Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಕುಲ ‘ತಿದ್ದಿಕೊಂಡು’ ಒಕ್ಕರಿಸುತ್ತಿರುವ...

ಕುಲ ‘ತಿದ್ದಿಕೊಂಡು’ ಒಕ್ಕರಿಸುತ್ತಿರುವ ಕಾರ್ಪೊರೇಟ್ ಕುಲಾಂತರಿಗಳು

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು10 May 2025 10:19 AM IST
share
ಕುಲ ‘ತಿದ್ದಿಕೊಂಡು’ ಒಕ್ಕರಿಸುತ್ತಿರುವ ಕಾರ್ಪೊರೇಟ್ ಕುಲಾಂತರಿಗಳು
ಭಾರತದಲ್ಲಿ ಈಗ ಹೊರಬಂದಿರುವ ಈ ಹೊಸ ಅಕ್ಕಿತಳಿಗಳು, ನಾಳೆ ಇಲ್ಲಿನ ಸ್ಥಳೀಯ ತಳಿಗಳ ಜೊತೆ ಸಂಕರಗೊಂಡಾಗ, ಸ್ಥಳೀಯ ತಳಿಗಳು ಕಲುಷಿತಗೊಂಡು, ಅವಕ್ಕೆ ಶಾಶ್ವತ ಹಾನಿ ಆಗಬಹುದು. ಸ್ಥಳೀಯ ಅಕ್ಕಿ ತಳಿಗಳ ಬೀಜ ಸಾರ್ವಭೌಮತೆಗೆ ಈ ಹೊಸ ತಳಿಗಳ ಬೌದ್ಧಿಕ ಹಕ್ಕುಗಳ ಕಾರಣದಿಂದಾಗಿ ಧಕ್ಕೆ ಉಂಟಾಗಬಹುದು.

ಕಳೆದ ರವಿವಾರ (ಮೇ 04) ದಿಲ್ಲಿಯಲ್ಲಿ ಭಾರತ ಸರಕಾರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಜೀನು ತಿದ್ದುಪಡಿಗೆ ಒಳಗಾದ ಎರಡು ಅಕ್ಕಿ ತಳಿಗಳನ್ನು [ಕಮಲ (DRR Rice 100); ಪುಸಾ (DST Rice 1)] ಬಿಡುಗಡೆಗೊಳಿಸಿದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಇವನ್ನು ಅಭಿವೃದ್ಧಿಪಡಿಸಿದೆ. ಕಡಿಮೆ ನೀರು ಬಳಸಿಕೊಂಡು ಹೆಚ್ಚು ಇಳುವರಿ ಕೊಡಲಿವೆ ಎಂಬುದು ಈ ಹೊಸ ಅಕ್ಕಿ ತಳಿಗಳ ಹೆಚ್ಚುಗಾರಿಕೆಯಂತೆ. ಈ ಸಮಾರಂಭದಲ್ಲಿ ಮಾತನಾಡಿದ ಸಚಿವ ಚೌಹಾಣ್, ರೈತರ ಆದಾಯ ಹೆಚ್ಚಿಸಲು ತಮ್ಮ ಆರು ಅಂಶಗಳ ಕಾರ್ಯಕ್ರಮವನ್ನು ಬಿಚ್ಚಿಟ್ಟರು. ಉತ್ಪಾದನೆ ಹೆಚ್ಚಳ, ಉತ್ಪಾದನಾ ವೆಚ್ಚ ತಗ್ಗಿಸುವಿಕೆ, ಉತ್ಪಾದನೆಗೆ ಸರಿಯಾದ ಬೆಲೆ, ನಷ್ಟವಾದರೆ ನಷ್ಟಭರ್ತಿ, ಬೆಳೆ ವೈವಿಧ್ಯಗಳ ನಿಭಾವಣೆ ಹಾಗೂ ನೈಸರ್ಗಿಕ ಕೃಷಿ ವಿಧಾನಗಳ ಅಳವಡಿಕೆ - ಇವು ಅವರ ಆರು ಅಂಶಗಳು.

