Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಂಜನಗೂಡು ರಸಬಾಳೆಗೆ ಪುನಃಶ್ಚೇತನ

ನಂಜನಗೂಡು ರಸಬಾಳೆಗೆ ಪುನಃಶ್ಚೇತನ

ನಶಿಸಿ ಹೋಗುತ್ತಿದ್ದ ಐತಿಹಾಸಿಕ ಬೆಳೆಗೆ ಉತ್ತೇಜನ

ನೇರಳೆ ಸತೀಶ್ ಕುಮಾರ್ನೇರಳೆ ಸತೀಶ್ ಕುಮಾರ್29 July 2024 10:30 AM IST
share
ನಂಜನಗೂಡು ರಸಬಾಳೆಗೆ ಪುನಃಶ್ಚೇತನ

ಮೈಸೂರು: ನಂಜನಗೂಡು ರಸಬಾಳೆ ಇತಿಹಾಸ ಪ್ರಸಿದ್ಧಬೆಳೆ. ಇತ್ತೀಚೆಗೆ ನಶಿಸಿಹೋಗುತ್ತಿದ್ದ ಬೆಳೆಗೆ ಪುನಃಶ್ಚೇತನ ನೀಡಲು ಸರಕಾರ ಮುಂದಾಗಿದ್ದು, ನಂಜನಗೂಡಿನ ದೇವರಸನಹಳ್ಳಿ ಭಾಗ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ರಸ ಬಾಳೆ ಮತ್ತೆ ನಳ ನಳಿಸುತ್ತಿದೆ.

ರಸಬಾಳೆ ದೇಶದ ಅನೇಕ ಕಡೆಗಳಲ್ಲಿ ಬೆಳೆಯುವುದುಂಟು. ಆದರೆ ನಂಜನಗೂಡು ರಸಬಾಳೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾದಿಂದ ಅನತಿ ದೂರದಲ್ಲಿರುವ ದೇವರನಹಳ್ಳಿ ಗ್ರಾಮದ ಪ್ರದೇಶದಲ್ಲಿ ಇಲ್ಲಿನ ಬಹುತೇಕ ರೈತರು ಸಾವಯವ ಗೊಬ್ಬರ ಹಾಕಿ ರಸಬಾಳೆ ಬೆಳೆದು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದರು.

ನಂಜನಗೂಡು ರಸಬಾಳೆ ದೇಶ ವಿದೇಶದಲ್ಲಿಯೇ ಪ್ರಖ್ಯಾತಿ ಹೊಂದಿತು. ಮೈಸೂರಿನ ಅಂದಿನ ಮಹರಾಜರು ರಸಬಾಳೆಗೆ ಹೆಚ್ಚಿನ ಹೊತ್ತು ಕೊಟ್ಟು ರೈತರಿಗೆ ಉತ್ತೇಜನ ನೀಡುತ್ತಿದ್ದರು. ಇದರಿಂದ ರೈತರು ರಸಬಾಳೆ ಬೆಳೆದು ಹಣ ಗಳಿಸುವುದಕ್ಕಿಂತ ಮಹಾರಾಜರು ಈ ಬಾಳೆ ಹಣ್ಣನ್ನು ಇಷ್ಟಪಡುತ್ತಾರೆ ಎಂದು ಬೆಳೆಯುತ್ತಿದ್ದರು ಎಂಬ ಇತಿಹಾಸವಿದೆ. ಮೈಸೂರಿನ ಮಹರಾಜರು ಯಾವುದೇ ಹಬ್ಬ, ಕಾರ್ಯಕ್ರಮ, ಸಮಾರಂಭ ಮಾಡಿದರೂ ನಂಜನಗೂಡು ರಸಬಾಳೆ ಇದ್ದೇ ಇರುತ್ತಿತ್ತು.

