Raichur | ಭೀಕರ ರಸ್ತೆ ಅಪಘಾತ; ತಂದೆ-ಮಗ ಸ್ಥಳದಲ್ಲೇ ಮೃತ್ಯು

ರಾಯಚೂರು : ರಾಯಚೂರು ಹೊರವಲಯದ ಯರಮರಸ್ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು(ಸೋಮವಾರ) ನಡೆದಿದೆ.
ಬೈಪಾಸ್ ಟರ್ನಿಂಗ್ನಲ್ಲಿ ವೇಗವಾಗಿ ಹರಿದು ಬಂದ ಲಾರಿ ರಸ್ತೆ ಬದಿ ನಿಂತಿದ್ದ ಯರಮರಸ್ ಗ್ರಾಮದ ಮೇಸ್ತ್ರಿ ನಾಗಪ್ಪ ಉಪ್ಪಾರ (65) ಮತ್ತು ಪುತ್ರ ರಮೇಶ ಉಪ್ಪಾರ (38) ಮೇಲೆ ಹರಿದಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಹರಿದ ರಭಸಕ್ಕೆ ದೇಹಗಳು ಛಿದ್ರಛಿದ್ರಗೊಂಡಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story





