Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದೇಶದ ಶೇ. 67 ಮಕ್ಕಳಲ್ಲಿ ಅನೀಮಿಯ!

ದೇಶದ ಶೇ. 67 ಮಕ್ಕಳಲ್ಲಿ ಅನೀಮಿಯ!

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21

ಆರ್.ಎಚ್.ಆರ್.ಎಚ್.14 Sept 2022 11:24 AM IST
share
ದೇಶದ ಶೇ. 67 ಮಕ್ಕಳಲ್ಲಿ  ಅನೀಮಿಯ!

ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದರೆ ಅದನ್ನು ಅನೀಮಿಯ (ರಕ್ತಹೀನತೆ) ಎಂದು ಕರೆಯಲಾಗುತ್ತದೆ. ಹಿಮೋಗ್ಲೋಬಿನ್‌ನ ಮುಖ್ಯ ಅಂಶ ಕಬ್ಬಿಣ. ಜಗತ್ತಿನಾದ್ಯಂತ ಇರುವ ಒಟ್ಟು ಅನೀಮಿಯ ಪ್ರಕರಣಗಳ ಅರ್ಧದಷ್ಟಕ್ಕೆ ಕಬ್ಬಿಣಾಂಶದ ಕೊರತೆಯೇ ಕಾರಣ ಎಂದು ಅಂದಾಜಿಸಲಾಗಿದೆ. ಅನೀಮಿಯಕ್ಕೆ ಕಾರಣವಾಗುವ ಇತರ ಅಂಶಗಳೆಂದರೆ ಮಲೇರಿಯ, ಕೊಕ್ಕೆಹುಳ ಮತ್ತು ಲಾಡಿಹುಳ ಮುಂತಾದ ಇತರ ಪರೋಪಜೀವಿ ಹುಳಗಳು, ಇತರ ಪೌಷ್ಟಿಕಾಂಶ ಕೊರತೆಗಳು, ಗಂಭೀರ ಸೋಂಕುಗಳು ಮತ್ತು ವಂಶವಾಹಿ ಕಾರಣಗಳು. ಮಕ್ಕಳಲ್ಲಿ ಅನೀಮಿಯವು ಗಂಭೀರ ಸಮಸ್ಯೆಯಾಗಿದೆ. ಯಾಕೆಂದರೆ ಅದು ಬೌದ್ಧಿಕ ಬೆಳವಣಿಗೆಯನ್ನು ತಡೆಹಿಡಿಯಬಲ್ಲದು, ದೈಹಿಕ ಬೆಳವಣಿಗೆಯನ್ನು ಸ್ಥಗಿತಗೊಳಿಸಬಹುದು ಮತ್ತು ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ಸಮೀಕ್ಷೆಯಲ್ಲಿ, 6ರಿಂದ 59 ತಿಂಗಳುಗಳ ನಡುವಿನ ಮಕ್ಕಳನ್ನು ಹಿಮೋಗ್ಲೋಬಿನ್ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಗೆ ಅರ್ಹರಾದ ಮಕ್ಕಳ ಪೈಕಿ ಶೇ. 91 ಮಕ್ಕಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಒಟ್ಟಾರೆ ಶೇ. 67 ಮಕ್ಕಳು ಒಂದಲ್ಲ ಒಂದು ಹಂತದ ಅನೀಮಿಯದಿಂದ ಬಳಲುತ್ತಿರುವುದು ಪರೀಕ್ಷೆಯಿಂದ ಗೊತ್ತಾಯಿತು. ಶೇ. 29 ಮಕ್ಕಳು ಲಘು ಅನೀಮಿಯದಿಂದ ಬಳಲಿದರೆ, ಶೇ. 36 ಮಕ್ಕಳು ಮಧ್ಯಮ ಪ್ರಮಾಣದ ಅನೀಮಿಯದಿಂದ ಬಳಲುತ್ತಿದ್ದಾರೆ. ಹಾಗೂ ಶೇ. 2 ಮಕ್ಕಳು ತೀವ್ರ ಪ್ರಮಾಣದ ಅನೀಮಿಯದಿಂದ ಬಳಲುತ್ತಿದ್ದಾರೆ.

ಶೇ. 57 ಮಹಿಳೆಯರಿಗೆ ಅನೀಮಿಯ

ಭಾರತದಲ್ಲಿ 15-49 ವಯೋ ಗುಂಪಿನ ಶೇ. 57 ಮಹಿಳೆಯರು ಮತ್ತು ಶೇ. 25 ಪುರುಷರು ಅನೀಮಿಯಕ್ಕೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ವರದಿ ಹೇಳುತ್ತದೆ.