ಇಷ್ಟೆಲ್ಲಾ ಇತಿಹಾಸವನ್ನು ಹೊಂದಿದ್ದ ನಂಜನಗೂಡು ರಸಬಾಳೆಗೆ ಬರು ಬರುತ್ತಾ ರೋಗ ರುಜಿನ ಅಂಟಿ ಬೆಳೆ ಕುಂಠಿತಗೊಂಡಿತು. ರಸಬಾಳೆ ಬೆಳೆದ ರೈತ ಅಸಲನ್ನು ಪಡೆಯವಲ್ಲಿ ವಿಫಲನಾದ. ನಂತರ ನಂಜನಗೂಡು ರಸಬಾಳೆ ಬೆಳೆ ಸದ್ದಿಲ್ಲದೆ ಕಡಿಮೆಯಾಗುತ್ತಾ ಬಂತು.

ಆದರೂ ದೇವರಸನಹಳ್ಳಿ ಭಾಗದ ಕೆಲವು ರೈತರು ಈ ಬೆಳೆಯನ್ನು ಉಳಿಸಿಕೊಂಡು ಅಲ್ಪ ಸ್ವಲ್ಪಬೆಳೆಯುತ್ತಿದ್ದರು. ಆ ಬೆಳೆಯನ್ನೇ ಆಧಾರವಾಗಿಟ್ಟು ಕೊಂಡು ರಾಜ್ಯ ಸರಕಾರ ನಂಜನಗೂಡು ರಸಬಾಳೆ ಬೆಳೆಯಲು ಕಳೆದ ವರ್ಷದಿಂದ ರೈತರಿಗೆ ಉತ್ತೇಜನ ನೀಡುತ್ತಿದೆ. ನಂಜನಗೂಡು ರಸಬಾಳೆ ಬೆಳೆ ಮತ್ತೆ ಪುನಃಶ್ಚೇತನಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ರ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ನಂಜನಗೂಡು ರಸಬಾಳೆ ಬೆಳೆಗೆ ಮತ್ತೆ ಜೀವ ಬಂದಂತಾಗಿದೆ.

ಕಳೆದ ವರ್ಷದಲ್ಲಿ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮ ಸೇರಿದಂತೆ ಕೆಲವು ಕಡೆಗಳಲ್ಲಿ ಒಂಬತ್ತು ಎಕರೆಯಲ್ಲಷ್ಟೇ ಈ ಬೆಳೆಯನ್ನು ಬೆಳೆಯಲಾಗುತ್ತಿತ್ತು. ತೋಟಗಾರಿಕೆ ಇಲಾಖೆ ಮತ್ತೆ ರೈತರ ಜೊತೆ ಸಂಪರ್ಕಮಾಡಿ ನಿಮ್ಮ ಬೆನ್ನ ಹಿಂದೆ ಸರಕಾರ ಇದೆ. ನಂಜನಗೂಡು ರಸಬಾಳೆ ಬೆಳೆಯುವಂತೆ ಪ್ರೋತ್ಸಾಹಿಸಿದ ಮೇಲೆ ಈ ವರ್ಷ ದೇವರಸನಹಳ್ಳಿ, ನಂಜನಗೂಡು ಕಸಬಾ ಹೋಬಳಿ, ಕೌಲಂದೆ ಹೋಬಳಿ ಸಹಿತ ನೂರು ಎಕರೆ ಪ್ರದೇಶದಲ್ಲಿ ನಂಜನಗೂಡು ರಸಬಾಳೆ ಬೆಳೆಯಲು ರೈತರು ಮುಂದಾಗಿದ್ದಾರೆ.

ಇಲಾಖೆಯಿಂದ ಪ್ರೋತ್ಸಾಹ ಧನ: ನಂಜನಗೂಡು ರಸಬಾಳೆ ಬೆಳೆಯಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸುತ್ತಿದ್ದು, ಇದರಿಂದ ಪ್ರಾಯೋಗಿಕವಾಗಿ ರೈತರು ಏಲಕ್ಕಿ, ಪಚ್ಚಬಾಳೆ, ನೇಂದ್ರ ಬಾಳೆಯ ಜೊತೆಯಲ್ಲಿ 20 ಗುಂಟೆಗಳಲ್ಲಿ ನಂಜನಗೂಡು ರಸಬಾಳೆ ಬೆಳೆಯಲು ಮುಂದಾಗಿದ್ದಾರೆ.

