ರಾಯಚೂರು | ದೇಶದ ಸೈನಿಕರನ್ನು ಬೆಂಬಲಿಸಿ ಯುವಕರಿಂದ ತಿರಂಗ ಯಾತ್ರೆ; ಮಾಜಿ ಸೈನಿಕರಿಗೆ ಸನ್ಮಾನ

ರಾಯಚೂರು : ಸಿಂಧೂರ್ ಕಾರ್ಯಾಚರಣೆಗೆ ಬೆಂಬಲಿಸಿ ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿಸಲು ರಾಯಚೂರಿನ ಯುವಕರು, ನಾಗರಿಕರಿಂದ ತಿರಂಗ ಯಾತ್ರೆ ನಡೆಯಿತು.
ನಗರದ ರೈಲ್ವೆ ಸ್ಟೇಷನ್ ನಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ವರೆಗೆ ತಿರಂಗ ಯಾತ್ರೆ ನಡೆಸಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ದೇಶದ ಸೈನಿಕರ, ಬಾಬಾಸಾಹೇಬರ ಪರ ಘೋಷಣೆ ಮೊಳಗಿಸಿದರು.
ಬಳಿಕ ಯುವ ಮುಖಂಡ ಬಿನ್ನಿ ರೊನಾಲ್ಡ್ ಅವರ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಅಭಿಮಾನಿಗಳಿಂದ ಜಿಲ್ಲೆಯ ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು.
Next Story