Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಸ್‌ಐಆರ್ ಬಗ್ಗೆ ಜನರಲ್ಲಿ ಜಾಗೃತಿ...

ಎಸ್‌ಐಆರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ

ನಂದಕುಮಾರ್ ಕುಂಬ್ರಿಉಬ್ಬುನಂದಕುಮಾರ್ ಕುಂಬ್ರಿಉಬ್ಬು21 May 2026 12:55 PM IST
share
ಎಸ್‌ಐಆರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ

ಈಗಿನ ಎಸ್‌ಐಅರ್ ಅನ್ನು ಪ್ರತ್ಯೇಕವಾಗಿ ನೋಡದೆ ಒಟ್ಟಾರೆಯಾಗಿ ಈ ದೇಶದಲ್ಲಿ ಸಿಎಎ, ಎನ್‌ಪಿಆರ್, ರೈತ ಕಾಯ್ದೆಗಳು, ಎನ್‌ಐಎ, ಯುಎಪಿಎ, ಕಾರ್ಮಿಕ ಕಾಯ್ದೆಗಳು ಮತ್ತವುಗಳ ತಿದ್ದುಪಡಿಗಳು, ಎಂಟು ಗಂಟೆ ಅವಧಿಯ ಕೆಲಸದ ನಿಯಮದ ಬದಲಾವಣೆ, ಭೂ ಸ್ವಾಧೀನಗಳು, ಒಕ್ಕಲೆಬ್ಬಿಸುವಿಕೆ, ಆಧಾರ್ ಜಾರಿಗೊಳಿಸಲೆಂದೇ ರೂಪಿಸಿದ ಪ್ರತ್ಯೇಕ ಸಚಿವಾಲಯ, ಆಧಾರ್ ಹೇರಿಕೆ ಮತ್ತು ಕಡ್ಡಾಯಗೊಳಿಸಿದ್ದು, ಕೊರೋನ ಚುಚ್ಚುಮದ್ದುಗಳನ್ನು ಬಲವಂತವಾಗಿ ಜನರ ಮೇಲೆ ಚುಚ್ಚಿದ್ದು, ಪ್ರಜಾತಂತ್ರವಾದಿಗಳ ಮಾನವ ಹಕ್ಕು ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, ಜನಪರ ಪತ್ರಕರ್ತರು, ವಕೀಲರ ಬಂಧನಗಳು, ಜಾಮೀನು ನೀಡದೇ ಜೈಲಿನಲ್ಲಿ ಹಲವಾರು ವರ್ಷಗಳ ಕಾಲ ವಿಚಾರಣೆ ನಡೆಸದೇ ಕೂಡಿಹಾಕಿರುವುದು, ಜಿಎಸ್‌ಟಿ ಹೇರಿಕೆ, ವಿಪರೀತವಾಗುತ್ತಾ ಸಾಗುತ್ತಿರುವ ಕೇಂದ್ರೀಕರಣಗಳು, ಬರಲಿರುವ ಡಿಲಿಮಿಟೇಶನ್ ಕಾಯ್ದೆಯ ಅನುಷ್ಠಾನ.... ಹೀಗೆ ಹಲವಾರು ಹೇರಿಕೆಗಳು, ಬಲವಂತಗಳು ದೇಶವನ್ನು ಸಂಪೂರ್ಣವಾಗಿ ಫ್ಯಾಶಿಸ್ಟ್ ಆಡಳಿತದಡಿಯಲ್ಲಿ ಹಿಡಿದಿಡಲು ಮಾಡುತ್ತಾ ಬಂದಿರುವ ಇಂಡಿಯಾದ ಆಳುತ್ತಿರುವ ಭಾರೀ ಕಾರ್ಪೊರೇಟು, ಭಾರೀ ಆಸ್ತಿವಂತ ವರ್ಗಗಳ ಕಾರ್ಯಸೂಚಿಗಳಾಗಿವೆ. ಇವನ್ನೆಲ್ಲಾ ಬಿಡಿಬಿಡಿಯಾಗಿ ನೋಡದೆ ಒಟ್ಟಾರೆಯಾಗಿ ನೋಡಿ ಗ್ರಹಿಸಿಕೊಳ್ಳಬೇಕಾದ ಅಗತ್ಯವಿದೆಯೆನಿಸುತ್ತದೆ. ಜನರ ಮಧ್ಯೆಯೂ ಈ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕಿದೆ.

