Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ನಗದು ರಹಿತ ಆದಂತೆಲ್ಲ ನಗುವವರು ಯಾರೆಲ್ಲ?

ನಗದು ರಹಿತ ಆದಂತೆಲ್ಲ ನಗುವವರು ಯಾರೆಲ್ಲ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು3 May 2025 10:11 AM IST
share
ನಗದು ರಹಿತ ಆದಂತೆಲ್ಲ ನಗುವವರು ಯಾರೆಲ್ಲ?
‘ನಗದು ರಹಿತ’ ಎಂಬ ಪರಿಕಲ್ಪನೆಯ ಹಿಂದೆ, ಭ್ರಷ್ಟಾಚಾರ, ಕಪ್ಪುಹಣ ನಿರ್ಮೂಲನದಂತಹ ಸದಾಶಯಗಳೂ ಇದ್ದವು. ಆದರೆ ಇಂದು ಅವು ಯಾವುದನ್ನೂ ಕಿಂಚಿತ್ತೂ ಅಲುಗಾಡಿಸುವುದು ಸಾಧ್ಯವಾಗಿಲ್ಲ. ಬದಲಾಗಿ, ಸೈಬರ್ ವಂಚನೆ ಎಂಬ ಹೊಸದೊಂದು ಕಳ್ಳಹಾದಿ ತೆರೆದುಕೊಂಡಿದೆ. ಇಂತಹದೊಂದು ಸನ್ನಿವೇಶದಲ್ಲಿ ಖಾಸಗಿ ವ್ಯವಸ್ಥೆಗೆ ದೇಶವನ್ನು ‘ನಗದು ರಹಿತ’ಗೊಳಿಸುವ ಜವಾಬ್ದಾರಿ ವಹಿಸಿದರೆ ನಗಲು ಉಳಿಯುವವರು ‘ಖಾಸಗಿಯವರು’ ಮಾತ್ರ!

ಈ ವರ್ಷ ಮಾರ್ಚ್ 22, ಎಪ್ರಿಲ್ 2 ಮತ್ತು ಎಪ್ರಿಲ್ 12ರಂದು ದೇಶದಲ್ಲಿ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಪಾವತಿಗಳಲ್ಲಿ ತಾಂತ್ರಿಕ ಅಡಚಣೆ ಆಗಿತ್ತು. ಭಾರತ ಸರಕಾರದ ನಗದು ರಹಿತ ಆರ್ಥಿಕತೆ ಎಂಬ ಮಹತ್ವಾಕಾಂಕ್ಷೆಗೆ ಈ ಅಡಚಣೆಯು ಒಂದು ಮಟ್ಟಿಗಿನ ‘ವಾಸ್ತವ ದರ್ಶನ’ ಮಾಡಿಸಿದ ಹಿನ್ನೆಲೆಯಲ್ಲಿ, ಇದೇ ಎಪ್ರಿಲ್ 29ರಂದು ಈ ಬಗ್ಗೆ ಪರಿಶೀಲನೆಗೆಂದು ಹಣಕಾಸು ಸಚಿವರು ಸಭೆಯೊಂದನ್ನು ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವ್ಯವಸ್ಥೆ ತನ್ನ ನಂಬಿಕೆ ಉಳಿಸಿಕೊಳ್ಳುವಲ್ಲಿ, ಬಳಕೆದಾರರಿಗೆ ಸುಖಾನುಭವ ನೀಡುವಲ್ಲಿ ಹಾಗೂ ಭವಿಷ್ಯದಲ್ಲಿ ತಾಂತ್ರಿಕ ಅಡಚಣೆಗಳು ಅಥವಾ ಸೈಬರ್ ಭದ್ರತೆಯ ಆತಂಕಗಳು ಕಾಣಿಸಿಕೊಳ್ಳದಂತೆ ಏರ್ಪಡಿಸಿಕೊಳ್ಳುವಲ್ಲಿ ಇರಬಹುದಾದ ಕಂದರಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು, ಈ ವ್ಯವಸ್ಥೆಯ ಉಸ್ತುವಾರಿ ಹೊತ್ತಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ಕ್ಕೆ ತಾಕೀತು ಮಾಡಿದ್ದರು. ಈ ಮಹತ್ವದ ಸಭೆಯಲ್ಲಿ ರಿಸರ್ವ್ ಬ್ಯಾಂಕಿನ ಪ್ರತಿನಿಧಿ, ಸರಕಾರದ ಹಣಕಾಸು ಕಾರ್ಯದರ್ಶಿ ಅಜಯ್ ಸೇಟ್, ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.

