Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹಚ್ಚ ಹಸಿರು ದಟ್ಟ ಕಾನನದ ನಡುವೆ...

ಹಚ್ಚ ಹಸಿರು ದಟ್ಟ ಕಾನನದ ನಡುವೆ ಧುಮ್ಮಿಕ್ಕುವ ಶಂಕರ್ ಫಾಲ್ಸ್

ಕೆ.ಎಲ್. ಶಿವುಕೆ.ಎಲ್. ಶಿವು8 Sept 2025 12:50 PM IST
share
ಹಚ್ಚ ಹಸಿರು ದಟ್ಟ ಕಾನನದ ನಡುವೆ ಧುಮ್ಮಿಕ್ಕುವ ಶಂಕರ್ ಫಾಲ್ಸ್

ಚಿಕ್ಕಮಗಳೂರು: ಹಚ್ಚ ಹಸಿರು ಬೆಟ್ಟಗುಡ್ಡಗಳಿಂದಾವೃತವಾದ ತಾಲೂಕಿನ ಪಟ್ಟಣ ಆಲ್ದೂರು. ಇಲ್ಲಿನ ಪ್ರಕೃತಿ ಎಂಥವರನ್ನೂ ಅಯಸ್ಕಾಂತದಂತೆ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರಿನ ಹೊದಿಕೆ ಹೊದ್ದು ಮಲಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳ ಸಾಲು ಮನಸೂರೆಗೊಳ್ಳುತ್ತದೆ. ಆಲ್ದೂರು ಸಿನೆಮಾ ಶೂಟಿಂಗ್ ಸ್ಪಾಟ್ ಕೂಡ ಹೌದು. ಯಜಮಾನದಂತಹ ಸಿನೆಮಾದ ಸಂಪೂರ್ಣ ಚಿತ್ರೀಕರಣ ನಡೆದಿರುವುದು ಈ ಪಟ್ಟಣದ ಬಳಿ ಇರುವ ಗುಡ್ಡದ ಮೇಲೆಯೇ.

ಆಲ್ದೂರು ಸಮೀಪದಲ್ಲಿರುವ ಬನ್ನೂರು ಗ್ರಾಮಕ್ಕೆ ಕೂಗಳತೆ ದೂರದಲ್ಲಿರುವ ಶಂಕರ್ ಫಾಲ್ಸ್ ನ ಜಲಸಿರಿ ಮಳೆಗಾಲದಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ, ಆಲ್ದೂರು-ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ ನಡುವಿನ ಪುಟ್ಟ ಗ್ರಾಮ ಬನ್ನೂರು. ಈ ಗ್ರಾಮದಿಂದ ಸ್ಪಲ್ಪ ದೂರ ತೆರಳಿದರೆ ಹೆದ್ದಾರಿಗೆ ಅಡ್ಡಲಾಗಿ ಹರಿಯುವ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿ ಸಣ್ಣ ಕ್ಯಾಂಟಿನ್ ಸಿಗುತ್ತದೆ. ಈ ಕ್ಯಾಂಟಿನ್ ಹಿಂಬದಿಯ ಕಾಫಿ ತೋಟದಲ್ಲಿ ಸ್ವಲ್ಪ ದೂರ ಕಾಲು ದಾರಿಯಲ್ಲಿ ಸಾಗಬೇಕು, ಅಲ್ಲಿ ಹಚ್ಚ ಹಸಿರ ದಟ್ಟ ಕಾಡಿನ ಮಧ್ಯೆ ಸಣ್ಣ ಹಳ್ಳವೊಂದು ಗುಡ್ಡ ಸೀಳಿಕೊಂಡು ಸುಮಾರು 30 ಅಡಿ ಎತ್ತರದಿಂದ ಧುಮ್ಮುಕ್ಕುತ್ತಿರುವ ಸಣ್ಣ ಜಲಪಾತದ ದೃಶ್ಯ ವೈಭವದ ತಾಣವೇ ಶಂಕರ್ ಫಾಲ್ಸ್.