ಈ ಹಿಂದೆ ದೇಶದಲ್ಲಿ ಕುಲಾಂತರಿ (ಜಿಎಂ) ತಳಿಗಳು ಮಾಡಿದ ಅವಾಂತರವನ್ನು ನಾವು ಕಂಡಾಗಿದೆ. 2002ರ ಆಸುಪಾಸಿನಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 8-10 ರಾಜ್ಯಗಳಲ್ಲಿ ಬಿಟಿ ಹತ್ತಿ ಬಂದದ್ದು, ಅವು ಸ್ಥಳೀಯ ಹತ್ತಿ ತಳಿಗಳ ಮೇಲೆ ದುಷ್ಪರಿಣಾಮ ಬೀರಿದ್ದು, ರೈತರು ಸಾಲದ ಸುಳಿಗೆ ಸಿಲುಕಿ ಸರಣಿ ಆತ್ಮಹತ್ಯೆಗಳು ಸಂಭವಿಸಿದ್ದು, ರೈತರ ಬೀಜಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯಕ್ಕೆ ಬಂದೊದಗಿದ ಆಪತ್ತು, ಬಿಟಿ ಬದನೆ, ಬಿಟಿ ಸಾಸಿವೆ ವಿಚಾರದಲ್ಲಿ ಕಾರ್ಪೊರೇಟ್ ಒತ್ತಡಗಳು... ಈ ಎಲ್ಲ ವಿವರಗಳು ಈ ಬರೆಹದ ಉದ್ದೇಶ ಅಲ್ಲ.

ಜಿಎಂ (ಜೆನೆಟಿಕಲಿ ಮಾಡಿಫೈಡ್) ತಳಿಗಳು ಎಂದರೆ ಆಧುನಿಕ ತಂತ್ರಜ್ಞಾನ ಬಳಸಿ, ಒಂದು ಗಿಡ, ಪ್ರಾಣಿ ಅಥವಾ ಸೂಕ್ಷ್ಮಜೀವಿಯ ಜೀವಕೋಶಗಳಲ್ಲಿ ಹೊಸ ಡಿಎನ್‌ಎಯನ್ನು ಸೇರಿಸುವ ಮೂಲಕ ಅದರ ಗುಣಲಕ್ಷಣಗಳನ್ನು ಮಾರುಕಟ್ಟೆಗೆ ಬೇಕಾದಂತೆ ಪರಿವರ್ತಿಸುವುದು. ಉದಾ: ಒಂದು ಕೃಷಿ ಬೆಳೆಗೆ ಒಂದು ನಿರ್ದಿಷ್ಟ ಕೀಟ ಆಕರ್ಷಿತ ಆಗದಿರುವಂತೆ ಅದರ ಡಿಎನ್‌ಎಯಲ್ಲಿ ಬದಲಾವಣೆ ಮಾಡುವುದು. ಹೀಗೆ ಜೀನು ಪರಿವರ್ತಿತ ತಳಿಗಳ ಬೌದ್ಧಿಕ ಹಕ್ಕಿನ ಮಾಲಕತ್ವವು, ಅದನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ ಕಾರ್ಪೊರೇಟ್ ಕಂಪೆನಿಗಳ ಕೈಯಲ್ಲಿರುತ್ತದೆ. ರೈತರು ಪ್ರತೀ ಬಾರಿ ಆ ನಿರ್ದಿಷ್ಟ ತಳಿಯನ್ನು ಬೆಳೆಯಬೇಕಾದರೆ, ಆ ಮಾಲಕ ಕಂಪೆನಿಯ ಮರ್ಜಿ ಕಾಯಬೇಕು. ಈ ರೀತಿಯ ವಾಣಿಜ್ಯಮುಖಿ ಕೃತಕ ತಂತ್ರಜ್ಞಾನಗಳು ಗಂಭೀರವಾದ ಆರೋಗ್ಯದ, ಪರಿಸರದ, ಕಾನೂನಿನ, ನೈತಿಕತೆಯ ಪ್ರಶ್ನೆಗಳನ್ನು ಸಹಜವಾಗಿಯೇ ಎತ್ತುತ್ತವೆ. ಈ ಕುರಿತು ಕಳೆದ 30 ವರ್ಷಗಳಿಂದಲೂ ಚರ್ಚೆಗಳು ನಡೆದಿವೆ.

