾಟ!

ಗುಲ್ವಾಡಿಯಲ್ಲಿ ದಲಿತ ಕುಟುಂಬಗಳ ಯಾತನೆ ಬದುಕು

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ22 Jun 2024 12:47 PM IST
share
  • ಜೋಪಡಿ ಮನೆ, ಮಳೆ ಬಂದರೆ ನೀರು, ವಿಷಜಂತುಗಳ ಕಾಟ!
  • ಜೋಪಡಿ ಮನೆ, ಮಳೆ ಬಂದರೆ ನೀರು, ವಿಷಜಂತುಗಳ ಕಾಟ!

ಕುಂದಾಪುರ: ಜೋಪಡಿ ಮನೆ, ಟಾರ್ಪಲು ಹೊದಿಕೆ, ಮಳೆ ಬಂದರೆ ಮನೆಯೊಳಗೆ ನುಗ್ಗುವ ನೀರು, ವಿಷಜಂತುಗಳ ಕಾಟ...ಹೀಗೆ ಗುಲ್ವಾಡಿ ನದಿಯ ಸಮೀಪವಿರುವ ಪರಿಶಿಷ್ಟ ಜಾತಿ ಸಮುದಾಯದ ಎರಡು ಕುಟುಂಬಂಗಳು ಯಾತನೆಯ ಬದುಕು ಸಾಗಿಸುತ್ತಿವೆ.

ಗುಲ್ವಾಡಿ ಕೆರೆಮನೆ ಎಂಬಲ್ಲಿನ ನಿವಾಸಿಗಳಾಗಿರುವ ಗೌರಿ ಹಾಗೂ ಗಿರಿಜಾ ಎಂಬವರ ಮನೆ ಪರಿಸ್ಥಿತಿ ಅಯೋಮಯವಾಗಿದೆ. ಈ ಕುಟುಂಬ ಕಳೆದ 5 ತಲೆಮಾರಿನಿಂದ ಇಲ್ಲಿ ವಾಸವಿದೆ. ಆದರೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಗೌರಿಯವರ ಮುರುಕಲು ಟಾರ್ಪಲು ಹಾಸಿದ ಮನೆಯಲ್ಲಿ ಒಟ್ಟು ಎಂಟು ಮಂದಿ ವಾಸವಿದ್ದು, ಅಲ್ಲಿಯೇ ಎರಡು ಹೆಜ್ಜೆ ದೂರದಲ್ಲಿರುವ ಗಿರಿಜಾರ ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಗೌರಿಯವರ ಜೋಪಡಿಗೆ ಮಣ್ಣಿನ ಹಾಸು ಮೇಲೆ ತೆಳು ಪದರದ ಸಿಮೆಂಟ್ ತೇಪೆ ಹಾಕಲಾಗಿದೆ.

ಮೇಲ್ಭಾಗದ ಹೊದಿಕೆಗೆ ತೆಂಗಿನ ಗರಿಯ ಮಡಿಲುಗಳನ್ನು ಮೇಲ್ಮಾಡಾಗಿ ಮಾಡಲಾಗಿದ್ದು ಮಳೆಗಾಲದಲ್ಲಿ ಮಾತ್ರ ನೀರು ಸೋರದಂತೆ ಪ್ರತಿ ವರ್ಷ ಟಾರ್ಪಲ್ ಹೊದಿಕೆ ಅಳವಡಿಸಲಾಗುತ್ತದೆ. ಇನ್ನು ಅಲ್ಲೆ ಮೇಲ್ಬದಿಯಲ್ಲಿ ಗಿರಿಜಾ ಮನೆಯಿದ್ದು ಮನೆ ಹಿಂಭಾಗ ಕುಸಿದಿದೆ. ಮಳೆ ಹೊಡೆತಕ್ಕೆ ಮಣ್ಣಿನ ಗೋಡೆಯೂ ಕುಸಿಯುವ ಭೀತಿಯಲ್ಲಿದೆ. ಎರಡು ಮನೆಗೆ ವಿದ್ಯುತ್ ಸಂಪರ್ಕ, ರೇಶನ್ ಕಾರ್ಡ್ ಸಿಕ್ಕಿದ್ದು ಹಕ್ಕು ಪತ್ರ ಈವರೆಗೆ ಮಂಜೂರಾಗಿಲ್ಲ ಎಂದು ದೂರಲಾಗಿದೆ.

ಗೌರಿಯವರಿಗೆ ಗ್ರಾಪಂ ಮಂಜೂರು ಮಾಡಿದ ವಸತಿ ಯೋಜನೆಯ ಮನೆ ಆರ್ಥಿಕ ಕಾರಣದಿಂದ ಹಲವು ವರ್ಷದಿಂದ ಅರ್ಧಕ್ಕೆ ನಿಂತಿದೆ. ಗಿರಿಜಾ ಗ್ರಾಪಂಗೆ ಮನೆ ಕೋರಿ ನೀಡಿದ ಅರ್ಜಿಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ. ಈ ನಡುವೆ ಕೆರೆ ಭಾಗದಲ್ಲಿ ಮಣ್ಣು ತುಂಬಿಸಿದ್ದು, ಕೃತಕ ಪೈಪ್ ಅಳವಡಿಕೆ ಮಾಡಿದ್ದರಿಂದ ನೀರು ಹರಿಯಲು ಸಮಸ್ಯೆಯಾಗಿ ಕೆರೆಯಲ್ಲಿ ನೀರು ಹೆಚ್ಚಿ ಮನೆಗೆ ನುಗ್ಗುತ್ತಿದೆ ಎಂದು ಆರೋಪಿಸಲಾಗಿದೆ.