ನಂಜನಗೂಡು ರಸಬಾಳೆ ಬೆಳೆಯುವ ರೈತರಿಗೆ ಇಲಾಖೆ ವತಿಯಿಂದ ನಂಜನಗೂಡು ರಸಬಾಳೆ ಫಸಲು ಬೆಳೆಯಲು 20 ಗುಂಟೆಗೆ ಎಸ್‌ಸಿ, ಎಸ್‌ಟಿಗಳಿಗೆ ಶೇ.90 ಸಬ್ಸಿಡಿ, ಸಾಮಾನ್ಯ ವರ್ಗದವರಿಗೆ ಶೇ.75 ಸಬ್ಸಿಡಿ ನೀಡಲಾಗುತ್ತಿದೆ. ಡ್ರಿಪ್, ಸೇರಿ ನಂಜನಗೂಡು ರಸಬಾಳೆ ಬೆಳೆಯಲು ಸಾಮಾನ್ಯ ವರ್ಗದವರಿಗೆ 54 ಸಾವಿರ ರೂ, ಎಸ್ಸಿ ಎಸ್ಟಿಗಳಿಗೆ 65 ಸಾವಿರ ರೂ. ಡ್ರಿಪ್ ಬಳಸದೆ ಬೆಳೆಯಲು ಸಾಮಾನ್ಯ ವರ್ಗದವರಿಗೆ 31 ಸಾವಿರ ರೂ. ಎಸ್‌ಸಿ, ಎಸ್‌ಟಿಗಳಿಗೆ 35 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಪ್ರತ್ಯೇಕ ಮಾರುಕಟ್ಟೆ: ನಂಜನಗೂಡು ರಸಬಾಳೆ ಬೆಳೆ ಮಾರಾಟಕ್ಕೆ ತೋಟಗಾರಿಕೆ ಇಲಾಖೆಯ ಹಾಪ್ ಕಾಮ್ಸ್‌ನಲ್ಲಿ ಮಾರುಕಟ್ಟೆ ತೆರೆಯಲಾಗಿದೆ. ಇದರ ಜೊತೆಗೆ ಬೇರೆ ಅಂಗಡಿಗಳಲ್ಲೂ ನಂಜನಗೂಡು ರಸಬಾಳೆ ಕೊಂಡು ಕೊಳ್ಳುತ್ತಿದ್ದಾರೆ. ನಂಜನಗೂಡು ರಸಬಾಳೆ ಬೆಳೆಗೆ ಹೆಚ್ಚು ಬೇಡಿಕೆ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಬೆಳೆಗಾರರಿಗೆ ಇಲ್ಲದಂತಾಗಿದೆ.