ಮೊನ್ನೆ ದಿಲ್ಲಿಯಲ್ಲಿ ಬಿಡುಗಡೆಗೊಂಡ ಎರಡು ಅಕ್ಕಿತಳಿಗಳನ್ನು CRISPR-Cas9 ತಂತ್ರಜ್ಞಾನ ಬಳಸಿ ತಿದ್ದುಪಡಿ ಮಾಡಲಾಗಿದೆಯಂತೆ. ಇದು ಅತ್ಯಾಧುನಿಕವಾದ ಜೀನು ತಿದ್ದುಪಡಿ ಮಾಡುವ ತಂತ್ರಜ್ಞಾನವಾಗಿದ್ದು, ಪ್ರಯೋಗಕ್ಕೊಳಗಾಗುತ್ತಿರುವ ಸಸ್ಯದ ಜೀವಕೋಶದಲ್ಲಿರುವ ಒಂದು ಮಾರ್ಗದರ್ಶಿ ಡಿಎನ್‌ಎಯನ್ನು ಬಳಸಿಕೊಂಡು, ಅಲ್ಲಿನ ಒಂದು ನಿರ್ದಿಷ್ಟ ಜೀನಿನ ಡಿಎನ್‌ಎ ಸಂರಚನೆಯಲ್ಲಿ ಹೊಸ ಸೇರ್ಪಡೆ, ಅಳಿಸುವಿಕೆ ಅಥವಾ ಅದರ ಸ್ಥಾನದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಜೀನು ಮಾಹಿತಿಗಳನ್ನು ತಮಗೆ ಬೇಕಾದಂತೆ ಕರಾರುವಾಕ್ಕಾಗಿ ಬದಲಾಯಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಹೀಗೆ ರಚಿತಗೊಂಡ ಈ ಹೊಸ ಅಕ್ಕಿ ತಳಿಗಳ ಬಗ್ಗೆ ಈಗ ಆತಂಕ ವ್ಯಕ್ತವಾಗತೊಡಗಿದೆ. ಭಾರತ ಸರಕಾರದ ಪರಿಸರ ಸಂರಕ್ಷಣಾ ಕಾಯ್ದೆ-1986 ಅನ್ವಯ, ಜೈವಿಕ ಸುರಕ್ಷತಾ ನಿಯಮಗಳನ್ನು ರೂಪಿಸಲಾಗಿದೆ (Rules for Manufacture, Use, Import, Export and Storage of Hazardous Micro-Organisms/Genetically Engineered Organisms or Cells, 1989) ಈ ನಿಯಮಗಳ ಅಡಿಯಲ್ಲಿ ಸಮರ್ಪಕ ತಪಾಸಣೆಗಳನ್ನು ನಡೆಸದೆ, ಈ ತಳಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತಿಲ್ಲ. ಆದರೆ, ನರೇಂದ್ರ ಮೋದಿಯವರ ಸರಕಾರವು 2022ರ ಮಾರ್ಚ್ 30ರಂದು Sಆಓ-1 -Sಆಓ- 2 ಜೀನು ತಿದ್ದುಪಡಿ ವಿಧಾನಗಳನ್ನು (ಅಂದರೆ ಕ್ಷೇತ್ರ ನಿರ್ದಿಷ್ಟ ನ್ಯೂಕ್ಲಿಯೇಸ್ ಕಿಣ್ವಗಳನ್ನು ಬಳಸಿ ಜೀನು ತಿದ್ದುಪಡಿ ಮಾಡುವ ತಂತ್ರಜ್ಞಾನ) ಜೈವಿಕ ಸುರಕ್ಷತಾ ನಿಯಮಗಳ ವ್ಯಾಪ್ತಿಯಿಂದ ಹೊರಗಿರಿಸಿ ಆದೇಶ ಮಾಡಿತ್ತು(PIB Release ID: 1871153). ಕಾರ್ಪೊರೇಟ್ ಪರವಾಗಿರುವ ಈ ಆದೇಶದ ಬಳಿಕ, ಭಾರತದಲ್ಲಿ ಜೀನು ತಿದ್ದುಪಡಿ ಚಟುವಟಿಕೆಗಳು ಚುರುಕುಗೊಂಡಿವೆ. ಸರಕಾರದ ಈ ಕ್ರಮವು ಪರಿಸರ ಸಂರಕ್ಷಣಾ ಕಾಯ್ದೆಯ ಹಾಗೂ 1989ರ ನಿಯಮಗಳ [rule 3(iii); 3(iv)] ಸ್ಪಷ್ಟ ಉಲ್ಲಂಘನೆ ಎಂಬ ಮಾತುಗಳು ಕೇಳಿಸುತ್ತಿವೆ.