ಈ ಪೈಕಿ ಶೇ. 26 ಮಹಿಳೆಯರು ಲಘು ಅನೀಮಿಯಕ್ಕೆ ಒಳಗಾದರೆ, ಶೇ. 29 ಮಹಿಳೆಯರು ಮಧ್ಯಮ ಮಟ್ಟದ ಅನೀಮಿಯಕ್ಕೆ ಒಳಗಾಗಿದ್ದಾರೆ. ಹಾಗೂ ಶೇ.3 ಮಹಿಳೆಯರು ತೀವ್ರ ಅನೀಮಿಯದಿಂದ ಬಳಲುತ್ತಿದ್ದಾರೆ.

ಅದೇ ವೇಳೆ, ಶೇ. 20 ಪುರುಷರು ಲಘು ಅನೀಮಿಯಕ್ಕೆ ಒಳಗಾದರೆ, ಶೇ. 5 ಪುರುಷರು ಮಧ್ಯಮ ಮಟ್ಟದ ಅನೀಮಿಯದಿಂದ ಬಳಲುತ್ತಿದ್ದಾರೆ. ಶೇ. 0.4 ಪುರುಷರು ತೀವ್ರ ಮಟ್ಟದ ಅನೀಮಿಯಕ್ಕೆ ಒಳಗಾಗಿದ್ದಾರೆ.

ಅನೀಮಿಯ ಪ್ರವೃತ್ತಿಗಳು

ಅನೀಮಿಯವು ದೊಡ್ಡ ಮಕ್ಕಳಿಗಿಂತಲೂ ಹೆಚ್ಚಾಗಿ 35 ತಿಂಗಳುಗಳಿಗಿಂತ ಕೆಳಗಿನ ಮಕ್ಕಳನ್ನು ಬಾಧಿಸುತ್ತದೆ. ಶೇ. 80 ಅನೀಮಿಯ ಪ್ರಕರಣಗಳು 12-17 ತಿಂಗಳುಗಳ ನಡುವಿನ ಮಕ್ಕಳಲ್ಲಿ ಕಾಣಿಸಿಕೊಂಡಿವೆ.

ಹೆತ್ತವರ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಾದಂತೆ ಅವರ ಮಕ್ಕಳು ಅನೀಮಿಯಕ್ಕೆ ಒಳಗಾಗುವುದೂ ಹೆಚ್ಚುತ್ತದೆ. ಅನೀಮಿಯಕ್ಕೆ ಒಳಗಾಗದ ತಾಯಂದಿರ ಮಕ್ಕಳಿಗಿಂತ ಅನೀಮಿಯಕ್ಕೆ ಒಳಗಾಗಿರುವ ತಾಯಂದಿರ ಮಕ್ಕಳಲ್ಲಿ ಅನೀಮಿಯ ಪ್ರಕರಣಗಳು ಹೆಚ್ಚು.

ತಾಯಿಯ ಶಿಕ್ಷಣದ ಅವಧಿ ಮತ್ತು ಕುಟುಂಬದ ಸಂಪತ್ತು ಹೆಚ್ಚಿದಂತೆ ಮಕ್ಕಳ ಅನೀಮಿಯ ಪ್ರಕರಣಗಳು ಕಡಿಮೆಯಾಗುತ್ತವೆ.

ಹೆಚ್ಚುತ್ತಿರುವ ಅನೀಮಿಯ ಪ್ರಕರಣಗಳು

ಅನೀಮಿಯ ಪ್ರಕರಣಗಳ ಸಂಖ್ಯೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ನಡುವಿನ ಅವಧಿಯಲ್ಲಿ ಏರಿಕೆಯಾಗಿದೆ. ಅಂದರೆ 2015-16ರಲ್ಲಿ ಮಹಿಳೆಯರಲ್ಲಿ ಶೇ. 53ರಷ್ಟಿದ್ದ ಅನೀಮಿಯ ಪ್ರಕರಣಗಳ ಸಂಖ್ಯೆ 2019-21ರ ವೇಳೆಗೆ ಶೇ. 57ಕ್ಕೆ ಹೆಚ್ಚಿದೆ. ಇದೇ ಅವಧಿಯಲ್ಲಿ ಪುರುಷರ ಅನೀಮಿಯ ಪ್ರಕರಣಗಳ ಸಂಖ್ಯೆ ಶೇ. 23ರಿಂದ 25ಕ್ಕೆ ಏರಿದೆ.

