Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತೀವ್ರಗೊಂಡ ಅಡಿಕೆ ಕೊಳೆರೋಗ

ತೀವ್ರಗೊಂಡ ಅಡಿಕೆ ಕೊಳೆರೋಗ

ಇಬ್ರಾಹೀಂ ಅಡ್ಕಸ್ಥಳಇಬ್ರಾಹೀಂ ಅಡ್ಕಸ್ಥಳ21 Aug 2025 9:48 AM IST
share
ತೀವ್ರಗೊಂಡ ಅಡಿಕೆ ಕೊಳೆರೋಗ
►ಶೇ.60ರಷ್ಟು ಬೆಳೆ ನಷ್ಟ ►ಕಂಗಾಲಾದ ಬೆಳೆಗಾರರು

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಡಿಕೆಗೆ ಕೊಳೆ ರೋಗ ತೀವ್ರಗೊಂಡಿದ್ದು, ಹೆಚ್ಚಿನ ಕಡೆಗಳಲ್ಲಿ ಶೇ.60ರಷ್ಟು ಅಡಿಕೆ ಬೆಳೆ ನಾಶಗೊಂಡಿದೆ.

ಕೆಲದಿನಗಳಲ್ಲಿ ಸತತವಾಗಿ ಸುರಿದ ಮಳೆಯು ಕೊಳೆ ರೋಗ ನಿಯಂತ್ರಣಕ್ಕೆ ಅಡ್ಡಿಯಾಗಿದೆ. ಬೆಳೆಗಾರರು 2-3 ಬಾರಿ ಔಷಧಿ ಸಿಂಪಡಿಸಿದರೂ ಫಲಕಾರಿಯಾಗಲಿಲ್ಲ. ಅಲ್ಲದೆ ಮದ್ದು ಬಿಡಲು ಕೂಲಿ ಕಾರ್ಮಿಕರ ಕೊರತೆಯು ಅಡಿಕೆ ಬೆಳೆಗಾರರು ಕಂಗೆಡುವಂತೆ ಮಾಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೂಡಾ ಹಳೆಯ ವಿಧಾನದ ಮೂಲಕ ಮದ್ದು ಬಿಡಲಾಗುತ್ತದೆ. ಹೀಗಾಗಿ 200-500 ತನಕ ಇರುವ ಅಡಿಕೆ ತೋಟಕ್ಕೆ ಮದ್ದು ಬಿಡಲು ಕನಿಷ್ಠ ಮೂವರು ಅಗತ್ಯವಿದೆ. ಆದರೆ ಸಕಾಲದಲ್ಲಿ ಈ ಕೆಲಸ ಬಲ್ಲ ಆಳುಗಳನ್ನು ಹೊಂದಿಸುವುದು ರೈತರನಿಗೆ ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ಅಡಿಕೆ ಮರಗಳಿಗೆ ಪಾಚಿ ಹಿಡಿದು ಜಾರುತ್ತಿರುವುದು ಕೂಡಾ ಒಂದು ಸಮಸ್ಯೆಯಾಗಿದೆ.

ಎಳೆ ಅಡಿಕೆಗಳು ಕೊಳೆತು ಉದುರುತ್ತಿದೆ. ಅಡಿಕೆ ಮರದ ಸುತ್ತಲೂ ಉದುರಿದ ಅಡಿಕೆ ರಾಶಿ ಬಿದ್ದಿದ್ದು, ಅಡಿಕೆ ಬೆಳೆಗಾರನಿಗೆ ಕೈಗೆ ಬಂದ ತುತ್ತು ಬಾಯಿಗೆ ತಲುಪುವಂತಾಗಿದೆ.

ಈ ಬಾರಿ ಬಹುತೇಕ ಕಡೆಗಳಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಆಭಾವ ಉಂಟಾಗಿಲ್ಲ. ಮಳೆ ಬೇಗ ಬಂದಿರುವ ಹಿನ್ನೆಲೆಯಲ್ಲಿ ಫಸಲು ಜಾಸ್ತಿ ನಿರೀಕ್ಷಿಸಲಾಗಿತ್ತು. ಆದರೆ ಮುಂದುವರಿದ ಮಳೆಯು ಅಡಿಕೆ ಫಸಲನ್ನು ಕಿತ್ತುಕೊಂಡಿದೆ.

ಮಳೆಯಿಂದಾಗಿ ಅಡಿಕೆಗೆ ಬೇರೆ ಬೇರೆ ರೋಗಗಳು ಕಾಣಿಸಿ ಕೊಂಡಿರುವುದು ಒಂದಡೆಯಾದರೆ ಕೆಲವು ತೋಟಗಳಲ್ಲಿ ಅಡಿಕೆ ಮರಕ್ಕೆ ಹಾಕಿರುವ ಗೊಬ್ಬರವು ಮಳೆಯಿಂದಾಗಿ ಕೊಚ್ಚಿ ಹೋಗಿದೆ.

