ರಾಯಚೂರು | ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ಗೆ ನುಗ್ಗಿದ ಲಾರಿ
ರಾಯಚೂರು : ರಾಯಚೂರಿನಿಂದ ಹೈದರಾಬಾದ್ ಕಡೆಗೆ ಭತ್ತದ ಹೊಟ್ಟನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶೆಡ್ ಗೆ ನುಗ್ಗಿದ ಘಟನೆ ನಡೆದಿದೆ.
ಭತ್ತದ ಹೊಟ್ಟು ಸಾಗಾಣೆ ಮಾಡುತ್ತಿದ್ದ ಲಾರಿ ರಸ್ತೆ ಬದಿಯ ಹೋಟೆಲ್ ಗೆ ನುಗ್ಗಿದ್ದು, ಶೆಡ್ ಗೆ ಹಾನಿಯಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆಯಿಂದ ಫಾಸ್ಟ್ ಫುಡ್ ಸೆಂಟರ್ ಹಾಗೂ ಹೋಟೆಲ್ ನುಗ್ಗಿದ ಪರಿಣಾಮ ಹೊಟೆಲ್ ತುಂಬೆಲ್ಲ ಹೊಟ್ಟು ತುಂಬಿಕೊಂಡಿದ್ದ ಸಾವಿರಾರು ರೂ. ಮೌಲ್ಯದ ವಸ್ತುಗಳು ಜಖಂ ಆಗಿವೆ.
ಓವರ್ ಲೋಡ್ ತುಂಬಿಕೊಂಡಿದ್ದರಿಂದ ಲಾರಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story