Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂವಿಧಾನದಲ್ಲೂ ಅಡಕವಾದ ಬುದ್ಧನ...

ಸಂವಿಧಾನದಲ್ಲೂ ಅಡಕವಾದ ಬುದ್ಧನ ಮೈತ್ರಿಭಾವ

ಇಂದು ಬುದ್ಧ ಪೂರ್ಣಿಮೆ

ಮೇಘ ರಾಮದಾಸ್‌ಜಿ, ತುಮಕೂರುಮೇಘ ರಾಮದಾಸ್‌ಜಿ, ತುಮಕೂರು23 May 2024 11:19 AM IST
share
ಸಂವಿಧಾನದಲ್ಲೂ ಅಡಕವಾದ ಬುದ್ಧನ ಮೈತ್ರಿಭಾವ

‘ಮನುಜ ಜಾತಿ ತಾನೊಂದೇ ವಲಂ’ ಎಂದು ಆದಿ ಕವಿ ಪಂಪ ಶತಮಾನಗಳ ಹಿಂದೆಯೇ ಹೇಳಿದ್ದಾರೆ. ನಾವು ಇಂದು ಮಾದರಿಗಳು ಎಂದು ಭಾವಿಸುವ ಎಲ್ಲಾ ಮಹಾನ್ ವ್ಯಕ್ತಿಗಳೂ ಹೇಳಿರುವುದು ಇದನ್ನೇ. ಶಾಂತಿಧೂತ ಎಂದೇ ಕರೆಸಿಕೊಳ್ಳುವ ಗೌತಮ ಬುದ್ಧ ಹೇಳಿರುವ ಮೈತ್ರಿಭಾವವೂ ಇದ್ದನ್ನೇ ಸಾರುತ್ತದೆ. ಎಲ್ಲಾ ಮನುಷ್ಯರು ಒಂದೇ, ಯಾವುದೇ ವಿಧದ ಅಸಮಾನತೆ ಸಲ್ಲದು, ಎಲ್ಲರೂ ಒಂದಾಗಿ ಪ್ರೀತಿಯಿಂದ ಇರಬೇಕು, ಆಗ ಮಾತ್ರ ಕನಸಿನ ಸಮಸಮಾಜವನ್ನು ನಿರ್ಮಿಸಲು ಸಾಧ್ಯವೆಂಬುದು ಅವರೆಲ್ಲರ ಭಾವನೆಯಾಗಿತ್ತು. ಇದನ್ನು ತಿಳಿಸುವ ಮಾರ್ಗವೇ ನಿಜವಾದ ‘ದಮ್ಮ’ ಎಂದು ಅವರೆಲ್ಲರೂ ನಂಬಿದ್ದರು. ಆದರೆ ಇಂದು ದಮ್ಮ ಮನುಜರನ್ನು ಪ್ರೀತಿಯ ಭಾವದಲ್ಲಿ ಸೇರಿಸಿ ಒಂದಾಗಿ ಇರಿಸುವ ಬದಲಿಗೆ ಪ್ರತಿಷ್ಠೆಯಾಗಿ, ರಾಜಕೀಯ ದಾಳವಾಗಿ, ಉಳ್ಳವರ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು.

ಇಂತಹ ಸಮಾಜ ವ್ಯವಸ್ಥೆಯನ್ನು ದಮ್ಮ ಒಪ್ಪುವುದಿಲ್ಲ. ಮನುಷ್ಯರ ನಡುವೆ ಸಮಾನತೆಯನ್ನು ಹೆಚ್ಚಿಸುವುದೇ ದಮ್ಮ ಎಂದು ಬುದ್ಧ ಹೇಳುತ್ತಾರೆ. ಇಲ್ಲವಾದಲ್ಲಿ ಆ ದಮ್ಮ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಅಂದು ಬುದ್ಧ ಹೇಳಿದ ಈ ಮಾತು ಇಂದಿನ ವಾಸ್ತವತೆಗೂ ಅಕ್ಷರಶಃ ಹೊಂದಿಕೊಳ್ಳುತ್ತದೆ. ಪ್ರಸಕ್ತ ದೇಶದಲ್ಲಿ ದಮ್ಮದ ಹೆಸರಲ್ಲಿ ಆಗುತ್ತಿರುವ ನೀಚ ಕೃತ್ಯಗಳು ದಮ್ಮದ ಮಹತ್ವವನ್ನೇ ಕಳೆದು ಹಾಕುತ್ತಿವೆ. ಈಗ ನಡೆಯುತ್ತಿರುವ ಹಲವು ಮನುಷ್ಯತ್ವ ಹೀನ ಕಾರ್ಯಗಳನ್ನು ಬುದ್ಧ ಅಂದೇ ಖಂಡಿಸಿದ್ದರು. ಇಂತಹ ಕೃತ್ಯಗಳಿಗೆ ಬೆಂಬಲ ನೀಡುವ ದಮ್ಮ ಸದ್ದಮ್ಮ ಅಲ್ಲ ಎನ್ನುವ ವಿವೇಕದ ಆಲೋಚನೆಯನ್ನು ಬುದ್ಧ ತನ್ನ ಸಮಯದಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಅರ್ಥೈಸಿದ್ದಾರೆ. ಆದರೆ ನಮ್ಮ ಈಗಿನ ಮಾನವಕುಲ ಕೇವಲ ಒಣಪ್ರತಿಷ್ಠೆ, ಅಹಂಕಾರ, ಸಣ್ಣತನ, ಜಡತ್ವ, ಅಂಧಭಕ್ತಿಯಿಂದ ಸಮಾಜದ ಸ್ವಾಸ್ಥ್ಯವನ್ನೇ ಹಾಳುಮಾಡುತ್ತಿದೆ.