ನಂಜನಗೂಡಿನ ಕೆಲವು ಅಂಗಡಿಗಳಲ್ಲಿ ಮಾತ್ರ ಲಭ್ಯ: ನಂಜನಗೂಡು ರಸಬಾಳೆ ನಂಜನಗೂಡಿನ ಎಲ್ಲ ಕಡೆಗಳಲ್ಲೂ ಸಿಗುವುದಿಲ್ಲ. ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿರುವ ಸಣ್ಣಪ್ಪ ಅವರ ಅಂಗಡಿ, ಮಾರುಕಟ್ಟೆಯ ರಸ್ತೆಯಲ್ಲಿ ಈ ಹಿಂದೆ ಇದ್ದ ದೇವರಸನಹಳ್ಳಿಯ ಸಿದ್ಧಪ್ಪಅವರ ಬಾಳೆ ಅಂಗಡಿ, ತಿಮ್ಮಯ್ಯ ಬಿಲ್ಡಿಂಗ್, 6ನೇ ತಿರುವಿನಲ್ಲಿರುವ ಒಂದು ಬಾಳೆ ಹಣ್ಣಿನ ಅಂಗಡಿ, ನಂಜನಗೂಡು ದೇವಸ್ಥಾನದ ಬಳಿ ಇರುವ ದೇವರಸನಹಳ್ಳಿ ವೆಂಕಟೇಶ್ ಅವರ ಅಂಗಡಿಗಳಲ್ಲಿ ಮಾತ್ರ ನೈಜ ನಂಜನಗೂಡು ರಸಬಾಳೆ ದೊರೆಯುತ್ತದೆ. ಇದರ ಜೊತೆಗೆ ಮೈಸೂರು ದೇವರಾಜ ಮಾರುಕಟ್ಟೆಯ ನಂ.85ರ ಗಿರೀಶ್ ಅವರ ಬಾಳೆ ಹಣ್ಣಿನ ಅಂಗಡಿಯಲ್ಲೂ ದೊರೆಯುತ್ತದೆ.

ನಂಜನಗೂಡು ರಸಬಾಳೆ ದೇವರಸನಹಳ್ಳಿ ಗ್ರಾಮದಲ್ಲಿ ಮಾತ್ರ ಬೆಳೆಯಲಾಗುತಿತ್ತು. ನಂತರ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದಂತೆ ನಂಜನಗೂಡು ರಸಬಾಳೆಗೆ ರೋಗ ಹೆಚ್ಚು ಬರಲು ಪ್ರಾರಂಭವಾಯಿತು. ಈಗ ನಂಜನಗೂಡು ರಸಬಾಳೆಯಯನ್ನು ಗುಂಡ್ಲುಪೇಟೆ, ಗದ್ದಿಗೆ ಭಾಗದಲ್ಲೂ ಬೆಳೆಯುತ್ತಾರೆ. ದೇವರಸನಹಳ್ಳಿಯಲ್ಲಿ ಬೆಳೆಯುವ ನಂಜನಗೂಡು ರಸಬಾಳೆ ಬಹಳ ರುಚಿಕರ.

-ಗಿರೀಶ್, ಬಾಳೆ ಹಣ್ಣಿನ ವ್ಯಾಪಾರಿ, ದೇವರಾಜ ಮಾರುಕಟ್ಟೆ, ಮೈಸೂರು.

20 ಗುಂಟೆಯಲ್ಲಿ 5 ಟನ್ ಬೆಳೆ

ನಂಜನಗೂಡು ರಸಬಾಳೆ ಬೇರೆ ಬಾಳೆ ಹಣ್ಣಿನಂತೆ ಹೆಚ್ಚು ಇಳುವರಿ ಬರುವುದಿಲ್ಲ. ಒಂದು ಗೊನೆ 8 ರಿಂದ 10 ಕೆ.ಜಿ.ಮಾತ್ರ ಬರಲಿದೆ. ಒಂದು ಕೆ.ಜಿ. ನಂಜನಗೂಡು ರಸಬಾಳೆ ಅಂದಾಜು ಪ್ರಕಾರ 100 ರಿಂದ 150 ರೂ.ಗಳಿವೆ. 20 ಗುಂಟೆಯಲ್ಲಿ ಸುಮಾರು 4 ರಿಂದ 5 ಟನ್ ರಸಬಾಳೆ ಬೆಳೆಯಬಹುದು. ಕನಿಷ್ಠ 2.5 ಲಕ್ಷದಿಂದ 3.5 ಲಕ್ಷ ರೂ. ಗಳಿಸಬಹುದು.

share
ನೇರಳೆ ಸತೀಶ್ ಕುಮಾರ್
ನೇರಳೆ ಸತೀಶ್ ಕುಮಾರ್
Next Story
X