Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಕರ್ನಾಟಕತ್ವದ ಎದುರಿನ ಸವಾಲುಗಳು

ಕರ್ನಾಟಕತ್ವದ ಎದುರಿನ ಸವಾಲುಗಳು

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ4 Nov 2024 10:41 AM IST
share
ಕರ್ನಾಟಕತ್ವದ ಎದುರಿನ ಸವಾಲುಗಳು

ಕನ್ನಡ ಭಾಷೆಯನ್ನಾಡುವ ಜನರು ತಮ್ಮದೇ ರಾಜ್ಯಕ್ಕಾಗಿ ಹೋರಾಟ ನಡೆಸಿ ಗೆಲುವಿನ ಬಾವುಟ ಹಾರಿಸಿ 69 ವರ್ಷಗಳಾದವು. ಇದೊಂದೇ ಅಲ್ಲ, ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾದವು. ಅಪಾರ ತ್ಯಾಗ, ಬಲಿದಾನದಿಂದ ಉದಯವಾದ ಕರ್ನಾಟಕ ಸ್ವಾತಂತ್ರ್ಯದ ಏಳು ದಶಕಗಳ ನಂತರ ತನ್ನ ಅಸ್ತಿತ್ವಕ್ಕಾಗಿ ಅಳಿವು, ಉಳಿವಿನ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಒಂದೇ ದೇಶ, ಒಂದೇ ಭಾಷೆ , ಒಂದೇ ಸಂಸ್ಕೃತಿಯ ಹೆಸರಿನಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಹೊಸಕಿ ಹಾಕುವ ಹುನ್ನಾರ ನಡೆದಿದೆ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಅವಿಭಜಿತ ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಗೆ ಸವಾಲು ಎದುರಾಗಿದೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಿಲ್ಲಿಯ ನಿರಂಕುಶ ಪ್ರಭುಗಳ ನುಂಗಲಾಗದ ತುತ್ತಾಗಿದ್ದಾರೆ. ಹೀಗೆ ಸರ್ವಾಧಿಕಾರಕ್ಕೆ ಸವಾಲು ಹಾಕಿ ನಿಂತ ದಕ್ಷಿಣದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಕಾರಣ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಲು ದಿಲ್ಲಿಯ ವಿಶ್ವಗುರು ಹಾಗೂ ಅವರ ಶಿಷ್ಯ ಮಸಲತ್ತು ಮಾಡುತ್ತಲೇ ಇದ್ದಾರೆ.

ಕರ್ನಾಟಕದ ಜನರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬೇಕಾದ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಸಿದ್ದರಾಮಯ್ಯನವರಿಗೆ ಕರ್ನಾಟಕದ ನೇತೃತ್ವವನ್ನು ನೀಡಿದ್ದಾರೆ. ಹೀಗೆ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ ಸರಕಾರವನ್ನು ಕೆಡವಲು ಆಪರೇಷನ್ ಕಮಲದಂಥ ಅನೈತಿಕ ಮಾರ್ಗದ ಮೂಲಕ ಸಂಚು ನಡೆಸಿದ್ದಾರೆ. ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಿಗೆ ತಾವು ಬಯಸಿದ ಮುಖ್ಯಮಂತ್ರಿಯನ್ನು ತರಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿಂದೆಯಂತಹ ಒಬ್ಬನ್ನನು ಸೃಷ್ಟಿಸಲು ಮಸಲತ್ತುಗಳು ದಿಲ್ಲಿ ದರಬಾರಿನಲ್ಲಿ ನಡೆಯುತ್ತಿದೆ. ಕರ್ನಾಟಕದ ಶಿಂದೆಯಾಗುವ ಕನಸನ್ನು ಕುಮಾರ ಸ್ವಾಮಿ ಕಾಣುತ್ತಿದ್ದಾರೆ.

ಸ್ವಾತಂತ್ರ್ಯದ ನಂತರ ಅಸ್ತಿತ್ವಕ್ಕೆ ಬಂದ ಭಾಷಾವಾರು ಪ್ರಾಂತಗಳ ರಚನೆಯನ್ನು ಬಲವಾಗಿ ವಿರೋಧಿಸಿದ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅದೇನೇ ಇರಲಿ ಕರ್ನಾಟಕ ಹೇಗೆ ಅಸ್ತಿತ್ವಕ್ಕೆ ಬಂತು ಎಂಬ ಬಗ್ಗೆ ನಾಡಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿರುತ್ತದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಹಾಗೂ ಒಡೆದು ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಬಹುದೊಡ್ಡ ಏಕೀಕರಣ ಹೋರಾಟವೇ ನಡೆಯಿತು.

ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಈ ವರ್ಷ ಸುವರ್ಣ ಕರ್ನಾಟಕದ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

ಕರ್ನಾಟಕ ರಾಜ್ಯೋತ್ಸವವನ್ನು ರವಿವಾರ ಸಂಭ್ರಮದಿಂದ ಆಚರಿಸಲಾಯಿತು. ಭಾಷಾವಾರು ಪ್ರಾಂತಗಳ ರಚನೆಯನ್ನು ಬಲವಾಗಿ ವಿರೋಧಿಸಿದ್ದ ವಿಚಾರಧಾರೆಗೆ ಸೇರಿದ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವಾಗ ಹೊಸ ಸವಾಲುಗಳು ಸಹಜವಾಗಿ ಎದುರಾಗಿವೆ.

ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿ ಹೋಗಿ 22 ತುಂಡಾಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸಲು ನಡೆದ ಹೋರಾಟದ ಕತೆ ರೋಮಾಂಚಕವಾದದ್ದು. ಇಂದಿನ ಪೀಳಿಗೆ, ಅದರಲ್ಲೂ ಮುಖ್ಯವಾಗಿ ಕನ್ನಡ ಹೋರಾಟಗಾರರು ಈ ನಾಡು ಒಂದಾದ ಚರಿತ್ರೆಯ ಪುಟಗಳನ್ನು ಓದಿ ತಿಳಿದುಕೊಳ್ಳುವುದು ಅಗತ್ಯವಿದೆ.

ಈಗ ಉತ್ತರ ಕರ್ನಾಟಕ ಎಂದು ಕರೆಯಲ್ಪಡುವ ಧಾರವಾಡ, ಬೆಳಗಾವಿ, ಬಿಜಾಪುರ, ಕಾರವಾರ ಜಿಲ್ಲೆಗಳು 1956ಕ್ಕಿಂತ ಮುಂಚೆ ಮುಂಬೈ ಕರ್ನಾಟಕದಲ್ಲಿ ಇದ್ದವು. ಅದಕ್ಕೆ ಅವುಗಳನ್ನು ಸಾಮಾನ್ಯವಾಗಿ ಮುಂಬೈ ಕರ್ನಾಟಕ ಎಂದು ಕರೆಯುತ್ತಾರೆ. ಇದೇ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳು ಹೈದರಾಬಾದ್‌ನ ನಿಝಾಮ ರಾಜ್ಯಕ್ಕೆ ಸೇರಿದ್ದವು. ಆದ್ದರಿಂದ ಅವುಗಳಿಗೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈಗ ಕಲ್ಯಾಣ ಕರ್ನಾಟಕವಾಗಿದೆ.ಇನ್ನು ಬಳ್ಳಾರಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಪ್ರಾಂತದಲ್ಲಿ ಇದ್ದವು. ಹಿರಿಯ ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲ್ಲಾಯರು 1953ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣವಾಗುವ ಮುನ್ನವೇ ಮದ್ರಾಸ್ ಪ್ರಾಂತದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದರೆಂಬುದು ಗಮನಾರ್ಹ. ಇನ್ನು ಉಳಿದಂತೆ ಈಗ ದಕ್ಷಿಣ ಕರ್ನಾಟಕ ಎಂದು ಕರೆಯಲ್ಪಡುವ ಬೆಂಗಳೂರು, ಮೈಸೂರು, ಕೋಲಾರ,ತುಮಕೂರು ಹಾಸನ, ಶಿವಮೊಗ್ಗ , ದಾವಣಗೆರೆ , ಚಿತ್ರದುರ್ಗ ಭಾಗಗಳು ಮೈಸೂರು ರಾಜರ ಆಡಳಿತಕ್ಕೆ ಒಳಪಟ್ಟಿದ್ದವು.