ದೇಶದ ಎಲ್ಲ ರಿಟೇಲ್ ಪಾವತಿ ಮೆಕ್ಯಾನಿಸಂಗಳನ್ನು ಏಕತ್ರಗೊಳಿಸುವ ನಿಟ್ಟಿನಲ್ಲಿ ಎನ್‌ಪಿಸಿಐ ಅನ್ನು ಭಾರತ ಸರಕಾರ ಆರಂಭಿಸಿದ್ದು, 2009ರಲ್ಲಿ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ. 2014ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕು, ಈ ನಿಟ್ಟಿನಲ್ಲಿ ತನ್ನ ಅಧ್ಯಯನದ ಕಾಣ್ಕೆಗಳನ್ನು ತೆರೆದಿಟ್ಟಿತು ಮತ್ತು 2016ರಲ್ಲಿ ಎನ್‌ಪಿಸಿಐ ಮೂಲಕ ಯುಪಿಐ ವ್ಯವಸ್ಥೆ ಜಾರಿಗೆ ಬಂದಿತು. ಹಲವು ಬ್ಯಾಂಕ್‌ಗಳ ಖಾತೆಗಳನ್ನು ಒಂದು ಮೊಬೈಲ್ ಆ್ಯಪ್‌ನಲ್ಲಿ ಜೋಡಿಸುವ ಮೂಲಕ ದೇಶದ ರಿಟೇಲ್ ಹಣ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಈ ತಂತ್ರಜ್ಞಾನ ಮಾಡಿದೆ. ಇಂದು ಜಗತ್ತಿನ ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. 2025 ಮಾರ್ಚ್ ಅಂತ್ಯಕ್ಕೆ ಭಾರತದಲ್ಲಿ ಈ ತನಕ 1,830 ಕೋಟಿಗೂ ಮಿಕ್ಕಿ ಡಿಜಿಟಲ್ ವ್ಯವಹಾರಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ 24.77 ಲಕ್ಷ ಕೋಟಿ ರೂ.ಗಳನ್ನು ಮೀರಿದೆ. ಈ ಬೆಳವಣಿಗೆ ಗಮನಾರ್ಹವಾದುದು.

ಸರಕಾರವು ಯುಪಿಐ ಅನ್ನು ಭವಿಷ್ಯದಲ್ಲಿ ಕರೆನ್ಸಿಗೆ ಪರ್ಯಾಯ ಎಂದು ಪರಿಭಾವಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಲು ಇದು ಸಕಾಲ. 140 ಕೋಟಿಗೂ ಮಿಕ್ಕಿ ಜನರಿರುವ ಈ ದೇಶದಲ್ಲಿ ಇಂದು ಸಕ್ರಿಯವಾಗಿ ಯುಪಿಐ ಬಳಸುತ್ತಿರುವವರ ಸಂಖ್ಯೆ ಸುಮಾರು 45 ಕೋಟಿ ಮಾತ್ರ. ದೇಶದ ಇಂಟರ್‌ನೆಟ್ ಬಳಕೆದಾರರು ಅಂದಾಜು 80.6ಕೋಟಿ. ಸ್ಮಾರ್ಟ್ ಫೋನ್ ಬಳಕೆದಾರರು ಸುಮಾರು 105 ಕೋಟಿ. ಅಂದರೆ, ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಅರ್ಧಕ್ಕರ್ಧ ಮಂದಿ ಮಾತ್ರ ಇನ್ನೂ ಯುಪಿಐ ಪಾವತಿಗಳತ್ತ ಆಕರ್ಷಿತರಾಗಿದ್ದಾರೆ. ಲಿಂಗ ಅಸಮಾನತೆ, ನಗರ-ಗ್ರಾಮೀಣ ಭಿನ್ನತೆ, ಇಂಟರ್‌ನೆಟ್ ಸಂಪರ್ಕ ಕೊರತೆ... ಇತ್ಯಾದಿ ಹಲವು ಕಾರಣಗಳಿಂದಾಗಿ, ಯುಪಿಐನಲ್ಲಿ ಒಳಗೊಳ್ಳುವಿಕೆಯ ಪ್ರಕ್ರಿಯೆ ಬಹಳ ನಿಧಾನವಾಗಿದೆ. ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿ ಜನ ಡಿಜಿಟಲ್ ಪಾವತಿಗಳತ್ತ ಅನಿವಾರ್ಯವಾಗಿ ಹೊರಳಿಕೊಂಡರೇ ಹೊರತು, ಅದು ಆರಾಮ-ಸುರಕ್ಷಿತ ಎಂಬ ಕಾರಣಕ್ಕಲ್ಲ. ಕೋವಿಡ್ ಪೂರ್ವ, 2018ರ ಮೇ ತಿಂಗಳಿನಲ್ಲಿ ಯುಪಿಐ ಮೂಲಕ ನಡೆದ ವಹಿವಾಟು ತಿಂಗಳಿಗೆ 33,260 ಕೋಟಿ ರೂ.ಗಳಾದರೆ, ಕೋವಿಡ್ ಬಳಿಕ 2021ರ ಮೇ ಹೊತ್ತಿಗೆ ಅದು 4.91 ಲಕ್ಷ ಕೋಟಿ ರೂ.ಗಳಿಗೆ ಏರಿತ್ತು. ಹಾಲಿ ಈ ವಹಿವಾಟು ತಿಂಗಳಿಗೆ 24.77 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಈಗ ಪ್ರತಿದಿನ ಸರಾಸರಿ 59 ಕೋಟಿ ವಹಿವಾಟುಗಳು ಯುಪಿಐ ಮೂಲಕ ನಡೆಯುತ್ತಿವೆ.

ಮೊನ್ನೆ ಪರಿಶೀಲನಾ ಸಭೆಯಲ್ಲಿ ಹಣಕಾಸು ಸಚಿವರು, 2-3 ವರ್ಷಗಳಲ್ಲಿ ಪ್ರತಿದಿನ 100 ಕೋಟಿ ವಹಿವಾಟುಗಳು ಯುಪಿಐ ಮೂಲಕ ನಡೆಯುವ ನಿರೀಕ್ಷೆ ಇದೆ. ಅದಕ್ಕೆ ಸನ್ನದ್ಧರಾಗಬೇಕು ಎಂದು ಸ್ಟೇಕ್ ಹೋಲ್ಡರ್‌ಗಳಿಗೆ ಸೂಚಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸರಕಾರ ಈಗಾಗಲೇ ವರ್ಷಕ್ಕೆ 1,500 ಕೋಟಿ ರೂ.ಗಳ ಸಬ್ಸಿಡಿಯನ್ನೂ ಈ ಕಾರಣಕ್ಕಾಗಿ ಒದಗಿಸುತ್ತಿದೆ. 2000 ರೂ.ಗಳಿಗಿಂತ ಕಡಿಮೆ ಮೊತ್ತದ ಪ್ರತೀ ಯುಪಿಐ ವಹಿವಾಟಿಗೆ ಸರಕಾರವು ಬ್ಯಾಂಕುಗಳಿಗೆ ಶೇ. 0.15 ಪ್ರೋತ್ಸಾಹನ ನೀಡುತ್ತಿದೆ.