ಆರೋಪಗಳು

ಎಸ್‌ಡಿಎನ್ ತಂತ್ರಜ್ಞಾನದ ನಿಖರತೆ ವಿಶ್ವಾಸಾರ್ಹ ಅಲ್ಲ. ಅದು ಜೀನುಗಳ ಡಿಎನ್‌ಎ ಸಂರಚನೆಯಲ್ಲಿ ಹದ ತಪ್ಪಿದ ಶಾಶ್ವತ ಬದಲಾವಣೆಗಳಿಗೆ ಕಾರಣ ಆಗಬಹುದು; ಅಂತಹ ವಿಕಾರಗಳಿಂದ ಹೊಸ ಪ್ರೊಟೀನುಗಳು ಹುಟ್ಟಿಕೊಂಡು, ಅವು ವಿಷಕಾರಿಯಾಗಿ, ಅಲರ್ಜಿಕಾರಕವಾಗಿ ಪರಿಣಮಿಸಬಹುದು ಮತ್ತು ಅವು ಆಹಾರದ ಬೆಳೆಗಳಾಗಿದ್ದಲ್ಲಿ, ಆರೋಗ್ಯ ಹಾನಿಗೆ ಕಾರಣ ಆಗಬಹುದು. ಇವನ್ನೆಲ್ಲ ಗುರುತಿಸಲು ಸಾಂಪ್ರದಾಯಿಕ ಪತ್ತೆ ವಿಧಾನಗಳು ಲಭ್ಯವಿಲ್ಲ ಎಂಬ ಆತಂಕಗಳು ವ್ಯಕ್ತಗೊಳ್ಳುತ್ತಿವೆ.

