Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೇನೆಯ ಶೌರ್ಯದಲ್ಲೂ ಲಾಭದ ಹುಡುಕಾಟ!

ಸೇನೆಯ ಶೌರ್ಯದಲ್ಲೂ ಲಾಭದ ಹುಡುಕಾಟ!

ಎಸ್. ಸುದರ್ಶನ್ಎಸ್. ಸುದರ್ಶನ್10 May 2025 12:24 PM IST
share
ಸೇನೆಯ ಶೌರ್ಯದಲ್ಲೂ ಲಾಭದ ಹುಡುಕಾಟ!

ಇಡೀ ದೇಶ ‘ಆಪರೇಷನ್’ ಸಿಂಧೂರ ಬಗ್ಗೆ ಹೆಮ್ಮೆಪಡುತ್ತಿದೆ. ಎಲ್ಲರೂ ನಮ್ಮ ಮೂರೂ ಪಡೆಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಜೊತೆಗಿದ್ದಾರೆ.

ಇಡೀ ದೇಶ ನಮ್ಮ ಪಡೆಗಳೊಡನೆ ನಿಂತಾಗ, ಕೆಲವರು ಅದರಲ್ಲಿ ಲಾಭ ಗಳಿಸಲು ಅವಕಾಶ ಹುಡುಕತೊಡಗಿದ್ದಾರೆ.

ವರದಿಯ ಪ್ರಕಾರ, ಕಾರ್ಯಾಚರಣೆ ಮುಗಿದ 24 ಗಂಟೆಗಳ ಒಳಗೆ ‘ಆಪರೇಷನ್ ಸಿಂಧೂರ’ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್, ದಿಲ್ಲಿಯ ವಕೀಲರು, ನಿವೃತ್ತ ಸೇನಾ ಅಧಿಕಾರಿ ಮತ್ತು ಇನ್ನೊಬ್ಬ ವ್ಯಕ್ತಿ ಕಾರ್ಯಾಚರಣೆ ಮುಗಿದ 24 ಗಂಟೆಗಳ ಒಳಗೆ ಆಪರೇಷನ್ ಸಿಂಧೂರ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದ್ದ ಬಗ್ಗೆ ವರದಿಯಾಗಿದೆ.

ಮೇ 7, 2025 ರಂದು ಬೆಳಗ್ಗೆ 10:42ರಿಂದ ಸಂಜೆ 6:27ರ ನಡುವೆ ರಿಲಯನ್ಸ್ ಸಂಸ್ಥೆ, ಮುಂಬೈ ನಿವಾಸಿ ಮುಕೇಶ್ ಚೇತ್ರಮ್ ಅಗರ್ವಾಲ್, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ ಹಾಗೂ ದಿಲ್ಲಿ ಮೂಲದ ವಕೀಲ ಅಲೋಕ್ ಕೊಠಾರಿ ಅರ್ಜಿ ಸಲ್ಲಿಸಿದ್ದರು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಾಕ್ಷ್ಯಚಿತ್ರವನ್ನು ನಿರ್ಮಿಸುವ ಉದ್ದೇಶಕ್ಕಾಗಿ ಆಪರೇಷನ್ ಸಿಂಧೂರ ಟ್ರೇಡ್‌ಮಾರ್ಕ್‌ಗೆ ಅರ್ಜಿ ಸಲ್ಲಿಸಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಮುಖೇಶ್ ಚೇತ್ರಮ್ ಅಗರ್ವಾಲ್ ಅವರೂ ಅರ್ಜಿ ಸಲ್ಲಿಸಿದ್ದಾರೆ. ‘ಆಪರೇಷನ್ ಸಿಂಧೂರ’ ಜೊತೆ ಸಂಗೀತೋತ್ಸವ ಮಾಡಲು ಬಯಸುವುದಾಗಿ ಅವರು ಹೇಳಿದ್ದಾರೆ.

‘‘ಸೈನ್ಯದ ಶೌರ್ಯ ಮತ್ತು ನಮ್ಮ ವಾಯುಪಡೆ ಮತ್ತು ನೌಕಾಪಡೆಯ ಶೌರ್ಯವನ್ನು ಆಧರಿಸಿದ ಉತ್ಸವವನ್ನು ಆಯೋಜಿಸಲು ಬಯಸುತ್ತೇನೆ. ನಾನು ಒಂದು ಸಂಗೀತ ಉತ್ಸವವನ್ನು ಆಯೋಜಿಸಲು ಬಯಸುತ್ತೇನೆ’’ ಎಂದಿದ್ದಾರೆ.

ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ ಅರ್ಜಿಯಲ್ಲಿ ಮನರಂಜನೆ, ಚಲನಚಿತ್ರ ನಿರ್ಮಾಣ, ಸಾಂಸ್ಕೃತಿಕ ಚಟುವಟಿಕೆಗಳು, ವೆಬ್ ಸರಣಿ ನಿರ್ಮಾಣ ಉದ್ದೇಶದ ಬಗ್ಗೆ ವಿವರಣೆಯಿದೆ.

