Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಆ ವೇಷಭೂಷಣ ಕೊರಗಜ್ಜನದಲ್ಲ:...

ಆ ವೇಷಭೂಷಣ ಕೊರಗಜ್ಜನದಲ್ಲ: ಕೊರಗಜ್ಜನನ್ನು ಅವಮಾನಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು!

- ಬಿ.ಎಸ್. ಹೃದಯ, ಬೆಳುವಾಯಿ.- ಬಿ.ಎಸ್. ಹೃದಯ, ಬೆಳುವಾಯಿ.9 Jan 2022 7:45 PM IST
share
ಆ ವೇಷಭೂಷಣ ಕೊರಗಜ್ಜನದಲ್ಲ: ಕೊರಗಜ್ಜನನ್ನು ಅವಮಾನಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು!

ದಕ್ಷಿಣಕನ್ನಡದ ಸಾಲೆತ್ತೂರಿನಲ್ಲಿ ಮದುವೆ ಸಮಾರಂಭದ ನಿಮಿತ್ತ ನಡೆಸಿದ್ದ ಕಾರ್ಯಕ್ರಮದಲ್ಲಿ ಕೊರಗಜ್ಜ ಮತ್ತು ಕೊರಗ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ʼಕೊರಗೆರ್ನ ಅಲಿಪು ಉಲಿಪುʼ ಎಂಬ ಪೇಜ್‌ ನಲ್ಲಿ ಕೊರಗ ಸಮುದಾಯದ ಯುವಕ ಬಿ.ಎಸ್.‌ ಹೃದಯ ಬೆಳುವಾಯಿ  ಫೇಸ್‌ ಬುಕ್‌ ನಲ್ಲಿ ಬರೆದಿರುವ ಬರಹ ಇಲ್ಲಿದೆ. 

ತಲೆಮೇಲೊಂದು ಮುಠ್ಠಾಳೆ. ಮೈ ಪೂರಾ ಕಡು ಕಪ್ಪು ಬಣ್ಣ, ಬೆಳ್ಳಗಿನ ದಪ್ಪ ಮೀಸೆ, ದೃಢಕಾಯ ಮೈಕಟ್ಟು, ಸೊಂಟದಲ್ಲೊಂದು ಬುಟ್ಟಿ, ಕೈಗಳಲ್ಲಿ ಎರಡು ಕೋಲುಗಳು. ಇದು ಜನರ ಸ್ಮೃತಿ ಪಟಲದಲ್ಲಿ ಮೂಡಿಬರುವ ಕೊರಗಜ್ಜನ ಚಿತ್ರಣ. ಈ ಚಿತ್ರಣವನ್ನೇ ಎಲ್ಲರೂ 'ಕೊರಗಜ್ಜ'ನೆಂದು ಪೂಜಿಸುವುದು. ಅದನ್ನೇ ಕಲಾವಿದರು ಬಿಂಬವಾಗಿ ಪ್ರತಿಷ್ಠಾಪಿಸಿರುವುದು, ಕಲೆಯಾಗಿ ಅರಳಿಸಿ ಚಿತ್ರಿಸಿರುವುದು!

ಕೊರಗಜ್ಜನನ್ನು ಶಿವನ ರೂಪದಂತೆ ಚಿತ್ರಿಸುವುದು, ಮುಕ್ಕಣ್ಣನಂತೆ (ಹಣೆಮೇಲೆ ಮೂರನೇ ಕಣ್ಣು) ಚಿತ್ರಿದಿರುವುದು, ಅರ್ಧ ಶಿವನ ಮುಖದ ಚಿತ್ರಕ್ಕೆ - ಇನ್ನರ್ಧ ಕೊರಗಜ್ಜನ ಮುಖವನ್ನಿಟ್ಟು ಚಿತ್ರಿಸುವುದು ಕಲಾವಿದರಿಗೆ ಪ್ಯಾಶನ್ ಆಗಿದೆ! ಭಗ್ತಿಗೀತೆಗಳು ಕೂಡಾ ಇದನ್ನೇ ಹೇಳುತ್ತಿದೆ! ಕಲೆಯನ್ನು ಗೌರವಿಸೋಣ. ಆದರೆ, ಆ ಒಂದು ಕಲೆ 'ಒಂದು ಜನಾಂಗದ ಸಾರ್ವಭೌಮತೆಯನ್ನು ಪ್ರತಿಬಿಂಬಿಸುವ ರೂಪಕವೊಂದರ ಅಸ್ಮಿತೆ' ಎಂಬುದನ್ನು ಮರೆತು, ಕಲಾವಿದರು ತಮ್ಮ ಸ್ಮೃತಿ ಪಟಲದಲ್ಲಿ ಮೂಡಿಬಂದಂತೆ 'ಅಜ್ಜ'ನನ್ನು ಚಿತ್ರಿಸಿ ಹೊಸ ತಲೆಮಾರು ಮಾರುಹೋಗುವಂತೆ ಬಿಂಬಿಸಿ, ಇನ್ನಷ್ಟು ಹೋಸ ಹೊಸ ರೀತಿಯ ಆಲೋಚನೆಗಳು ಮೂಡುವಂತೆ ಮಾಡುವುದು ಅವಮಾನವಲ್ಲವೇ?! ಮದುವೆಯೇ ಆಗದ ಕೊರಗ ತನಿಯ/ಕೊರಗಜ್ಜನಿಗೆ 'ಏಳು ಕೊರಪೊಳು'ಗಳೆಂದು ಹೇಳಿ - ಆ ವಿಕೃತಿಯನ್ನು  ಕಾರ್ಯರೂಪಕ್ಕೆ ತಂದಾಗ ಸುಮ್ಮನಿದ್ದವರು, ಈಗ ಸಾಮ್ಯತೆಯೇ ಇಲ್ಲದ ವಿಚಾರವೊಂದರ ಕುರಿತಾಗಿ ಹಾರಾಡುವುದನ್ನು ಕಂಡಾಗ ಮರುಕವಾಗುತ್ತದೆ.
 