ಅರೇನೂರು, ಬನ್ನೂರು, ಆಲ್ದೂರು ಸುತ್ತಮುತ್ತಲಿನ ಕೆಲವೇ ಗ್ರಾಮಗಳನ್ನು ಹೊರತು ಪಡಿಸಿ ಹೊರಗಿನವರಿಂದ ಬಹುತೇಕ ದೂರ ಉಳಿದಿರುವ ಈ ಜಲಪಾತ ಮಳೆಗಾಲದ ಭೋರ್ಗರೆವ ನೀರಿನಿಂದ ಮೈದುಂಬಿ ಹರಿಯುತ್ತ ಜೀವ ಪಡೆಯುತ್ತದೆ. ನಿಸರ್ಗ ನಿರ್ಮಿತ ಬೃಹದಾಕಾರದ ಬಂಡೆಯ ಮೇಲಿಂದ ತಳಕು ಬಳುಕಿನಿಂದ ಧುಮ್ಮಿಕ್ಕುವ ಪರಿಗೆ ಬಂಡೆಯ ಮೇಲೆಲ್ಲ ಹಾಲಿನ ನೊರೆ ಚೆಲ್ಲಿದಂತೆ ಅಚ್ಚರಿಯ ಪುಳಕಕ್ಕೆ ಮೈ ಮನಸ್ಸು ತೆರೆದು ಕೊಳ್ಳುತ್ತದೆ.

ಮರಗಿಡಗಳ ಹಿನ್ನೆಲೆಯಲ್ಲಿ ಮನಮೋಹಕವಾಗಿ ಮೂಡಿಬರುವ ಜಲಪಾತದ ವಿಹಂಗಮ ದೃಶ್ಯಾವಳಿಗಳು ಯಾವುದೋ ಸಿನೆಮಾದ ದೃಶ್ಯದ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿರುವ ಕೃತಕ ಸೆಟ್‌ನಂತೆ ಕಾಣುತ್ತದೆ ಎಂದು ಈ ಜಲಪಾತದ ದೃಶ್ಯ ವೈಭವ ಕಂಡ ಬೆಂಗಳೂರಿನ ಪ್ರವಾಸಿಗ ರವಿಕುಮಾರ್ ಅಭಿಪ್ರಾಯಿಸುತ್ತಾರೆ.

ಹೆಚ್ಚು ಪ್ರಚಾರವಿಲ್ಲದ ಈ ತಾಣದಲ್ಲಿ ಜಲಪಾತದ ದೃಶ್ಯಾವಳಿ ಮೂಡಿಬರುವುದು ಮಳೆಗಾಲದಲ್ಲಿ ಮಾತ್ರ. ಈ ತಾಣ ತಲುಪಲು ಮುಖ್ಯ ರಸ್ತೆಯಿಂದ ಕಾಲು ದಾರಿ ಇದೆ. ಈ ಫಾಲ್ಸ್ ನೋಡ ಬರುವವರು ಆಲ್ದೂರು-ಬಾಳೆಹೊನ್ನೂರು ಹೆದ್ದಾರಿಯಲ್ಲಿನ ಬನ್ನೂರು ಗ್ರಾಮ ಸಮೀಪದ ಹೆದ್ದಾರಿಯಲ್ಲಿ ಸಿಗುವ ಸೇತುವೆ ಪಕ್ಕದ ಕ್ಯಾಂಟಿನ್ ಹತ್ತಿರದಿಂದ ಕಾಫಿ ತೋಟ ಹಾಯ್ದು ನಡೆಯಬೇಕು.

ಮೂಲಸೌಕರ್ಯಗಳ ಕೊರತೆ

ಮೂಲಸೌಕರ್ಯಗಳ ಕೊರತೆಯಿಂದಾಗಿ ಶಂಕರ್ ಫಾಲ್ಸ್ ಪ್ರವಾಸಿಗರು ಮತ್ತು ನಿಸರ್ಗ ಪ್ರಿಯರಿಂದ ದೂರ ಉಳಿಯುವಂತಾಗಿದೆ. ಸಂಬಂಧಿಸಿದ ಇಲಾಖೆ ಈ ತಾಣಕ್ಕೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಿದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೊಂದು ಪ್ರಮುಖ ಪ್ರವಾಸಿ ಕೇಂದ್ರವಾಗಬಹುದಾದ ಎಲ್ಲ ಲಕ್ಷಣ ಹೊಂದಿದೆ.

share
ಕೆ.ಎಲ್. ಶಿವು
ಕೆ.ಎಲ್. ಶಿವು
Next Story
X