Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಈ ವಿನಾಯಿತಿ ಪ್ರಜ್ಞಾ ಸಿಂಗ್‌ಗೆ ಮಾತ್ರ...

ಈ ವಿನಾಯಿತಿ ಪ್ರಜ್ಞಾ ಸಿಂಗ್‌ಗೆ ಮಾತ್ರ ಯಾಕೆ ಸಿಗುತ್ತಿದೆ?

ಎಸ್. ಸುದರ್ಶನ್ಎಸ್. ಸುದರ್ಶನ್6 April 2024 12:32 PM IST
share
ಈ ವಿನಾಯಿತಿ ಪ್ರಜ್ಞಾ ಸಿಂಗ್‌ಗೆ ಮಾತ್ರ ಯಾಕೆ ಸಿಗುತ್ತಿದೆ?

ಮಾಲೇಗಾಂವ್ ಸ್ಫೋಟ ಪ್ರಕರಣ ನಡೆದು 15 ವರ್ಷ ಕಳೆದಿದೆ. ಈಗಲೂ ಅದರ ವಿಚಾರಣೆ ಮುಗಿದಿಲ್ಲ. ಅದಕ್ಕೆ ಮುಖ್ಯ ಕಾರಣ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್. ಈ ದೇಶದಲ್ಲಿ ಬೇರಾವ ಆರೋಪಿಗಳಿಗೂ ಸಿಗದ ಅತ್ಯಂತ ವಿಶೇಷ ವಿನಾಯಿತಿ ಹಾಗೂ ರಿಯಾಯಿತಿ ಪ್ರಜ್ಞಾ ಸಿಂಗ್‌ಗೆ ಮಾತ್ರ ಯಾಕೆ ಸಿಗುತ್ತಿದೆ?

ಶಿವಮೊಗ್ಗಕ್ಕೆ ಬಂದು ಮನೆಯಲ್ಲಿ ಖಡ್ಗ, ಬಂದೂಕು ಇಟ್ಟುಕೊಳ್ಳಿ ಎಂದು ಭಾಷಣ ಮಾಡಬಲ್ಲ ಪ್ರಜ್ಞಾ ಸಿಂಗ್‌ಗೆ ಅಲ್ಲೇ ಪಕ್ಕದ ಮಹಾರಾಷ್ಟ್ರದ ಕೋರ್ಟ್‌ಗೆ ಹಾಜರಾಗಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ ಕೇಳುತ್ತಿಲ್ಲ ಯಾಕೆ?

ಗಾಂಧೀಜಿಯ ಆದರ್ಶಗಳ ದೇಶ ಕಟ್ಟುವ ಮಾತಾಡಿದ ಯುವ ವಿದ್ವಾಂಸ ಉಮರ್ ಖಾಲಿದ್ ನಾಲ್ಕು ವರ್ಷಗಳಿಂದ ಜಾಮೀನು ಸಿಗದೇ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಸ್ಟ್ಯಾನ್ ಸ್ವಾಮಿ ಎಂಬ 80 ವರ್ಷ ದಾಟಿದ ವೃದ್ಧ ಮಾಡದ ತಪ್ಪಿಗೆ ಜೈಲಿನಲ್ಲೇ ಪ್ರಾಣ ಬಿಡಬೇಕಾಯಿತು.

ಆದರೆ ಸ್ಫೋಟ ಪ್ರಕರಣವೊಂದರ ಪ್ರಧಾನ ಆರೋಪಿ ಪ್ರಜ್ಞಾ ಸಿಂಗ್ ಅದೇ ಅವಧಿಯಲ್ಲಿ ಈ ದೇಶದ ಸಂಸತ್ತಿನಲ್ಲಿದ್ದರು, ದೇಶದ ಬೀದಿ ಬೀದಿ ಸುತ್ತಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದರು. ಇದ್ಯಾವ ನ್ಯಾಯ? ಯಾವಾಗ ಮುಗಿಯುತ್ತದೆ ಮಾಲೇಗಾಂವ್ ಸ್ಫೋಟದ ವಿಚಾರಣೆ?

2008ರಲ್ಲಿ ನಡೆದದ್ದು ಮಾಲೇಗಾಂವ್ ಸ್ಫೋಟ. ಅದರ ನಂಬರ್ 1 ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮಾತ್ರ ಅನಾರೋಗ್ಯದ ನೆಪ ಹೇಳಿ ಮತ್ತೆ ಮತ್ತೆ ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಮಾಡಿದ್ದು, ಅವರ ಅನಾರೋಗ್ಯದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಎನ್‌ಐಎಗೆ ಕೋರ್ಟ್ ಬುಧವಾರ ಸೂಚಿಸಿದೆ.