ಭಾರತದಲ್ಲಿ ಈಗ ಹೊರಬಂದಿರುವ ಈ ಹೊಸ ಅಕ್ಕಿತಳಿಗಳು, ನಾಳೆ ಇಲ್ಲಿನ ಸ್ಥಳೀಯ ತಳಿಗಳ ಜೊತೆ ಸಂಕರಗೊಂಡಾಗ, ಸ್ಥಳೀಯ ತಳಿಗಳು ಕಲುಷಿತಗೊಂಡು, ಅವಕ್ಕೆ ಶಾಶ್ವತ ಹಾನಿ ಆಗಬಹುದು. ಸ್ಥಳೀಯ ಅಕ್ಕಿ ತಳಿಗಳ ಬೀಜ ಸಾರ್ವಭೌಮತೆಗೆ ಈ ಹೊಸ ತಳಿಗಳ ಬೌದ್ಧಿಕ ಹಕ್ಕುಗಳ ಕಾರಣದಿಂದಾಗಿ ಧಕ್ಕೆ ಉಂಟಾಗಬಹುದು. ಈ ಜೀನು ತಿದ್ದುಪಡಿಗೊಂಡಿರುವ ಅಕ್ಕಿತಳಿ ಹೆಚ್ಚು ಇಳುವರಿ ಕೊಡಲಿದೆ, ಅದಕ್ಕೆ ಕಡಿಮೆ ನೀರು ಸಾಕು ಎಂಬುದೆಲ್ಲ ವೈಜ್ಞಾನಿಕ ಊಹೆಗಳೇ ಹೊರತು ಕಾಲದ ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವ ಫಲಿತಾಂಶಗಳಲ್ಲ. ಆವಶ್ಯಕತೆಗಿಂತ ಹೆಚ್ಚೇ ಅಕ್ಕಿ ಬೆಳೆಯುತ್ತಿರುವ ಭಾರತದಂತಹ ದೇಶಕ್ಕೆ ಈ ಜೀನು ತಿದ್ದುಪಡಿ ಅಗತ್ಯವಿತ್ತೇ? ಭಾರತದ ಅಕ್ಕಿ ಜಿಎಂ ಮುಕ್ತ ಎಂಬ ಕಾರಣಕ್ಕಾಗಿಯೇ ಅದಕ್ಕೆ ವಿದೇಶಗಳ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆ ಅನನ್ಯತೆಯನ್ನೂ ಈ ಹೊಸ ತಳಿಗಳ ಕಾರಣದಿಂದಾಗಿ ನಾವು ಕಳೆದುಕೊಳ್ಳಲಿದ್ದೇವೆ ಎಂದು ಜಿಎಂ ಮುಕ್ತ ಭಾರತಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

2022ರಲ್ಲಿ, ಜಿಎಂ ಸಾಸಿವೆ ಮಾರುಕಟ್ಟೆಗೆ ಬಿಡುಗಡೆಗೊಂಡಾಗ ಅದನ್ನು ವಿರೋಧಿಸಿ ಹಲವು ಸಂಘಟನೆಗಳು ಮತ್ತು ಹೋರಾಟಗಾರರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾ. ಬಿ.ವಿ. ನಾಗರತ್ನಾ ಮತ್ತು ನ್ಯಾ. ಸಂಜಯ್ ಕರೋಲ್ ಅವರ ನ್ಯಾಯಪೀಠವು ತಮ್ಮ ಭಿನ್ನಮತದ ತೀರ್ಪಿನಲ್ಲಿ [Writ Petition (Civil) No. 115 of 2004 - Judgement dated 23 July, 2024], ಸಮಗ್ರವಾದ ಜಿಎಂ ನೀತಿಯನ್ನು ರೂಪಿಸುವಂತೆ ಸರಕಾರಕ್ಕೆ ಸೂಚಿಸುವಲ್ಲಿ ಏಕಮತ ಹೊಮ್ಮಿಸಿದ್ದರು. ನ್ಯಾ. ನಾಗರತ್ನಾ ಅವರ ತೀರ್ಪಿನಲ್ಲಿ, ಈ ರೀತಿಯ ಬೆಳೆಗಳ ಜೈವಿಕ ಸುರಕ್ಷತೆಯಂತಹ ಅಂಶಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ರೂಪಿಸಬೇಕು. ವಿದೇಶಗಳಲ್ಲಿ ಸಂಶೋಧನೆ ಆಗಿದೆ ಎಂದ ಮಾತ್ರಕ್ಕೆ ಇಲ್ಲಿ ಗಡಿಬಿಡಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗಿಲ್ಲ. ಅದು ಆರ್ಥಿಕ, ಪರಿಸರ ಹಾನಿಗೆ ಕಾರಣ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಆದರೆ, ಇಲ್ಲಿಯ ತನಕವೂ ಭಾರತ ಸರಕಾರ ಈ ಕುರಿತು ಸಮಗ್ರವಾದ ಒಂದು ನೀತಿಯನ್ನು ರೂಪಿಸುವಲ್ಲಿ ಯಶಸ್ವಿ ಆಗಿಲ್ಲ. ಈಗ ಈ ಬಗ್ಗೆ ಹೋರಾಟಗಾರರು ಮತ್ತೆ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದು, ಅದು ಎಪ್ರಿಲ್ ತಿಂಗಳಿನಲ್ಲಿ ಮೂರು ಸದಸ್ಯರ ಪೀಠದ ಮೂಲಕ ಈ ವಿಚಾರಣೆಯನ್ನು ಮತ್ತೆ ಆರಂಭಿಸಿದೆ. ಹೀಗೆ, ವಿಚಾರ ಇನ್ನೂ ನ್ಯಾಯಾಲಯದ ಅಂಗಳದಲ್ಲಿರುವಾಗಲೇ, ಜೀನು ತಿದ್ದಿದ ಅಕ್ಕಿತಳಿಗಳನ್ನು ಸರಕಾರವೇ ಬಿಡುಗಡೆ ಮಾಡುವುದರ ಹಿಂದಿನ ಉದ್ದೇಶಗಳು ಅರ್ಥವಾಗುತ್ತಿಲ್ಲ.

