ರಾಮನಾಯಕನಹಳ್ಳಿ ರಸ್ತೆಗೆ ದುರಸ್ಥಿ ಭಾಗ್ಯ ಯಾವಾಗ?

ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರು ರಾಮನಯಕನಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನ ಹರ ಸಾಹಸಪಟ್ಟು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೆ.ಅಯ್ಯನಹಳ್ಳಿ ಗ್ರಾಪಂಗೆ ಒಳಪಟ್ಟರುವ ರಾಮ ನಾಯಕನಹಳ್ಳಿ 75 ಮನೆಗಳನ್ನು ಹೊಂದಿದೆ. ಇಲ್ಲಿ ಎಸ್ಸಿ, ಎಸ್ಪಿ ಜನಾಂಗದವರು ವಾಸವಾಗಿದ್ದಾರೆ. ಗ್ರಾಮದಲ್ಲಿ 5ನೇ ತರಗತಿವರೆಗೆ ಶಾಲೆಯಿದ್ದು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆ.ಅಯ್ಯನಹಳ್ಳಿ ಅಥವಾ ಕೊಟ್ಟೂರಿಗೆ ತೆರಳಬೇಕಾಗಿದೆ.
ಕೊಟ್ಟೂರು-ಹರಪನಹಳ್ಳಿ ಮಾರ್ಗದ ಹರಾಳು ಕ್ರಾಸ್ನಿಂದ ರಾಮನಾಯಕನಹಳ್ಳಿ 3 ಕಿ.ಮೀ. ದೂರದಲ್ಲಿದ್ದು.ಈ ಗ್ರಾಮಕ್ಕೆ ಪರ್ಯಾಯ ರಸ್ತೆ ಇಲ್ಲ. ಮಳೆ ಬಂದರೆ ಈ ರಸ್ತೆಯ ಸ್ಥಿತಿ ಹದಗೆಡುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಾಮನಾಯಕನಹಳ್ಳಿ ಗ್ರಾಮದ ರಸ್ತೆ ಸರಿಪಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅನುದಾನ ಬೇರೆಡೆ ವರ್ಗಾವಣೆ :
ಹದಗೆಟ್ಟ ರಸ್ತೆಯಲ್ಲಿ ಗ್ರಾಮಸ್ಥರ ಓಡಾಟ ಗಮನಿಸಿದ ಅಧಿಕಾರಿಗಳು ಈ ಗ್ರಾಮಕ್ಕೆ ರಸ್ತೆ ಮಂಜೂರು ಮಾಡಿಸಿದ್ದರು. ಅದರೆ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ ರಸ್ತೆ ಕಾಮಗಾರಿಗೆ ನಿಗದಿಯಾಗಿದ್ದ ಅನುದಾನವನ್ನು ಬೇರೆ ಗ್ರಾಮಕ್ಕೆ ವರ್ಗಾಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಮನಾಯಕನಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟರುವುದಿಂದ ಓಡಾಡುವುದು ಕಪ್ಪವಾಗಿದೆ. ಈ ಮಾರ್ಗದಲ್ಲಿ ರೈಲು ಸೇತುವೆ ಇದ್ದು ಅದರ ಕೆಳಗೆ ರಸ್ತೆಯಲ್ಲಿ ತಗ್ಗು ಇರುವುದರಿಂದ ಮಳೆ ಬಂದಾಗ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತದೆ.ಇದರಿಂದಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಕೂಡ ಸಮಸ್ಯೆಯಾಗುತ್ತದೆ.
-ಜೋಗೇರ ರಾಮಪ್ಪ, ಸ್ಥಳೀಯ ನಿವಾಸಿ
ರಾಮನಾಯಕನಹಳ್ಳಿ ಗ್ರಾಮದ ರಸ್ತೆ ಅವ್ಯವಸ್ಥೆ ನಮ್ಮ ಗಮನಕ್ಕಿದ್ದು ಈ ಬಗ್ಗೆ ಕ್ರಿಯಾಯೋಜನೆ ಕೂಡ ರೆಡ್ಡಿಯಾಗಿದೆ. ಅನುದಾನ ಮಂಜೂರು ಅದ ತಕ್ಷಣ ರಸ್ತೆ ನಿರ್ಮಾಣ ಮಾಡಲಾಗುವುದು
-ಮಲ್ಲಿಕಾರ್ಜುನ ಸ್ವಾಮಿ, ಜಿಪಂ ಎಇಇ ಕೂಡ್ಡಿಗಿ






