Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗದ್ದಲದ ಜಗತ್ತಿನಲ್ಲೊಂದು ಕೌಡಹಳ್ಳಿಯ ಮೌನ...

ಗದ್ದಲದ ಜಗತ್ತಿನಲ್ಲೊಂದು ಕೌಡಹಳ್ಳಿಯ ಮೌನ ಲೋಕ

ಮಲ್ನಾಡ್ ಮೆಹಬೂಬ್ಮಲ್ನಾಡ್ ಮೆಹಬೂಬ್9 March 2026 9:12 AM IST
share
ಗದ್ದಲದ ಜಗತ್ತಿನಲ್ಲೊಂದು ಕೌಡಹಳ್ಳಿಯ ಮೌನ ಲೋಕ
ಶ್ರವಣ ದೋಷವುಳ್ಳ ಮಕ್ಕಳಿಂದ ಆತ್ಮಸ್ಥೈರ್ಯದ ಪಾಠ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಒಂದು ವಿಭಿನ್ನ ಲೋಕವಿದೆ. ಅಲ್ಲಿ ಗದ್ದಲವಿಲ್ಲ, ಮೌನವೇ ಭಾಷೆ. ಶಬ್ದಗಳು ಮಕ್ಕಳ ಕಿವಿಗೆ ತಲುಪುವುದಿಲ್ಲ. ಆದರೆ ಅವರ ಕಣ್ಣುಗಳಲ್ಲಿ ಮಿನುಗುವ ಕನಸುಗಳು ನಮ್ಮ ಅಂತರಾತ್ಮದ ಬಾಗಿಲು ತಟ್ಟುತ್ತವೆ. ಇದು ಕಿವುಡ, ಮೂಕ ಎಂಬ ಹೀಗಳಿಕೆಯನ್ನು ಹಿರಿಮೆಯನ್ನಾಗಿಸಿಕೊಂಡ ಮಾನವೀಯತೆಯ ಮೌನ ಲೋಕ.

ಇಲ್ಲಿ ಕಣ್ಣುಗಳು ಮಾತನಾಡುತ್ತವೆ. ಸಂಜ್ಞೆಗಳು ಕಾವ್ಯವಾಗುತ್ತವೆ. ನಗುವೊಂದು ಭಾಷೆಯಾಗಿ ಹೃದಯಕ್ಕೆ ನೇರವಾಗಿ ತಲುಪುತ್ತದೆ. ಒಂದೊಂದು ಮುಖವೂ ಬೆಳಗಿನ ಸೂರ್ಯ. ಒಂದೊಂದು ನಗು ಹುಣ್ಣಿಮೆ ಚಂದ್ರ. ಕನಸುಗಳು, ಭರವಸೆಗಳು ಇಲ್ಲಿಯ ಮಕ್ಕಳ ಕಣ್ಣಲ್ಲಿ ಮಿನುಗುತ್ತವೆ.

ವಿಕಲತೆ ಶಾಪವಲ್ಲ: ಉಪೇಕ್ಷೆಯೇ ಶಾಪ. ಆ ಶಾಪವನ್ನು ಮುರಿದು ಸಮಾನತೆಯ ಸೇತುವೆ ಕಟ್ಟುವುದು ಈ ಜಗತ್ತಿನ ಬಹುದೊಡ್ಡ ಸೇವೆ.

ಶಿಕ್ಷಣವೇ ಶಕ್ತಿ: ಮಾತಾಡಲು ಆಗದ, ಕಿವಿ ಕೇಳಿಸದ ಮಗು ಓದಲು ಮುಂದಾದಾಗ ಕಣ್ಣುಗಳಲ್ಲಿ ಕನಸಿನ ಬೆಳಕು ಹೊತ್ತಿಕೊಳ್ಳುತ್ತದೆ. ಆ ಬೆಳಕು ಒಂದು ಕುಟುಂಬಕ್ಕೆ ಆಸರೆಯಾಗುತ್ತದೆ. ಒಂದು ಮನೆ ಬೆಳಗಿದರೆ, ಸಮಾಜ ಬಲಿಷ್ಠವಾಗುತ್ತದೆ.