ನಮ್ಮದು ವಿವಿಧತೆಯಲ್ಲಿ ಏಕತೆಯಿಂದ ಒಂದಾಗಿ ಸಹಬಾಳ್ವೆ ನಡೆಸುತ್ತಿರುವ ದೇಶ. ಎಲ್ಲರೂ ಬಂಧುಗಳಂತೆ ಭಾರತವೆಂಬ ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿರುವುದೇ ದೇಶದ ದೊಡ್ಡ ಘನತೆಯ ವಿಚಾರ. ಆದರೆ ಇಂದು ಎಲ್ಲೋ ಕೆಲವು ಕೆಟ್ಟ ಮನಸ್ಸುಗಳು ನಮ್ಮ ಮನೆಯ (ಭಾರತ) ಅಡಿಪಾಯಕ್ಕೆ ಗೆದ್ದಲು ಹಿಡಿಸುವ ಕೆಲಸ ಮಾಡುತ್ತಿವೆ. ಧರ್ಮ, ದೇವರುಗಳ ಹೆಸರಿನಲ್ಲಿ ಒಡಕು ಮೂಡಿಸುವ ಹುನ್ನಾರ ಮಾಡುತ್ತಿದ್ದಾರೆ. ಒಂದು ಧರ್ಮ ಶ್ರೇಷ್ಠ, ಅದೊಂದೇ ಭಾರತದ ಶಕ್ತಿ ಎಂಬ ಭ್ರಮೆಯನ್ನು ಜನರ ತಲೆಯಲ್ಲಿ ತುಂಬಿ, ವಿವಿಧ ಧರ್ಮಗಳ ಜನರ ನಡುವಿನ ಬಾಂಧವ್ಯವನ್ನು ಒಡೆದು ಹಾಕಲಾಗುತ್ತಿದೆ. ಆದರೆ ಬುದ್ಧನ ದಮ್ಮವೇ ಬೇರೆ. ಎಲ್ಲಾ ಮುನುಷ್ಯರನ್ನು ಒಂದೇ ಎಂದು ತಿಳಿಸುವುದೇ ದಮ್ಮ. ಎಲ್ಲರೂ ಮೈತ್ರಿಭಾವದಿಂದ ಇರಬೇಕು ಎಂದು ಬುದ್ಧ ಹೇಳುತ್ತಾರೆ.