ಐವತ್ತರ ದಶಕದ ಆರಂಭದ ದಿನಗಳವು.ದೇಶ ಹೊಸದಾಗಿ ಸ್ವಾತಂತ್ರ್ಯ ಪಡೆದಿತ್ತು. ಹಲವಾರು ಭಾಷೆ, ಧರ್ಮ, ಪ್ರದೇಶ, ಸಂಸ್ಕೃತಿಗಳ ಜನ ಸೇರಿ ಒಂದು ಭಾರತ ದೇಶವಾಗಿತ್ತು. ಆದರೆ ಭಾಷಾ ವೈಶಿಷ್ಟ್ಯತೆ, ಐಡಂಟಿಟಿಗಳನ್ನು ಉಳಿಸಿಕೊಳ್ಳುವ ಉತ್ಸುಕತೆ ಎಲ್ಲೆಡೆ ಕಂಡು ಬರುತ್ತಿತ್ತು. ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ತೆಲುಗು ರಾಜ್ಯ ಸ್ಥಾಪನೆಗಾಗಿ ಪೊಟ್ಟಿ ಶ್ರೀರಾಮುಲು ಆಮರಣ ಅನ್ನ ಸತ್ಯಾಗ್ರಹ ಮಾಡಿ ಅಸುನೀಗಿದ ನಂತರ ಭಾಷಾವಾರು ರಾಜ್ಯಗಳ ರಚನೆಯ ಬೇಡಿಕೆಗೆ ಅಂದಿನ ನೆಹರೂ ನೇತೃತ್ವದ ಕೇಂದ್ರ ಸರಕಾರ ಮಣಿಯಬೇಕಾಯಿತು.

ಆಗ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಏಕೀಕರಣಕ್ಕಾಗಿ ಬಹುದೊಡ್ಡ ಹೋರಾಟ ನಡೆಯಿತು. ಕರ್ನಾಟಕ ಏಕೀಕರಣದ ಬಗ್ಗೆ ಮೈಸೂರು ಪ್ರಾಂತದ ಜನರಿಗೆ ಅದರಲ್ಲೂ ರಾಜಕಾರಣಿಗಳಿಗೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಮಾತ್ರ ಈ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿದ್ದರು.ಉಳಿದಂತೆ ಉತ್ತರ ಕರ್ನಾಟಕದ ಇಂಚಗೇರಿ ಮಠದ ಮಹಾದೇವಪ್ಪ ಮುರಗೋಡ (ದೇವರು) ಚಿನ್ಮಯಸ್ವಾಮಿ ಓಂಕಾರಮಠ, ಶಾಂತಿನಾಥ ಇಂಗಳೆ, ತಲ್ಲೂರು ರಾಯನಗೌಡರು, ಅಳವಂಡಿ ಶಿವಮೂರ್ತಿ ಸ್ವಾಮಿ, ಮುನವಳ್ಳಿ ವಕೀಲರು, ಮಂಗಳೂರಿನ ಕೆ.ಆರ್.ಕಾರಂತರು, ಕಮ್ಯುನಿಸ್ಟ್ ನಾಯಕರಾದ ಬಿ.ವಿ.ಕಕ್ಕಿಲ್ಲಾಯರು, ಎನ್.ಕೆ.ಉಪಾಧ್ಯಾಯರು, ಹುಬ್ಬಳ್ಳಿಯ ಕಮ್ಯುನಿಸ್ಟ್ ನಾಯಕ ಎ.ಜೆ.ಮುಧೋಳ, ಬಳ್ಳಾರಿಯ ಕೋ ಚನ್ನಬಸಪ್ಪನವರು ,

ರೆಹಮಾನ್ ಸಾಹೇಬರು,ಕರ್ನಾಟಕ ಏಕೀಕರಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದರು.

ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟದಲ್ಲಿ ಕರ್ನಾಟಕದಲ್ಲಿ ಬಲಿದಾನ ಮಾಡಿದ ಏಕೈಕ ವ್ಯಕ್ತಿ ಬಳ್ಳಾರಿಯ ರಮಜಾನ ಸಾಹೇಬರು. ಇಂದಿನ ಅನೇಕ ಕನ್ನಡ ಹೋರಾಟಗಾರರಿಗೆ ಇದರ ಹೋರಾಟದ ಇತಿಹಾಸ ಗೊತ್ತಿಲ್ಲ.