ಇಲ್ಲಿನ ಶಿಕ್ಷಕರು ಕೇವಲ ಬೋಧಕರು ಅಲ್ಲ ಅವರು ದೀಪಗಳು. ಮೌನದೊಳಗಿನ ದಾರಿಗಳಿಗೆ ಬೆಳಕು ಹಚ್ಚುವವರು. ಇಲ್ಲಿ ಮಕ್ಕಳಿಗೆ ಕೇವಲ ಪಾಠವಲ್ಲ, ಬದುಕು ಕಲಿಸಲಾಗುತ್ತದೆ. ಭಯವಲ್ಲ, ಆತ್ಮಸ್ಥೈರ್ಯ ಮೂಡಿಸಲಾಗುತ್ತದೆ. ಅಸಹಾಯಕತೆ ಅಲ್ಲ, ಸಮರ್ಥತೆ, ಕೌಶಲ್ಯ ನೀಡಲಾಗುತ್ತದೆ.

ಸೌಲಭ್ಯಗಳು: ಉಚಿತ ಊಟ ಉಚಿತ ವಸತಿ ಪುಸ್ತಕ ಮತ್ತು ಬಟ್ಟೆ, ಮಾತಿನ ಅಭ್ಯಾಸ, ಕಂಪ್ಯೂಟರ್ ಮತ್ತು ಚಿತ್ರಕಲೆ ತರಬೇತಿ. ಬಿಸಿನೀರಿನ ಸ್ನಾನ ಈ ಎಲ್ಲವೂ ದಾನಿಗಳ ನೆರವಿನಿಂದ ನಡೆಯುತ್ತಿದೆ. ಅಲ್ಪ ಅನುದಾನ, ಅಪಾರ ನಂಬಿಕೆ ಈ ಸಂಸ್ಥೆಯ ಬಲ.

ಸಮಾಜದ ಪಾತ್ರ: ಇವರನ್ನು ನೋಡಿ ಕೇವಲ ಕನಿಕರ ತೋರಿಸಬೇಡಿ. ದೂರ ನಿಂತು ನೋಡುವುದು ಸಹಾಯವಲ್ಲ. ಇವರಿಗೆ ಬೇಕಿರುವುದು ದಯೆಯ ನೋಟವಲ್ಲ ಜೊತೆಗೆ ನಿಲ್ಲುವ ಕೈ. ಅವಕಾಶ ನೀಡುವ ಮನಸ್ಸು. ಬದುಕಿನ ಪಥದಲ್ಲಿ ಹೆಜ್ಜೆಗೂ ಹೆಜ್ಜೆಗೂ ಜೊತೆಯಾಗುವ ಮಾನವೀಯ ಸಹಕಾರ.

ರಾಜ್ಯ ಮಟ್ಟದ ಪ್ರಶಸ್ತಿಗಳು ಈ ಸಂಸ್ಥೆಗೆ ಲಭಿಸಿವೆ. ಆದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಈ ಮಕ್ಕಳ ನಗುವಿನಲ್ಲಿ ಇದೆ. ಸ್ವಾವಲಂಬನೆಯ ಕನಸಿನಲ್ಲಿ ಇದೆ. ಮುಖ್ಯವಾಹಿನಿಗೆ ಹೆಜ್ಜೆ ಇಡುವ ಅವರ ಧೈರ್ಯದಲ್ಲಿದೆ.

ಅಪಾರ ಕನಸುಗಳೊಂದಿಗೆ ಆರಂಭವಾದ ಪಯಣ ಇಂದು ನೂರಾರು ಮಕ್ಕಳ ಬದುಕಿಗೆ ದಾರಿ ತೋರಿಸಿದೆ. ಈ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ಬೇಕು. ಒಂದು ನೆರವು, ಒಂದು ಮಗುವಿನ ನಾಳೆಯ ಭವಿಷ್ಯವಾಗಬಹುದು.

-ರವಿ ಕುಮಾರ್, ಕಾರ್ಯದರ್ಶಿ ಎನ್.ಕೆ. ಗಣಪಯ್ಯ ರೋಟರಿ ಶ್ರವಣ ದೋಷವುಳ್ಳ ಮಕ್ಕಳ ಶಾಲೆ ಸಕಲೇಶಪುರ

share
ಮಲ್ನಾಡ್ ಮೆಹಬೂಬ್
ಮಲ್ನಾಡ್ ಮೆಹಬೂಬ್
Next Story
X