ಇನ್ನು ಅಲೋಕ್ ಕೊಠಾರಿ ಅವರು ಶಿಕ್ಷಣ, ತರಬೇತಿ, ಮನರಂಜನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಒದಗಿಸುವುದು ತಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಆದರೆ ಈ ನಡುವೆ ಮತ್ತೊಂದು ಸುದ್ದಿ ಬಂದಿದ್ದು, ಆಪರೇಷನ್ ಸಿಂಧೂರ ಟ್ರೇಡ್‌ಮಾರ್ಕ್‌ಗಾಗಿ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ರಿಲಯನ್ಸ್ ನ ಜಿಯೋ ಸ್ಟುಡಿಯೋಸ್ ಹಿಂಪಡೆದಿದೆ.

ಅರ್ಜಿ ಸಲ್ಲಿಸಿದ್ದ ಒಂದು ದಿನದ ಒಳಗೆ ಅದು ಅರ್ಜಿ ಹಿಂದೆಗೆದುಕೊಂಡಿದೆ.

ಅರ್ಜಿ ಹಿಂಪಡೆಯುತ್ತಿರುವುದಾಗಿ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್ ಡಿಸೈನ್ ಆಂಡ್ ಟ್ರೇಡ್‌ಮಾರ್ಕ್ಸ್‌ಗೆ ತಿಳಿಸಿರುವ ಅದು, ಅರ್ಜಿ ಹಿಂಪಡೆದಿರುವ ಕುರಿತು ಆದೇಶ ಹೊರಡಿಸುವಂತೆ ಮನವಿ ಮಾಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿಯೂ ರಿಲಯನ್ಸ್ ಮಾಹಿತಿ ಹಂಚಿಕೊಂಡಿದೆ.

ಸಂಸ್ಥೆಯ ಕಿರಿಯ ನೌಕರರೊಬ್ಬರು ಅಜಾಗರೂಕತೆಯಿಂದ ಅನುಮತಿ ಪಡೆಯದೆ ಅರ್ಜಿ ಸಲ್ಲಿಸಿದ್ದರು. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಆಪರೇಷನ್ ಸಿಂಧೂರ ಹೆಸರನ್ನು ವಾಣಿಜ್ಯ ಚಿಹ್ನೆಯಾಗಿ ಬಳಸುವ ಉದ್ದೇಶವಿಲ್ಲ ಎಂದು ಅದು ಸ್ಪಷ್ಟನೆ ನೀಡಿದೆ.

ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ಸರಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲುತ್ತದೆ. ಭಾರತ ಮೊದಲು ಎಂಬ ಧ್ಯೇಯವಾಕ್ಯಕ್ಕೆ ತಮ್ಮ ಬದ್ಧತೆ ಅಚಲವಾಗಿದೆ ಎಂದು ತಿಳಿಸಿದೆ.

ಭಯೋತ್ಪಾದಕರ ನಿಗ್ರಹಕ್ಕಾಗಿ ಭಾರತೀಯ ಸೇನಾಕಾರ್ಯಾಚರಣೆ ಆಪರೇಷನ್ ಸಿಂಧೂರ ಹೆಸರು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಆ ಹೆಸರಿನ ಬಳಕೆ ಕೋರಿ ರಿಲಯನ್ಸ್ ಅರ್ಜಿ ಸಲ್ಲಿಸಿತ್ತು.

ಸೇನಾ ಕಾರ್ಯಾಚರಣೆ ನಡೆದು 24 ಗಂಟೆ ಕಳೆಯುವುದರೊಳಗೆ ಆ ಹೆಸರಿನ ಕುರಿತಾದ ವಿಶೇಷ ಹಕ್ಕನ್ನು ತಮಗೆ ಮಾತ್ರವೇ ನೀಡುವಂತೆ ಕೋರಿ ಇವರೆಲ್ಲರ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಆದರೆ ಇಲ್ಲಿ ಪ್ರಶ್ನೆ ಬರುವುದು, ಈ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದರೆ, ಇದು ಸೇನೆಯ ಶೌರ್ಯವನ್ನೂ ತಮ್ಮ ಲಾಭಕ್ಕಾಗಿ ಬಳಸುವ ರಣಹದ್ದು ವ್ಯವಸ್ಥೆಯಲ್ಲವೆ?

ಆಪರೇಷನ್ ಸಿಂಧೂರ ಅನ್ನು ಯಾರು ಮತ್ತು ಯಾವ ಉದ್ದೇಶಕ್ಕಾಗಿ ಟ್ರೇಡ್‌ಮಾರ್ಕ್ ಮಾಡಲು ಬಯಸಿದ್ದರು ಎಂಬುದು ಎಲ್ಲಾ ವಿವರಗಳಲ್ಲಿ ಸ್ಪಷ್ಟವಾಗಿದೆ.