ಈ ನಿಟ್ಟಿನಲ್ಲಿ ತಳಪಾಯದ ಸಮುದಾಯಗಳ ಸಂಘಟನೆಗಳು, ವ್ಯಕ್ತಿಗಳು, ಎಡ ಪಕ್ಷಗಳು, ಜನಪರ ಹಾಗೂ ಪ್ರಜಾತಂತ್ರಪರ ಸಾಹಿತಿ ಕಲಾವಿದರುಗಳು, ಜನಪರ ಪತ್ರಕರ್ತರುಗಳು, ಜನಪರ ಹಾಗೂ ಮಾನವ ಹಕ್ಕುಪರ ವಕೀಲರ ಸಂಘಟನೆಗಳು, ವಕೀಲರು...ಹೀಗೆ ಎಲ್ಲರನ್ನೂ ಒಗ್ಗೂಡಿಸಬಹುದಾದ ಸಾಮಾನ್ಯ ಕಾರ್ಯಸೂಚಿಗಳನ್ನು ರೂಪಿಸುವ ಕೆಲಸವಾಗಬೇಕು.

ಇದಕ್ಕೆ ದೇಶದ ಇಂದಿನ ಇಂತಹ ಪರಿಸ್ಥಿತಿಗಳಿಗೆ ನೇರ ಕಾರಣವಾಗಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂತಹ ರಾಜಕೀಯ ಪಕ್ಷಗಳನ್ನು, ಸಂಘಪರಿವಾರದಂತಹ ಮತ್ತು ಈ ವಲಯಗಳಲ್ಲಿ ಗುರುತಿಸಿಕೊಳ್ಳುತ್ತಾ ಕಾರ್ಯ ನಿರ್ವಹಿಸುತ್ತಿರುವ ಸಕ್ರಿಯ ಶಕ್ತಿಗಳನ್ನು ಹಾಗೂ ಸಂಘಟನೆಗಳನ್ನು ಹೊರತುಪಡಿಸಿ ಇತರ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸುವಂತಹ ರೀತಿಯಲ್ಲಿ ಮುಂಚೂಣಿ ತಂಡವೊಂದು ರೂಪುಗೊಳಿಸಿ ಅದು ಕಾರ್ಯ ನಿರ್ವಹಿಸುವಂತಾಗಬೇಕಿದೆ.

ಬಿಡಿಬಿಡಿಯಾದ ವಿಚಾರಗಳನ್ನು ಎತ್ತಿಕೊಳ್ಳುತ್ತಾ ಬಿಡಿಬಿಡಿಯಾಗಿ ತಮ್ಮ ತಮ್ಮ ಕೇಂದ್ರೀಕೃತ ನೆಲೆಗಳಲ್ಲಿ ಮಾತ್ರ ಪ್ರತಿಭಟನೆ, ಜಾಗೃತಿ ಮೂಡಿಸುವಲ್ಲಿ ಮಾತ್ರ ಗಮನ ನೀಡಲು ಹೋದರೆ ಫ್ಯಾಶಿಸ್ಟೀಕರಣಗಳಿಗೆ ಸಾರಾಂಶದಲ್ಲಿ ಅನುಕೂಲವನ್ನೇ ಕಲ್ಪಿಸಿಕೊಡುತ್ತದೆ. ಜೊತೆಗೆ ಫ್ಯಾಶಿಸ್ಟ್ ವಿರೋಧಿ ಚಟುವಟಿಕೆಗಳು ಬಲಗೊಂಡು ಬೆಳೆಯದೇ ಹೋಗುತ್ತವೆ. ಏಕತೆಯತ್ತ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಹೊರಳಲು ಕೂಡ ತಡೆಗಳನ್ನೊಡ್ಡುತ್ತದೆ.....ಇವೆಲ್ಲದರಿಂದಾಗಿ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುತ್ತದೆ.

