ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಎನ್.ಶಿವಶಂಕರ ಆಯ್ಕೆ

ರಾಯಚೂರು: ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಎನ್.ಶಿವಶಂಕರ ಅವರು ಅಧ್ಯಕ್ಷರಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವಶಂಕರ ಅವರು 300 ಮತಗಳನ್ನು ಪಡೆದು ಜಯಗಳಿಸಿದರು. ಪ್ರತಿಸ್ಪರ್ಧಿಗಳಾದ ಎಂ. ಜಗದೀಶ 226, ಎನ್. ಭಾನುರಾಜ 135 ಹಾಗೂ ಹುಸೇನ ಪಾಷಾ 12 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಆರ್. ಗೌಸ್ ಪಾಷಾ ಅವರು 202 ಮತಗಳನ್ನು ಪಡೆದು ಆಯ್ಕೆಯಾದರು. ಚಂದ್ರಕಾಂತ 99, ಜಿ.ಟಿ. ರೆಡ್ಡಿ 110, ಮಹಾದೇವ 71 ಹಾಗೂ ವೀರಗುಂಡಯ್ಯಸ್ವಾಮಿ 191 ಮತಗಳನ್ನು ಪಡೆದರು.
ಮಹಿಳಾ ಉಪಾಧ್ಯಕ್ಷ ಸ್ಥಾನದಲ್ಲಿ ಭಾರತಿ ಜಿ. ಅವರು 359 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಶಾಂತಕುಮಾರಿ 317 ಮತಗಳನ್ನು ಪಡೆದಿದ್ದು, ಭಾರತಿ ಜಿ. ಅವರು 42 ಮತಗಳ ಅಂತರದಿಂದ ಜಯಗಳಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಹನುಮಂತರೆಡ್ಡಿ ಅವರು 465 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದರು. ಅವರ ಎದುರಾಳಿ ವಿಜಯಕುಮಾರ ಹೂಗಾರ 211 ಮತಗಳನ್ನು ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮುನಿಯಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯ ಫಲಿತಾಂಶವನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಶಂಕರಪಾಟೀಲ್ ಹಾಗೂ ಎ. ಶ್ರೀನಿವಾಸ ಅವರು ಅಧಿಕೃತವಾಗಿ ಘೋಷಿಸಿದರು. ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಆಡಳಿತ ಮಂಡಳಿಗೆ ಹೊಸ ತಂಡ ಅಸ್ತಿತ್ವಕ್ಕೆ ಬಂದಿದೆ.






