Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಮಾಂಡರ್ ಚಿಟ್ಟೆಯ ಲಾರ್ವಾದ ಅದ್ಭುತ...

ಕಮಾಂಡರ್ ಚಿಟ್ಟೆಯ ಲಾರ್ವಾದ ಅದ್ಭುತ ರಕ್ಷಣಾತ್ಮಕ ತಂತ್ರ!

ನಝೀರ್ ಪೊಲ್ಯನಝೀರ್ ಪೊಲ್ಯ1 Dec 2025 3:03 PM IST
share
ಕಮಾಂಡರ್ ಚಿಟ್ಟೆಯ ಲಾರ್ವಾದ ಅದ್ಭುತ ರಕ್ಷಣಾತ್ಮಕ ತಂತ್ರ!
ಶತ್ರುಗಳಿಂದ ರಕ್ಷಿಸಿಕೊಳ್ಳಲು ಪೀಳಿಗೆಯಿಂದ ಪೀಳಿಗೆ ಕಂಡುಕೊಂಡ ಕಲೆ

ಉಡುಪಿ: ಪ್ರಕೃತಿ ವಿಸ್ಮಯಗಳ ಕಣಜ. ಅದರಲ್ಲೂ ಕಮಾಂಡರ್ ಎಂಬ ಚಿಟ್ಟೆಯ ಲಾರ್ವಾ(ಹುಳು) ಶತ್ರುಗಳಿಂದ ರಕ್ಷಣೆ ಪಡೆದು ಪ್ರಕೃತಿಯಲ್ಲಿ ತನ್ನನ್ನು ಉಳಿಸಿಕೊಳ್ಳಲು ನಡೆಸುವ ಅತ್ಯುತ್ತಮ ರಕ್ಷಣಾತ್ಮಕ ತಂತ್ರಗಳು ಅದ್ಭುತವಾಗಿವೆ. ಈ ಚಿಟ್ಟೆ ತನ್ನ ವಿಶಿಷ್ಟ ಚಲನೆ, ಬಣ್ಣ ಮತ್ತು ಬದುಕುವ ತಂತ್ರಗಳಿಂದ ಪ್ರಕೃತಿಪ್ರಿಯರನ್ನು ಆಕರ್ಷಿಸುತ್ತದೆ.

ಆಕರ್ಷಕ ಬಣ್ಣ: ‘ಕಮಾಂಡರ್’ ಸಾಮಾನ್ಯವಾಗಿ ನಮ್ಮ ಪರಿಸರದಲ್ಲಿ ಕಂಡುಬರುವ ಸುಂದರ ಚಿಟ್ಟೆ. ಇದರ ವೈಜ್ಞಾನಿಕ ಹೆಸರು ಮೋದುಜ ಪ್ರೋಕ್ರಿಸ್. ಇದರ ರೆಕ್ಕೆಗಳ ಅಗಲ 60-75 ಮಿ.ಮೀ. ಮೇಲ್ಭಾಗದಲ್ಲಿ ಕೆಂಪು-ಕಂದು ಬಣ್ಣ, ಮುಂದಿನ ರೆಕ್ಕೆಯ ಕೋಶದಿಂದ ಹಿಂಬದಿಯ ರೆಕ್ಕೆಯ ಮಧ್ಯಭಾಗದವರೆಗೆ ಸ್ಪಷ್ಟವಾದ ಬಿಳಿ ಪಟ್ಟೆ ಕಂಡುಬರುತ್ತದೆ. ರೆಕ್ಕೆಯ ಮೇಲ್ಭಾಗದಲ್ಲಿ ದೊಡ್ಡ ಬಿಳಿ ಕಲೆ ಮತ್ತು ಕೊನೆಯಲ್ಲಿ ಬಿಳಿಯ ಚುಕ್ಕೆಗಳಿವೆ. ವರ್ಣರಂಜಿತವಾದ ಈ ಚಿಟ್ಟೆ ಸಾಕಷ್ಟು ಆಕರ್ಷಕವಾಗಿದೆ. ಗಂಡು-ಹೆಣ್ಣು ಚಿಟ್ಟೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ವೇಗ ಮತ್ತು ಚುರುಕಿನ ಹಾರಾಟ ಇದರ ವಿಶೇಷ. ವಿಶ್ರಾಂತಿಯ ಸಂದರ್ಭ ಎರಡೂ ರೆಕ್ಕೆಗಳನ್ನು ಸಮತಟ್ಟಾಗಿ ಹಿಡಿದಂತಿರುತ್ತದೆ. ಹೂವುಗಳು, ತೇವದ ಜಾಗ, ಹಳಸಿದ ಹಣ್ಣುಗಳು ಹಾಗೂ ಪ್ರಾಣಿಗಳ ಮಲದ ಮೇಲೆ ಕುಳಿತು ರಸ ಹೀರುತ್ತವೆ. ಹೂವುಗಳ ಮೇಲೆ ಅಥವಾ ಮಣ್ಣಿನಲ್ಲಿನ ಲವಣಾಂಶ ಹೀರುವ ಸಂದರ್ಭ ಇವು ರೆಕ್ಕೆಗಳನ್ನು ಹೆಚ್ಚಾಗಿ ಅಲುಗಾಡಿಸುತ್ತದೆ.

