Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕುಂಭಮೇಳದಲ್ಲಿ ಆಪದ್ಬಾಂಧವರಾಗಿ ಮಾನವೀಯತೆ...

ಕುಂಭಮೇಳದಲ್ಲಿ ಆಪದ್ಬಾಂಧವರಾಗಿ ಮಾನವೀಯತೆ ಮೆರೆದವರು...

ಶಶಿಕಾಂತ ಯಡಹಳ್ಳಿಶಶಿಕಾಂತ ಯಡಹಳ್ಳಿ2 Feb 2025 12:50 PM IST
share
ಕುಂಭಮೇಳದಲ್ಲಿ ಆಪದ್ಬಾಂಧವರಾಗಿ ಮಾನವೀಯತೆ ಮೆರೆದವರು...
‘‘ದಯೆವಿಲ್ಲದ ಧರ್ಮ ಅದ್ಯಾವುದಯ್ಯ, ದಯೆಯಿರಬೇಕು ಸಕಲ ಪ್ರಾಣಿಗಳಲ್ಲಿ’’ ಎಂದು ಶರಣರೇ ಸಾರಿದ್ದಾರೆ. ಅಂತಹ ದಯೆಯನ್ನು ಮುಸ್ಲಿಮ್ ಬಾಂಧವರು ಸಾಬೀತು ಪಡಿಸಿದ್ದಾರೆ. ಕೋಮುವ್ಯಾಧಿಪೀಡಿತ ಸಂಘಿ ಸಂತಾನಗಳಿಗೆ ಮಾನವೀಯತೆ ಎಂದರೆ ಧರ್ಮವನ್ನು ಮೀರಿದ್ದು ಎಂದು ತೋರಿಸಿಕೊಟ್ಟಿದ್ದಾರೆ.

ಸನಾತನ ಧರ್ಮದ ಹೆಸರಲ್ಲಿ ಸಂಘಿ ಸರಕಾರ ಪ್ರಾಯೋಜಿತ ಮಹಾಕುಂಭಮೇಳವೆಂಬ ಧಾರ್ಮಿಕ ಜಾತ್ರೆಯಲ್ಲಾದ ಕಾಲ್ತುಳಿತಕ್ಕೆ ಹಲವು ಜನರು ಜೀವಕಳೆದುಕೊಂಡರೆ, ಒಂದಷ್ಟು ಜನ ಗಾಯಗೊಂಡು ನೋವಿನಲ್ಲಿ ನರಳಿದರು.

ಹೆಜ್ಜೆ ಹೆಜ್ಜೆಗೂ ಕ್ಯಾಮರಾಗಳಿವೆ, ಕಂಡಲ್ಲಿ ಪೊಲೀಸರ ಪಹರೆ ಇದೆ ಎಂಬ ಅತಿ ಆತ್ಮವಿಶ್ವಾಸಲ್ಲಿದ್ದ ಉತ್ತರ ಪ್ರದೇಶದ ಯೋಗಿ ಸರಕಾರ ಭಕ್ತ ಸಮೂಹದ ಜನಜಂಗುಳಿಯನ್ನು ನಿಯಂತ್ರಿಸಲಾಗದೆ ಕಂಗಾಲಾಯಿತು. ದಿಢೀರ್ ಸಾವು ನೋವುಗಳಾದಾಗ ಏನು ಮಾಡಬೇಕೆಂಬುದು ತಿಳಿಯದೆ ತ್ರಿವೇಣಿ ಸಂಗಮಕ್ಕೆ ಸಾಗುವ ರಸ್ತೆಗಳನ್ನೆಲ್ಲಾ ಬಂದ್ ಮಾಡಲಾಯಿತು. ಸೇತುವೆಗಳನ್ನು ಹತೋಟಿಗೆ ತೆಗೆದುಕೊಳ್ಳಲಾಯಿತು. ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಯಿತು. ಒಂದು ರೀತಿಯಲ್ಲಿ ಜನರ ಮೇಲೆ ದಿಗ್ಬಂಧನ ವಿಧಿಸಲಾಯಿತು. ಹೈವೇಗಳಲ್ಲಿ ಸಂಚಾರ ದಟ್ಟಣೆ ಯುಂಟಾಗಿ ಟ್ರಾಫಿಕ್ ಜಾಮ್ ಆಗಿತ್ತು. ಯಾತ್ರಾರ್ಥಿಗಳ ಬಸ್‌ಗಳು ದಾರಿ ಮಧ್ಯದಲ್ಲೇ ನಿಂತವು. ಲಕ್ಷಾಂತರ ಭಕ್ತರು ಬೀದಿಗಳಲ್ಲೇ ರಾತ್ರಿ ಕಳೆಯುವಂತಾಗಿತ್ತು.

