Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ಬೆಳಕಿನ ಹಾದಿಯಲ್ಲಿನ ಮಕ್ಕಳ ಕಥೆಗಳು...

ಬೆಳಕಿನ ಹಾದಿಯಲ್ಲಿನ ಮಕ್ಕಳ ಕಥೆಗಳು...

ಮಹಾದೇವ ಬಸರಕೋಡ ಅಮೀನಗಡಮಹಾದೇವ ಬಸರಕೋಡ ಅಮೀನಗಡ14 July 2026 2:46 PM IST
share
ಬೆಳಕಿನ ಹಾದಿಯಲ್ಲಿನ ಮಕ್ಕಳ ಕಥೆಗಳು...

ಮಕ್ಕಳ ಶಿಕ್ಷಣ ಹಾಗೂ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ ಮತ್ತು ಆಸಕ್ತಿಯನ್ನು ಇರಿಸಿಕೊಂಡಿರುವ ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರ ಲೇಖನಿಯಿಂದ ಹತ್ತು ಹಲವು ಮಕ್ಕಳ ಕಥಾಸಂಕಲನಗಳು ಈಗಾಗಲೇ ಒದ್ದೆ ನೆಲದಲ್ಲಿ ಹಸಿರು ಸಹಜವಾಗಿ ಮೂಡುವಷ್ಟು ಮೂಡಿಬಂದಿವೆ. ಅವೆಲ್ಲವುಗಳೂ ಮಕ್ಕಳ ಸಾಹಿತ್ಯದ ಹಾದಿಯಲ್ಲಿ ಮೈಲಿಗಲ್ಲಿನಂತಿವೆ. ಎಳೆಯರ ಸಮೃದ್ಧ, ಸುಂದರ ಬದುಕಿಗೆ ತೋರುದೀಪದಂತಿವೆ.

ಜಾಗತೀಕರಣೋತ್ತರ ಕಾಲಘಟ್ಟದಲ್ಲಿ ನಾವೆಲ್ಲ ತೀರ ಧಾವಂತದ ಬದುಕಿನ ಶೈಲಿಯನ್ನು ನಮ್ಮದಾಗಿಸಿಕೊಂಡಿದ್ದೇವೆ. ಬದುಕು ಇನ್ನಿಲ್ಲದಂತೆ ಯಾಂತ್ರೀಕೃತವಾಗುತ್ತಿದೆ. ಮಗುವಿಗೆ ಜನ್ಮ ನೀಡಿದ ನಂತರ ಅದು ಬೆಳೆದು ದೊಡ್ಡದಾಗಿ ತನ್ನ ಬದುಕು ತಾನು ಕಟ್ಟಿಕೊಳ್ಳುವವರೆಗೆ ಅದನ್ನು ಲಾಲಿಸಬೇಕಾದದ್ದು, ಪಾಲಿಸಬೇಕಾದದ್ದು ತಂದೆ ಅದರಲ್ಲೂ ತಾಯಿಗೆ ನಿಸರ್ಗ ನೀಡಿರುವ ಬಹುದೊಡ್ಡ ಜವಾಬ್ದಾರಿಯನ್ನು ನಾವಿಂದು ದೂರಕ್ಕೆ ಸರಿಸಿದ್ದೇವೆ. ಮಗುವಿನ ಹುಟ್ಟಿನಿಂದಲೇ ನಮ್ಮ ಜವಾಬ್ದಾರಿಯನ್ನು ಬೇಬಿ ಕೇರ್ ಕೇಂದ್ರಗಳಿಗೆ ಒಪ್ಪಿಸುವುದನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದೇವೆ. ಮಕ್ಕಳ ಬಾಲ್ಯವನ್ನು ನಮ್ಮ ದುರಾಸೆಗಳಿಗೆ ಬಲಿಗೊಡುತ್ತಿದ್ದೇವೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ಹ.ಮ. ಪೂಜಾರ ಅವರಂತಹ ಹಿರಿಯ ಮಕ್ಕಳ ಸಾಹಿತಿಗಳು ಒಂದಿನಿತೂ ಸ್ಥಗಿತಗೊಳ್ಳದೇ ಮಕ್ಕಳ ಹೆಗಲ ಮೇಲೆ ಆಪ್ತಭಾವದ ಕೈಯಿರಿಸಿ ಮಾಗದರ್ಶನ ತೋರುವ ‘ಗುರುವಂದನೆ’ ಮಕ್ಕಳ ಕಥಾ ಸಂಕಲನ ತನ್ನೊಡನೆ ಹಿತವಾದ ತಂಗಾಳಿ ಅಲೆಯೊಂದನ್ನು ಮೆಲ್ಲನೆ ಸೃಜಿಸಿ ಮಕ್ಕಳ ಮನಸ್ಸನ್ನು ಅರಳಿಸುವ ಜವಾಬ್ದಾರಿಯನ್ನು ಹೊತ್ತು ಬರುತ್ತಿರುವುದು ಸ್ವಾಗತಾರ್ಹವಾಗಿದೆ.