ಬಂಟ್ವಾಳ ತಾಲ್ಲೂಕಿನ ಕೊಲ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮದುಮಗ ನೀಲಿ ಬಣ್ಣದ ಟಿ ಶರ್ಟ್ ಮತ್ತು ಪ್ಯಾಂಟ್ ಮೇಲೆ ಪಂಚೆಯುಟ್ಟು, ಕ್ರೋಟನ್ ಗಿಡದ ಎಲೆಯನ್ನು ದಾರಕ್ಕೆ ಕಟ್ಟಿದ ಹಾರವಾಗಿ, ತಲೆ ಮೇಲೊಂದು ಅಡಿಕೆ ಹಾಲೆಯ ಮುಠ್ಠಾಳೆಯಿಟ್ಟು, ಮುಖಕ್ಕೆ ಕಪ್ಪು ಬಣ್ಣ ಬಳಿದು ತಲೆ ಬಗ್ಗಿಸಿ ಆಗಮಿಸುತ್ತಾನೆ. ಸುತ್ತು ವರಿದ ಗೆಳೆಯರ ಬಳಗ ಬ್ಯಾರಿ ಹಾಡು (ಮಾಪಿಳ್ಳೆ ಪಾಟ್) ಹಾಡಿ ಸಂಭ್ರಮಿಸುತ್ತಾರೆ. ಕೊರಗಜ್ಜನ ಕೋಲದಲ್ಲಿ ವೇಷಧಾರಿ ನರ್ತಿಸುವಂತೆ ಏನು ಆತ ನರ್ತಿಸಿಲ್ಲ. ಅಂತಹ ಸಾಮ್ಯತೆ ಯಾವುದೂ ಅಲ್ಲಿ ಕಂಡು ಬಂದಿಲ್ಲ. ಹೀಗಿರುವಾಗ ತಲೆ ಮೇಲಿನ ಮುಠ್ಠಾಳೆ ಮತ್ತು ಬರಿಯ ಮುಖಬಣ್ಣದಿಂದ 'ಕೊರಗಜ್ಜನನ್ನು ಅವಮಾನಿಸಿದರು' ಎಂದು ಹೇಗೆ ಹೇಳೋಣ?!

ಕೊರಗಜ್ಜನನ್ನು ಅವಮಾನಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು. ಪರಿಶುದ್ಧ ಶೇಂಧಿಯ ಬದಲು ಬಿಯರ್ ಬಾಟಲಿ ಇಡುವವರಿಗೆ ಶಿಕ್ಷೆ ಆಗಬೇಕು. ಅದಕ್ಕೂ ಮೊದಲು - ಅಜ್ಜನ ಹೆಸರೇಳಿ ವಿಕೃತವಾಗಿ ಕುಣಿಯುವವರಿಗೆ, ಸೊಂಟದ ಕೆಳಗಿನ ಪದ ಬಳಸಿ ಅಪಹಾಸ್ಯ ಮಾಡುವವರಿಗೆ ಶಿಕ್ಷೆಯಾಗಬೇಕು.

share
- ಬಿ.ಎಸ್. ಹೃದಯ, ಬೆಳುವಾಯಿ.
- ಬಿ.ಎಸ್. ಹೃದಯ, ಬೆಳುವಾಯಿ.
Next Story
X