ಈ ಸರಕಾರಿ ದಿಗ್ಬಂಧನದ ಚಕ್ರವ್ಯೆಹದಲ್ಲಿ ಸಿಲುಕಿಕೊಂಡ ಲಕ್ಷಾಂತರ ಜನ ಭಕ್ತರು ಇದ್ದಲ್ಲೇ ಲಾಕ್ ಆಗಬೇಕಾಯಿತು. ಅಲ್ಲಿಂದ ಪಾರಾಗಿ ಹೋಗುವ ಎಲ್ಲ ದಾರಿಗಳೂ ಮುಚ್ಚಿರುವುದರಿಂದ ಆತಂಕ ಅತಿಯಾಯಿತು. ಎಲ್ಲೂ ಮತ್ತೆ ಕಾಲ್ತುಳಿತ ಉಂಟಾಗಿ ಸಾಯದೆ ಬದುಕಿ ಸುರಕ್ಷಿತವಾಗಿ ಊರು ಸೇರಿದರೆ ಸಾಕಾಗಿತ್ತು. ಕೊರೆಯುವ ಚಳಿ, ನೀರು ಆಹಾರಗಳ ಕೊರತೆ, ಕಾಲ್ತುಳಿತದ ಭಯ, ಜೊತೆಯಾಗಿ ಬಂದವರು ಎಲ್ಲಿ ಜನಜಾತ್ರೆಯಲ್ಲಿ ಕಳೆದು ಹೋಗುತ್ತಾರೋ ಎಂಬ ಆತಂಕ. ಕಳೆದುಕೊಂಡವರನ್ನು ಎಲ್ಲಿ ಹುಡುಕಬೇಕು ಎನ್ನುವ ಹತಾಶೆ. ಹೀಗೆ ಅಸಹಾಯಕತೆ ಅತಿಯಾದಾಗ, ರಕ್ಷಣೆ ಕೊಡಬೇಕಾದ ಸರಕಾರವೇ ಅಘೋಷಿತ ಬೀದಿ ಬಂಧನಕ್ಕೆ ತಳ್ಳಿದಾಗ ದೇವರೇ ಕಾಪಾಡು ಎಂದು ಭಕ್ತರು ಕಾಣದ ದೇವರಿಗೆ ಮೊರೆ ಇಟ್ಟರು.

ಆದರೆ ಆಗ ದೇವರ ರೂಪದಲ್ಲಿ ಬಂದವರು ಆ ಆಪದ್ಬಾಂಧವರು. ಸನಾತನಿ ಸಂಘಿಗಳು ದ್ವೇಷಿಸುವ ಸಮುದಾಯದವರು. ಆ ಪ್ರದೇಶದ ಮಸೀದಿಗಳ ಬಾಗಿಲುಗಳನ್ನು ತೆರೆದರು. ದರ್ಗಾಗಳಷ್ಟೇ ಅಲ್ಲಾ ತಮ್ಮ ಮನೆಗಳ ಬಾಗಿಲುಗಳನ್ನೂ ತೆರೆದು ಆತಂಕಪೀಡಿತರನ್ನು ಒಳಗೆ ಬರಮಾಡಿಕೊಂಡರು. ನೂರಲ್ಲಾ, ಸಾವಿರವಲ್ಲಾ, ಸರಿಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಆಶ್ರಯವನ್ನು ಒದಗಿಸಿದರು. ಚಳಿಗೆ ಕಂಬಳಿಗಳನ್ನು ಕೊಟ್ಟರು, ಮಲಗಲು ಹಾಸಿಗೆಯ ವ್ಯವಸ್ಥೆ ಮಾಡಿದರು, ಹಸಿದವರಿಗೆ ಆಹಾರ ನೀರು ಒದಗಿಸಿದರು. ಅಗತ್ಯ ಇರುವವರಿಗೆ ಔಷಧೋಪಚಾರ ಹಾಗೂ ವೈದ್ಯಕೀಯ ನೆರವನ್ನು ಮಾಡಿಕೊಟ್ಟರು.

ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಾದ ಖುಲ್ದಾಬಾದ್, ನಖ್ಖಸ್ ಕೋಹ್ನಾ, ರೋಷನ್ ಬಾಘ್, ಹಿಕ್ಮತ್ ಗಂಜ್, ರಾಣಿ ಮಂಡಿ ಹಾಗೂ ಶಾಗಂಜ್ ಪ್ರದೇಶದ ಮುಸ್ಲಿಮ್ ನಿವಾಸಿಗಳು ತಮ್ಮ ಮನೆಯಲ್ಲೇ ಹಿಂದೂ ಧರ್ಮೀಯರಿಗೆ ಅನ್ನ, ಆಹಾರ ಆಶ್ರಯ ಕೊಟ್ಟು ಮಾನವೀಯತೆ ಮೆರೆದರು. ಸಂಚಾರ ದಟ್ಟನೆಯಲ್ಲಿ ಸಿಲುಕಿದ ಭಕ್ತರಿಗೂ ಸಹ ಮುಸ್ಲಿಮ್ ಸಮುದಾಯದವರು ಅಗತ್ಯ ವಸ್ತುಗಳನ್ನು ಪೂರೈಸಿದರು, ಸಾರ್ವಜನಿಕ ಅನ್ನ ಸಂತರ್ಪಣೆಯನ್ನೂ ಆಯೋಜಿಸಿದ್ದರು ಎಂದು ‘ದೈನಿಕ್ ಭಾಸ್ಕರ್’ ಪತ್ರಿಕೆ ವಿವರವಾಗಿ ವರದಿ ಮಾಡಿದೆ.

ಇದೇ ಮುಸ್ಲಿಮ್ ಸಮುದಾಯವನ್ನು ಈ ಸನಾತನಿ ಧಾರ್ಮಿಕ ಆಚರಣೆಯಿಂದ ಸಂಘಿ ಸರಕಾರ ದೂರ ಇಟ್ಟಿತ್ತು. ಮಹಾ ಕುಂಭಮೇಳದಲ್ಲಿ ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲವೆಂದು ಪ್ರಕಟಿಸಿ ಹಿಂದುತ್ವವಾದಿ ಮತಾಂಧತೆಯನ್ನು ತೋರ್ಪಡಿಸಲಾಗಿತ್ತು. ಆದರೆ ಹಿಂದೂ ಸಮುದಾಯದ ಯಾತ್ರಾರ್ಥಿಗಳು ತೀವ್ರ ಸಂಕಷ್ಟದಲ್ಲಿದ್ದಾಗ ರಕ್ಷಣೆ ಕೊಡಬೇಕಾದ ಸರಕಾರಗಳೇ ವಿಫಲವಾದಾಗ ಅನ್ಯಧರ್ಮದವರು ಓಡಿ ಬಂದು ಅನ್ನ, ಆಶ್ರಯ ಒದಗಿಸಿದ್ದರ ಹಿಂದೆ ಧಾರ್ಮಿಕತೆಯನ್ನೂ ಮೀರಿದ ಮಾನವೀಯತೆ ಇತ್ತು. ಇಂತಹ ಕಳಕಳಿ ಜಿಹಾದಿಗಳೆಂದು ಆರೋಪಿಸಿ ಒಂದು ಸಮುದಾಯದ ವಿರುದ್ಧ ದ್ವೇಷ ಸಾಧಿಸುವ ಸಂಘಿ ಸಂತಾನಗಳಿಗೆ ಮಾನವೀಯ ಮೌಲ್ಯಗಳ ಪಾಠ ಹೇಳಿಕೊಡುವಂತಿತ್ತು. ಕೋಮು ಸೌಹಾರ್ದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು.