ಪ್ರಸ್ತುತ ಕಥಾಸಂಕಲನದಲ್ಲಿ ಒಟ್ಟು 15 ಕಥೆಗಳಿದ್ದು ಪ್ರತಿಯೊಂದು ಕಥೆಯೂ ತನ್ನದೇ ಗಟ್ಟಿತನವನ್ನು ಹೊಂದಿದ್ದು ಪ್ರಸ್ತುತ ಪ್ರಪಂಚದಲ್ಲಿನ ಮಕ್ಕಳಿಗೆ ತೀರ ಅಗತ್ಯವೆನಿಸುವ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ. ಮೊಬೈಲ್, ರೀಲ್ಸ್, ವಾಟ್ಸ್‌ಆ್ಯಪ್, ಯೂಟ್ಯೂಬ್, ಗೂಗಲ್ ನಮಗೆ ಇಂದು ಮಾರ್ಗದರ್ಶನ ತೋರುವ ಮಹಾನ್ ಗುರುಗಳಾಗಿವೆ. ಒಂದಷ್ಟು ವಿವೇಚನೆ ಇಲ್ಲದೆ ಇವುಗಳು ತೋರುವುದೆಲ್ಲವನ್ನು ಅಂಧಾನುಕರಣೆ ಮಾಡುವ ಗೀಳು ನಮ್ಮದು. ಅದು ಹೇಳಿದ್ದೆಲ್ಲವೂ ನೂರಕ್ಕೆ ನೂರು ಸತ್ಯ ಎಂಬ ನಂಬಿಕೆಗೆ ಜೋತು ಬಿದ್ದು ನಮ್ಮ ಬದುಕನ್ನೇ ಬಲಿಕೊಡುತ್ತಿದ್ದೇವೆ. ಇದು ನಮ್ಮ ಅವನತಿಗೆ ಕಾರಣವಾಗುತ್ತದೆ ಎಂಬ ಸಂಗತಿಯನ್ನು ಮೊದಲ ಕಥೆ ‘ವ್ಯಾಪಾರಿಯ ಮೂರು ಮಾತು’ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಕೆಲವು ಬಾರಿ ಸುಖಾಸುಮ್ಮನೆ ಸಲ್ಲದ ಸಂಗತಿಗಳಲ್ಲಿ ಬಂದಿಯಾಗಿ ನಮ್ಮ ನಂಬಿಕೆಗಳೇ ಶ್ರೇಷ್ಠ ಎಂಬ ಬಾವಿಯ ಕಪ್ಪೆಯ ಮನೋಸ್ಥಿತಿಯನ್ನು ನಾವು ರೂಢಿಸಿಕೊಂಡಿರುತ್ತೇವೆ. ಅವುಗಳು ಸತ್ಯವಲ್ಲದಿದ್ದರೂ, ನಮ್ಮ ಬದುಕಿಗೆ ಹಾನಿಯುಂಟು ಮಾಡುತ್ತಿದ್ದರೂ ಅದನ್ನರಿಯದೇ ಅದರಲ್ಲಿಯೇ ಸಂತಸ ಅನುಭವಿಸುವ ಭ್ರಮೆಯಲ್ಲಿರುತ್ತೇವೆ. ಜಿಪುಣ ಅಜ್ಜಿಗೆ ಸರಿಯಾದ ಮಾರ್ಗ ತೋರುವಲ್ಲಿ ‘ಯುವಕನ ತಂತ್ರ’ ಕಥೆ ಸಫಲವಾಗುತ್ತದೆ. ಹಠಮಾರಿತನ ಸ್ವಭಾವ ಇಂದಿನ ಮಕ್ಕಳಲ್ಲಿ ತೀರ ಸಹಜವಾಗಿದೆ. ಹಠಮಾರಿ ಶಿಲ್ಪಾಗೆ ಅವಳ ತಾಯಿ ಉಪಾಯದಿಂದ ಅದನ್ನು ಮನವರಿಕೆ ಮಾಡಿ ಅವಳನ್ನು ಸರಿಯಾದ ಮಾರ್ಗಕ್ಕೆ ತರುವುದನ್ನು ‘ಹಟಮಾರಿ ಕಲಿತ ಪಾಠ’ ಕಥೆ ಮಾರ್ಮಿಕವಾಗಿ ಬಿಂಬಿಸುತ್ತದೆ.

