Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಉತ್ತರ ಕನ್ನಡದಲ್ಲಿ ‘ಅಣಬೆ’ಗೆ ಎಲ್ಲಿಲ್ಲದ...

ಉತ್ತರ ಕನ್ನಡದಲ್ಲಿ ‘ಅಣಬೆ’ಗೆ ಎಲ್ಲಿಲ್ಲದ ಬೇಡಿಕೆ

ನಾಗರಾಜ ಮಂಜಗುಣಿನಾಗರಾಜ ಮಂಜಗುಣಿ24 Aug 2026 2:46 PM IST
share
ಉತ್ತರ ಕನ್ನಡದಲ್ಲಿ ‘ಅಣಬೆ’ಗೆ ಎಲ್ಲಿಲ್ಲದ ಬೇಡಿಕೆ

ಅಂಕೋಲಾ: ಮಳೆಗಾಲದಲ್ಲಿ ಭೂಮಿ ಹಚ್ಚಹಸಿರಾಗಿ ಕಾಣುವುದರ ಜತೆಗೆ ಹಲವು ಪ್ರಭೇದಗಳು ಜನ್ಮ ತಾಳುತ್ತವೆ. ಅಂತಹ ವಿಶಿಷ್ಟ ಪ್ರಭೇದಗಳಲ್ಲಿ ಶಿಲೀಂದ್ರ ಜಾತಿಗೆ ಸೇರಿಗೆ ಅಣಬೆ ಕೂಡ ಒಂದು. ಬಣ್ಣ ಬಣ್ಣದ ಅಣಬೆಗಳು ಈಗ ಉತ್ತರ ಕನ್ನಡ ಜಿಲ್ಲೆ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ಗೋಚರಿಸುತ್ತವೆ.

ಹೆಚ್ಚಾಗಿ ಬಿಳಿ ಬಣ್ಣದ ಅಣಬೆಗಳೇ ಕಂಡುಬರುತ್ತಿದ್ದರೂ, ಅಲ್ಲಲ್ಲಿ ಅಪರೂಪಕ್ಕೆ ಕೇಸರಿ, ನಸುಗೆಂಪು, ಹಳದಿ ಹೀಗೆ ವಿವಿಧ ಬಣ್ಣದ ಅಣಬೆಗಳನ್ನು ಕಾಣಬಹುದಾಗಿದೆ. ಹೆಚ್ಚಾಗಿ ದಟ್ಟಾರಣ್ಯಗಳಲ್ಲಿ ಮಾತ್ರ ಬಣ್ಣ ಬಣ್ಣದ ಅಣಬೆಗಳನ್ನು ಕಾಣಲು ಸಾಧ್ಯವಾಗಲಿದ್ದು, ಕುರುಚಲು ಕಾಡುಗಳಲ್ಲಿ ಮತ್ತು ಮನೆಯ ಹಿತ್ತಲಿನಲ್ಲಿ ಕಂಡುಬರುವ ಅಣಬೆಗಳು ಬಿಳಿ ಬಣ್ಣದ್ದಾಗಿದೆ.

ಈ ಅಣಬೆಯು ಮೃದುವಾಗಿದ್ದು, ಇದು ‘ಸಸ್ಯಲೋಕದ ಮಾಂಸ’ ಎಂದೇ ಪ್ರಸಿದ್ಧಿಯಾಗಿದೆ. ಅಣಬೆಯಲ್ಲಿ ವಿಟಮಿನ್ ಬಿ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಹುತ್ತ ಹಾಗೂ ಮೃದು ಮಣ್ಣಿನಲ್ಲಿ ಜನ್ಮತಾಳುತ್ತದೆ. ಮಳೆಗಾಲದಲ್ಲಿ ಮಾತ್ರ ಕಂಡುಬರುವ ಅಣಬೆಯು ರಾತ್ರಿ ಜನ್ಮತಾಳಿ ಮಧ್ಯಾಹ್ನದ ವೇಳೆ ಬಾಡಿಹೋಗುತ್ತದೆ. ಇವುಗಳಲ್ಲಿ ಹಲವು ಪ್ರಭೇದಗಳಿದ್ದು, ಕೆಲವೇ ಪ್ರಭೇದಗಳು ಮಾತ್ರ ಸೇವನೆಗೆ ಯೋಗ್ಯವಾಗಿದೆ. ಇನ್ನುಳಿದ ಅಣಬೆಗಳಲ್ಲಿ ವಿಷಕಾರಕ ಅಂಶಗಳಿರುವುದರಿಂದ ಅವುಗಳನ್ನು ತಿನ್ನುವುದಿಲ್ಲ.