ಆಗ ಅಂದರೆ 1952ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು (ಅಕರಾನಿ) ಅಸ್ತಿತ್ವಕ್ಕೆ ಬಂತು. ಅದು ಸುಮಾರು ಹತ್ತು ವರ್ಷ ಸಕ್ರಿಯವಾಗಿತ್ತು. ಮಹಾದೇವಪ್ಪನವರ ಹುಬ್ಬಳ್ಳಿಯ ಗಿರೀಶ ಆಶ್ರಮದಲ್ಲಿ ಮೊದಲ ಸಭೆ ಸೇರಿತು. ನಂತರ ಹಲವಾರು ಸಭೆಗಳು ನಡೆದವು. ನಂತರ 1954ರಲ್ಲಿ ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಮೊದಲ ಸಮಾವೇಶ ನಡೆಯಿತು. ಈ ಸಭೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಸಮಿತಿಗೆ ಪದಾಧಿಕಾರಿಗಳ ನೇಮಕವಾಯಿತು. ಕೆ.ಆರ್.ಕಾರಂತರು ಅಧ್ಯಕ್ಷರಾದರು ಹಾಗೂ ಬಿ.ವಿ.ಕಕ್ಕಿಲ್ಲಾಯರು ಪ್ರಧಾನ ಕಾರ್ಯದರ್ಶಿಯಾದರು.

ಇದಕ್ಕಿಂತ ಮೊದಲು ರೋಣದ ದೊಡ್ಡಮೇಟಿ ಅಂದಾನಪ್ಪನವರು ಮೊದಲ ಬಾರಿ ಕರ್ನಾಟಕಾಂಬೆಯ ಫೋಟೊ ಇಟ್ಟುಕೊಂಡು ಅನ್ನ ಸತ್ಯಾಗ್ರಹ ಆರಂಭಿಸಿದರು. ಇದರಿಂದ ಕನ್ನಡಿಗರ ಜಾಗೃತಿಗೆ ಚಾಲನೆ ದೊರಕಿತು.

ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಹುಬ್ಬಳ್ಳಿ ಸಮೀಪದ ಅದರಗುಂಚಿಯ ಶಂಕರ ಗೌಡರ ಆಮರಣ ನಿರಶನ ಕೂಡ ನಡೆಯಿತು.ಆಗ ಹೋರಾಟದ ಕಾವು ತೀವ್ರಗೊಂಡಿತು.ಅಂದಿನ ಕಾಂಗ್ರೆಸ್ ನಾಯಕರು ಒಳಗೊಳಗೆ ಏಕೀಕರಣದ ಪರವಾಗಿ ಇದ್ದರೂ ಕಾಂಗ್ರೆಸ್ ಹೈಕಮಾಂಡ್‌ಗೆ ಅದರಲ್ಲೂ ನೆಹರೂ ಅವರಿಗೆ ಹೆದರಿ ಬಹಿರಂಗವಾಗಿ ಮಾತಾಡುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಕನ್ನಡ ಹೋರಾಟಗಾರರು ಹುಬ್ಬಳ್ಳಿಯಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಭೆಯ ಸಂದರ್ಭದಲ್ಲಿ ಅಂದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪನವರ ವಾಹನಕ್ಕೆ ಬೆಂಕಿ ಹಚ್ಚಿದರು. ಪೊಲೀಸರು ಗೋಲಿಬಾರ್ ಮಾಡಿದರು. ಈ ಎಲ್ಲ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ 1956ನೇ ಇಸವಿ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂತು. ಭಾಷೆಯ ಆಧಾರದಲ್ಲಿ ಕರ್ನಾಟಕ ನಿರ್ಮಾಣವಾಯಿತು. ಆದರೂ ಕನ್ನಡ ಭಾಷಿಕ ಪ್ರದೇಶಗಳಾದ ಕಾಸರಗೋಡು, ಮಂಜೇಶ್ವರ, ಹೊಸೂರು, ತಾಳವಾಡಿ, ಸೊಲ್ಲಾಪುರ, ಅದವಾನಿ ಮುಂತಾದ ಪ್ರದೇಶಗಳನ್ನು ಕರ್ನಾಟಕದಲ್ಲಿ ಸೇರಿಸಿಕೊಳ್ಳಲು ಆಗಲಿಲ್ಲ ಎಂಬುದೊಂದು ವಿಷಾದದ ಸಂಗತಿಯಾಗಿದೆ. ಆದರೂ ಅವುಗಳು ಭಾವನಾತ್ಮಕವಾಗಿ ಕರ್ನಾಟಕದ ಜೊತೆಗಿವೆ ಅಂದರೆ ಅತಿಶಯೊಕ್ತಿಯಲ್ಲ.