ಅವರ ಗೈರು ಹಾಜರಿಯಿಂದ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿರುವ ವಿಶೇಷ ನ್ಯಾಯಾಲಯ, ಆಕೆಯ ಆರೋಗ್ಯ ಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ವಿಶೇಷ ನ್ಯಾಯಾಲಯ ಪ್ರಸಕ್ತ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಏಳು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಿದೆ.

ಆದರೆ ಪ್ರಜ್ಞಾ ಸಿಂಗ್ ಬುಧವಾರವೂ ಅನಾರೋಗ್ಯದ ನೆಪವೊಡ್ಡಿ, ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿದರು.

ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಭೋಪಾಲ್‌ನಲ್ಲಿರುವ ಆಕೆಯ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ ಎಂದು ಆಕೆಯ ವಕೀಲರು ಕೋರ್ಟ್ ಮುಂದೆ ಹೇಳಿದರು.

ಕಳೆದ ಮಾರ್ಚ್ 11ರಂದು ಕೂಡ ಕೋರ್ಟ್ ಇದೇ ವಿಚಾರಕ್ಕೆ ಅವರಿಗೆ ವಾರಂಟ್ ಹೊರಡಿಸಿತ್ತು. ಕಡೆಗೆ ಮಾರ್ಚ್ 22 ರಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಪ್ರಜ್ಞಾ ಸಿಂಗ್ ಮತ್ತೆ ಮತ್ತೆ ಗೈರಾಗುತ್ತಿರುವ ಬಗ್ಗೆ ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಬುಧವಾರ ಆಕ್ಷೇಪಿಸಿದ್ದಾರೆ.

ಮಾರ್ಚ್ 22ರಂದು ಕೋರ್ಟ್‌ಗೆ ಹಾಜರಾದಾಗಲೂ ಅವರು ಅನಾರೋಗ್ಯದ ಕಾರಣ ಮುಂದೆ ಮಾಡಿಕೊಂಡೇ ಅನುಮತಿ ಪಡೆದು ಮರಳಿದ್ದರು.

ಅದಾದ ಬಳಿಕ ಅವರು ಭೋಪಾಲ್‌ಗೆ ಹೊರಡುವ ಮೊದಲು ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿರಲಿಲ್ಲ.

ಹೇಳಿಕೆ ದಾಖಲಿಸಲು ಆರೋಪಿ ನಂ.1 ಹಾಜರಿರುವುದು ಅಗತ್ಯವಾಗಿದೆ. ಅವರು ಗೈರಾಗುತ್ತಿರುವುದರಿಂದ ವಿಚಾರಣೆಗೆ ಅಡ್ಡಿಯಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಅವರ ಅನುಪಸ್ಥಿತಿಯಿಂದಾಗಿ ವಿಚಾರಣೆ ವಿಳಂಬವಾಗುತ್ತಿರುವು ದರಿಂದ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನಾ ವರದಿ ಬೇಕು ಎಂದು ಕೋರ್ಟ್ ಸೂಚಿಸಿದೆ.

ವಿಚಾರಣೆಗೆ ಗೈರಾಗುತ್ತಿರುವ ಬಗ್ಗೆ ಕೋರ್ಟ್ ಆಕ್ಷೇಪ ತೆಗೆಯುತ್ತಲೇ ಇದೆ. ಕಳೆದ ಬಾರಿ ಮಾರ್ಚ್ 11ರಂದು ವಾರಂಟ್ ಹೊರಡಿಸಿದಾಗಲೂ ಅದನ್ನೇ ಕೋರ್ಟ್ ಹೇಳಿತ್ತು. ಅದಾದ ಬಳಿಕ ಅವರು ಹಾಜರಾಗಿ, ವಾರಂಟ್ ರದ್ದಾಗಿತ್ತು. ಆಮೇಲೆ ಕೂಡ ಅವರು ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಲೇ ಇರುವುದು ಎಷ್ಟರ ಮಟ್ಟಿಗೆ ಆಟವಾಡುತ್ತಿದ್ದಾರೆ ಎಂಬುದಕ್ಕೆ ನಿದರ್ಶನ.

ಕೋರ್ಟ್‌ಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ನೆಪವೊಡ್ಡುವ ಅವರು ದೇಶವನ್ನೆಲ್ಲ ಸುತ್ತುತ್ತ, ಪ್ರಚೋದನಕಾರಿ ಮಾತಾಡುವಾಗ ಆರೋಗ್ಯ ಸಮಸ್ಯೆ ಇರುವುದೇ ಇಲ್ಲ. ಕೋರ್ಟ್‌ಗೆ ಹಾಜರಾಗುವ ಪ್ರಶ್ನೆ ಬಂದಾಗ ಮಾತ್ರ ಆರೋಗ್ಯ ಸಮಸ್ಯೆಯ ಕಾರಣವೊಂದು ಸಿದ್ಧವಾಗಿರುತ್ತದೆ.