2018ರಲ್ಲಿ ಯುರೋಪಿನ ಉನ್ನತ ನ್ಯಾಯಾಲಯವು, ಜಿಎಂ (ಕುಲಾಂತರಿ) ತಳಿಗಳಿಗೆ ಅನ್ವಯವಾಗುವ ಎಲ್ಲ ನಿಯಮಗಳೂ ಜೀನು ತಿದ್ದುಪಡಿಯಾದ (Gene edited) ತಳಿಗಳಿಗೂ ಅನ್ವಯ ಆಗಬೇಕು ಎಂದು ಆದೇಶ ನೀಡಿತ್ತು. ಇಂಗ್ಲೆಂಡಿನಲ್ಲಿ ಸೋಯಾಬೀನ್ ಜೀನು ತಿದ್ದುಪಡಿ ಮಾಡಿದ ತಳಿ ಮಾರುಕಟ್ಟೆಗೆ ಬಿಡುಗಡೆ ಆದಾಗ, ಅದು ಅನುದ್ದೇಶಿತ ಪರಿಣಾಮಗಳನ್ನು ಉಂಟುಮಾಡಿದ ಚರಿತ್ರೆಯೂ ನಮ್ಮ ಎದುರಿದೆ.

ಮಾನ್ಸಾಂಟೊ, ಬಾಯರ್, ಕಾರ್ಪ್ ಸಯನ್ಸ್, ಡುಪಾಂಟ್, ಸಿಂಜೆಂಟಾ, ಲಿಮಾಗ್ರೇನ್ ಇತ್ಯಾದಿ ಬಹುರಾಷ್ಟ್ರೀಯ ಸಂಸ್ಥೆಗಳು ಇಂದು ಜೀನು ತಿದ್ದುಪಡಿ ಮಾಡಿದ ತಮ್ಮ ತಳಿಗಳೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಜಿಎಂ ಹಣೆಪಟ್ಟಿ ಇಟ್ಟು ಹೊರಟರೆ ಪ್ರವೇಶ ಸುಲಭ ಇಲ್ಲ ಎಂದು ಅರಿತಿರುವ ಜಾಗತಿಕ ಕಾರ್ಪೊರೇಟ್ ಬಲಿಷ್ಠರು ಈಗ ‘ಜೀನು ತಿದ್ದುಪಡಿ’ ಎಂಬ ಹೆಸರಿನಲ್ಲಿ ಭಾರತದ ಮಾರುಕಟ್ಟೆಯ ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪ್ರಭುತ್ವದ ಕಡೆಯಿಂದ ಅದಕ್ಕೆ ಪರೋಕ್ಷ ಬೆಂಬಲ ಇರಬಹುದೇನೋ ಎಂಬ ಶಂಕೆ ಈ ಹಂತದಲ್ಲಿ ಮೂಡಿದರೆ ಅಚ್ಚರಿ ಇಲ್ಲ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X