ನಮಗೆಲ್ಲ ಪರಿಚಿತವಾಗಿರುವ ಗೋವಿನ ಕಥೆಯಲ್ಲಿ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತನ್ನ ಪ್ರಾಣವನ್ನು ಹುಲಿಗೆ ಒಪ್ಪಿಸಲು ಹುಲಿಯ ಮುಂದೆ ಬಂದು ನಿಲ್ಲುತ್ತದೆ. ಗೋವಿನ ಸತ್ಯ ಪರಿಪಾಲನೆಯ ಗುಣಕ್ಕೆ ತಲೆಬಾಗಿದ ಹುಲಿ ತನ್ನ ಪ್ರಾಣ ಕಳೆದುಕೊಳ್ಳುತ್ತದೆ. ಸತ್ಯದ ಮೌಲ್ಯ ಇಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದ್ದರೂ ಇನ್ನೊಂದು ಪ್ರಾಣಿಯನ್ನು ಕೊಂದೇ ತಾನು ಬದುಕುಳಿಬೇಕಾದ ಅನಿವಾರ್ಯತೆಯನ್ನು ನಿಸರ್ಗವೇ ನೀಡಿದ್ದು ಇದರಲ್ಲಿ ಹುಲಿಯು ಅಮಾಯಕವಾಗಿ ತನ್ನ ಜೀವವನ್ನು ತಾನು ಕಳೆದು ಕೊಳ್ಳುತ್ತದೆ. ಗುರುಶಿಷ್ಯರ ಸಂಬಂಧ ತೀರ ವಿರೂಪಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಥಾ ಸಂಕಲನದ ಶೀರ್ಷಿಕೆ ಕಥೆ ‘ಗುರುವಂದನೆ’ ನಮ್ಮ ನೆಲದ ಬಹುದೊಡ್ಡ ಮೌಲ್ಯ ಗುರು ಎಂಬುದನ್ನು ಮತ್ತೆ ಮತ್ತೆ ಸಾಕ್ಷೀಕರಿಸುತ್ತದೆ. ತಮ್ಮ ಬದುಕಿಗೆ ದಾರಿ ತೋರಿದ ಗುರುವಿಗೆ ಅವರ ಶಿಷ್ಯರೆಲ್ಲರೂ ಗುರುಗಳಿಗೆ ಒಂದಿನಿತು ಗೊತ್ತಾಗದಂತೆ ಸುಸಜ್ಜಿತ ಸೂರೊಂದನ್ನು ನಿರ್ಮಿಸಿ ಗುರುಕಾಣಿಕೆಯಾಗಿ ಕೊಡುವ ಮೂಲಕ ನಿಜವಾದ ಸಾರ್ಥಕ ಬದುಕಿನ ಹಾದಿಗೆ ದಾರಿ ತೋರುತ್ತಾರೆ.