ಕರ್ನಾಟಕವನ್ನು ಕಟ್ಟಲು ರಾಜಕಾರಣಿಗಳು ಮತ್ತು ಹೋರಾಟಗಾರರು ಮಾತ್ರ ಶ್ರಮಿಸಲಿಲ್ಲ. ಇವರಿಗಿಂತ ಮಿಗಿಲಾಗಿ ನಾಡಿನ ಸಾರಸ್ವತಲೋಕದ ಕವಿಗಳು, ಕಲಾವಿದರು ಕೂಡ ತಮ್ಮ ಕೊಡುಗೆ ನೀಡಿದರು. ಕುವೆಂಪು, ಅ.ನ.ಕೃಷ್ಣರಾಯರು, ನಿರಂಜನ , ಕಟ್ಟೀಮನಿ, ಬಿ.ಎ.ಸನದಿ, ನಿಸಾರ್ ಅಹ್ಮದ್, ಲಂಕೇಶ್, ಅನಂತಮೂರ್ತಿ, ಅಡಿಗ, ಬಿ.ಎಂ.ಇದಿನಬ್ಬ, ರಾವ್ ಬಹಾದ್ದೂರ್, ಮ.ರಾಮಮೂರ್ತಿ ಹೀಗೇ ಅನೇಕರು ಅವರದೇ ಆದ ಕೊಡುಗೆ ನೀಡಿದ್ದಾರೆ.

ಇನ್ನೂ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಗದುಗಿನ ಹುಯಿಲಗೋಳ ನಾರಾಯಣರಾಯರು (1884-1971)‘ಉದಯವಾಗಲಿ ಚೆಲುವ ಕನ್ನಡನಾಡು’ ಎಂಬ ಪದ್ಯವನ್ನು ಬರೆದರು. ಅದು ಕರ್ನಾಟಕ ಏಕೀಕರಣ ಕಾಲದ ನಾಡಗೀತೆಯಾಗಿತ್ತು. ಆಗ ಅಂದರೆ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲು ಹುಯಿಲಗೋಳರು ಈ ಪದ್ಯ ಬರೆದಿದ್ದರು. ಆ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ್ಮಾ ಗಾಂಧೀಜಿಯವರ ಎದುರು ಗಾನ ಸರಸ್ವತಿ ಗಂಗೂಬಾಯಿ ಹಾನಗಲ್ ಅವರು ಈ ಹಾಡನ್ನು ಹಾಡಿದರು.

ಧಾರವಾಡದ ಶಾಂತಕವಿಗಳು ( ಸಕ್ಕರಿ ಬಾಳಾಚಾರ್ಯ) ಕರಾವಳಿಯ ಪಂಜೆ ಮಂಗೇಶರಾಯರು, ಹೀಗೆ ಅನೇಕರ ಕೊಡುಗೆ ಈ ನಾಡಿಗಿದೆ.

ಭಾಷೆಯ ಆಧಾರದಲ್ಲಿ ನಾವು ಒಂದಾಗಲು ಕಟ್ಟಿದ ಕರ್ನಾಟಕ ಈಗ ಹೆಸರಿಗೆ ಮಾತ್ರ ಒಂದಾಗಿದೆ.ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಎಂದೆಲ್ಲ ಅಪಸ್ವರದ ಜೊತೆ ಜಾತಿಯ ಅಡ್ಡಗೋಡೆಗಳು ಅಲ್ಲಲ್ಲಿ ಎದ್ದು ನಿಲ್ಲುತ್ತಿವೆ.ವೀರಶೈವರು, ಒಕ್ಕಲಿಗರು, ಬ್ರಾಹ್ಮಣರು ಮುಸಲ್ಮಾನರು, ಕ್ರೈಸ್ತರು, ಹೀಗೆ ಐಡಂಟಿಟಿಗಳು ಕನ್ನಡದ ಏಕತೆಗೆ ಅಡ್ಡಿಯಾಗಿವೆ. ಇವುಗಳನ್ನೆಲ್ಲ ದಾಟಿ ಭಾವನಾತ್ಮಕವಾಗಿ ಕನ್ನಡಿಗರು ಒಂದಾಗಬೇಕಾಗಿದೆ.

ಈಗಂತೂ ಒಂದೇ ದೇಶ ,ಒಂದೇ ಭಾಷೆ, ಒಂದೇ ಧರ್ಮದ ಹೆಸರಿನಲ್ಲಿ ಭಾಷಾವಾರು ಪ್ರಾಂತಗಳ ಪ್ರಾದೇಶಿಕ, ಸಾಂಸ್ಕೃತಿಕ ಅಸ್ಮಿತೆಯನ್ನೇ ಅಳಿಸಿ ಹಾಕುವ ಹುನ್ನಾರ ನಡೆದಿದೆ. ಬಲವಂತದ ಹಿಂದಿ ಹೇರಿಕೆ ಈ ನೆಲದ ಜನಭಾಷೆಗೆ ಕಂಟಕಕಾರಿಯಾಗಿದೆ.ಆದ್ದರಿಂದ ಕನ್ನಡಿಗರು ಯಾವುದೇ ಧರ್ಮಕ್ಕೆ, ಜಾತಿಗೆ,ಪ್ರದೇಶಕ್ಕೆ ಸೇರಿರಲಿ ತಮ್ಮ ನೆಲದ, ಜನರ ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪಣ ತೊಡಬೇಕಾಗಿದೆ.