ಭಾರತದ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮಘಟ್ಟ, ಈಶಾನ್ಯ ಭಾರತ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಈ ಚಿಟ್ಟೆಗಳು ಕಂಡುಬರುತ್ತವೆ. ಅದೇ ರೀತಿ ಮನೆ ತೋಟಗಳು, ಕೃಷಿ ಪ್ರದೇಶಗಳು, ಅರಣ್ಯದ ಅಂಚುಗಳ ಬಳಿಯೂ ಕಾಣಿಸಿಕೊಳ್ಳುತ್ತವೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಮುಸ್ಸೆಂಡಾ ಫ್ರಾಂಡೋಸಾ ಎಂಬ ಮರದ ಎಲೆಗಳಲ್ಲಿ ಇವು ಮೊಟ್ಟೆಗಳನ್ನು ಇಡುತ್ತವೆ. ಈ ಮರದ ಎಲೆಗಳೇ ಈ ಚಿಟ್ಟೆಯ ಹುಳಗಳ ಆಹಾರ. ಕನ್ನಡದಲ್ಲಿ ಬೆಳ್ಳಂಟ್ಟೆ, ಬಿಲ್ಲೋಟ್ಟಿ ಎಂಬುದಾಗಿಯೂ ಕರೆಯಲಾಗುತ್ತದೆ. ತುಳುವಿನಲ್ಲಿ ಬೊಲ್ಲೆ ತಪ್ಪು ಎಂದು ಕರೆಯುತ್ತಾರೆ. ಅದೇ ರೀತಿ ಈ ಚಿಟ್ಟೆ ಮುಸ್ಸೆಂಡಾ ಫಿಲಿಪ್ಪಿಕಾ ಸಸ್ಯದಲ್ಲೂ ಮೊಟ್ಟೆಗಳನ್ನು ಇಡುತ್ತದೆ. ಈ ಸಸ್ಯ ಬಹುತೇಕ ಮನೆ, ಗಾರ್ಡನ್‌ಗಳಲ್ಲಿ ಬೆಳೆಸಲಾಗುತ್ತದೆ.

ಲಾರ್ವದ ರಕ್ಷಣಾತ್ಮಕ ತಂತ್ರ: ಈ ಚಿಟ್ಟೆಯು ಹಸಿರು ಬಣ್ಣದ ಗೋಲಾಕಾರದ ಮೊಟ್ಟೆಯನ್ನು ತೆಳುವಾದ ಮತ್ತು ಮೃದುವಾದ ಎಲೆಯ ತುದಿಯಲ್ಲಿ ಇಡುತ್ತದೆ. ಸಾಮಾನ್ಯವಾಗಿ ನೆಲದ ಸಮೀಪ ಇರುವ ಸಣ್ಣ ಗಿಡಗಳು ಅಥವಾ ಎಲೆಗಳನ್ನೇ ಮೊಟ್ಟೆಗಳನ್ನು ಇಡಲು ಇವು ಆಯ್ಕೆ ಮಾಡುತ್ತವೆ.

ಮೊಟ್ಟೆಯಿಂದ ಹೊರ ಬರುವ ಲಾರ್ವಾ(ಹುಳು) ಎಲೆಯ ತುದಿಯನ್ನು ತಿಂದು, ಎಲೆಯ ಮಧ್ಯನಾಳ(ಮಿಡ್ ರಿಬ್)ವನ್ನು ಬಿಟ್ಟು ಬಿಡುತ್ತದೆ. ಇದರಿಂದ ಎಲೆಯ ಮಧ್ಯನಾಳ ಒಣಗಿ ಕಂದುಬಣ್ಣಕ್ಕೆ ತಿರುಗುತ್ತದೆ. ಮುಂದೆ ಈ ಒಣಗಿದ ಎಲೆಯ ತುದಿಯ ಮೇಲೆ ಕುಳಿತು ಕೊಳ್ಳುವ ಈ ಹುಳ, ತನ್ನ ಮಲವನ್ನು ತಾನೇ ಹೊರಸೂಸುವ ರೇಷ್ಮೆ ಬಲೆಯೊಂದಿಗೆ ಸಿಲುಕಿಸಿ, ಅದನ್ನು ಎಲೆಯ ಮಧ್ಯನಾಳ ಮೇಲೆ ಅಂಟಿಸಿಕೊಳ್ಳುತ್ತದೆ. ಇದರಿಂದ ಎಲೆಯ ಮಧ್ಯನಾಳದ ಉದ್ದ ಹೆಚ್ಚಿ ದಂತೆ ಕಾಣುತ್ತದೆ.