ಬುದ್ಧನ ಬೋಧನೆಗಳಲ್ಲಿ ಗರಿಷ್ಠ ಮಹತ್ವ ಪಡೆದಿರುವುದು ಈ ಮೈತ್ರಿಭಾವ. ಬುದ್ಧನ ಪ್ರಕಾರ ಮೈತ್ರಿಯ ಸಂಪೂರ್ಣ ಅರ್ಥ ‘‘ಸಕಲ ಜೀವರಾಶಿ ಮತ್ತು ಪ್ರಕೃತಿ ಜೊತೆಗೆ ಮೈತ್ರಿಭಾವದ ಸಂಬಂಧ ಹೊಂದುವುದು’’ ಎಂಬುದಾಗಿದೆ. ಮೈತ್ರಿ ಎಂದರೆ ಸಹೃದಯ, ಸ್ವಾತಂತ್ರ್ಯ ಎಲ್ಲವನ್ನೂ ಒಳಗೊಂಡಿರುತ್ತದೆ. ಅದು ಎಲ್ಲರಿಗೂ ದಾರಿ ತೋರುತ್ತದೆ ಎಂದು ಹೇಳುತ್ತಾರೆ. ಈ ಸಮಾಜಕ್ಕೆ ಎಲ್ಲವೂ ಬೇಕು, ಎಲ್ಲರೂ ಬೇಕು. ಎಲ್ಲರಿಗೂ ಸಮಾನತೆ ದೊರಕಬೇಕು. ಜ್ಞಾನ, ಸಂಪತ್ತು ಲಭಿಸಬೇಕು. ಸಮಾನತೆ ಇರಬೇಕು ಎಂಬುದೇ ಆದರ್ಶ, ಈ ಆದರ್ಶವನ್ನು ರೂಪಿಸಲು ಅಗತ್ಯವಿರುವ ನಿಯಮಗಳನ್ನು ರಚಿಸುವುದು ಸದ್ದಮ್ಮದ ಹೊಣೆಗಾರಿಕೆ ಎಂದು ಬುದ್ಧ ಹೇಳುತ್ತಾರೆ.

ಬುದ್ಧನ ನೆಲ ಎಂದು ಕರೆಸಿಕೊಳ್ಳುವ ನಮ್ಮ ಭಾರತದಲ್ಲಿ ಇಂದು ಧರ್ಮ, ಜಾತಿ, ವರ್ಗ, ಲಿಂಗ, ವರ್ಣ ಹಾಗೂ ಇನ್ನೂ ಹಲವಾರು ವಿಷಯಗಳಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ದಿನೇ ದಿನೇ ಒಂದು ಧರ್ಮಕ್ಕೆ ಮತ್ತೊಂದು ಧರ್ಮದ ಮೇಲೆ ವಿನಾಕಾರಣ ದ್ವೇಷ ಹೆಚ್ಚುತ್ತಿದೆ. ಪ್ರೀತಿಯ ಹಾದಿ ತುಳಿದವರ ಹತ್ಯೆಯಾಗುತ್ತಿದೆ, ಹೆಣ್ಣನ್ನು ದೇವತೆಗೆ ಹೋಲಿಸುವ ನೆಲದಲ್ಲಿ ಆಕೆ ಬೆತ್ತಲಾಗುತ್ತಿದ್ದಾಳೆ, ಜಾತಿಗಳ ಹೆಸರಲ್ಲಿ ಆಗುತ್ತಿರುವ ದೌರ್ಜನ್ಯಗಳಂತೂ ಕ್ರೂರತೆಯ ಮೈಲಿಗಲ್ಲಾಗುತ್ತಿವೆ, ದನಿ ಎತ್ತಿದವರ ದನಿಯನ್ನು ಗುಂಡಿಟ್ಟು ಮೂಕವಾಗಿಸುತ್ತಿದ್ದಾರೆ. ಹಾಗಾದರೆ ಇದಕ್ಕೆಲ್ಲಾ ಕೊನೆ ಇಲ್ಲವೇ ಎಂದು ಹಲವು ಮುಗ್ಧ ಮನಸ್ಸುಗಳು ಯೋಚಿಸುತ್ತಿವೆ. ತಮ್ಮ ಮಕ್ಕಳ ಭವಿಷ್ಯದ ಭಾರತ ನೆನೆದು ಎಷ್ಟೋ ಪೋಷಕರು ಕಂಗಾಲಾಗಿದ್ದಾರೆ. ಆದರೆ ಖಂಡಿತ ಇದೆಲ್ಲದಕ್ಕೂ ಅಂತ್ಯ ಇದ್ದೇ ಇದೆ, ಅದೂ ನಮ್ಮ ಕೈಯಲ್ಲಿ ಇದೆ.