ಯುಪಿಐ ಲೈಸೆನ್ಸ್ ಹೊಂದಿರುವ ದೇಶದ 22 ಟಿಪಿಎಎಪಿ (ಥರ್ಡ್ ಪಾರ್ಟಿ ಆಪ್ಲಿಕೇಷನ್ ಪ್ರೊವೈಡರ್ಸ್)ಗಳಲ್ಲಿ, ‘ಫೋನ್ ಪೇ’ಯು ಯುಪಿಐ ಮಾರುಕಟ್ಟೆಯ ಶೇ. 47 ಭಾಗದ ಮೇಲೆ ಹಿಡಿತ ಹೊಂದಿದ್ದರೆ, ‘ಗೂಗಲ್ ಪೇ’ಯು ಶೇ. 35 ಭಾಗದ ಮೇಲೆ ಹಿಡಿತ ಹೊಂದಿದೆ. ಉಳಿದ ಯುಪಿಐ ‘ಆಟಗಾರ’ರೆಲ್ಲ ಒಟ್ಟಾಗಿ ಶೇ. 18 ಮಾರುಕಟ್ಟೆಯ ಮೇಲೆ ಹಿಡಿತ ಹೊಂದಿದ್ದಾರೆ. ಯುಪಿಐ ವ್ಯವಹಾರ ಮಾತ್ರವಲ್ಲದೆ ಬೇರೆ ಬಹುಮುಖಿ ವ್ಯವಹಾರಗಳನ್ನೂ ಹೊಂದಿರುವ ಈ ಖಾಸಗಿ ಟಿಪಿಎಎಪಿಗಳು, ಯುಪಿಐ ವ್ಯವಹಾರದ ಮೂಲಕ ತಮಗೆ ಸಿಗುತ್ತಿರುವ ಹೊಕ್ಕುಬಳಕೆಯನ್ನು ತಮ್ಮ ಬೇರೆ ವ್ಯವಹಾರಗಳಿಗೆ (ವಿಮೆ, ಸಾಲ, ಇ-ಕಾಮರ್ಸ್ ಇತ್ಯಾದಿ) ಗ್ರಾಹಕರನ್ನು ಸೆಳೆಯುವ ಗಾಳವಾಗಿ ಬಳಸುತ್ತಿವೆ. ಅದಕ್ಕಾಗಿ ಭರಪೂರ ಇನ್ಸೆಂಟಿವ್‌ಗಳನ್ನೂ ತಮ್ಮ ಗ್ರಾಹಕರ ಮೊಣಕೈಗೆ ಮೆತ್ತುತ್ತಿವೆ. ಇದೇನೂ ಗುಟ್ಟಾಗಿ ನಡೆಯುತ್ತಿರುವ ಸಂಗತಿ ಅಲ್ಲ. ಈ ಖಾಸಗಿ ವ್ಯವಸ್ಥೆಗಳು ಮುಂದೆ ಯಾವುದಾದರೊಂದು ಹಂತದಲ್ಲಿ, ಸರಕಾರದ ಮೇಲೆ ಒತ್ತಡ ತಂದರೆ, ಅವರಿಗೂ ಪ್ರತೀ ವಹಿವಾಟಿನ ಮೇಲೆ ಲಾಭ ಬರತೊಡಗಿದರೆ ಅಚ್ಚರಿ ಇಲ್ಲ. ಎಟಿಎಂಗಳ ವಿಚಾರದಲ್ಲೂ ಹೀಗೇ ಆದದ್ದು. ಉಚಿತವಾಗಿ ಆರಂಭಗೊಂಡ ಎಟಿಎಂ ಮೂಲಕ ಹಣ ಪಡೆಯುವ ವ್ಯವಸ್ಥೆ ಈಗ ಪ್ರತೀ ವ್ಯವಹಾರಕ್ಕೂ ಶುಲ್ಕ ವಿಧಿಸುತ್ತಿದೆ. ಇದಕ್ಕಿಂತಲೂ ಆತಂಕಕಾರಿಯಾದ ಇನ್ನೊಂದು ಸಂಗತಿ ಎಂದರೆ, ದೇಶದ ಯುಪಿಐ ಮಾರುಕಟ್ಟೆಯ ಶೇ. 