Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ರಾಯಚೂರು
  4. ವಿವಿಧ ಯೋಜನೆಗಳಡಿ ನೀಡುತ್ತಿರುವ ಅನುದಾನದ...

ವಿವಿಧ ಯೋಜನೆಗಳಡಿ ನೀಡುತ್ತಿರುವ ಅನುದಾನದ ಕುರಿತು ಸ್ಪಷ್ಟನೆ ನೀಡಿ : ಸಂಸದ ಜಿ.ಕುಮಾರ ನಾಯಕ

ವಾರ್ತಾಭಾರತಿವಾರ್ತಾಭಾರತಿ5 Aug 2025 9:10 PM IST
share
ವಿವಿಧ ಯೋಜನೆಗಳಡಿ ನೀಡುತ್ತಿರುವ ಅನುದಾನದ ಕುರಿತು ಸ್ಪಷ್ಟನೆ ನೀಡಿ : ಸಂಸದ ಜಿ.ಕುಮಾರ ನಾಯಕ

ರಾಯಚೂರು: ಗ್ರಾಮೀಣ ಪ್ರದೇಶದ ಸಂಕಷ್ಟಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳ (PACS) ನಿರ್ವಹಣಾ ಸ್ಥಿತಿ ಹಾಗೂ ವಿವಿಧ ಯೋಜನೆಗಳಡಿ ಅವುಗಳಿಗೆ ನೀಡುತ್ತಿರುವ ಅನುದಾನದ ಕುರಿತು ಸ್ಪಷ್ಟನೆ ನೀಡುವಂತೆ ರಾಯಚೂರು ಸಂಸದ ಜಿ.ಕುಮಾರ ನಾಯಕ ಇಂದು ಸಂಸತ್‌ನಲ್ಲಿ ಸಹಕಾರ ಸಚಿವರಿಗೆ ಪ್ರಶ್ನೆಗಳನ್ನು ಪ್ರಸ್ತಾಪಿಸಿದರು

ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 428 ಹೊಸ ಮಲ್ಟಿಪರ್ಪಸ್ ಪಿಎಸಿ‌ಎಸ್‌ (M-PACS)ಗಳನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಪಿಎಸಿ‌ಎಸ್‌ಗಳ ಕಂಪ್ಯೂಟರೀಕರಣಕ್ಕಾಗಿ ರಾಜ್ಯಕ್ಕೆ 55.64 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. “ಸಹಕಾರ ಕ್ಷೇತ್ರದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ”ಯ ಪೈಲಟ್ ಯೋಜನೆಯಡಿ ಬೀದರ್‌ನಲ್ಲಿ ಒಂದು ಗೋದಾಮು ಹಾಗೂ ಪ್ರೊಸೆಸಿಂಗ್ ಘಟಕವನ್ನು ಸ್ಥಾಪಿಸಲಾಗಿದೆ. ಜೊತೆಗೆ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) 2020–21ರಿಂದ 2024–25ರ ಅವಧಿಯಲ್ಲಿ ಪಿಎಸಿ‌ಎಸ್‌ಗಳಿಗೆ 25.5 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಅಂಕಿಅಂಶಗಳು ಸ್ವಾಗತಾರ್ಹವಾದರೂ, ಅವುಗಳನ್ನು ವಾಸ್ತವಿಕ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ 6,200 ಕ್ಕೂ ಹೆಚ್ಚು ಪಿಎಸಿ‌ಎಸ್‌ಗಳಿದ್ದು, 6,100 ಕ್ಕೂ ಹೆಚ್ಚು ಪಿಎಸಿ‌ಎಸ್‌ಗಳು ಸಕ್ರಿಯವಾಗಿವೆ. ಇವು ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬಾಗಿದ್ದು, ಸಣ್ಣ ಹಾಗೂ ಅಲ್ಪ ಭೂಮಿ ಹೊಂದಿರುವ ರೈತರಿಗೆ ನೇರವಾಗಿ ನೆರವಾಗುತ್ತವೆ. ಇಂತಹ ಪ್ರಮುಖ ಜಾಲಕ್ಕೆ ಐದು ವರ್ಷಗಳಲ್ಲಿ ಕೇವಲ 25.5 ಕೋಟಿ ರೂ. ಆರ್ಥಿಕ ನೆರವು ನೀಡಿರುವುದು, ಅಂದರೆ ವರ್ಷಕ್ಕೆ ಸರಾಸರಿ ಕೇವಲ 6 ಕೋಟಿ ರೂ. ಇದೊಂದು ವಿಪರ್ಯಾಸ. ಇದು ಕೇಂದ್ರ ಸರ್ಕಾರದ ಘೋಷಣೆ ಹಾಗೂ ಅನುಷ್ಠಾನದ ನಡುವೆ ಇರುವ ಸ್ಪಷ್ಟವಾದ ಅಂತರವನ್ನು ತೋರಿಸುತ್ತದೆ. ಸಹಕಾರ ಕ್ಷೇತ್ರವನ್ನು ಬಲಪಡಿಸುವ ನಿಜವಾದ ಉದ್ದೇಶವಿದ್ದರೆ, ಸೂಕ್ತ ಪ್ರಮಾಣದ ಅನುದಾನ ನೀಡಬೇಕು.

