Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಸುಲ್ತಾನನ ಸಭಾಂಗಣ’ ವಿಜಯಪುರದ ಆಸಾರ್...

‘ಸುಲ್ತಾನನ ಸಭಾಂಗಣ’ ವಿಜಯಪುರದ ಆಸಾರ್ ಮಹಲ್

ಖಾಜಾಮೈನುದ್ದೀನ್ ಪಟೇಲ್ಖಾಜಾಮೈನುದ್ದೀನ್ ಪಟೇಲ್25 Aug 2026 9:30 AM IST
share
‘ಸುಲ್ತಾನನ ಸಭಾಂಗಣ’ ವಿಜಯಪುರದ ಆಸಾರ್ ಮಹಲ್

ವಿಜಯಪುರ: ಪ್ರವಾದಿ ಮುಹಮ್ಮದ್ ಅವರ ಜನ್ಮಸ್ಮರಣೆಯ ಅಂಗವಾಗಿ ಆಚರಿಸಲಾಗುವ ಮಿಲಾದುನ್ನಬಿ ಸಂದರ್ಭದಲ್ಲಿ ವಿಜಯಪುರದ ಐತಿಹಾಸಿಕ ಆಸಾರ್ ಮಹಲ್ ವಿಶೇಷ ಧಾರ್ಮಿಕ ಮಹತ್ವ ಪಡೆದುಕೊಳ್ಳುತ್ತದೆ. ಸುಮಾರು ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಈ ಭವ್ಯ ಕಟ್ಟಡವು ಆದಿಲ್ ಶಾಹಿ ಕಾಲದ ವಾಸ್ತುಶಿಲ್ಪ, ಪರ್ಷಿಯನ್ ಕಲಾ ಪರಂಪರೆ, ಧಾರ್ಮಿಕ ಆಚರಣೆ ಹಾಗೂ ವಿಜಯಪುರದ ಬಹುಸಾಂಸ್ಕೃತಿಕ ಬದುಕಿನ ಪ್ರಮುಖ ಸಂಕೇತವಾಗಿದೆ.

ಆಸಾರ್ ಮಹಲ್‌ನ ಪ್ರಮುಖ ಧಾರ್ಮಿಕ ವಿಶೇಷತೆಗಳಲ್ಲಿ ಪ್ರವಾದಿ ಮುಹಮ್ಮದ್ ಅವರ ಪವಿತ್ರ ಗಡ್ಡವೆಂದು ಭಕ್ತರು ನಂಬುವ ‘ಮೋಯಿ-ಎ-ಮುಬಾರಕ್’ ಕೂಡ ಒಂದು. ಐತಿಹಾಸಿಕ ಪರಂಪರೆಯ ಪ್ರಕಾರ, ಕ್ರಿ.ಶ. 1596ರಲ್ಲಿ ಮದೀನಾ ಮುನವ್ವರದಿಂದ ದನ್ನು ವಿಜಯಪುರಕ್ಕೆ ತರಲಾಯಿತು. ಆದಿಲ್ ಶಾಹಿ ಅರಸರ ಕಾಲದಿಂದ ಇದನ್ನು ಗೌರವಪೂರ್ವಕವಾಗಿ ಸಂರಕ್ಷಿಸಲಾಗಿದ್ದು, ಮಿಲಾದುನ್ನಬಿಯಂತಹ ನಿರ್ದಿಷ್ಟ ಧಾರ್ಮಿಕ ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ವಿಜಯಪುರದ ಆಸಾರ್ ಮಹಲ್ ಸುಮಾರು ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಆದಿಲ್ ಶಾಹಿ ಕಾಲದ ಪ್ರಮುಖ ಕಟ್ಟಡವಾಗಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ, 17ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನ್ ಮುಹಮ್ಮದ್ ಆದಿಲ್ ಶಾಹಿ 2 ಅವರ ಕಾಲದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿತು. ಕ್ರಿ.ಶ. 1646ರ ಸುಮಾರಿಗೆ ಪ್ರಜೆಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ಭವ್ಯ ಕಟ್ಟಡವನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಆರಂಭದಲ್ಲಿ ಇದು ರಾಜನ ಸಾರ್ವಜನಿಕ ನ್ಯಾಯಸಭೆಯಾಗಿ ಬಳಕೆಯಾಗುತ್ತಿತ್ತು. ಈ ಕಾರಣದಿಂದ ಇದನ್ನು ‘ದಾದ್ ಮಹಲ್’ (ನ್ಯಾಯ ಸಭಾಂಗಣ) ಎಂದೂ ಕರೆಯಲಾಗುತ್ತಿತ್ತು.