ಈ ನಿಟ್ಟಿನಲ್ಲಿ ಚರ್ಚೆಗಳು ನಡೆದು ಮುಂಚೂಣಿ ತಂಡವೊಂದು ರೂಪುಗೊಳ್ಳುವಂತೆ ಆಗಬೇಕು. ಆ ತಂಡ ಇಂತಹ ಎಲ್ಲಾ ಜನ ವಿರೋಧಿ ಹಾಗೂ ಪ್ರಜಾತಂತ್ರವಿರೋಧಿ ಶಕ್ತಿಗಳ ವಿರುದ್ಧ ದನಿಯೆತ್ತುವ ಎಲ್ಲಾ ಶಕ್ತಿಗಳನ್ನು ಒಂದೇ ವೇದಿಕೆಯಡಿ ಒಕ್ಕೂಟ ತತ್ವದಡಿಯಲ್ಲಿ ಸೇರಿ ಕಾರ್ಯ ನಿರ್ವಹಿಸುವಂತಹ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು.

ಈಗ ನಡೆಯುತ್ತಿರುವ ಎಸ್‌ಐಆರ್ ವಿರೋಧಿ ಹೋರಾಟಗಳಲ್ಲಿ ತೊಡಗುತ್ತಲೇ ಇವುಗಳನ್ನು ಕಾರ್ಯಗತಗೊಳಿಸುವತ್ತ ಸಾಗಬೇಕೆನಿಸುತ್ತದೆ.

ಈಗ ಎಸ್‌ಐಆರ್ ರದ್ದಾಗಬೇಕು ಎಂದು ಒಂದು ಕಡೆ ಆಗ್ರಹಿಸುತ್ತಾ ಮತ್ತೊಂದು ಕಡೆ ಎಸ್‌ಐಆರ್ ಅನ್ನು ಜನರಿಗೆ ತೊಂದರೆಯಾಗದಂತೆ ಜಾರಿಗೊಳಿಸಲು ಸರಕಾರದ ಮುಂದೆ ಕಾರ್ಯಸೂಚಿಗಳನ್ನು ಮುಂದಿಡುವಂತಹ ಗೊಂದಲ ಹಾಗೂ ದ್ವಂದ್ವಾತ್ಮಕ ನಿಲುವುಗಳಿಂದ ಹೊರಬರಬೇಕು. ಈ ನಿಲುವು ಅಂತಿಮವಾಗಿ ಎಸ್‌ಐಆರ್ ಪರವಾದ ನಿಲುವೇ ಆಗುತ್ತದೆ ಎಂಬ ಸ್ಪಷ್ಟ ತೀರ್ಮಾನ ಮಾಡಬೇಕು.

ಎಸ್‌ಐಆರ್ ಮೊದಲಿಗೆ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮತ್ತು ಒಕ್ಕೂಟ ವಿರೋಧಿಯೂ ಆಗಿದೆಯೆಂಬುದನ್ನು ಸ್ಪಷ್ಟವಾಗಿ ಸಾರಬೇಕು. ಜನರ ಮತಾಧಿಕಾರವನ್ನು ಕಸಿಯುತ್ತಾ ಹೋಗುವುದೇ ಇದರ ಪ್ರಧಾನ ಉದ್ದೇಶವಾಗಿದೆ. ನಂತರ ಈ ದೇಶದ ಜನರ ಪೌರತ್ವವನ್ನೇ ನಿರಾಕರಿಸಲು ಬಳಸುವ ಸಾಧನವನ್ನಾಗಿ ಇದು ಬಳಸಲ್ಪಡುತ್ತದೆ. ನಾಗರಿಕ ಸವಲತ್ತುಗಳು ನಿರಾಕರಿಸಲ್ಪಡುತ್ತವೆ. ದೇಶದೊಳಗೆ ನಿರಾಶ್ರಿತ ಜನಸಂಖ್ಯೆಗಳನ್ನು ಹೆಚ್ಚಿಸುತ್ತದೆ. (ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ‘ಎಲ್ಲಾ ಸವಲತ್ತು ದಾಖಲೆಗಳು ರದ್ದುಮಾಡಲಾಗುತ್ತದೆ’ ಎಂಬ ಹೇಳಿಕೆಗಳೇ ಇದನ್ನು ಸಾರುತ್ತಿದೆಯಲ್ಲವೇ) ಎನ್ನುವ ಸ್ಪಷ್ಟ ನಿಲುವನ್ನು ಹೊಂದಿ ಅದನ್ನೇ ಜನರ ಮಧ್ಯೆ ಜಾಗೃತಿ ಮೂಡಿಸಬೇಕಿದೆ.

Tags

SIR
share
ನಂದಕುಮಾರ್ ಕುಂಬ್ರಿಉಬ್ಬು
ನಂದಕುಮಾರ್ ಕುಂಬ್ರಿಉಬ್ಬು
Next Story
X