ಆರೋಪಿಗಳ ಹೇಳಿಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ನ್ಯಾಯಾಲಯ ತನ್ನ ಮುಂದೆ ಇರುವ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳಿಗೆ ಪ್ರಶ್ನೆಗಳನ್ನು ಹಾಕುತ್ತದೆ. ಆರೋಪಿಗಳು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಮೂಲಕ ಆರೋಪಗಳಿಗೆ ಪ್ರತಿಕ್ರಿಯಿಸುವುದು ನಡೆಯಬೇಕಿದೆ. ಆದರೆ ಈ ಒಟ್ಟಾರೆ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇದೆ.

ಕೋರ್ಟ್ ಕೂಡ ಆಕ್ಷೇಪ ಎತ್ತಿದ ಹಾಗೆ ಮಾಡುತ್ತಲೇ, ಅವರಿಗೆ ವಿನಾಯಿತಿ ನೀಡುತ್ತಲೂ ಇರುತ್ತದೆ.

ಅವರು ಮುಂಬೈನಲ್ಲಿಲ್ಲ, ಭೋಪಾಲ್‌ನಲ್ಲಿರುವುದರಿಂದ ಅವರ ಅನಾರೋಗ್ಯ ಸಂಬಂಧಿತ ಎಲ್ಲ ದಾಖಲೆಗಳನ್ನು ಹಾಜರುಪಡಿಸುವುದು ಸಮಸ್ಯೆಯಾಗುತ್ತಿರಬೇಕು ಎಂದು ಕೂಡ ತಾನೇ ಅರ್ಥ ಮಾಡಿಕೊಂಡಿರುವುದಾಗಿ ಬಹಳ ಮೃದುವಾಗಿಯೇ ಅದು ಹೇಳುತ್ತದೆ.

ಪ್ರಜ್ಞಾ ಸಿಂಗ್ ಆರೋಗ್ಯ ಸ್ಥಿತಿ ಏನೆಂಬುದನ್ನು ಪರಿಶೀಲಿಸಲು ಮತ್ತು ಎಪ್ರಿಲ್ 8ರಂದು ಅಥವಾ ಅದಕ್ಕೂ ಮೊದಲು ವರದಿ ಸಲ್ಲಿಸಲು ಎನ್‌ಐಎಗೆ ಮುಂಬೈ ಕೋರ್ಟ್ ಈಗ ನಿರ್ದೇಶಿಸಿದೆ.

ಅನಾರೋಗ್ಯ ಸ್ಥಿತಿ ಅವರ ನಿಯಂತ್ರಣದಲ್ಲಿಲ್ಲ. ಹಾಗಾಗಿ ಅವರಿಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ಕೋರ್ಟ್ ನೀಡಬೇಕು ಎಂಬ ಮನವಿಯನ್ನು ಬೇರೆ ಆಕೆಯ ವಕೀಲರು ಮಾಡಿಕೊಳ್ಳುತ್ತಾರೆ.

ಇಷ್ಟು ಕಾಲದಿಂದ ಅನಾರೋಗ್ಯದ ನೆಪ ಮಾಡಿಕೊಂಡೇ ಬಂದ ಪ್ರಜ್ಞಾ ಸಿಂಗ್ ವಿಚಾರದಲ್ಲಿ ಈಗ ಕೋರ್ಟ್ ಕೇಳಿರುವ ಅನಾರೋಗ್ಯ ಸ್ಥಿತಿ ಕುರಿತ ಪರಿಶೀಲನಾ ವರದಿಯೇನು ಪರಮ ಪ್ರಾಮಾಣಿಕತೆಯಿಂದ ತುಂಬಿ ತುಳುಕಲು ಸಾಧ್ಯವೇ?

ಹೇಗೆಲ್ಲ ಇಲ್ಲಿ ಯಾರಿಗೆ ಅನುಕೂಲ ಮಾಡಿಕೊಡಬೇಕೋ ಅವರ ವಿಚಾರದಲ್ಲಿ ಎಲ್ಲ ವಿನಾಯಿತಿಗಳೂ ಸಾಧ್ಯವಾಗುತ್ತವೆ ಎಂಬುದನ್ನು ಇಡೀ ದೇಶವೇ ನೋಡುತ್ತಿದೆ.

ಒಂದು ಗಂಭೀರ ಪ್ರಕರಣ ಹೀಗೆ 15 ವರ್ಷಗಳಿಂದ ತೆವಳುತ್ತ ಸಾಗಿದೆಯೆಂದರೆ, ಆರೋಪಿಗಳು ನಿರಾಳವಾಗಿ ಹೊರಗೆ ಓಡಾಡಿಕೊಂಡಿದ್ದಾರೆ ಎಂದರೆ ಏನರ್ಥ?

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X