ಇನ್ನುಳಿದಂತೆ ಕಥಾಸಂಕಲನದಲ್ಲಿ ಇರುವ ತಂತ್ರಕ್ಕೆ ಪ್ರತಿ ತಂತ್ರ, ತಪ್ಪು ದಾರಿ ತುಳಿದ ಬಾಲಕ, ಮೂರ್ಖ ಮಂಗ ಕಥೆಗಳು ಕೂಡ ತಮ್ಮದೇ ಆದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಇಂದಿನ ಬದುಕಿಗೆ ತೀರ ಪ್ರಸ್ತುತವೆನಿಸುವ ಸಂಗತಿಗಳನ್ನು ಆಪ್ತವಾಗಿ ತೆರೆದಿಡುತ್ತವೆ. ಪ್ರತಿಯೊಂದು ಕಥೆಯಲ್ಲೂ ಮಕ್ಕಳ ಹಂಬಲಕ್ಕೆ ಪೂರಕವಾಗಿ ಉತ್ತಮ ಮೌಲ್ಯವನ್ನು ತಿಳಿಸುತ್ತವೆ. ಮನಸ್ಸನ್ನು ತಣಿಸುವ ಪೂಜಾರ ಅವರ ಕಥೆ ಕಟ್ಟುವ ತಂತ್ರ, ಕೌಶಲ ಗಮನ ಸೆಳೆಯುತ್ತದೆ. ಮಕ್ಕಳ ಮನೋವಿಕಾಸಕ್ಕೆ ಮುನ್ನುಡಿ ಬರೆಯುತ್ತದೆ.

ಲೇಖಕರು ನಮ್ಮ ನೆಲದ ನಾಳಿನ ನಾಗರಿಕರಾಗುವ ಇಂದಿನ ಮಕ್ಕಳಿಗೆ ತಮ್ಮ ಅನುಭವದ ಆಳದಲ್ಲಿ ಅದ್ದಿ ಚಿಂತನೆಯ ಮೂಸೆಯಲ್ಲಿ ಪುಟಕ್ಕಿಕ್ಕಿದ ಇಲ್ಲಿನ ಕಥೆಗಳ ಮೂಲಕ ಹೊಸ ಹೊಸ ಭರವಸೆ ಹುಟ್ಟಿಸುತ್ತಾರೆ. ಅನುಭವ ವಾಚಾಳಿ, ಅನುಭಾವ ಮೌನಿ ಎನ್ನುವ ಮಾತಿನಂತೆ ಹ.ಮ. ಪೂಜಾರ ಅವರು ಹತ್ತು ಮಾತಿನಲ್ಲಿ ಹೇಳಬಹುದಾದದ್ದನ್ನು ಒಂದೇ ಮಾತಿನಲ್ಲಿ ಹೊಳೆಯಿಸುವ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕತ್ತಲೆಯ ಬಗ್ಗೆ ಕನಿಕರಿಸುತ್ತಲೇ ಬೆಳಕು ತೋರುತ್ತಾರೆ. ಭಗವಂತ ಮಾತನಾಡಬೇಕಾದಾಗ ಮಗುವಿನ ನಾಲಿಗೆಯಾಗುತ್ತಾನೆ ಎನ್ನುವ ಅನುಭವಿಗಳ ಮಾತನ್ನು ಹ.ಮ. ಪೂಜಾರ ಅವರ ‘ಗುರುವಂದನೆ’ ನೆನಪಿಸುತ್ತದೆ.

Tags

Childrenstories
share
ಮಹಾದೇವ ಬಸರಕೋಡ ಅಮೀನಗಡ
ಮಹಾದೇವ ಬಸರಕೋಡ ಅಮೀನಗಡ
Next Story
X