ಈ ವರ್ಷ, ಕರ್ನಾಟಕದ ಸಹಕಾರಿ ಬ್ಯಾಂಕುಗಳು ಹಾಗೂ ಪಿಎಸಿ‌ಎಸ್‌ಗಳು 35 ಲಕ್ಷ ರೈತರಿಗೆ 25,000 ಕೋಟಿ ರೂ. ಅಲ್ಪಾವಧಿ ಸಾಲ ವಿತರಿಸುವ ಯೋಜನೆ ಹೊಂದಿದ್ದರೂ, ನಬಾರ್ಡ್ ನೀಡುವ ಮರುಹಣಕಾಸಿನಲ್ಲಿ ಭಾರೀ ಕಡಿತವಾಗಿದೆ. ಇದರ ಪರಿಣಾಮವಾಗಿ, ಪಿಎಸಿ‌ಎಸ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಹೋರಾಡುತ್ತಿವೆ. ರೈತರು ಖಾಸಗಿ ಸಾಲದ ಬಲೆಗೆ ಬೀಳುವ ಅಪಾಯ ಹೆಚ್ಚಾಗುತ್ತಿದ್ದು, ಗ್ರಾಮೀಣ ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸುತ್ತಿದೆ ಎಂದರು.

ಇಂತಹ ಸಂದರ್ಭಗಳಲ್ಲಿ, ಜವಾಹರಲಾಲ್ ನೆಹರೂ ಅವರ ಸಹಕಾರದ ದೃಷ್ಟಿಕೋನವನ್ನು ಸ್ಮರಿಸಬೇಕಾಗಿದೆ. ಅವರು ಸಹಕಾರ ಸಂಘಗಳ ಮೇಲಿನ ಅತಿಯಾದ ನಿಯಂತ್ರಣ ಅವುಗಳ “ಮರಣದ ಶಾಸನ”ವಾಗುತ್ತದೆ ಎಂದು ನೆಹರೂ ಅವರು ಎಚ್ಚರಿಸಿದ್ದರು. ಇಂದು ಅವರ ಎಚ್ಚರಿಕೆ ನಿಜವಾಗುತ್ತಿದೆಯೇ ಎಂಬ ಪ್ರಶ್ನೆ ನಮ್ಮೆದುರಿಗೆ ನಿಂತಿದೆ. ವಿಕೇಂದ್ರೀಕರಣ, ಸ್ವಾಯತ್ತತೆ ಮತ್ತು ನಂಬಿಕೆಯಲ್ಲಿ ಬೇರೂರಿರುವ ಸಹಕಾರ ಚಳವಳಿಯ ಕೊರತೆಯನ್ನು, ಒಂದು ಸಚಿವಾಲಯ ಮಾತ್ರದಿಂದ ತುಂಬಲಾಗದು.

ಆದ್ದರಿಂದ, ಕೇಂದ್ರ ಸರ್ಕಾರವು ಘೋಷಣೆಗಳನ್ನು ಮೀರಿದ ನಿಜವಾದ ಕಾರ್ಯಚಟುವಟಿಕೆಗೆ ತೊಡಗಬೇಕು. ನೀತಿ ಘೋಷಣೆ ಮತ್ತು ಜಾಗೃತ ವಾಸ್ತವಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಹೊತ್ತಿನ ಅಗತ್ಯ ಎಂದು ಮನವರಿಕೆ ಮಾಡಿದರು.

ಪಿಎಸಿ‌ಎಸ್‌ಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಸಾಕಷ್ಟು ಮತ್ತು ಸಕಾಲಿಕ ಸಾಲದ ಹರಿವು ಖಚಿತಪಡಿಸುವುದು, ನಬಾರ್ಡ್‌ನ ಮರು ಹಣಕಾಸು ಬೆಂಬಲವನ್ನು ಮರುಸ್ಥಾಪಿಸುವುದು ಹಾಗೂ ಪ್ರದೇಶ ಆಧಾರಿತ ಹಾಗೂ ರೈತ-ಸೂಕ್ಷ್ಮ ಸಾಲ ಹಂಚಿಕೆ ರೂಪರೇಷೆಯನ್ನು ಜಾರಿಗೆ ತರಬೇಕಾಗಿದೆ ಜೊತೆಗೆ ಪಿಎಸಿ‌ಎಸ್‌ಗಳ ಸ್ವಾಯತ್ತತೆ, ಸಾಮರ್ಥ್ಯ ಮತ್ತು ಆರ್ಥಿಕ ಸ್ಥಿರತೆಯನ್ನೂ ಬಲಪಡಿಸಬೇಕು.

ಹವಾಮಾನ ಬದಲಾವಣೆ, ಮಾರುಕಟ್ಟೆ ಅಸ್ಥಿರತೆ ಮುಂತಾದ ಅನಿಶ್ಚಿತತೆಗಳ ನಡುವೆ ಹೋರಾಡುತ್ತಿರುವ ಗ್ರಾಮೀಣ ಸಮುದಾಯಗಳಿಗೆ ಸಹಕಾರ ಮಾದರಿ ಇಂದಿಗೂ ಪರಿಣಾಮಕಾರಿ, ಸಮಾವೇಶಾತ್ಮಕ ಮತ್ತು ಪ್ರಜಾಪ್ರಭುತ್ವಾಧಾರಿತ ಮಾರ್ಗವನ್ನೇ ಒದಗಿಸುತ್ತಿದೆ. ಸಹಕಾರ ಚಳವಳಿ ನಮ್ಮ ಇತಿಹಾಸವಲ್ಲ, ಅದು ಭಾರತದ ಭವಿಷ್ಯದ ಅವಶ್ಯಕತೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X