ಶಾಲಾ ಶಿಕ್ಷಣ ಮತ್ತು ಸಂಪತ್ತು

   ಶಾಲಾ ಶಿಕ್ಷಣದ ಅವಧಿ ಹೆಚ್ಚಿದಂತೆ ಸಾಮಾನ್ಯವಾಗಿ ಅನೀಮಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಶಾಲೆಗೆ ಹೋಗದ ಮಹಿಳೆಯರ ಅನೀಮಿಯ ಪ್ರಮಾಣ ಶೇ. 59 ಆಗಿದ್ದರೆ, 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಾಲೆಗೆ ಹೋಗಿರುವ ಮಹಿಳೆಯರಲ್ಲಿ ಈ ಪ್ರಮಾಣ ಶೇ. 52 ಆಗಿದೆ. ಅದೇ ವೇಳೆ, ಶಾಲೆಗೆ ಹೋಗದ ಪುರುಷರ ಅನೀಮಿಯ ಪ್ರಮಾಣ ಶೇ. 32 ಆಗಿದ್ದರೆ, 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಾಲೆಗೆ ಹೋಗಿರುವ ಪುರುಷರರಲ್ಲಿ ಈ ಪ್ರಮಾಣ ಶೇ. 19 ಆಗಿದೆ.

 ಕುಟುಂಬದ ಸಂಪತ್ತು ಹೆಚ್ಚಿದಂತೆ ಅನೀಮಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಸಂಪತ್ತನ್ನು ಐದು ವಿಭಾಗಗಳಲ್ಲಿ ವಿಂಗಡಿಸಿದರೆ, ಕನಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಮಹಿಳೆಯರು ಅನೀಮಿಯಕ್ಕೆ ಒಳಗಾಗುವ ಪ್ರಮಾಣ ಶೇ. 64 ಇದ್ದರೆ, ಗರಿಷ್ಠ ಸಂಪತ್ತು ಗುಂಪಿಗೆ ಸೇರಿದ ಮಹಿಳೆಯರಲ್ಲಿ ಈ ಪ್ರಮಾಣ ಶೇ. 51 ಆಗಿದೆ. ಅದೇ ವೇಳೆ, ಕನಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಪುರುಷರು ಅನೀಮಿಯಕ್ಕೆ ಒಳಗಾಗುವ ಪ್ರಮಾಣ ಶೇ. 36 ಇದ್ದರೆ, ಗರಿಷ್ಠ ಸಂಪತ್ತು ಗುಂಪಿಗೆ ಸೇರಿದ ಪುರುಷರಲ್ಲಿ ಈ ಪ್ರಮಾಣ ಶೇ. 18 ಆಗಿದೆ.

ಗುಜರಾತ್‌ನಲ್ಲಿ ಅತ್ಯಧಿಕ ಅನೀಮಿಯಪೀಡಿತ ಮಕ್ಕಳು

   6ರಿಂದ 59 ತಿಂಗಳುಗಳ ನಡುವಿನ ಮಕ್ಕಳ ಪೈಕಿ, ರಾಜ್ಯವಾರು ಅತ್ಯಧಿಕ ಅನೀಮಿಯಪೀಡಿತ ಮಕ್ಕಳಿರುವುದು ಗುಜರಾತ್‌ನಲ್ಲಿ (ಶೇ. 80).

   ನಂತರದ ಸ್ಥಾನಗಳಲ್ಲಿರುವ ರಾಜ್ಯಗಳೆಂದರೆ ಮಧ್ಯಪ್ರದೇಶ (ಶೇ. 73), ರಾಜಸ್ಥಾನ (ಶೇ. 72) ಮತ್ತು ಪಂಜಾಬ್ (ಶೇ. 71).

   ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದಕ್ಕೂ ಹೆಚ್ಚಿನ ಅನೀಮಿಯ ಪ್ರಕರಣಗಳಿವೆ. ಅವುಗಳೆಂದರೆ ಲಡಾಖ್‌ನಲ್ಲಿ ಶೇ. 94, ದಾದರ್ ಮತ್ತು ನಗರ ಹವೇಲಿ (ಶೇ. 76), ದಾಮನ್ ಮತ್ತು ದಿಯು (ಶೇ. 76) ಮತ್ತು ಜಮ್ಮು ಮತ್ತು ಕಾಶ್ಮೀರ (ಶೇ. 73).

  ಮಕ್ಕಳಲ್ಲಿ ಕನಿಷ್ಠ ಅನೀಮಿಯ ಪ್ರಕರಣಗಳಿರುವ ರಾಜ್ಯಗಳೆಂದರೆ ಕೇರಳ (ಶೇ. 39), ಅಂಡಮಾನ್ ಮತ್ತು ನಿಕೋಬಾರ್ (ಶೇ. 40), ನಾಗಾಲ್ಯಾಂಡ್ (ಶೇ. 43) ಮತ್ತು ಮಣಿಪುರ (ಶೇ. 43).

share
ಆರ್.ಎಚ್.
ಆರ್.ಎಚ್.
Next Story
X