ಕೇಂದ್ರದ ಬಿಜೆಪಿ ಸರಕಾರ ರಾಜ್ಯ ಸರಕಾರಗಳನ್ನು ಮುನ್ಸಿಪಾಲಿಟಿ ಮಟ್ಟಕ್ಕೆ ತಂದಿದೆ. ರಾಜ್ಯಾಂಗದ ಜಂಟಿ ಪಟ್ಟಿಯಲ್ಲಿರುವ ಶಿಕ್ಷಣ, ಕಾರ್ಮಿಕ, ಕೃಷಿ, ಮುಂತಾದ ವಿಷಯಗಳ ಕುರಿತಂತೆ ತನ್ನ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ಹೇರುತ್ತಿದೆ. ಜಿ.ಎಸ್.ಟಿ.ಯನ್ನು ತಂದು ರಾಜ್ಯಗಳ ಆದಾಯ ಮೂಲಗಳಿಗೆ ಕತ್ತರಿ ಪ್ರಯೋಗ ಮಾಡಿದೆ. ಸಂವಿಧಾನದ ಪ್ರಕಾರ, ರಾಷ್ಟ್ರೀಯತೆಗಳ ಒಕ್ಕೂಟ, ಕನ್ನಡ ರಾಷ್ಟ್ರೀಯತೆ ಸೇರಿದಂತೆ ಆಯಾ ಪ್ರದೇಶಗಳ ಪ್ರಾದೇಶಿಕ ರಾಷ್ಟ್ರೀಯತೆಗಳು ಭಾರತೀಯ ರಾಷ್ಟ್ರೀಯತೆಯಷ್ಟೇ ಮುಖ್ಯ. ಎರಡೂ ಪರಸ್ಪರ ಪೂರಕವಾಗಿರಬೇಕು. ಆದರೆ ಈಗ ಪ್ರಾದೇಶಿಕ ರಾಷ್ಟ್ರೀಯತೆ ಮತ್ತು ಅಸ್ಮಿತೆಯನ್ನು ಹೊಡೆದು ಹಾಕಿ ಏಕ ರಾಷ್ಟ್ರೀಯತೆಯನ್ನು ಹೇರುವ ಮಸಲತ್ತು ನಡೆದಿದೆ.ರಾಷ್ಟ್ರಕವಿ ಕುವೆಂಪು ಕರ್ನಾಟಕ ಮಾತೆಯನ್ನು ಭಾರತ ಮಾತೆಯ ತನುಜಾತೆ ಎಂದು ಕರೆದರು. ಆದರೆ ಈಗ ತನುಜಾತೆಯನ್ನು ಸೊರಗಿಸುವ ಷಡ್ಯಂತ್ರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

ಇಂಥ ಸಂಕೀರ್ಣ ಸನ್ನಿವೇಶದಲ್ಲಿ ಭಾರತಿಯತೆಯ ಅಬ್ಬರದಲ್ಲಿ ಕರ್ನಾಟಕತ್ವ ಕಳೆಗುಂದಬಾರದು. ಕರ್ನಾಟಕ ಉಳಿದರೆ ಕನ್ನಡ ಉಳಿಯುತ್ತದೆ. ದಿಲ್ಲಿಯ ಗುಲಾಮಗಿರಿ ಮಾಡುವ ಪಕ್ಷಗಳಿಂದ ಕನ್ನಡ ಪರಂಪರೆ ಉಳಿಯುವುದಿಲ್ಲ. ಬರೀ ರಾಜ್ಯೋತ್ಸವ ಮಾಡಿ, ಪರೇಡ್‌ನಲ್ಲಿ ಸಂಭ್ರಮಿಸಿದರೆ ಸಾಲದು, ಕರ್ನಾಟಕತ್ವ ಉಳಿಸಿಕೊಳ್ಳಲು ಧ್ವನಿಯೆತ್ತಬೇಕಾಗಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X