ಈ ಮೂಲಕ ಮಲದ ಸರಪಳಿಯನ್ನು ನಿರ್ಮಿಸಿಕೊಳ್ಳುತ್ತದೆ. ಹುಳ ಮತ್ತೆ ಅವುಗಳ ಮಧ್ಯದಲ್ಲಿ ಬೆರೆತು ತನ್ನನ್ನು ಮರೆಮಾಚಿಕೊಳ್ಳುತ್ತದೆ. ಈ ರಚನೆಯು ದೈಹಿಕ ಮತ್ತು ರಾಸಾಯನಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಹುಳದ ವಾಸನೆಯನ್ನು ತಡೆದು, ಇರುವೆ ಮತ್ತು ಇತರ ಕೀಟಗಳು ಹಾಗೂ ಶತ್ರುಗಳಿಂದ ದೂರ ಇಡುತ್ತದೆ.

ವಿಶ್ರಾಂತಿ ಸಂದರ್ಭದಲ್ಲಿ ಹುಳ ತನ್ನ ತಲೆಯನ್ನು ಬದಿಗೆ ಮಡಿಸಿಕೊಂಡು, ಹಕ್ಕಿಯ ಮಲ ಅಥವಾ ಒಣಗಿದ ದೊಡ್ಡಿಯಂತೆ ತೋರಿಸಿಕೊಳ್ಳುತ್ತದೆ. ಕ್ರಮೇಣ ಹುಳ ಆ ಎಲೆಗಳನ್ನು ತಿಂದು ಬಿಡುತ್ತದೆ. ಮುಂದೆ ಹುಳ ಪೂರ್ಣ ಪ್ರಮಾಣದಲ್ಲಿ ಬೆಳೆದು, ಕೋಶವಾಗಿ ಪರಿವರ್ತನೆಗೊಳ್ಳಲು ಎಲೆಯ ಕೆಳಭಾಗ ಅಥವಾ ಮರದ ಇತರ ಗಟ್ಟಿಭಾಗಗಳನ್ನು ಆಯ್ದುಕೊಳ್ಳುತ್ತದೆ. ಈ ಕೋಶವು ಒಣ ಕೊಂಬಿನ ತುಂಡಿನಂತೆ ಗೋಚರಿಸುತ್ತದೆ. ಈ ಹಂತದಲ್ಲಿ ಹುಳ ಸಂಪೂರ್ಣ ಚಿಟ್ಟೆಯಾಗಿ ರೂಪಾಂತರಗೊಳ್ಳುತ್ತದೆ.

‘ಬಹುಶಃ ಬಹುಕಾಲ ಹಿಂದೆ ಕಮಾಂಡರ್ ಚಿಟ್ಟೆಯ ಹುಳಗಳು ಆಕಸ್ಮಿಕವಾಗಿ ತಮ್ಮ ಮಲವನ್ನು ಎಲೆಯ ಮಧ್ಯನಾಳ(ಮಿಡ್‌ರಿಬ್)ದ ಮೇಲೆ ಬಿಟ್ಟಿರಬಹುದು. ಆ ಮಲದ ತುಂಡುಗಳು ಸಣ್ಣ ಪರಭಕ್ಷಗಳನ್ನು ಮುಂದೆ ಸಾಗದಂತೆ ಅಡ್ಡ ಹಾಕಿದರಿಂದ, ಆ ಹುಳಗಳು ಸ್ವಲ್ಪ ಹೆಚ್ಚು ಬದುಕುವ ಅವಕಾಶ ಪಡೆದಿರಬಹುದು. ಆಕಸ್ಮಿಕವಾಗಿ ಪ್ರಾರಂಭವಾದ ಈ ಪ್ರಕ್ರಿಯೆ ಕ್ರಮೇಣ ಪೀಳಿಗೆಗಳಿಂದ ಪೀಳಿಗೆಗೆ ಸಾಗುವಾಗ ವಿಶ್ವಾಸಾರ್ಹ ರಕ್ಷಣಾ ತಂತ್ರವಾಗಿ ಬದಲಾಗಿರಬಹುದು. ಬದುಕಲು ತ್ಯಾಜ್ಯ ಕೂಡ ಒಂದು ಆಯುಧವಾಗಬಹುದು ಎಂಬುದನ್ನು ಇದು ತೋರಿಸುತ್ತದೆ’

-ಸಮ್ಮಿಲನ್ ಶೆಟ್ಟಿ, ಸಮ್ಮಿಲನ್ ಚಿಟ್ಟೆ ಪಾರ್ಕ್, ಬೆಳುವಾಯಿ

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X