ಯಾವುದೇ ಸಮುದಾಯದ ಜನರು ತೊಂದರೆಯಲ್ಲಿದ್ದಾಗ ಸಹಾಯಹಸ್ತ ಚಾಚುವುದೇ ನಿಜವಾದ ಧರ್ಮ. ‘‘ದಯೆವಿಲ್ಲದ ಧರ್ಮ ಅದ್ಯಾವುದಯ್ಯ, ದಯೆಯಿರಬೇಕು ಸಕಲ ಪ್ರಾಣಿಗಳಲ್ಲಿ’’ ಎಂದು ಶರಣರೇ ಸಾರಿದ್ದಾರೆ. ಅಂತಹ ದಯೆಯನ್ನು ಮುಸ್ಲಿಮ್ ಬಾಂಧವರು ಸಾಬೀತು ಪಡಿಸಿದ್ದಾರೆ. ಕೋಮುವ್ಯಾಧಿಪೀಡಿತ ಸಂಘಿ ಸಂತಾನಗಳಿಗೆ ಮಾನವೀಯತೆ ಎಂದರೆ ಧರ್ಮವನ್ನು ಮೀರಿದ್ದು ಎಂದು ತೋರಿಸಿಕೊಟ್ಟಿದ್ದಾರೆ.

ಇದೆಲ್ಲಾ ಹೇಗೆ ಸಾಧ್ಯ? ಹಿಂದುತ್ವವಾದಿ ಸಂಘಿಗಳ ರೀತಿಯಲ್ಲಿ ಈ ಮುಸ್ಲಿಮ್ ಸಮುದಾಯದವರೂ ದ್ವೇಷ ಸಾಧನೆಗೆ ಮುಂದಾಗಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿತ್ತಾ? ಇಂತಹ ಕಳಕಳಿ ಸಾಧ್ಯವಾಗುವುದು ಎಲ್ಲ ಧರ್ಮಗಳನ್ನೂ ಮೀರಿದ ಮಾನವೀಯತೆಯಲ್ಲಿ ಮಾತ್ರ. ಕಷ್ಟದಲ್ಲಿರುವ ಸಹಜೀವಿಗಳ ಜಾತಿ ಧರ್ಮ ನೋಡದೇ ಮೊದಲು ಸಹಾಯಕ್ಕೆ ಧಾವಿಸುವುದೇ ಮಾನವೀಯ ಧರ್ಮ. ಅದೊಂದೇ ದಯೆ ಇರುವ ಜಗತ್ತಿನ ಧರ್ಮ. ಪ್ರತಿಯೊಬ್ಬ ಮನುಷ್ಯರಲ್ಲೂ ಅಂತರ್ಗತವಾಗಿರುವ ಧರ್ಮಾತೀತ ಧರ್ಮ.

ಮಹಾಕುಂಭಮೇಳದಲ್ಲಿ ಹಿಂದೂ ಭಕ್ತರು ಆತಂಕ, ಸಂಕಷ್ಟದಲ್ಲಿದ್ದಾಗ ಮುಸ್ಲಿಮ್ ಬಾಂಧವರು ತಮ್ಮ ಮನೆ, ಮಸೀದಿಗಳ ಬಾಗಿಲನ್ನೇ ತೆರೆದು ಅನ್ನ, ಆಶ್ರಯ ಕೊಟ್ಟು ತಮ್ಮ ಮಾನವೀಯತೆ ತೋರಿದ್ದಾರೆ. ಅದೇ ರೀತಿ ಎಲ್ಲಿಯೇ ಯಾವುದೇ ಮನುಷ್ಯರು ಸಂಕಷ್ಟದಲ್ಲಿದ್ದರೂ ಜಾತಿ, ಧರ್ಮಗಳನ್ನು ಪಕ್ಕಕ್ಕಿಟ್ಟು ಸಹಾಯ ಮಾಡಲು ಹಿಂದೂ ಸಮುದಾಯದವರು ಮುಂದಾಗಬೇಕಿದೆ. ಕೋಮುಸೌಹಾರ್ದವನ್ನು ದೇಶಾದ್ಯಂತ ಕಾಪಾಡಿಕೊಳ್ಳಬೇಕಿದೆ. ಧರ್ಮದ್ವೇಷದ ಮೂಲಕವೇ ಜನರನ್ನು ಒಡೆದು ಸನಾತನ ಮನು ಸಂಸ್ಕೃತಿಯನ್ನು ಮತ್ತೆ ಹೇರಿಕೆ ಮಾಡಲು ಪ್ರಯತ್ನಿಸುತ್ತಿರುವ ಹಿಂದುತ್ವವಾದಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ. ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದೆ.

share
ಶಶಿಕಾಂತ ಯಡಹಳ್ಳಿ
ಶಶಿಕಾಂತ ಯಡಹಳ್ಳಿ
Next Story
X