ಕೊಳೆ ರೋಗದಿಂದ ತಪ್ಪಿಸಿಕೊಂಡು ಎಳೆ ಅಡಿಕೆಯಿಂದ ನಳನಳಿಸಿಸುತ್ತಿ ರುವ ಕೆಲವು ಅಡಿಕೆ ಮರಗಳು ಭಾರ ತಾಳಲಾರದೆ ಮಳೆಯೊಂದಿಗೆ ಆಗಾಗ ಕಂಡು ಬರುವ ಗಾಳಿಯಿಂದಾಗಿ ಮುರಿದು ಬೀಳುತ್ತಿದ್ದು, ಇದು ಅಡಿಕೆ ಬೆಳೆಗಾರರಿಗೆ ಆಘಾತ ನೀಡಿದೆ.

ಅಡಿಕೆಗೆ ರೋಗದ ಸಮಸ್ಯೆ ಒಂದಡೆಯಾದರೆ ಇನ್ನೊಂದಡೆ ಮಳೆಯೊಂದಿಗೆ ಗಾಳಿ ಅಡಿಕೆ ಬೆಳಗಾರರಿಗೆ ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಕೆಲವು ತೋಟಗಳ ಸುತ್ತಲೂ ಅಥವಾ ತೋಟದೊಳಗಿರುವ ಬೇರೆ ಮರಗಳ ಕೊಂಬೆ ಮುರಿದು ಬಿದ್ದ ಪರಿಣಾಮವಾಗಿ ಅಡಿಕೆ ಮರಗಳು ತುಂಡಾಗಿ ನೆಲಕ್ಕೆ ಬೀಳುವಂತಾಗಿದೆ.

ಬಸವನ ಹುಳ ಬಾಧೆ: ಬಸವನಹುಳ ಅಥವಾ ಶಂಖ ಹುಳದ ಬಾಧೆ ಕೂಡಾ ದ.ಕ. ಜಿಲ್ಲೆಯ ಬಹುತೇಕ ತೋಟಗಳಲ್ಲಿ ಕಾಣಿಕೊಂಡಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಲ್ಲಿ ಮಳೆ ಒಂದೆರಡು ದಿನಗಳು ಕಾಣಿಸಿಕೊಳ್ಳುತ್ತದೆ. ಆದರೆ ಈ ವರ್ಷ ಮೇ ತಿಂಗಳಲ್ಲಿ ವಿಪರೀತ ಮಳೆ ಕಾಣಿಸಿಕೊಂಡಿತು. ಈ ಕಾರಣದಿಂದಾಗಿ ಹೆಚ್ಚಿನ ಅಡಿಕೆ ಬೆಳೆಗಾರರಿಗೆ ತೋಟಗಳಿಗೆ ಸರಿಯಾಗಿ ಔಷಧ ಸಿಂಪಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಕೊಳೆರೋಗ ಹಾಗೂ ಸುಳಿ ರೋಗದ ನಿಯಂತ್ರಣ ಸಾಧ್ಯವಾಗಿಲ್ಲ. ಕೆಲವು ಬೆಳಗಾರರು ಔಷಧ ಸಿಂಪಡಿಸಿದರೂ ನಿರಂತರ ಮಳೆ ಕಾರಣ ಅದು ಪರಿಣಾಮ ಬೀರಿಲ್ಲ. ಇದೀಗ ತೋಟಗಾರಿಕೆ ಇಲಾಖೆ ಯಿಂದ ಔಷಧಿ ಸಿಂಪಡಿಸಲು ಎಕರೆಗೆ 600 ರೂ.ಗಳಂತೆ ಗರಿಷ್ಠ 5 ಎಕರೆ ತನಕ 6,000 ರೂ. ಸಹಾಯಧನ ನೀಡಲಾಗುತ್ತದೆ.

ಮಂಜುನಾಥ್, ಉಪ ನಿರ್ದೇಶಕರು ತೋಟಗಾರಿಕಾ ಇಲಾಖೆ,ದ.ಕ. ಜಿಪಂ ಮಂಗಳೂರು

ಕೊಳೆರೋಗದಿಂದಾಗಿ ಅಡಿಕೆ ಫಸಲು ನಾಶಗೊಂಡಿದೆ. ವಿಪರೀತ ಮಳೆಯಿಂದಾಗಿ ಔಷಧಿ ಸಿಂಪಡಿಸಲು ಸಮಸ್ಯೆ ಉಂಟಾಗಿದೆ. ಕೆಲವು ಅಡಿಕೆ ಬೆಳೆಗಾರರು ಮೂರು ಬಾರಿ ಔಷಧಿ ಸಿಂಪಡಿಸಿದರೂ, ಕೊಳೆ ರೋಗ ನಿಯಂತ್ರಣಕ್ಕೆ ಬಂದಿಲ್ಲ.

ಶಂನಾ ಖಂಡಿಗೆ, ಉಪಾಧ್ಯಕ್ಷರು ಕ್ಯಾಂಪ್ಕೊ, ಮಂಗಳೂರು

share
ಇಬ್ರಾಹೀಂ ಅಡ್ಕಸ್ಥಳ
ಇಬ್ರಾಹೀಂ ಅಡ್ಕಸ್ಥಳ
Next Story
X