ಕಾಲಕ್ರಮೇಣ ಪವಿತ್ರ ಗಡ್ಡದ ಸಂರಕ್ಷಣೆಯೊಂದಿಗೆ ಕಟ್ಟಡದ ಧಾರ್ಮಿಕ ಮಹತ್ವ ಹೆಚ್ಚಾಯಿತು. ನ್ಯಾಯಸಭೆಯಾಗಿ ಆರಂಭಗೊಂಡ ಕಟ್ಟಡವು ನಂತರ ಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪಾಂತರಗೊಂಡಿತು.

ಮರದ ಕಂಬಗಳ ಅಪರೂಪದ ವಾಸ್ತುಶಿಲ್ಪ :

ವಿಜಯಪುರದ ಆದಿಲ್ ಶಾಹಿ ಸ್ಮಾರಕಗಳು ಬಹುಪಾಲು ಕಲ್ಲಿನ ನಿರ್ಮಾಣಕ್ಕೆ ಹೆಸರುವಾಸಿಯಾಗಿದ್ದರೂ, ಆಸಾರ್ ಮಹಲ್ ನ ಬೃಹತ್ ತೇಗದ ಮರದ ಕಂಬಗಳು ಅದರ ವಾಸ್ತುಶಿಲ್ಪದ ವೈಶಿಷ್ಟ್ಯವನ್ನು ಹೆಚ್ಚಿಸುತ್ತವೆ. ದಖ್ಖನ್ ಶೈಲಿಯ ಇಸ್ಲಾಮಿಕ್ ವಾಸ್ತುಶಿಲ್ಪದಲ್ಲೇ ಇಂತಹ ಮರದ ರಚನೆ ಅಪರೂಪದ್ದಾಗಿದೆ.

ಮಹಲ್‌ನ ಮೇಲ್ಭಾಗದ ಕೊಠಡಿಗಳಲ್ಲಿ 17ನೇ ಶತಮಾನದ ಪರ್ಷಿಯನ್ ಕಲಾವಿದರು ಬಿಡಿಸಿದ ಅಪರೂಪದ ಗೋಡೆ ವರ್ಣಚಿತ್ರಗಳಿವೆ. ಧಾರ್ಮಿಕ ಸ್ಮಾರಕಗಳಲ್ಲಿ ಇಂತಹ ಕಲಾತ್ಮಕ ಚಿತ್ರಗಳನ್ನು ಕಾಣುವುದು ವಿಜಯಪುರದ ಇತಿಹಾಸದಲ್ಲಿ ವಿಶೇಷವಾಗಿದೆ. ಈ ಚಿತ್ರಗಳು ಅಂದಿನ ಕಲಾ ಪರಂಪರೆ ಹಾಗೂ ಪರ್ಷಿಯನ್ ಸಾಂಸ್ಕೃತಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ.

ಮಹಲ್‌ನ ಮುಂಭಾಗದಲ್ಲಿರುವ ಹೊಂಡವೂ (ಕಲ್ಯಾಣಿ) ಮತ್ತೊಂದು ಆಕರ್ಷಣೆ. ಆದಿಲ್ ಶಾಹಿ ಕಾಲದ ಭೂಗತ ಅಂತರ್ಜಲ ಕಾಲುವೆ ಮೂಲಕ ನೀರು ಹರಿದುಬರುತ್ತಿದ್ದು, ಇದರಿಂದಾಗಿ, ಅತ್ಯಂತ ಭೀಕರ ಬೇಸಿಗೆಯಲ್ಲಿಯೂ ಈ ಹೊಂಡ ಬತ್ತುವುದಿಲ್ಲ .

ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಆಸಾರ್ ಮಹಲ್: ಆಸಾರ್ ಉರೂಸ್ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿ ಮಹಲ್ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮುಂಭಾಗದ ಹೊಂಡದಲ್ಲಿ ಅಲಂಕರಿಸಿದ ಪುಟ್ಟ ದೋಣಿಗಳಲ್ಲಿ ದೀಪಗಳನ್ನು ಇರಿಸಿ ನೀರಿನಲ್ಲಿ ತೇಲಿಬಿಡುವ ಸಂಪ್ರದಾಯವೂ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ನೀರಿನ ಮೇಲೆ ಪ್ರತಿಬಿಂಬಿಸುವ ದೀಪಗಳ ಬೆಳಕು ಹಾಗೂ ದೀಪಾಲಂಕೃತ ಮಹಲ್ ಉರುಸ್ನ ವಾತಾವರಣಕ್ಕೆ ವಿಶೇಷ ಮೆರುಗು ನೀಡುತ್ತದೆ.

ಮಿಲಾದುನ್ನಬಿ ಮತ್ತು ಆಸಾರ್ ಉರೂಸ್ ಸಂದರ್ಭದಲ್ಲಿ ವಿಜಯಪುರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಕೇವಲ ಒಂದು ಸಮುದಾಯದ ಆಚರಣೆಗಳಿಗೆ ಸೀಮಿತವಾಗದೆ ನಗರದ ಬಹುಸಾಂಸ್ಕೃತಿಕ ಪರಂಪರೆಯನ್ನೂ ಪ್ರತಿಬಿಂಬಿಸುತ್ತವೆ.

ಹಜರತ್ ಹಾಸಿಂಪೀರ್ ದರ್ಗಾದಿಂದ ಆರಂಭವಾಗುವ ಶೋಭಾಯಾತ್ರೆ ಗೋಲಗುಮ್ಮಟ, ಜಾಮಿಯಾ ಮಸೀದಿ ಹಾಗೂ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗುತ್ತದೆ. ಕವ್ವಾಲಿ, ನಾತ್ ಗೀತೆಗಳು, ಮದೀನಾ ಕ್ಷೇತ್ರದ ಸುಂದರ ಮಾದರಿಗಳು ಮತ್ತು ಹೂಮಳೆ ಸುರಿಯುತ್ತಾ ಮೆರವಣಿಗೆಯನ್ನು ಸ್ವಾಗತಿಸುವ ವಿವಿಧ ಸಮುದಾಯಗಳ ಜನರು ಈ ಆಚರಣೆಯ ಭಾಗವಾಗಿದ್ದಾರೆ.

ವಿವಿಧ ಸಮುದಾಯಗಳ ಜನರ ಭಾಗವಹಿಸುವಿಕೆ ಈ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಿದ್ದು, ವಿಜಯಪುರದ ಐತಿಹಾಸಿಕ ಕೋಮು ಸೌಹಾರ್ದತೆಗೆ ಇದು ಜೀವಂತ ಉದಾಹರಣೆಯಾಗಿದೆ.

ನಾಲ್ಕು ಶತಮಾನಗಳ ಇತಿಹಾಸ, ಆದಿಲ್ ಶಾಹಿ ವಾಸ್ತುಶಿಲ್ಪ,ಪರ್ಷಿಯನ್ ಕಲಾ ಪರಂಪರೆ ಹಾಗೂ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿರುವ ಆಸಾರ್ ಮಹಲ್ ವಿಜಯಪುರದ ಇತಿಹಾಸ ಮತ್ತು ಸಾಂಸ್ಕೃತಿಕ ವೈವಿಧ್ಯದ ವಿಶಿಷ್ಟ ಸಂಕೇತವಾಗಿ ಇಂದಿಗೂ ಉಳಿದಿದೆ.

ಆಸಾರ್ ಮಹಲ್ ವಿಜಯಪುರದ ಇತಿಹಾಸ ಮತ್ತು ಸಾಂಸ್ಕೃತಿಕ ವೈವಿಧ್ಯದ ವಿಶಿಷ್ಟ ಸಂಕೇತವಾಗಿ ಇಂದಿಗೂ ಉಳಿದಿದೆ.

Tags

Vijayapura
share
ಖಾಜಾಮೈನುದ್ದೀನ್ ಪಟೇಲ್
ಖಾಜಾಮೈನುದ್ದೀನ್ ಪಟೇಲ್
Next Story
X