ಟ್ರೇಡ್‌ಮಾರ್ಕ್‌ಗೆ ಈ ಹೆಸರನ್ನು ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಆ ಹೆಸರು ಬೇರೆ ಹೆಸರಿಗೆ ಹೋಲುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡಾ ಸರಕಾರ ನಿರ್ಧರಿಸುತ್ತದೆ. ಅದು ಬೇರೆ ವಿಚಾರ.

ಆದರೆ, ಸರಕಾರ, ಸೇನೆ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಬಳಸಿದ ಹೆಸರನ್ನು ಯಾವುದೇ ಕಂಪೆನಿ ಅಥವಾ ವ್ಯಕ್ತಿ ತನ್ನ ಬಳಕೆಗಾಗಿ ಹಕ್ಕು ಪಡೆಯಬಹುದೆ?

ಈ ಹೆಸರನ್ನು ಟ್ರೇಡ್‌ಮಾರ್ಕ್ ಆಗಿ ಪಡೆಯಲು ಮುಗಿಬಿದ್ದುದರ ಹಿಂದೆ, ಅದು ದೇಶದ ಜನರ ಭಾವನೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಅದನ್ನು ಬಳಸಿ ಲಾಭ ಮಾಡಿಕೊಳ್ಳುವ ಉದ್ದೇಶವಿರುವುದು ಸ್ಪಷ್ಟ.

ಆ ಹೆಸರಿನೊಂದಿಗೆ ಜನರ ಭಾವನೆಗಳಿವೆ ಎಂದು ಅವರಿಗೆ ತಿಳಿದಿದೆ. ಹಾಗಾಗಿ, ಅದನ್ನು ಬೇಗ ನೋಂದಾಯಿಸಿ ಲಾಭ ಗಳಿಸಬಹುದು ಎಂಬುದು ಅವರ ಉದ್ದೇಶ. ಆದರೆ, ಪ್ರಶ್ನೆ ಏನೆಂದರೆ, ಸರಕಾರ ಇದನ್ನು ತಡೆಯಬಹುದೇ ಎಂಬುದು.

ಕಾನೂನು ಪರಿಣಿತರು ಹೇಳುವ ಪ್ರಕಾರ, ಇಂಥ ಯಾವುದೇ ಕಾರ್ಯಾಚರಣೆ ನಡೆದರೆ, ಸಾಮಾನ್ಯವಾಗಿ ಸರಕಾರ ಅಥವಾ ರಕ್ಷಣಾ ಸಚಿವಾಲಯ ಹೆಸರನ್ನು ನೋಂದಾಯಿಸುವುದಿಲ್ಲ.

ಅದನ್ನು ವಾಣಿಜ್ಯಿಕವಾಗಿ ಬಳಸಲಾಗುವುದಿಲ್ಲ ವಾದ್ದರಿಂದ ಅದನ್ನು ನೋಂದಾಯಿಸುವುದಿಲ್ಲ.

ಅವರು ಅದನ್ನು ನೋಂದಾಯಿಸದಿದ್ದರೆ ಅದು ಸುರಕ್ಷಿತವಲ್ಲ ಮತ್ತು ಯಾರಾದರೂ ಅದನ್ನು ನೋಂದಾಯಿಸಿಕೊಳ್ಳಬಹುದು. ಆದರೆ ನೋಂದಣಿ ಸಂಖ್ಯೆಯನ್ನು ಹಿಂಪಡೆಯುವ ಹಕ್ಕನ್ನು ರಿಜಿಸ್ಟ್ರಾರ್ ಹೊಂದಿರುತ್ತಾರೆ.

ಯಾವುದೇ ವ್ಯಕ್ತಿ ಅದನ್ನು ಬಳಸಿ ದಾರಿತಪ್ಪಿಸುವ ಮಾಹಿತಿ ಬಂದರೆ ಅಥವಾ ಬೇರೆ ದೇಶದಲ್ಲಿರುವ ಯಾವುದೇ ವ್ಯಕ್ತಿಯ ಭಾವನೆಗಳಿಗೆ ಯಾವುದೇ ರೀತಿಯಲ್ಲಿ ನೋವುಂಟುಮಾಡಿದರೆ ಅಥವಾ ಅದು ಸಾರ್ವಜನಿಕ ನೀತಿಗೆ ವಿರುದ್ಧವಾಗಿದ್ದರೆ, ಅದನ್ನು ನಿರಾಕರಿಸಬಹುದು.

