ಎಸ್.ಟಿ ನಕಲಿ ಪ್ರಮಾಣ ಪತ್ರ ತಡೆಯಲು ಆಯೋಗ ರಚಿಸಿ: ರಘುವೀರ್ ನಾಯಕ

ರಾಯಚೂರು: ಜಿಲ್ಲೆ ಸೇರಿ ರಾಜ್ಯದಲ್ಲಿ ತಳವಾರ ಮತ್ತು ಪರಿವಾರ ಎಸ್.ಟಿ ನಕಲಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು ಇದರಿಂದ ಮೀಸಲಾತಿ ದುರ್ಬಳಕೆಯಾಗುತ್ತಿದೆ.ಇದರ ಕಡಿವಾಣಕ್ಕೆ ಆಯೋಗ ರಚನೆ ಮಾಡಬೇಕು’ ಎಂದು ಹೈದರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘವೀರ ನಾಯಕ ಒತ್ತಾಯಿಸಿದರು.
‘ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಠ ಪಂಗಡದ ತಳವಾರ ಮತ್ತು ಪರಿವಾರ ಹೆಸರಿನ ಮೇಲೆ ಹಿಂದುಳಿದ ವರ್ಗದಲ್ಲಿ ಬರುವ ಅನೇಕರು ಎಸ್.ಟಿ ಪ್ರಮಾಣ ಪತ್ರ ಪಡೆದು ನೈಜ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಹು ಮುಖ್ಯವಾಗಿ ನಾಡಕಚೇರಿ ತತ್ರಾಂಶದಲ್ಲಿ ಇರುವ ದೋಶವೇ ಎಲ್ಲಾ ನಕಲಿ ಪ್ರಮಾಣ ಪತ್ರಗಳು ವಿತರಣೆಯಾಗಲು ಕಾರಣವಾಗಿದೆ’ ಈ ಬಗ್ಗೆ ಅನೇಕ ಬಾರಿ ಸ್ಥಳೀಯ ವ್ಯಾಪ್ಯಿಯಲ್ಲಿ ತಹಶಿಲ್ದಾರರ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ ಎಂದು ದೂರಿದರು.
‘ಹಿಂದುಳಿದ ವರ್ಗದಲ್ಲಿ ಬರುವ ಯಾರಾದರು ತಳವಾರ ಎಂದು ಅರ್ಜಿ ಸಲ್ಲಿಸಿದರೆ ಅವರಿಗೆ ಎಸ್.ಟಿ ಪ್ರಮಾಣಪತ್ರಗಳು ವಿತರಣೆಯಾಗುತ್ತಿವೆ. ಇದರಿಂದ ಎರಡು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ನಾಡಕಚೇರಿ ತತ್ರಾಂಶದಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಎನ್ನುವ ಪದವನ್ನು ಅಲ್ಲಿಯೇ ಸೇರಿಸುವ ಮೂಲಕ ಎರಡು ಸಮುದಾಯಗಳಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಈಗಾಗಲೇ ವಿತರಣೆ ಆಗಿರುವ ನಕಲಿ ಪ್ರಮಾಣ ಪತ್ರಗಳನ್ನು ಹಿಂಪಡೆಯಲು ಆಯೋಗ ರಚನೆ ಮಾಡಿ, ಎಸ್.ಟಿಗೆ ಸೇರದ ಇತರೆ ಸಮುದಾಯದವರು ಸರ್ಕಾರದ ದಿ. 28-05-2020 ರ ಅಧಿಸೂಚನೆ ಮೇರೆಗೆ ನಾಯ್ಕಡ, ನಾಯಕ ಜಾತಿ ಹೆಸರಿನಲ್ಲಿ ಪಡೆದ ಎಸ್.ಟಿ ಜಾತಿ ಪ್ರಮಾಣ ಪತ್ರಗಳನ್ನು ರಾಜ್ಯ ಸರ್ಕಾರ ರದ್ದು ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಲ್ಲಿಕಾರ್ಜುನ ನಾಯಕ, ರಮೇಶ ನಾಯಕ, ರಾಮು ನಾಯಕ, ನರೇಂದ್ರ ನಾಯಕ ಉಪಸ್ಥಿತರಿದ್ದರು.