ಕ್ರೂರತ್ವ ಅಳಿದು ಕರುಣೆಯ ಚಿಗುರು ಮೊಳಕೆಯೊಡೆಯುವ ಕಾಲ ಬಂದೇ ಬರುತ್ತದೆ. ಅದಕ್ಕೆ ನಾವು ಶ್ರಮ ಪಡುವ ಅಗತ್ಯವಿದೆ. ಬದಲಾವಣೆ ಜಗದ ನಿಯಮ ಎಂದು ಹೇಳುತ್ತಾರೆ. ಹಾಗಾಗಿ ವಿಷ ಬೀಜ ಹೊಕ್ಕಿರುವ ಮನಸ್ಸುಗಳನ್ನು ಪ್ರೀತಿಯೆಂಬ ಅಮೃತದಿಂದ ಬದಲಿಸಬೇಕಿದೆ. ನಿಜವಾದ ದಮ್ಮದ ಅರ್ಥ ತಿಳಿಸಬೇಕಿದೆ. ಬುದ್ಧನ ಮೈತ್ರಿಭಾವವನ್ನು ಅರ್ಥ ಮಾಡಿಸಬೇಕಿದೆ. ಇದರ ಜೊತೆಗೆ ನಾವು ನಮ್ಮ ಮಕ್ಕಳಿಗೆ ಬುದ್ಧನ ಸಮಾನತೆಯ ಸದ್ದಮ್ಮವನ್ನು ಕಲಿಸಬೇಕಿದೆ. ಕರುಣೆ, ಮೈತ್ರಿಭಾವ, ಪ್ರೀತಿ, ವಿಶ್ವಾಸವನ್ನು ಮನುಷ್ಯ-ಮನುಷ್ಯರ ನಡುವೆ ಮಾತ್ರವಲ್ಲದೆ ಪ್ರಕೃತಿಯೊಂದಿಗೂ ಹೊಂದಬೇಕು ಎನ್ನುವ ಸಕಾರಾತ್ಮಕತೆಯನ್ನು ಮಕ್ಕಳ ಮನಸ್ಸಲ್ಲಿ ಅಚ್ಚೊತ್ತಬೇಕಿದೆ.

ಹೀಗಾದಾಗ ಮಾತ್ರ ಬುದ್ಧನ ಸಮಾನತೆ ಸಾರುವ ಮತ್ತು ಮೈತ್ರಿಭಾವದ ದಮ್ಮವು ದೇಶದಲ್ಲಿ ಬೇರೂರುತ್ತದೆ. ಈ ಬುದ್ಧನ ಮೈತ್ರಿಭಾವಕ್ಕೂ ಭಾರತಕ್ಕೂ ಮತ್ತೊಂದು ರೀತಿಯ ನಂಟಿದೆ. ನಮ್ಮ ಜೀವನಕ್ರಮವೆಂದೇ ಭಾವಿಸುವ ಸಂವಿಧಾನದಲ್ಲಿ ಈ ಮೈತ್ರಿಭಾವ ಈಗಾಗಲೇ ಸೇರಿಕೊಂಡಿದೆ. ಅದು ‘ಬಂಧುತ್ವ’ ಎನ್ನುವ ರೂಪದಲ್ಲಿ. ಈ ಬಂಧುತ್ವ ಎನ್ನುವ ಪದವನ್ನು ಶಿಫಾರಸು ಮಾಡಿ ಪೀಠಿಕೆಯಲ್ಲಿ ಸೇರಿಸಿದ್ದು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರೇ ಆದರೂ, ಅವರಿಗೆ ಪ್ರೇರಣೆಯಾಗಿದ್ದು ಈ ಮೈತ್ರಿಭಾವ (ಪಾಲಿ ಭಾಷೆಯಲ್ಲಿ ಮೆಟ್ಟಾ) ಎನ್ನುವ ಬುದ್ಧನ ಆದರ್ಶ. ಹಾಗಾಗಿ ಬುದ್ಧನ ಮೈತ್ರಿಭಾವ ನಮ್ಮ ಸಂವಿಧಾನದಲ್ಲಿ ಈಗಾಗಲೇ ಅಡಕವಾಗಿದೆ ಹಾಗೂ ನಾವು ಅದನ್ನು ಅಳವಡಿಸಿಕೊಂಡಿದ್ದೇವೆ, ಅದನ್ನು ಆಚರಣೆಗೆ ತರುವ ಕೆಲಸ ಆಗಬೇಕಿದೆ. ಪಾಲನೆಯಾದಾಗ ಬಹುಶಃ ನಾವೆಲ್ಲಾ ಬಯಸುವ ಹಾಗೆ ಭಾರತ ಬುದ್ಧನ ಭೂಮಿ ಆಗುತ್ತದೆ ಮತ್ತು ಸಮ ಸಮಾಜದ ನಿರ್ಮಾಣ ನನಸಾಗುತ್ತದೆ.

ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.

share
ಮೇಘ ರಾಮದಾಸ್‌ಜಿ, ತುಮಕೂರು
ಮೇಘ ರಾಮದಾಸ್‌ಜಿ, ತುಮಕೂರು
Next Story
X