82ರ ಮೇಲೆ ಹಿಡಿತ ಹೊಂದಿರುವ ಎರಡು ಕಾರ್ಪೊರೇಟ್‌ಗಳೂ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳು. ಫೋನ್‌ಪೇಯು ವಾಲ್‌ಮಾರ್ಟ್ ಮಾಲಕತ್ವದ್ದಾದರೆ, ಗೂಗಲ್ ಪೇಯು ಆಲ್ಫಾಬೆಟ್ ಮಾಲಕತ್ವದ್ದು. ದೇಶದ ಕರೆನ್ಸಿಗೆ ಪರ್ಯಾಯ ಎಂದು ಭಾವಿಸಲಾಗಿರುವ ವ್ಯವಸ್ಥೆಯೊಂದನ್ನು ಈ ರೀತಿಯ ವಿದೇಶೀ ಹಿತಾಸಕ್ತಿಗಳ ಕೈಗೆ ಕೊಡುವುದು ಎಷ್ಟು ಸುರಕ್ಷಿತ? ಈ ಕಂಪೆನಿಗಳು ಈಗಾಗಲೇ ಜಗತ್ತಿನ ಹಲವೆಡೆ ಏಕಸ್ವಾಮ್ಯ ಸಂಬಂಧಿ ದಾವೆಗಳನ್ನು (Anti trust) ಎದುರಿಸುತ್ತಿವೆ. ಉದಾರೀಕರಣ, ಜಾಗತೀಕರಣ ಎಂಬ ಸಬೂಬುಗಳಿವೆಯಾದರೂ, ಭಾರತದಲ್ಲಿ ನಾವು ಈ ಕಾರ್ಪೊರೇಟ್‌ಗಳನ್ನು ಒಳಬಿಟ್ಟುಕೊಂಡಷ್ಟು ಸಲೀಸಾಗಿ ಅಮೆರಿಕ ನಮ್ಮ ಕಂಪೆನಿಗಳನ್ನು ಅಲ್ಲಿನ ಆಯಕಟ್ಟಿನ ಜಾಗಗಳಲ್ಲಿ ಒಳಬಿಟ್ಟುಕೊಂಡಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರಿಸಿಕೊಳ್ಳಬೇಕಾಗುತ್ತದೆ.

ದೀರ್ಘಕಾಲಿಕ ನೆಲೆಯಲ್ಲಿ ಭಾರತದ ಯುಪಿಐ ವ್ಯವಸ್ಥೆಯನ್ನು ಗಮನಿಸಿದರೆ, ಇದು ‘ನಗದು ರಹಿತ ಆರ್ಥಿಕತೆ’ ಎಂಬ ಹೆಸರಿನಲ್ಲಿ ದೇಶದ ಕರೆನ್ಸಿ ವ್ಯವಸ್ಥೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುತ್ತಿರುವ ಸಂಚಿನಂತೆ ಕಾಣಿಸುತ್ತಿದೆ. ಭಾರತ ಸರಕಾರ ತನ್ನದೇ ಆದ BHIM ಆ್ಯಪ್ ಅನ್ನು ಆರಂಭದಲ್ಲಿ ಉತ್ಸಾಹದಿಂದ ಸಿದ್ಧಪಡಿಸಿತಾದರೂ, ವಿದೇಶಿ ಸಂಸ್ಥೆಗಳ ಅಬ್ಬರದ ಎದುರು ಅದೀಗ ಸೊರಗಿ ಪೇಲವಗೊಂಡಿದೆ. ಸದ್ಯಕ್ಕೆ ಅದರ ಮಾರುಕಟ್ಟೆ ಪಾಲು ಕೇವಲ ಶೇ. 0.2 ಅಂತೆ. ಈ ಆಪ್ಲಿಕೇಷನ್ ಅನ್ನು ಕನಿಷ್ಠ ಪಕ್ಷ, ಯುಪಿಐ ವ್ಯವಸ್ಥೆಯನ್ನು ಡೆಮಕ್ರಟೈಸ್‌ಗೊಳಿಸುವುದಕ್ಕೆ ಮತ್ತು ಗ್ರಾಮೀಣ ಜನರನ್ನು ಈ ತಂತ್ರಜ್ಞಾನ ಬಳಸುವುದಕ್ಕೆ ಎಜ್ಯುಕೇಟ್ ಮಾಡಲು ಸರಕಾರ ಬಳಸಬಹುದಿತ್ತು. ಅದು ಆಗಿಲ್ಲ.