ಆಹಾರಕ್ಕಾಗಿ ಉಪಯೋಗಿಸುವ ಅಣಬೆಗಳಿಗೆ ಭಾರೀ ಬೇಡಿಕೆಯಿರುವುದರಿಂದ ಹೆಚ್ಚು ಹಣವನ್ನು ನೀಡಿ ಖರೀದಿಸುತ್ತಾರೆ. ಮಳೆಗಾಲದಲ್ಲಿ ಮಾತ್ರ ನೈಸರ್ಗಿಕವಾಗಿ ಅಣಬೆ ದೊರೆಯುವುದರಿಂದ ಅರಣ್ಯವಾಸಿಗಳು ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಪಶ್ಚಿಮಘಟ್ಟದ ಅಣಶಿಯ ದಟ್ಟಾರಣ್ಯದಲ್ಲಿ ಕೇಸರಿ ಬಣ್ಣದ ಅಣಬೆ ಕಾಣಸಿಗುತ್ತದೆ. ಸಾಮಾನ್ಯವಾಗಿ ಅಣಬೆಯು ಬಳಿ ಬಣ್ಣದ್ದಿರುವುದರಿಂದ ಈ ಕೇಸರಿ ಬಣ್ಣದ ಅಣಬೆಯು ವಿಶಿಷ್ಟವಾಗಿ ಗೋಚರಿಸುತ್ತದೆ. ಇಂತಹ ಅಣಬೆಯ ಕೇಸರಿ ಬಣ್ಣದ ಪದರನ್ನು ತೆಗೆದು ಆಹಾರಕ್ಕಾಗಿ ಬಳಸುತ್ತಾರೆ. ಅಣಬೆಗೆ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಅದನ್ನು ಕೃತಕವಾಗಿ ಬೆಳೆಯಲು ಪ್ರಾರಂಭಿಸಲಾಯಿತು. ಆದರೆ ಕೃತಕ ಅಣಬೆಗಳು ನೈಸರ್ಗಿಕ ಅಣಬೆಗಳಷ್ಟು ರುಚಿ ಹೊಂದಿರುವುದಿಲ್ಲ. ಜಗತ್ತಿನಲ್ಲಿಯೇ ಚೀನಾದವರು ಅತಿಹೆಚ್ಚು ಕೃತಕ ಅಣಬೆಯನ್ನು ಬೆಳೆಯುತ್ತಾರೆ. ಒಟ್ಟಿನಲ್ಲಿ ಮಳೆಗಾಲದಲ್ಲಷ್ಟೇ ಕಾಣಸಿಗುವ ಅಣಬೆಯು ಸೇವನೆಯ ಜೊತೆಗೆ ನೋಡಲೂ ಆಕರ್ಷಕವಾಗಿರುತ್ತದೆ. ಕಾಡಂಚಿನಲ್ಲಿರುವ ಸಿದ್ದಿ ಸಮುದಾಯದವರು ಹಾಗೂ ಇತರರು ಅಲ್ಲಲ್ಲಿ ಸಿಗುವ ಅಣಬೆಗಳನ್ನು ಸಂಗ್ರಹಿಸಿ ತಂದು ಅಂಕೋಲಾ-ಯಲ್ಲಾಪುರ ಮಾರ್ಗದಲ್ಲಿ ಮಾರಾಟ ಮಾಡುತ್ತಾರೆ. ಗ್ರಾಹಕರು ಮುಗಿಬಿದ್ದು ಖರೀದಿಸುತ್ತಾರೆ.

ಅಂಕೋಲಾ ಮಾರುಕಟ್ಟೆಯಲ್ಲಿಯೂ ಅಣಬೆಗಳ ಮಾರಾಟ ಕಂಡುಬರುತ್ತಿದ್ದು, 100 ಅಣಬೆಗೆ 600 ರಿಂದ 1,000 ರೂ. ಬೆಲೆಯಿದೆ. ಆದರೂ ಜನರು ಅಣಬೆಯ ರುಚಿಗೆ ಹೆಚ್ಚಿನ ಹಣಕೊಟ್ಟು ಖರೀದಿ ಮಾಡುತ್ತಾರೆ.

share
ನಾಗರಾಜ ಮಂಜಗುಣಿ
ನಾಗರಾಜ ಮಂಜಗುಣಿ
Next Story
X