‘ಮನೆಯಲ್ಲಿ ಮಕ್ಕಳು ಇರಲು ಹೆದರಿ ಅವರವರ ಅಜ್ಜಿ ಮನೆಗೆ ಕಳಿದ್ದೇವೆ. ಸ್ನಾನಗೃಹ ಹಾಗೂ ಸಮೀಪದ ಬಾಳೆ ಗಿಡಗಳು ನೀರು ಪಾಲಾಗಿದೆ. ಕೆರೆಯ ಸುತ್ತ ರಿವಿಟ್ಮೆಂಟ್ ನಿರ್ಮಿಸಿದರೆ ನೀರು ನುಗ್ಗುವುದಿಲ್ಲ. ಕೆರೆ ಸಂಪೂರ್ಣ ಮಲೀನವಾಗಿದ್ದು ಪುನಶ್ಚೇತನ ಮಾಡಬೇಕು. ಹಕ್ಕು ಪತ್ರ ಹಾಗೂ ತುರ್ತಾಗಿ ಮನೆಯ ದುರಸ್ಥಿಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎನ್ನುತ್ತಾರೆ ಗೌರಿಯವರ ಮಗ ಸುಧೀರ್.

ಸಮಸ್ಯೆ ಬಗೆಹರಿಸಲು ದಸಂಸ ಆಗ್ರಹ

ಗೌರಿ ಹಾಗೂ ಗಿರಿಜಾ ಕುಟುಂಬಗಳ ಸ್ನಾನ ಗೃಹ ಕೃತಕ ನೆರೆಯಿಂದ ಮುಳುಗಡೆಯಾಗಿದ್ದು ಬಳಸಲು ಯೋಗ್ಯವಿಲ್ಲದಂತಾಗಿ ಹೋಗಿದೆ. ಇಲ್ಲಿ ಕೊಳಚೆ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಆ ಎರಡು ದಲಿತ ಕುಟುಂಬಗಳು ಹಿಂಸೆ ಪಡುವಂತಾಗಿದೆ. ಈ ಕುಟುಂಬಕ್ಕೆ ಮರೀಚಿಕೆಯಾದ ಮೂಲಭೂತ ಸೌಕರ್ಯವನ್ನ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಲು ದಲಿತ ಮುಖಂಡ ಚಂದ್ರಮ ತಲ್ಲೂರು ಕುಂದಾಪುರ ತಹಶೀಲ್ದಾರ್ ಅವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

ನಮ್ಮ ಪರಿಸ್ಥಿತಿ ಯಾರಿಗೆ ಹೇಳೋದು ಏನು ಮಾಡೋದು? ದೊಡ್ಡ ಮಳೆ ಬಂದರೆ ಪಾತ್ರೆಗಳು ನೀರು ಪಾಲಾಗುತ್ತದೆ. ಭಯದ ನಡುವೆಯೇ ವಾಸ ಮಾಡುತ್ತಿದ್ದೇವೆ.

-ಗೌರಿ, ನೊಂದವರು

ಚುನಾವಣೆ ಬಂದಾಗ ಎಲ್ಲಾ ಸಮಸ್ಯೆ ಬಗೆ ಹರಿಸುತ್ತೇವೆ ಎನ್ನುತ್ತಾರೆ. ಆ ಬಳಿಕ ಇತ್ತ ಗಮನಹರಿಸುವುದಿಲ್ಲ. ಮಳೆಗಾಲದಲ್ಲಿ ಸೊಳ್ಳೆ, ಹಾವುಗಳ ಕಾಟವಿದೆ. ಅದೆಷ್ಟೋ ದಿನ ವಿಷಜಂತುಗಳ ಭೀತಿಯಲ್ಲಿ ರಾತ್ರಿ ಕಳೆದಿದ್ದೇವೆ. ಈ ಬಾರಿ ಕೆರೆ ಭಾಗಕ್ಕೆ ಮಣ್ಣು ತುಂಬಿಸಿ, ನೈಸರ್ಗಿಕ ತೋಡು ಮುಚ್ಚಿದ್ದರಿಂದ ಗುಲ್ವಾಡಿ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು ಕೆರೆ ಸೇರಿ ನೀರು ಮನೆಗೆ ನುಗ್ಗುತ್ತಿದೆ. ಅಲ್ಲದೆ ಕುಡಿಯುವ ತೆರೆದ ಬಾವಿಗೆ ಕಲುಷಿತ ನೀರು ಸೇರಿ ಬಾವಿ ನೀರು ಮಲಿನವಾಗಿದೆ.

-ಸುಧೀರ್, ಗೌರಿಯ ಪುತ್ರ

share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X