ಈಗಾಗಲೇ ದಿನಬೆಳಗಾದರೆ ಕೇಳಿಸುತ್ತಿರುವ ಸೈಬರ್ ವಂಚನೆ ಪ್ರಕರಣಗಳಲ್ಲಿ ಯುಪಿಐ ಪಾವತಿಗಳು ಗಮನಾರ್ಹ ಪ್ರಮಾಣದಲ್ಲಿ ಬಳಕೆ ಆಗುತ್ತಿವೆ. ಯುಪಿಐ ಕಾರಣದಿಂದ ಸೈಬರ್ ಅಪರಾಧಗಳಲ್ಲಿ ಶೇ. 15.3 ಹೆಚ್ಚಳ ಕಾಣಿಸಿಕೊಂಡಿದೆ ಎಂದು ಎನ್‌ಸಿಆರ್‌ಪಿ (ನ್ಯಾಷನಲ್ ಸೈಬ್‌ಕ್ರೈಂ ರಿಪೋರ್ಟಿಂಗ್ ಪೋರ್ಟಲ್) ಬೆಟ್ಟುಮಾಡಿದೆ. ಬ್ಯಾಂಕ್ ಖಾತೆಗಳ ಮೂಲಕವೇ ಈ ವಂಚನೆಗಳು ನಡೆದಿದ್ದರೂ, ಅದರ ಮೂಲಗಳನ್ನು ತಲುಪಿ, ಸೈಬರ್ ಅಪರಾಧಿಗಳನ್ನು ಹತ್ತಿಕ್ಕುವುದು ಈಗಲೇ ಸರಕಾರಕ್ಕೆ ಸಾಧ್ಯ ಆಗುತ್ತಿಲ್ಲ ಎಂದರೆ, ಇನ್ನಷ್ಟು ಜನ ಈ ಯುಪಿಐ ಕಾಲದ ವ್ಯಾಪ್ತಿಗೆ ಬಂದಾಗ, ಅದನ್ನೆಲ್ಲ ನಿಯಂತ್ರಿಸುವುದು ಹೇಗೆ? ಈ ವಂಚನೆ ಕಾಲದಲ್ಲಿ ನೇರ ಟಿಪಿಎಪಿಗಳೇ ಭಾಗೀದಾರಿಗಳಲ್ಲ ಎಂಬುದನ್ನು ಅಲ್ಲಗಳೆಯುವುದು ಹೇಗೆ? ‘ನಗದು ರಹಿತ’ ಎಂಬ ಪರಿಕಲ್ಪನೆಯ ಹಿಂದೆ, ಭ್ರಷ್ಟಾಚಾರ, ಕಪ್ಪುಹಣ ನಿರ್ಮೂಲನದಂತಹ ಸದಾಶಯಗಳೂ ಇದ್ದವು. ಆದರೆ ಇಂದು ಅವು ಯಾವುದನ್ನೂ ಕಿಂಚಿತ್ತೂ ಅಲುಗಾಡಿಸುವುದು ಸಾಧ್ಯವಾಗಿಲ್ಲ. ಬದಲಾಗಿ, ಸೈಬರ್ ವಂಚನೆ ಎಂಬ ಹೊಸದೊಂದು ಕಳ್ಳಹಾದಿ ತೆರೆದುಕೊಂಡಿದೆ. ಇಂತಹದೊಂದು ಸನ್ನಿವೇಶದಲ್ಲಿ ಖಾಸಗಿ ವ್ಯವಸ್ಥೆಗೆ ದೇಶವನ್ನು ‘ನಗದು ರಹಿತ’ಗೊಳಿಸುವ ಜವಾಬ್ದಾರಿ ವಹಿಸಿದರೆ ನಗಲು ಉಳಿಯುವವರು ‘ಖಾಸಗಿಯವರು’ ಮಾತ್ರ!

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X