ಅಥವಾ ಬೇರೆ ಯಾವುದೇ ವ್ಯಕ್ತಿ ಅದನ್ನು ನೋಂದಾಯಿಸಲು ಸಾಧ್ಯವಿಲ್ಲ ಎಂದು ಸರಕಾರ ಆಕ್ಷೇಪಿಸಿದರೆ, ಸರಕಾರ ಅದರ ನೋಂದಣಿಯನ್ನು ಸಂಪೂರ್ಣವಾಗಿ ನಿಲ್ಲಿಸಬಹುದು.

ಈ ಟ್ರೇಡ್ ಮಾರ್ಕ್‌ಗೆ ಆಕ್ಷೇಪಣೆಗಳನ್ನು ಎತ್ತಬಹುದು ಮತ್ತು ಯಾವುದೇ ಟ್ರೇಡ್‌ಮಾರ್ಕ್ ಅನ್ನು ನೋಂದಣಿಗಾಗಿ ಸಲ್ಲಿಸಿದಾಗಲೆಲ್ಲಾ ಆಕ್ಷೇಪಣೆಗಳನ್ನು ಕೇಳಲಾಗುತ್ತದೆ.

ಯಾವುದೇ ವ್ಯಕ್ತಿ ಆಕ್ಷೇಪಣೆ ಸಲ್ಲಿಸಿದರೆ, ಅವರ ಆಕ್ಷೇಪಣೆಗಳು ಮಾನ್ಯವಾಗಿದೆಯೇ ಎಂದು ನೋಡಿ, ಎಲ್ಲಾ ಆಕ್ಷೇಪಣೆಗಳನ್ನು ತೆಗೆದುಹಾಕಿದಾಗಲೇ ಆ ವ್ಯಕ್ತಿಗೆ ಟ್ರೇಡ್‌ಮಾರ್ಕ್ ನೀಡಲಾಗುತ್ತದೆ.

ಈ ಹೆಸರು ಸರಕಾರದ ಹೆಸರಿನಲ್ಲಿದೆ ಎಂದು ಎಲ್ಲಿಯೂ ನೋಂದಾಯಿತವಾಗಿರುವುದಿಲ್ಲ.

ಆದರೆ ಸರಕಾರ ಆಕ್ಷೇಪಣೆ ಎತ್ತಿದರೆ ಅದನ್ನು ತಡೆಹಿಡಿಯಬಹುದು.

ಏಕೆಂದರೆ, ಜನರ ಭಾವನೆಗಳು ಅದರ ಜೊತೆಗಿರುತ್ತವೆ ಮತ್ತು ಯಾರಾದರೂ ಅದನ್ನು ದುರುಪಯೋಗಪಡಿಸಿಕೊಳ್ಳಲು ಬಯಸಿದರೆ, ಅಥವಾ ಅದು ಯಾವುದೇ ರೀತಿಯಲ್ಲಿ ಸಾರ್ವಜನಿಕ ನೀತಿಗೆ ವಿರುದ್ಧವಾಗಿದ್ದರೆ, ಅದನ್ನು ಸರಕಾರದ ವಿರುದ್ಧ ಅಥವಾ ದೇಶದ ವಿರುದ್ಧ ಬಳಸಿದರೆ, ಸರಕಾರ ಖಂಡಿತವಾಗಿಯೂ ಅದನ್ನು ಆಕ್ಷೇಪಿಸಬಹುದು ಮತ್ತು ಅದನ್ನು ಹಿಂದೆಗೆದುಕೊಳ್ಳಬಹುದು ಎಂದು ಪರಿಣಿತರು ಹೇಳುತ್ತಾರೆ.

ಈ ಟ್ರೇಡ್ ಮಾರ್ಕ್ ಅರ್ಜಿ ವಿಷಯದ ಬಗ್ಗೆ ಗದ್ದಲ ಉಂಟಾಗಿದ್ದರಿಂದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅರ್ಜಿಯನ್ನು ವಾಪಸ್ ಪಡೆದಿದೆ.

ಹಾಗಾದರೆ ಇಂಥ ದೊಡ್ಡ ಕಾರ್ಪೊರೇಟ್‌ಗಳು ಮತ್ತು ವ್ಯಕ್ತಿಗಳು ಇಂಥ ಒಂದು ಘಟನೆಯನ್ನು ನಾಟಕೀಯವಾಗಿಸಿ ಅದರ ಮೂಲಕ ಲಾಭ ಮಾಡಿಕೊಳ್ಳಲು ಹೊರಡುವುದರ ಅರ್ಥವೇನು?

ಸೈನ್ಯದವರ ಧೈರ್ಯವನ್ನೂ ಲಾಭ ಗಳಿಕೆಯ ಉದ್ದೇಶಕ್ಕೆ ಬಳಸುವ ಆತುರ ಇದಾಗಿದೆಯಲ್ಲವೆ?

ದೇಶಭಕ್ತಿಯೆಂದರೆ ಮಾರಾಟದ ವಸ್ತುವೇ?

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X